हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಪಂಚಶತ್ತಾಮ ದಿನದ ಉದ್ದೇಶ
Daily Manna

ಪಂಚಶತ್ತಾಮ ದಿನದ ಉದ್ದೇಶ

Sunday, 8th of June 2025
2 0 107
Categories : ಪಂಚಾಶತ್ತಮ (Pentecost)
ಪಂಚಶತ್ತಾಮ ದಿನ  ಎಂದರೆ "ಐವತ್ತನೇ ದಿನ". ಇದು ಪಸ್ಕಹಬ್ಬವಾದ  ಐವತ್ತು ದಿನಗಳಾದ ಮೇಲೆ  ಸಂಭವಿಸುತ್ತದೆ. ಬೈಬಲ್‌ನ ಕಾಲದಲ್ಲಿ, ಈ ದಿನದಲ್ಲಿಯೇ ಪ್ರತಿ ವರ್ಷ ಜನರು ಎಲ್ಲೆಡೆಯಿಂದ ಯೆರುಸಲೆಮ್‌ಗೆ ಬಂದು ತಮ್ಮ ಗೋಧಿ ಸುಗ್ಗಿಯ ಮೊದಲ ಫಲಗಳನ್ನು ದೇವಾಲಯದಲ್ಲಿ ದೇವರಿಗೆ ಕಾಣಿಕೆಯಾಗಿ ಅರ್ಪಿಸುತ್ತಿದ್ದರು. 

ಪಂಚಶತ್ತಾಮ ದಿನವನ್ನು ಸೀನಾಯಿ ಪರ್ವತದ ಮೇಲೆ ಮೋಶೆಯು ಧರ್ಮಶಾಸ್ತ್ರದ ಹಲಿಗೆಗಳನ್ನು ಸ್ವೀಕರಿಸಿದ ಕಾಲ ಎಂದು ಗುರುತಿಸಲಾಗಿದ್ದು ಮತ್ತು  ಈ ದಿನವೇ  ಇಸ್ರೇಲ್ ಜನಾಂಗವು  ದೇವರೊಂದಿಗೆ ವಿವಾಹವಾಯಿತು. (ವಿಮೋಚನಕಾಂಡ 24:12-18)ಮೊದಲ ಪಂಚಶತ್ತಾಮ ದಿನದಲ್ಲಿ ಪವಿತ್ರಾತ್ಮನು ಇಳಿದು ಬಂದು  ಕರ್ತನಾದ ಯೇಸು ಕ್ರಿಸ್ತನ ಸಭೆಯು ಜೆರುಸಲೆಮ್‌ನಲ್ಲಿ ಜನಿಸಿದ್ದು  ಪಂಚಶತ್ತಾಮ ಹಬ್ಬದಾಚಾರಣೆಯು  ಭವಿಷ್ಯದ ಸಭೆಸ್ಥಾಪನೆಯನ್ನು  ಪ್ರತಿಬಿಂಬಿಸುತ್ತದೆ. ಪಂಚಾಶತ್ತಾಮ ದಿನವು "ಸಭೆಯ  ಜನ್ಮದಿನ"ದ ಆಚರಿಸುವ ದಿನವಾಗಿದೆ. 

ದೇವರ ಆರ್ಥಿಕ ಯೋಜನೆಯಲ್ಲಿ, ಪ್ರತಿಯೊಂದಕ್ಕೂ ಒಂದೊಂದು  ಉದ್ದೇಶವಿದೆ. ಹಾಗೇ ಪಂಚಶತ್ತಾಮ ದಿನಕ್ಕೂ ಸಹ ಒಂದು ಉದ್ದೇಶವಿದೆ. ಯೇಸು ತನ್ನ ಶಿಷ್ಯರನ್ನು ತನ್ನ ಆರೋಹಣಕ್ಕೆ ಮೊದಲು ಒಟ್ಟುಗೂಡಿಸಿದಾಗ, ಆತನು ಅವರಿಗೆ, "ಆದರೆ ಪವಿತ್ರಾತ್ಮವು ನಿಮ್ಮ ಮೇಲೆ ಬಂದಾಗ ನೀವು ಬಲವನ್ನು ಹೊಂದುತ್ತೀರಿ ..." (ಅ. ಕೃ  1:8)ಎಂದು ಹೇಳಿದನು.

ಆದರೆ ಶಿಷ್ಯರು ಆ ಬಲವನ್ನು ಹೊಂದಿಕೊಂಡವರಾದ ಮೇಲೆ ಏನು ಆಗಬಹುದು ಎಂಬುದರ ಕುರಿತು ತಮ್ಮದೇ ಆದ ವ್ಯಾಖ್ಯಾನವನ್ನು ಹೊಂದಿದ್ದರು. ಯೇಸು ಆಗಿನ ರೋಮನ್ ಪ್ರಭುತ್ವವನ್ನು ಉರುಳಿಸಿ ತನ್ನ ಐಹಿಕ ರಾಜ್ಯವನ್ನು ಅಲ್ಲಿ  ಸ್ಥಾಪಿಸಿಕೊಡುತ್ತಾನೋ ಏನೋ ಎಂದು ತಿಳಿದುಕೊಳ್ಳಲು ಅವರು ತುಂಬಾ ಉತ್ಸುಕರಾಗಿದ್ದರು . ಆದರೆ ನಮಗೆ ತಿಳಿದಿರುವಂತೆ, ಯೇಸು ಪೊಂತ್ಯ ಪಿಲಾತನಿಗೆ  ಹೇಳುವಾಗ "ತನ್ನ ರಾಜ್ಯವು ಈ ಲೋಕದ್ದಲ್ಲ" ಎಂದು ಸ್ಪಷ್ಟವಾಗಿ ವಿವರಿಸಿದ್ದನು. (ಯೋಹಾನ 18:36)

ಪಂಚಾಶತ್ತಾಮ  ಹಬ್ಬದ ಉದ್ದೇಶವು "ನಾವು ಯೆರೂಸಲೇಮಿನಲ್ಲಿಯೂ, ಯೂದಾಯದಲ್ಲಿಯೂ , ಸಮಾರ್ಯದಲ್ಲಿಯೂ  ಮತ್ತು ಭೂಮಿಯ ಕಟ್ಟಕಡೆಯವರೆಗೂ ಆತನ ಸಾಕ್ಷಿಗಳಾಗಬೇಕೆಂಬುದೇ ಆಗಿದೆ" ಎಂದು ಕರ್ತನಾದ ಯೇಸು ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ. (ಅ. ಕೃ 1:8)

ಸಾಕ್ಷಿಯಾಗಿರುವುದು ಎಂದರೇನು? 
ಸಾಕ್ಷಿಯಾಗಿರುವುದು ಎಂದರೆ, ಒಬ್ಬರು ನೋಡಿದ, ಕೇಳಿದ ಮತ್ತು ಅನುಭವಿಸಿದ ಸತ್ಯವನ್ನು ಹೇಳುವುದು. ಯೇಸುವಿಗೆ ಸಾಕ್ಷಿಯಾಗಿರುವುದು ಎಂದರೆ ಆತನು ಯಾರಾಗಿದ್ದಾನೆ ಮತ್ತು ಆತನು ನಮ್ಮ ರಕ್ಷಕನಾಗಿ ಏನು ಮಾಡಿದ್ದಾರೆ ಎಂಬುದರ ಕುರಿತು ಶುಭ ಸುದ್ದಿಯನ್ನು ಹಂಚಿಕೊಳ್ಳುವುದಾಗಿದೆ. ಈ ಕಳೆದುಹೋದ ಮತ್ತು ನಶಿಸುತ್ತಿರುವ ಲೋಕಕ್ಕೆ ದೇವರ ಪ್ರೀತಿಯನ್ನು ಆತನ  ಒಳ್ಳೆಯತನವನ್ನು ಘೋಷಿಸಲು ಪವಿತ್ರಾತ್ಮನು  ನಮ್ಮನ್ನು ಬಳಸಿಕೊಳ್ಳಲು ಹಂಬಲಿಸುತ್ತಾನೆ.

ನನ್ನ ಜೀವನದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುವ  ಅಂಚಿನಲ್ಲಿದ್ದ ಒಂದು ಸಮಯವಿತ್ತು. ಆಗ ಬೀದಿಯಲ್ಲಿ ಯಾರೋ ನನ್ನೊಂದಿಗೆ ಕೃಪೆಯ ಸುವಾರ್ತೆಯನ್ನು ಹಂಚಿಕೊಂಡರು. ಆಗ ನಾನು ಒಂದು ಸೇವೆಗೆ ಆಹ್ವಾನಿಸಲ್ಪಟ್ಟು  ನನ್ನ ಜೀವನವು ಸಂಪೂರ್ಣವಾಗಿ ಮಾರ್ಪಟ್ಟಿತು. ಆ ವ್ಯಕ್ತಿಯು ನನಗೆ ಕರ್ತನ ಕುರಿತು ಸಾಕ್ಷಿ ನೀಡದಿದ್ದರೆ ಏನಾಗುತ್ತಿತ್ತು? ಅದರ ಬಗ್ಗೆ ಯೋಚಿಸಲು ಸಹ ನನಗೆ ನಡುಕ ಬರುತ್ತದೆ. ಇದುವೇ  ಪಂಚಾಶತ್ತಾಮ ಹಬ್ಬದ ನಿಜವಾದ ಉದ್ದೇಶ. 

Bible Reading: Nehemiah 1-3
Prayer
ತಂದೆಯೇ, ಇಗೋ ನಾನು ಇಲ್ಲಿದ್ದೇನೆ,ಯೇಸುನಾಮದಲ್ಲಿ ನಿನ್ನ ಆತ್ಮ ಮತ್ತು ಬಲದಿಂದ ನನಗೆ ಅಧಿಕಾರ ಅನುಗ್ರಹಿಸು. ಆಗ ನಾನು ನಿನ್ನ ಮಗನಾದ ಯೇಸುವಿನ ಕುರಿತು ಜನರೊಂದಿಗೆ ಮಾತನಾಡುತ್ತೇನೆ. ಆಮೆನ್.


Join our WhatsApp Channel


Most Read
● ಧಾರ್ಮಿಕತೆಯ ಆತ್ಮವನ್ನು ಗುರುತಿಸುವುದು
● ದೇವರು ತಾಯಂದಿರನ್ನು ವಿಶೇಷವಾಗಿ ಇರಿಸಿದ್ದಾನೆ
● ನಂಬತಕ್ಕ ಸಾಕ್ಷಿ
● ದ್ವಾರ ಪಾಲಕರು / ಕೋವರ ಕಾಯುವವರು
● ವ್ಯರ್ಥವಾದದಕ್ಕೆ ಹಣ
● ಕ್ರಿಸ್ತನ ರಾಯಭಾರಿಗಳು
● ಯಾವುದೂ ಮರೆಯಾಗಿಲ್ಲ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login