"ಮತ್ತು ಆತನು ಎಲ್ಲರಿಗೋಸ್ಕರ ಸತ್ತನು, ಜೀವಿಸುವವರು ಇನ್ನು ಮುಂದೆ ತಮಗಾಗಿ ಬದುಕದೆ, ತಮಗೋಸ್ಕರ ಸತ್ತು ಪುನರುತ್ಥಾನಗೊಂಡವನಿಗಾಗಿ ಬದುಕಬೇಕು" (2 ಕೊರಿಂಥ 5:15)
ಕ್ರಿಸ್ತನ ಭೂಯಾತ್ರೆಯ ಸಮಯದಲ್ಲಿ ಸುಮಾರು 5,000 ವಿಶ್ವಾಸಿಗಳಿದ್ದರು ಎಂದು ನಂಬಲಾಗಿದೆ. ಆ ವಿಶ್ವಾಸಿಗಳಲ್ಲಿ, ಮೂರು ವಿಧದವರಿದ್ದರು. ಹೆಚ್ಚಿನ ಸಂಖ್ಯೆಯ ವಿಶ್ವಾಸಿಗಳು ನಿತ್ಯಜೀವಕ್ಕಾಗಿ ಮಾತ್ರ ಯೇಸುವಿನ ಬಳಿಗೆ ಬಂದವರು. ಅವರು ನಿತ್ಯಜೀವವನ್ನು ಹೊಂದಿಕೊಳ್ಳುವುದಕ್ಕಾಗಿ ಆತನಿಗಾಗಿ ಸ್ವಲ್ಪ ಸೇವೆ ಸಲ್ಲಿಸಿದರು. ಮತ್ತೊಂದು 500 ಜನರು ಎಂದು ಹೇಳಬಹುದಾದ ಒಂದು ಸಣ್ಣ ಸಂಖ್ಯೆಯ ಗುಂಪು ಅದು ವಾಸ್ತವವಾಗಿ ಆತನನ್ನು ಹಿಂಬಾಲಿಸಿ ಆತನ ಸೇವೆ ಮಾಡಿತು. ನಂತರ ಅಪೋಸ್ತಲ ಶಿಷ್ಯರು ಇದ್ದರು. ಇವರು ಯೇಸುವಿನೊಂದಿಗೆ ಗುರುತಿಸಿಕೊಂಡವರು. ಅವರು ಯೇಸು ಜೀವಿಸಿದ ರೀತಿಯ ಜೀವನವನ್ನು ನಡೆಸಿದವರು. ಇವರಲ್ಲಿ ಪ್ರತಿಯೊಬ್ಬರೂ ಅಂತಿಮವಾಗಿ ಘೋರವಾಗಿ ಕೊಲ್ಲಲ್ಪಟ್ಟರು. ಅವರು ಕಷ್ಟಗಳು, ಅದ್ಭುತಗಳು ಮತ್ತು ಮಾನವ ರೂಪದಲ್ಲಿದ್ದ ದೇವರೊಂದಿಗಿನ ಅನ್ಯೋನ್ಯತೆಯನ್ನು ಅನುಭವಿಸಿದರು.
ನಿಮ್ಮ ಜೀವನವನ್ನು ಯಾವ ಗುಂಪು ಉತ್ತಮವಾಗಿ ಪ್ರತಿನಿಧಿಸುತ್ತದೆ ಎಂದು ನೀವು ಹೇಳಬೇಕಾದರೆ, ನೀವು ಯಾವುದಕ್ಕೆ ಸೇರುತ್ತೀರಿ? - ಸರಳವಾಗಿ ನಂಬಿದ 5,000 ಜನರೋ, ರಕ್ಷಕನಿಂದ ಕಲಿಯುತ್ತಿರುವುದನ್ನು ಅನುಸರಿಸಿ ಕಾರ್ಯಗತಗೊಳಿಸಲು ಪ್ರಯತ್ನಿಸಿದ 500 ಜನರೋ ಅಥವಾ ರಕ್ಷಕನ ಜೀವನ ಮತ್ತು ಧ್ಯೇಯದೊಂದಿಗೆ ಸಂಪೂರ್ಣವಾಗಿ ಗುರುತಿಸಿಕೊಂಡ 12 ಜನರ ಗುಂಪಲ್ಲೋ?
ಕರ್ತನಾದ ಯೇಸು ನಮ್ಮಲ್ಲಿ ಪ್ರತಿಯೊಬ್ಬರನ್ನು ತನ್ನೊಂದಿಗೆ ಸಂಪೂರ್ಣವಾಗಿ ಗುರುತಿಸಿಕೊಳ್ಳಲು ಕರೆದಿದ್ದಾನೆ. “ಯಾವನಾದರೂ ದೇವರ ವಾಕ್ಯವನ್ನು ಕೈಕೊಂಡು ನಡೆದರೆ ಅವನಲ್ಲಿ ನಿಜವಾಗಿ ದೇವರ ಪ್ರೀತಿಯು ಪರಿಪೂರ್ಣವಾಗಿದೆ. ಇದರಿಂದಲೇ ನಾವು ದೇವರಲ್ಲಿದ್ದೇವೆಂಬುದನ್ನು ತಿಳಿದುಕೊಳ್ಳುತ್ತೇವೆ. ದೇವರಲ್ಲಿ ನೆಲೆಗೊಂಡವನಾಗಿದ್ದೇನೆಂದು ಹೇಳುವವನು ಯೇಸು ಜೀವಿಸಿದಂತೆಯೇ ತಾನೂ ಜೀವಿಸಬೇಕು..” (1 ಯೋಹಾನ 2;5b-6).
ಇದುವೇ ನಿಜವಾದ ಕ್ರೈಸ್ತ ನಂಬಿಕೆಯ ಸಾರ; ಇದು ಕ್ರಿಸ್ತನಲ್ಲಿ ನಮ್ಮ ದೈವಿಕ ಗುರುತನ್ನು ಸ್ವೀಕರಿಸಲು, ಕೇವಲ ನಂಬಿಕೆಯನ್ನು ಮೀರಿ ಆತನೊಂದಿಗೆ ನಿಕಟವಾದ ಒಕ್ಕೂಟಕ್ಕೆ ಸೇರಲು ನಮ್ಮನ್ನು ಕರೆದೊಯ್ಯುವ ಆತ್ಮೀಕ ಪ್ರಯಾಣವಾಗಿದೆ.
ಕ್ರಿಸ್ತನೊಂದಿಗೆ ಗುರುತಿಸಲ್ಪಟ್ಟ ಜೀವನವನ್ನು ನಡೆಸುವುದು ಬಾಹ್ಯವಾಗಿ ಹೊರಹೊಮ್ಮುವ ಆಂತರಿಕ ರೂಪಾಂತರವನ್ನು ತರುತ್ತದೆ. ಅಪೊಸ್ತಲ ಪೌಲನು ಹೇಳುವಂತೆ, " ಹೀಗಿರಲಾಗಿ ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನಸೃಷ್ಟಿಯಾದನು. ಇಗೋ, ಪೂರ್ವಸ್ಥಿತಿ ಹೋಗಿ ಎಲ್ಲಾ ನೂತನವಾಯಿತು." (2 ಕೊರಿಂಥ 5:17)
Bible Reading: Psalms 2-10
Prayer
ತಂದೆಯೇ, ಯೇಸುವಿನ ಹೆಸರಿನಲ್ಲಿ, ನನಗೆ ಲಾಭದಾಯಕ ಜೀವಿತವನ್ನು ಕಲಿಸು. ನಾನು ಹೋಗಬೇಕಾದ ದಾರಿಯಲ್ಲಿ ನನ್ನನ್ನು ಮುನ್ನಡೆಸು. (ಯೆಶಾಯ 48:17)
Join our WhatsApp Channel

Most Read
● ಆತನ ಬಲದ ಉದ್ದೇಶ.● ಕನಸಿನಲ್ಲಿ ದೇವದೂತರ ಗೋಚರಿಸುವಿಕೆ
● ಲಂಬಕೋನ ಹಾಗೂ ಸಮತಲದ ಕ್ಷಮಾಪಣೆ.
● ಸರಿಯಾದವುಗಳ ಮೇಲೆ ಲಕ್ಷ್ಯವಿಡಿರಿ
● ಜಯಶಾಲಿಗಳಿಗಿಂತ ಹೆಚ್ಚಿನವರು.
● ಕರ್ತನೇ, ನಾನು ಏನು ಮಾಡಬೇಕೆಂದು ನೀನು ಬಯಸುತ್ತೀ?
● ಧೈರ್ಯವಾಗಿರಿ.!
Comments