"ಯೆಹೋವನು ಸ್ತೋತ್ರಕ್ಕೆ ಅರ್ಹನು; ಆತನಿಗೆ ನಾನು ಮೊರೆಯಿಡಲು ಆತನು ನನ್ನನ್ನು ಶತ್ರುಗಳಿಂದ ರಕ್ಷಿಸುತ್ತಾನೆ"(ಕೀರ್ತನೆ 18:3)
ದಾವೀದನು, “ನಾನು ಕರ್ತನಿಗೇ ಮೊರೆಯಿಡುವೆನು” ಎಂದು ಹೇಳಿದನು. ಕರ್ತನಿಗೆ ಮೊರೆಯಿಡುವಂತದ್ದು ಪ್ರಾರ್ಥನೆಯನ್ನು ಸೂಚಿಸುತ್ತದೆ.
ಒಂದು ಹಳೆಯ ಚೀನೀ ಗಾದೆ ಇದೆ, ಅದು ಹೇಳುತ್ತದೆ, “ನೀವು ಒಬ್ಬ ಮನುಷ್ಯನಿಗೆ ಮೀನು ಕೊಟ್ಟರೆ, ನೀವು ಅವನಿಗೆ ಒಂದು ದಿನದ ಆಹಾರ ಕೊಡುತ್ತೀರಿ; ಆದರೆ ಒಬ್ಬ ಮನುಷ್ಯನಿಗೆ ಮೀನು ಹಿಡಿಯುವುದನ್ನು ಕಲಿಸಿಕೊಟ್ಟರೆ ನೀವು ಅವನಿಗೆ ಜೀವನಪರ್ಯಂತ ಆಹಾರ ಕೊಡುತ್ತೀರಿ.”
ನೀವು ಸರಿಯಾದ ರೀತಿಯಲ್ಲಿ ಪ್ರಾರ್ಥಿಸುವುದನ್ನು ಕಲಿಯಲು ಸಾಧ್ಯವಾದರೆ, ಅದು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಮಾತ್ರವಲ್ಲದೆ ನಿಮ್ಮನ್ನು ಅನುಸರಿಸುವ ಮುಂದಿನ ಪೀಳಿಗೆಗೂ ಆಶೀರ್ವಾದಕರವಾಗಿರುತ್ತದೆ.
‘ನನ್ನನ್ನು ಕರೆ, ಆಗ ನಿನಗೆ ಉತ್ತರಕೊಡುವೆನು. ನಿನಗೆ ತಿಳಿಯದ ಮತ್ತು ಪರಿಶೋಧನೆಗೆ ಮೀರಿದ ಮಹಾಕಾರ್ಯಗಳನ್ನೂ ನಿನಗೆ ಹೇಳಿಕೊಡುವೆನು." ಎಂದು ಯೆರೆಮೀಯ 33:3 ಹೇಳುತ್ತದೆ.
ಇದರರ್ಥ ನಾವು ಕರ್ತನನ್ನು ಕರೆಯದಿದ್ದರೆ, ಆತನು ನಮಗೆ ಉತ್ತರಿಸುವುದಿಲ್ಲ. ನಾವು ಕರ್ತನನ್ನು ಕರೆದಾಗ ಏನಾಗುತ್ತದೆ?
ಯೆರೆಮೀಯ 33:3 (b) ಹೇಳುತ್ತದೆ, “ನಾನು (ದೇವರು) ನಿಮಗೆ ತಿಳಿಯದ ಮತ್ತು ಪರಿಶೋಧನೆಗೆ ಮೀರಿದ ಮಹತ್ಕಾರ್ಯಗಳನ್ನು ನಿಮಗೆ ತೋರಿಸಿಕೊಡುತ್ತೇನೆ.” ಎಂದು.
ನಮ್ಮಲ್ಲಿ ಹೆಚ್ಚಿನವರು ಪ್ರಾರ್ಥಿಸುತ್ತೇವೆ, ಆದರೆ ಆಗಾಗ್ಗೆ, ದೇವರು ನಿಜವಾಗಿಯೂ ನಮ್ಮ ಪ್ರಾರ್ಥನೆಯನ್ನು ಕೇಳಿದ್ದಾನೋ ಇಲ್ಲವೋ ಎಂಬುದರ ಕುರಿತು ನಮಗೆ ಖಚಿತತೆ ಇರುವುದಿಲ್ಲ ಅಥವಾ ವಿಶ್ವಾಸವಿರುವುದಿಲ್ಲ. ನೀವು ಮನೆಗಾಗಿ ಪ್ರಾರ್ಥಿಸುತ್ತಿದ್ದೀರಿ ಎಂದು ಹೇಳೋಣ, ಮತ್ತು ನೀವು ಪ್ರಾರ್ಥಿಸಿದಾಗ, ಕರ್ತನು ನಿಮಗೆ ಕನಸಿನಲ್ಲಿ ಅಥವಾ ದರ್ಶನದಲ್ಲಿ ನಿಮ್ಮ ಮನೆ ಎಲ್ಲಿದೆ ಮತ್ತು ಇತರ ವಿವರಗಳನ್ನು ತೋರಿಸುತ್ತಾನೆ ಎಂದಿಟ್ಟುಕೊಳ್ಳಿ.
ಇದು ನಿಮ್ಮನ್ನು ದೇವರಲ್ಲಿ ಗಮನಾರ್ಹವಾದ ನಂಬಿಕೆ ಮತ್ತು ವಿಶ್ವಾಸದ ಮಟ್ಟವನ್ನು ಹೆಚ್ಚಿಸುತ್ತದೆ. ಆ ಮನೆ ನಿಮ್ಮ ಕೈಸೇರುವುದು ವಿಳಂಬವಾದರೂ ಸಹ, ನೀವು ಅಲುಗಾಡುವುದಿಲ್ಲ ಅಥವಾ ಕದಲುವುದಿಲ್ಲ. ಏಕೆಂದರೆ ಕರ್ತನು ನಿಮಗೆ ಈಗಾಗಲೇ ತೋರಿಸಿದ್ದಾನೆ. ಇದು ಪ್ರಾರ್ಥನೆಯ ಪ್ರವಾದನೆಯ ಆಯಾಮ.
ನೀವು ಕರ್ತನನ್ನು ಕರೆದಾಗ ಸಂಭವಿಸುವ ಎರಡನೆಯ ವಿಷಯವೆಂದರೆ: ನೀವು ನಿಮ್ಮ ಶತ್ರುಗಳಿಂದ ರಕ್ಷಿಸಲ್ಪಡುವಿರಿ (ಕೀರ್ತನೆ 18:3)
ಈ ಶತ್ರುಗಳು ಭೌತಿಕ ವಾದ ಅಥವಾ ಆತ್ಮೀಕ ಶತ್ರುಗಳಾಗಿರಬಹುದು (ದುರಾತ್ಮಗಳ ಶಕ್ತಿಗಳಂತೆ). ಪ್ರಾರ್ಥನೆಯು ನಿಮ್ಮನ್ನೂ ಮತ್ತು ನಿಮ್ಮ ಪ್ರೀತಿಪಾತ್ರರನ್ನು (ಗೋಚರ ಮತ್ತು ಅಗೋಚರ) ಶತ್ರುಗಳಿಂದ ಬಿಡುಗಡೆಗೊಳಿಸುತ್ತದೆ.
ರಾತ್ರಿಯ ಸಮಯದಲ್ಲಿ ತಮ್ಮ ಮನೆಯಲ್ಲಿ ನೆರಳು ಓಡಾಡುವುದನ್ನು ನೋಡಲಾರಾಂಭಿಸಿದ ಒಂದು ಕುಟುಂಬವಿತ್ತು. ಅವರು ನಿರಾಶೆಗೊಂಡು ಆದರಿಂದ ವಿಮುಕ್ತಾರಾಗಲು ಸಿಕ್ಕ ಸಿಕ್ಕ ಮಾರ್ಗಗಳನ್ನೆಲ್ಲ ಪ್ರಯತ್ನಿಸಿದ್ದರು.ಕಡೆಗೆ ಒಂದು ದಿನ ನನಗೆ ಅವರಿಂದ ಕರೆ ಬಂತು, ಅವರ ಮನೆಗೆ (ಅದು ಬೇರೆ ಸ್ಥಳದಲ್ಲಿತ್ತು ) ಬರುವಂತೆ ಕೇಳಿಕೊಂಡರು. ನನ್ನ ಕಾರ್ಯನಿರತ ವೇಳಾಪಟ್ಟಿಯಿಂದಾಗಿ, ನನಗೆ ಆಗ ಬರಲಿಕ್ಕೆ ಸಾಧ್ಯವಿಲ್ಲ ಎಂದು ನಾನು ಅವರಿಗೆ ಹೇಳಿದೆ. ಇದರಿಂದ ಅವರು ತುಂಬಾ ನಿರಾಶೆಗೊಂಡರು.
ಆದಾಗ್ಯೂ, ನಾನು ಅವರಿಗೆ ನೀಡಿದ ಸೂಚನೆಗಳನ್ನು ಅವರು ಪಾಲಿಸಿದರೆ, ಅವರು ರಕ್ಷಣೆಯನ್ನು ಪಡೆಯುತ್ತಾರೆ ಎಂದು ನಾನು ಅವರಿಗೆ ಹೇಳಿದೆ. ಇಷ್ಟವಿಲ್ಲದಿದ್ದರೂ ಅವರು ಅದನ್ನು ಒಪ್ಪಿಕೊಂಡರು. ಇಡೀ ಕುಟುಂಬವು ಎರಡು ದಿನಗಳ ಕಾಲ ಉಪವಾಸ ಮತ್ತು ಪ್ರಾರ್ಥನೆ ಮಾಡಬೇಕು ಎಂದು ನಾನು ಅವರಿಗೆ ಹೇಳಿದ್ದೆ. ದಿನವಿಡೀ, ಅವರು ತಮ್ಮ ಮನೆಯನ್ನು ಪ್ರಾರ್ಥನೆ ಎಣ್ಣೆಯಿಂದ ಅಭಿಷೇಕಿಸಿ ಕರ್ತನನ್ನು ಆರಾಧಿಸುವುದರಲ್ಲಿ ಸಮಯವನ್ನು ಕಳೆಯಬೇಕು ಎಂದು ನಾನು ಹೇಳಿದ್ದೆ.
ಎರಡನೇ ದಿನ, ನನ್ನ ಫೋನ್ ರಿಂಗಾಯಿತು. ಅದು ಆ ಮನೆಯ ವ್ಯಕ್ತಿಯದೇ . ಅವನು ಸಂತೋಷದಿಂದ ಕೂಗುತ್ತಾ, "ಪಾಸ್ಟರ್ ಮೈಕೆಲ್, ನನ್ನ ಮನೆಯಲ್ಲಿ ಈಗ ಯಾವುದೇ ನೆರಳುಗಳು ಕಾಣುತ್ತಿಲ್ಲ. ಕರ್ತನಾದ ಯೇಸು ನಮ್ಮನ್ನು ಮುಕ್ತಗೊಳಿಸಿದ್ದಾನೆ" ಎಂದು ಹೇಳಿದನು.
ಇದನ್ನು ಓದುತ್ತಿರುವ ನನ್ನ ಪ್ರಿಯ ಸ್ನೇಹಿತರೇ, ದೇವರು ವ್ಯಕ್ತಿಗಳನ್ನು ಗೌರವಿಸುವವನಲ್ಲ. ನೀವು ಯಾರೇ ಆಗಿರಲಿ - ಶ್ರೀಮಂತರಾಗಿರಲಿ ಅಥವಾ ಬಡವರಾಗಿರಲಿ, ನೀವು ಕರ್ತನ ಹೆಸರನ್ನು ಕರೆದರೆ:
1. ಆತನು ನಿಮಗೆ ಮಹತ್ತಾದ ಕಾರ್ಯಗಳನ್ನು ತೋರಿಸುತ್ತಾನೆ
2. ಆತನು ನಿಮ್ಮನ್ನು ಭೌತಿಕ ಮತ್ತು ಆತ್ಮೀಕ ಶತ್ರುಗಳಿಂದ ರಕ್ಷಿಸುತ್ತಾನೆ.
Bible Reading: Esther 9-10 , Job 1-2
ಪ್ರಾರ್ಥನೆಗಳು
ತಂದೆಯೇ, ನನ್ನ ಪ್ರಗತಿಗೂ ಮತ್ತು ನನ್ನ ಕುಟುಂಬ ಸದಸ್ಯರ ಪ್ರಗತಿಗೂ ಅಡ್ಡಿಯಾಗುವ ಪ್ರತಿಯೊಂದು ಶಕ್ತಿಯನ್ನು ಯೇಸುವಿನ ಹೆಸರಿನಲ್ಲಿ ನಿನ್ನ ಬಲವುಳ್ಳ ಶಕ್ತಿಯನ್ನು ಹರಡಿ ನಾಶಮಾಡು. ನನ್ನ ಪ್ರಗತಿಗೆ ಅಡ್ಡಿಯಾಗುವ ಪ್ರತಿಯೊಂದು ಪೈಶಾಚಿಕ ಮಾರ್ಗ ತಡೆಯನ್ನು ಯೇಸುವಿನ ಹೆಸರಿನಲ್ಲಿ ನಿನ್ನ ಬೆಂಕಿಯಿಂದ ಚದುರಿಸು.
Join our WhatsApp Channel

Most Read
● ದೈವೀಕ ಶಿಸ್ತಿನ ಸ್ವರೂಪ: 2● ಆಟ ಬದಲಿಸುವವ
● ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಂಥದ್ದು ಆಂತರಿಕ ಸ್ವಸ್ಥತೆಯನ್ನು ತರುತ್ತದೆ.
● ದೇವರ ರೀತಿಯ ಪ್ರೀತಿ
● ಯೇಸು ಮಾಡುವ ಕಾರ್ಯಗಳಿಗಿಂತ ದೊಡ್ಡ ಕಾರ್ಯಗಳನ್ನು ಮಾಡುವುದರ ಅರ್ಥವೇನು?
● ಒಂದು ಜನಾಂಗವನ್ನು ಉಳಿಸಿದ ಕಾಯುವಿಕೆ
● ದಿನ 37 :40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
ಅನಿಸಿಕೆಗಳು