english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಒಳಕೋಣೆ
ಅನುದಿನದ ಮನ್ನಾ

ಒಳಕೋಣೆ

Wednesday, 21st of August 2024
4 2 406
Categories : ದೇವರೊಂದಿಗೆ ಆತ್ಮೀಯತೆ (Intimacy with God) ಪ್ರಾರ್ಥನೆ (prayer)
"ಪ್ರವಾದಿಯಾದ ಎಲೀಷನು ಪ್ರವಾದಿ ಮಂಡಲಿಯವರಲ್ಲಿ ಒಬ್ಬನನ್ನು ಕರೆದು ಅವನಿಗೆ - ನಡುಕಟ್ಟಿ ಈ ಎಣ್ಣೆಯ ಕುಪ್ಪಿಯನ್ನು ತೆಗೆದುಕೊಂಡು ರಾಮೋತ್ ಗಿಲ್ಯಾದಿಗೆ ಹೋಗು. ಊರನ್ನು ಮುಟ್ಟಿದ ನಂತರ ನಿಂಷಿಯ ಮೊಮ್ಮಗನೂ ಯೆಹೋಷಾಫಾಟನ ಮಗನೂ ಆದ ಯೇಹುವು ಎಲ್ಲಿರುತ್ತಾನೆಂದು ವಿಚಾರಿಸಿ ಅವನು ಸಿಕ್ಕಿದಾಗ ಅವನನ್ನು ಅವನ ಜೊತೆಗಾರರ ಗುಂಪಿನಿಂದ ಒಳಗಿನ ಕೋಣೆಗೆ ಕರಕೊಂಡು ಹೋಗು. ತರುವಾಯ ಕುಪ್ಪಿಯಲ್ಲಿರುವ ಎಣ್ಣೆಯನ್ನು ಅವನ ತಲೆಯ ಮೇಲೆ ಹೊಯ್ದು - ನಾನು ನಿನ್ನನ್ನು ಇಸ್ರಾಯೇಲ್ಯರ ಅರಸನಾಗುವದಕ್ಕೆ ಅಭಿಷೇಕಿಸಿದ್ದೇನೆಂದು ಯೆಹೋವನು ಅನ್ನುತ್ತಾನೆ ಎಂಬದಾಗಿ ಹೇಳಿ...".(‭2 ಅರಸುಗಳು 9:1-3)

ಸತ್ಯವೇದದಲ್ಲಿ ಯೇಹುವಿನ ಪಾತ್ರ ಬಹಳ ಆಸಕ್ತಿಕರವಾದದ್ದು. ಬೇರೆಯವರು ಸೋತಂತ ಜಾಗದಲ್ಲಿ ಅವನು ಸಫಲವಾದನು. ಎಲಿಯನು ಬಹಳ ಬಲವುಳ್ಳ ದೇವರ ಮನುಷ್ಯನಾಗಿದ್ದನು. ಆದರೂ ಈಜೇಬಲಳಿಂದಾಗಿ ಎಲೀಯನಿಗೆ ಮಹಾ ಶೋಕ ಉಂಟಾಗಿತ್ತು. ಇದರಿಂದ ನೀವು ಆಕೆಯು ಎಂಥ ದುಷ್ಟ ರಾಣಿ ಆಗಿದ್ದಳು ಎಂಬುದನ್ನು ತಿಳಿದುಕೊಳ್ಳಬಹುದು. ಆದಾಗಿಯೂ ದೇವರು ಯೇಹು ವನ್ನು ಆ ದುಷ್ಟರಾಣಿ ಈಜೇಬೆಳಲ ನಾಶನಕ್ಕಾಗಿ ಉಪಯೋಗಿಸಿದನು. ಹಾಗಾಗಿ ಯೇಹು ಹೊಂದಿಕೊಂಡಿದ್ದ ಅಭಿಷೇಕ ಎಂತದ್ದು ಎಂಬುದನ್ನು ಸ್ವಲ್ಪ ಕಲ್ಪಿಸಿ ನೋಡಿರಿ.

ಈ ಒಂದು ಸಂದೇಶದಿಂದ ನಾನೀಗ ತಿಳಿಸುವ ಕೆಲವು ಸತ್ಯಗಳು ನಿಜಕ್ಕೂ ನಿಮಗೆ ದೇವರಲ್ಲಿ ನಡೆಯಲು ಸಹಕಾರಿಯಾಗುತ್ತದೆ.

#1...... ಅವನನ್ನು ಅವನ ಜೊತೆಗಾರರ ಗುಂಪಿನಿಂದ ಎಬ್ಬಿಸಿ.....
ಪ್ರವಾದಿಯಾದ ಎಲಿಷನ್ನು ತನ್ನ ಶಿಷ್ಯರಲ್ಲೊಬ್ಬನಿಗೆ ಯೇಹುವನ್ನು ಕಂಡುಕೊಂಡು ಅವನನ್ನು ಅವನ ಜೊತೆಗಾರರಿಂದ ಎಬ್ಬಿಸಲು ಹೇಳುತ್ತಾನೆ.

ನಾವು ನಮ್ಮ ಕರೆಯಲ್ಲಿ ನಡೆಯಲು ಇಡಬೇಕಾದ ಮೊದಲ ಹೆಜ್ಜೆ ಎಂದರೆ ನಾವು ಒಗ್ಗಿಕೊಂಡಿರುವಂತಹ ಆರಾಮ ವಲಯದಿಂದ ಮೇಲೇಳುವುದಾಗಿದೆ.

ಇಂದಿನ ಪೀಳಿಗೆಗೆ ತನ್ನ ಮಹಿಮೆಯನ್ನು ತೋರ್ಪಡಿಸುವುದಕ್ಕಾಗಿ ದೇವರು ನಮ್ಮನ್ನು ಉಪಯೋಗಿಸಲು ಬಯಸುತ್ತಾನೆ. ಆದರೆ ಅದಕ್ಕೂ ಮೊದಲು ನಾವು ಹೀಗಿರುವಂತಹ ಮಟ್ಟದಿಂದ ಮೇಲೆರಬೇಕು. ಅದಕ್ಕಾಗಿ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯುವ ಎಲ್ಲಾ ವಿಷಯಗಳಿಂದ ಸಂಪರ್ಕವನ್ನು ಕಡಿತಗೊಳಿಸಿಕೊಳ್ಳುವ ಅವಶ್ಯಕತೆ ಇದೆ. ಆ ಸನ್ನಿವೇಶದಲ್ಲಿ ಏನು ನಡೆಯುತ್ತಿದೆ ಎಂದು ಸಂಪೂರ್ಣವಾಗಿ ಯೇಹುವಿಗೆ ಅರ್ಥವಾಗದಿದ್ದರೂ ಸಹಾ ಎಲೀಷನ ಶಿಷ್ಯನು ಹೇಳಿದ ದೇವರ ಮಾತಿಗೆ ವಿಧೇಯನಾಗಿ ತನ್ನ ಸಂಗಡಿಗರಿಂದ ಎದ್ದು ಬಂದನು. ನಮ್ಮನ್ನು ಪ್ರತ್ಯೇಕ ಮಾಡುವುದು ನಮಗಿರುವ ಕರೆಯಲ್ಲ. ಆದರೆ ಆ ಕರೆಗೆ ನಾವು ತೋರಿಸುವ ಪ್ರತಿಕ್ರಿಯೆ ಅದಾಗಿದೆ ಎಂದು ನಾನು ನಂಬುತ್ತೇನೆ.

 #2. "ಅವನನ್ನು ಒಳ ಕೋಣೆಗೆ ಕರೆದುಕೊಂಡು ಹೋಗು.....

ನಾವು ನಮಗೆ ಚಿರಪರಿಚಿತ ಹಾಗೂ ಬೆಚ್ಚಗೆನಿಸುವ ಸ್ಥಳದಿಂದ ಎದ್ದರೆ ದೇವರ ಒಳಕೋಣೆಗೆ ನಡೆಯಲು ಮುಕ್ತ ಆಹ್ವಾನ ಸಿಗುತ್ತದೆ. ಒಳಕೋಣೆ ಎನ್ನುವಂತದ್ದು  ಪ್ರತಿಯೊಬ್ಬರಿಗೂ ಪ್ರವೇಶ ಸಿಗದಂತಹ ವಿಶೇಷವಾದವರಿಗೆ ಮಾತ್ರ ಪ್ರವೇಶ ದೊರಕುವಂತಹ ಸ್ಥಳವನ್ನು ಪ್ರತಿನಿಧಿಸುತ್ತದೆ.ಆ ಸ್ಥಳ ಖುದ್ದು ದೇವರ ಹೃದಯವೇ ಆಗಿದೆ

ಒಳಕೋಣೆ ಎಂಬುದು ಗೊಂದಲಗಳಿಂದ ಮುಕ್ತವಾದ ಪ್ರದೇಶವಾಗಿದೆ. ‭"ಆದರೆ ನೀನು ಪ್ರಾರ್ಥನೆಮಾಡಬೇಕಾದರೆ ನಿನ್ನ ಏಕಾಂತವಾದ ಕೋಣೆಯೊಳಗೆ ಹೋಗಿ ಬಾಗಲನ್ನು ಮುಚ್ಚಿಕೊಂಡು ಅಂತರಂಗದಲ್ಲಿಯೂ ಇರುವ ನಿನ್ನ ತಂದೆಗೆ ಪ್ರಾರ್ಥನೆಮಾಡು; ಅಂತರಂಗದಲ್ಲಿ ನಡೆಯುವದನ್ನು ನೋಡುವ ನಿನ್ನ ತಂದೆಯು ನಿನಗೆ ಫಲಕೊಡುವನು." ಎಂದು ಕರ್ತನಾದ ಯೇಸು ಒಳ ಕೋಣೆಯ ಅನುಭವವನ್ನು ಕುರಿತು ಹೇಳುತ್ತಾನೆ (ಮತ್ತಾಯ 6:6)

ಹಳೆಯ ಒಡಂಬಡಿಕೆಯಲ್ಲಿ ದೇವರ ಸಾನಿಧ್ಯಕ್ಕೆ  (ಒಳ ಕೋಣೆಗೆ) ಅಂದರೆ ಮಹಾ ಪರಿಶುದ್ಧ ಸ್ಥಳಕ್ಕೆ ಕೇವಲ ಮಹಾಯಾಜಕನು ಮಾತ್ರ ಹೋಗಬಹುದಾಗಿತ್ತು. "... ಅದು ವರ್ಷಕ್ಕೊಂದು ಸಾರಿ ಮಾತ್ರ.... ಅದೂ ಸಹ ರಕ್ತವಿಲ್ಲದೆ ಹೋಗುವಂತಿರಲಿಲ್ಲ..."(ಇಬ್ರಿಯರಿಗೆ 9:7)

ಆದರೆ ಹೊಸ ಒಡಂಬಡಿಕೆಯು ನಮಗೆ ಹೇಳುವುದೇನೆಂದರೆ,‭ "ಈ ಆಧಾರಗಳನ್ನು ಕೊಟ್ಟದ್ದರಲ್ಲಿ ದೇವರು ಸುಳ್ಳಾಡಿರಲಾರನು. ಆ ನಿರೀಕ್ಷೆಯು ನಮ್ಮ ಪ್ರಾಣಕ್ಕೆ ಲಂಗರದ ಹಾಗಿದ್ದು ಭರವಸಕ್ಕೆ ಯೋಗ್ಯವಾದದ್ದೂ ಸ್ಥಿರವಾದದ್ದೂ ಆಗಿದೆ. ಅದು ತೆರೆಯೊಳಗಣ ದೇವಸಾನ್ನಿಧ್ಯವನ್ನು ಪ್ರವೇಶಿಸುವಂಥದು. ಯೇಸು ಸದಾಕಾಲವೂ ಮೆಲ್ಕಿಜೆದೇಕನ ತರಹದ ಮಹಾಯಾಜಕನಾಗಿದ್ದು ನಮಗೋಸ್ಕರ ಮುಂದಾಗಿ ಹೋಗಿ ಆ ಸಾನ್ನಿಧ್ಯವನ್ನು ಪ್ರವೇಶಿಸಿದ್ದಾನೆ."ಎಂದು ನಮಗೆ ಕ್ರಿಸ್ತನಲ್ಲಿರುವ ಒಂದು ಅಭೂತಪೂರ್ವ ಸವಲತ್ತು ಕುರಿತು ಹೇಳುತ್ತದೆ. (ಇಬ್ರಿಯರಿಗೆ 6:19-20). ಯೇಸುವನ್ನು ಪ್ರೀತಿಸುವವರೆಲ್ಲರಿಗೂ ಇಂದುಈ ಒಳಕೋಣೆಯ ಬಾಗಿಲು ತೆರೆಯಲ್ಪಟ್ಟಿದೆ!

ಕರ್ತನು ನೀವು ಆತನ ಹೃದಯವನ್ನು ಪ್ರವೇಶಿಸಬೇಕೆಂದು ಬಯಸುವವನಾಗಿದ್ದಾನೆ. ನೀವು ದೇವರ ಸಾನಿಧ್ಯದ (ಒಳಕೋಣೆಯ) ಪ್ರವೇಶವನ್ನು ಹೊಂದಿಕೊಂಡಾಗ ಆತನು ನಿಮ್ಮ ಮೇಲೆ ತನ್ನ ನೂತನ ಅಭಿಷೇಕವನ್ನು ಸುರಿಸುತ್ತಾನೆ. ನೂತನ ಹೆಸರಿನಿಂದ ನಿಮ್ಮನ್ನು ಕರೆಯುತ್ತಾನೆ. (ಪ್ರಕಟಣೆ 2:17,ಯೆಶಾಯ 62:2)

 #3. "......ಆಮೇಲೆ ಎಣ್ಣೆಯ ಕುಪ್ಪೆಯನ್ನು ತೆಗೆದುಕೊಂಡು ಅವನ ತಲೆಯ ಮೇಲೆ ಸುರಿದು.... "ಇಸ್ರೇಲ್ಯರ ಅರಸನಾಗಿ ನಾನು ನಿನ್ನನ್ನು ಅಭಿಷೇಕಿಸಿದ್ದೇನೆ" ಎಂದು ಕರ್ತನು ಹೇಳುತ್ತಾನೆ ಎಂದು ಹೇಳಬೇಕು..

ಒಂದು ವಿಚಾರವನ್ನು ಇಲ್ಲಿ ಗಮನಿಸಿ. ಯೇಹುವಿನ ತಲೆಯನ್ನು ತೈಲದಿಂದ ಅಭಿಷೇಕಿಸಿದ್ದು ಅವನು ಎದ್ದು ಒಳಕೋಣೆಗೆ ಹೋದಾಗ. ಆ ಒಳಕೋಣೆಯಲ್ಲಿಯೇ ನಿಮಗೂ ಅಭಿಷೇಕ ದೊರಕುವಂಥದ್ದು. ನೀವಿಂದು ಆಂತರ್ಯದಲ್ಲಿ ಬರಡುತನವನ್ನು ಅನುಭವಿಸುತ್ತಿದ್ದಿರಾ? ಹಾಗಾದರೆ ಒಳಕೋಣೆಗೆ ಎದ್ದು ನಡೆಯಿರಿ. ನೂತನವಾದ ಅಭಿಷೇಕವು ನಿಮಗಾಗಿ ಕಾಯುತ್ತಿದೆ!

ಒಳಕೋಣೆಯು ನೀವು ದೇವರ ಸ್ವರವನ್ನು ಸ್ಪಷ್ಟವಾಗಿ ಕೇಳಬಲ್ಲಂತಹ ಸ್ಥಳವಾಗಿದೆ. ಅದು ಪ್ರವಾದನೆಗಳು ಹುಟ್ಟುವಂತಹ ಸ್ಥಳವಾಗಿದೆ. ಯೇಹೂವಿಗೆ ಪ್ರವಾದನೆ ದೊರೆತದ್ದೂ ಆ ಒಳಕೋಣೆಯಲ್ಲಿಯೇ. ಯೇಹುವಿನ ಕರೆಯೂ ಸಹ ಒಳಕೋಣೆಯಲ್ಲಿಯೇ ದೃಢವಾಯಿತು. ತಾನು ಇಸ್ರಾಯೇಲಿನ ಅರಸನಾಗಲಿದ್ದೇನೆ ಎಂಬ ಪ್ರಕಟಣೆಯೂ ಯೇಹೂವಿಗೆ ಅಲ್ಲಿಯೇ ದೊರೆತದ್ದು.

ಪ್ರಾಯಶಃ  ನೀವು ಖಿನ್ನತೆಯಿಂದಲೂ ಮತ್ತು ತಿರಸ್ಕಾರದಲ್ಲಿಯೂ ಹೋರಾಡುತ್ತಿರಬಹುದು. ಪ್ರಾಯಶಃ ನೀವು ನಿಮ್ಮ ಕುರಿತು ಕೀಳರಿಮೆಯ ಭಾವದಲ್ಲಿ ಇರಬಹುದು. ನೀವೀಗ ಎದ್ದು ಒಳಕೋಣೆಗೆ ಹೋಗಬೇಕು. ಆಗ ನಿಮ್ಮ ಕರೆ ಏನೆಂಬುದು ನಿಮಗೆ ದೃಢೀಕರಿಸಲ್ಪಡುತ್ತದೆ. ಆಗ ನೀವು ಹದ್ದಿನಂತೆ ರೆಕ್ಕೆಗಳನ್ನು ಚಾಚಿ ಹಾರಾಡುತ್ತಾ ಮೇಲೇರುವವರಾಗುತ್ತೀರಿ.
ಪ್ರಾರ್ಥನೆಗಳು
1. Father, in the name of Jesus, forgive me for not making Your presence my goal and destination.

2. Father, in the name of Jesus, sanctify me and cleanse me by the precious Blood of Jesus so that I would have unhindered access into Your Presence daily. Amen

Join our WhatsApp Channel


Most Read
● ಮುಂದಿನ ಹಂತಕ್ಕೆ ಹೋಗುವುದು
● ದೇವರ ಕೃಪೆಯನ್ನು ಸೇದುವುದು
● ದಿನ 07 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಆರಾಧನೆಗೆ ಬೇಕಾದ ಇಂಧನ
● ಆತ್ಮವಂಚನೆ ಎಂದರೇನು? -I
● ಮೂರು ಆಯಾಮಗಳು
● ದಿನ 04: 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್