english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಸೆರೆಯಲ್ಲಿ ದೇವರ ಸ್ತೋತ್ರ
ಅನುದಿನದ ಮನ್ನಾ

ಸೆರೆಯಲ್ಲಿ ದೇವರ ಸ್ತೋತ್ರ

Friday, 16th of August 2024
2 0 575
Categories : ಬಿಡುಗಡೆ (Deliverance)
"ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿಮಾಡಿರಿ; ಇದೇ ನಿಮ್ಮ ವಿಷಯವಾಗಿ ಕ್ರಿಸ್ತ ಯೇಸುವಿನಲ್ಲಿ ತೋರಿ ಬಂದ ದೇವರ ಚಿತ್ತ."(‭1 ಥೆಸಲೋನಿಕದವರಿಗೆ 5:18)

ಯಾರಿಗಾದರೂ  ಖಿನ್ನತೆಗೆ  ಒಳಗಾಗಬೇಕಿದ್ದ ಕಾರಣವಿದೆ ಎಂದು ಹೇಳುವುದಾದರೆ ಅದು ಪೌಲ ಮತ್ತು ಸೀಲರಿಗೆ ಎಂದು ಹೇಳಬಹುದು. ಏಕೆಂದರೆ ಅವರು ಸುವಾರ್ತೆಯನ್ನು ಸಾರುತ್ತಿದ್ದ ಆ ಸಮಯದಲ್ಲಿಯೇ ಅವರನ್ನು ಹಿಡಿದು ಅವರನ್ನು ಹೊಡೆದು ಅವರ ಬಟ್ಟೆಗಳನ್ನೆಲ್ಲ ಹರಿದು ಹಾಕಿದರು. ಸಾರ್ವಜನಿಕವಾಗಿ ಅವರನ್ನು ಅವಮಾನಿಸಿದ ಮೇಲೆ ಅವರನ್ನು ಸೆರೆಮನೆಗೂ  ಹಾಕಿಸಿ ಅವರನ್ನು ಸರಪಳಿಗಳಿಂದ ಕಟ್ಟಿ ಅಪರಾಧಿಗಳಂತೆ ಅವಮಾನಿಸಿದರು.

ಆದರೂ ಅವರ ಆ ಪರಿಸ್ಥಿತಿಯು ದೇವರ ಸಾರ್ವಭೌಮತೆಯನ್ನು ಪ್ರಶ್ನಿಸುವಂತೆ ಮಾಡಲು ಅವರು ಅನುಮತಿಸಲಿಲ್ಲ. ತಮ್ಮ ಶೋಚನೀಯ ಸ್ಥಿತಿಯನ್ನು ನೋಡಿಕೊಳ್ಳುವ ಬದಲು ಅವರು ದೇವರ ಉದ್ದೇಶದ ಮೇಲೆ ಭರವಸದಿಂದ ಇದ್ದರು. ಚೆನ್ನಾಗಿ ಹೊಡಿಸಿಕೊಂಡು ಮೈಯಲ್ಲೆಲ್ಲಾ ರಕ್ತ ಸೋರುತಿದ್ದರೂ ಸೆರೆಮನೆಯಲ್ಲಿ ಅವರು ದೇವರ ಕೀರ್ತನೆಗಳನ್ನು ಹಾಡುತ್ತಾ ದೇವರಿಗೆ ಸ್ತೋತ್ರ ಮಾಡುತ್ತಿದ್ದರು.

"ಅಕಸ್ಮಾತ್ತಾಗಿ ಮಹಾಭೂಕಂಪವುಂಟಾಯಿತು; ಸೆರೆಮನೆಯ ಅಸ್ತಿವಾರಗಳು ಕದಲಿದವು. ಅದೇ ಕ್ಷಣದಲ್ಲಿ ಕದಗಳೆಲ್ಲಾ ತೆರೆದವು, ಎಲ್ಲರ ಬೇಡಿಗಳು ಕಳಚಿಬಿದ್ದವು."(ಅಪೊಸ್ತಲರ ಕೃತ್ಯಗಳು 16:26)

ಇಲ್ಲಿ ಮೂರು ಪ್ರಮುಖವಾದ ಸಂಗತಿಗಳು ಘಟಿಸಿದವು

 1). ಸೆರೆಮನೆಯ ಅಸ್ತಿವಾರವು ಕದಲಿದವು.
 2). ಎಲ್ಲಾ ಬಾಗಿಲುಗಳೂ ತೆರೆಯಲ್ಪಟ್ಟವು. 
3). ಎಲ್ಲರ ಬೇಡಿಗಳು ಕಳಚಿಕೊಂಡವು.

ಅವರು ಮಾಡುತ್ತಿದ್ದ ಸ್ತೋತ್ರವು ಕೇವಲ ಅವರ  ಸೆರೆಮನೆಯ ಬಾಗಿಲನ್ನಷ್ಟೇ ತೆರೆಯದೆ ಎಲ್ಲಾ ಕೈದಿಗಳ ಸೆರೆಮನೆಯ ಬಾಗಿಲುಗಳನ್ನು ತೆರೆಯಿತು.

ಅವರ ಸ್ತೋತ್ರದಿಂದ ಕೇವಲ ಅವರಿಬ್ಬರ ಬೇಡಿಗಳು ಮಾತ್ರ ಕಳಚಿ ಬೀಳದೆ ಪ್ರತಿಯೊಬ್ಬ ಖೈದಿಯ ಬೇಡಿಗಳೂ ಕಳಚಿ ಬಿದ್ದವು.

ಎಲ್ಲಾ ಸಮಯಗಳಲ್ಲೂ ನೀವು ಕರ್ತನಿಗೆ ಸ್ತೋತ್ರ ಮಾಡುವಾಗ ಅವು ಕೇವಲ ನಿಮ್ಮ ಬಂಧನಗಳನ್ನಷ್ಟೇ ಅಲ್ಲದೆ ನಿಮಗೆ ಬೇಕಾದವರ ಬಂಧನಗಳನ್ನು ಕೂಡ ಬಿಚ್ಚುತ್ತದೆ.

ಹಾಗೆಯೇ, ಅವರು ಅಷ್ಟೊಂದು ಪ್ರೀತಿ ಪಾತ್ರನಾದ ದೇವರು ಹೇಗೆ ತಾನೆ ನಮ್ಮನ್ನು ಇಂತಹ ಭಯಂಕರ ಪ್ರದೇಶಕ್ಕೆ ಬರಲು ನಮ್ಮನ್ನು ಬಿಟ್ಟುಕೊಟ್ಟನು ಎಂದು ಗೊಣಗುಟ್ಟುತ್ತಾ  ಗೋಳಾಡಬಹುದಿತ್ತು. ಹಾಗೇನಾದರೂ ಅವರು ಮಾಡಿದ್ದಲ್ಲಿ ಸೆರೆಮನೆಯ ಯಜಮಾನನನ್ನು ಮತ್ತು ಅವನ ಕುಟುಂಬದವರನ್ನು ಕರ್ತನ ಬಳಿ ಕರೆತರುವ ಆ ಒಂದು ಅವಕಾಶದಿಂದ ಅವರು ವಂಚಿತರಾಗುತ್ತಿದ್ದರಷ್ಟೇ.

ನಿಮ್ಮಲ್ಲಿ ಕೆಲವರು ಇಂದು ಕರ್ತನ ಮೇಲಿನ ನಂಬಿಕೆಯ ನಿಮಿತ್ತವಾಗಿ ಅಸಹನೀಯವಾದಂತಹ ಹಿಂಸೆಗಳನ್ನು ಹಾದು ಹೋಗುತ್ತಿರಬಹುದು. ಆದರೆ ನಿಮ್ಮ ಧೈರ್ಯವನ್ನು ಬಿಟ್ಟುಬಿಡಬೇಡಿರಿ. ನೀತಿವಂತನಿಗೆ ಬರುವ ಕಷ್ಟಗಳು ಅನೇಕವಿದ್ದರೂ ಕರ್ತನು ಅವೆಲ್ಲವೂಗಳಿಂದ ಅವರನ್ನು ಬಿಡಿಸುವವನಾಗಿದ್ದಾನೆ. (ಕೀರ್ತನೆಗಳು 34:19) ಆದ್ದರಿಂದ ದೇವರ ಸೇವೆ ಮಾಡುವುದನ್ನು ಬಿಟ್ಟುಬಿಡಬೇಡಿರಿ. ಆದರೆ ಆತನಿಗೆ ನಿರಂತರವಾಗಿ ಸ್ತೋತ್ರ ಸಲ್ಲಿಸಿ. ಆಗ ನಿಮ್ಮ ಸೆರೆಮನೆಯು ಸ್ತೋತ್ರದ ಅಂಗಳವಾಗಿ ಬದಲಾಗಿ ಬಿಡುತ್ತದೆ.
ಪ್ರಾರ್ಥನೆಗಳು
ತಂದೆಯೇ, ನೀನು ನಿಜವಾಗಿಯೂ ಹೇಗಿದ್ದೀಯೋ ಹಾಗೆ ನಿನ್ನನ್ನು ನೋಡುವಂತೆ ನನಗೆ ಸಹಾಯ ಮಾಡು. ನನ್ನೆಲ್ಲಾ ಪರಿಸ್ಥಿತಿಗಳಲ್ಲೂ ನೀನು ಏನಾಗಿದ್ದೀಯೋ ಅದನ್ನು ನೆನಪಿಸಿಕೊಂಡು ನಿನ್ನಲ್ಲಿ ಭರವಸದಿಂದ ಇರುವಂತೆ ಯೇಸು ನಾಮದಲ್ಲಿ ನನಗೆ ಕಲಿಸಿಕೊಡು. ಆಮೇನ್


Join our WhatsApp Channel


Most Read
●  ದಿನ 25:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ನೀವು ಯೇಸುವನ್ನು ಹೇಗೆ ದೃಷ್ಟಿಸುವಿರಿ?
● ಓಟವನ್ನು ಗೆಲ್ಲಲು ಇರುವ ದೀರ್ಘ ತಾಳ್ಮೆ ಮತ್ತು ದೀರ್ಘ ಪ್ರಯತ್ನ ಎಂಬ ಎರಡು ಪದಗಳು.
● ದಿನ 23:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಹಣವು ಚಾರಿತ್ರ್ಯವನ್ನು ವಿವರಿಸುತ್ತದೆ
● ಎರಡು ಸಾರಿ ಸಾಯಬೇಡಿರಿ
● ನಂಬಿಕೆಯಿಂದ ಹೊಂದಿಕೊಳ್ಳುವುದು
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್