english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಮಧ್ಯಸ್ಥಿಕೆಯ ಬಗ್ಗೆ ಪ್ರವಾದನಾ ಪಾಠ -1
ಅನುದಿನದ ಮನ್ನಾ

ಮಧ್ಯಸ್ಥಿಕೆಯ ಬಗ್ಗೆ ಪ್ರವಾದನಾ ಪಾಠ -1

Tuesday, 12th of August 2025
1 0 173
Categories : ಪ್ರಾರ್ಥನೆ (prayer) ಮಧ್ಯಸ್ತಿಕೆ ಪ್ರಾರ್ಥನೆ (Intercession)
"ಆ ದೇಶದಲ್ಲಿ ಬರವು ಬಹುಘೋರವಾಗಿತ್ತು. ಅವರು ಐಗುಪ್ತದೇಶದಿಂದ ತಂದಿದ್ದ ದವಸವು ಮುಗಿದನಂತರ ಅವರ ತಂದೆಯು ಅವರಿಗೆ - ನೀವು ತಿರಿಗಿ ಹೋಗಿ ಇನ್ನು ಸ್ವಲ್ಪ ಧಾನ್ಯವನ್ನು ಕೊಂಡುಕೊಂಡು ಬನ್ನಿರಿ ಅಂದನು. ಅದಕ್ಕೆ ಯೆಹೂದನು - ಆ ಮನುಷ್ಯನು ನಮಗೆ, ನಿಮ್ಮ ತಮ್ಮನನ್ನು ಕರಕೊಂಡುಬಂದ ಹೊರತು ನನ್ನ ಮುಖವನ್ನು ನೋಡಕೂಡದು ಎಂದು ಖಂಡಿತವಾಗಿ ಹೇಳಿದನಲ್ಲಾ"(ಆದಿಕಾಂಡ 43:1-3) 

ಈಗ ಅಲ್ಲಿ ಕ್ಷಾಮವು ಭೀಕರವಾಗಿದೆ. ಯಾಕೋಬನ ಮಕ್ಕಳು ಈಜಿಪ್ಟ್‌ಗೆ ತಮ್ಮ ಮೊದಲ ಪ್ರಯಾಣದಿಂದ ತಂದ ಆಹಾರ ಧಾನ್ಯಗಳು ಮುಗಿದುಹೋಗಿವೆ. ಅವರು ಈಗ ಹಸಿವಿನಿಂದ ಸಾಯುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅವರ ತಂದೆಯಾದ ಯಾಕೋಬನು ಆಹಾರವನ್ನು ಪಡೆಯಲು ಈಜಿಪ್ಟ್‌ಗೆ ಮತ್ತೆ ಭೇಟಿ ನೀಡಬೇಕೆಂದು ಒತ್ತಾಯಿಸುತ್ತಾನೆ.

ಎಲ್ಲರೂ ಶಾಂತವಾಗಿರುವುದನ್ನು ಗಮನಿಸಿ, ಆದರೆ ಯೆಹೂದನು ತನ್ನ ತಂದೆಯಾದ ಯಾಕೋಬನಿಗೆ ತನ್ನ ಆಂತರ್ಯದ ಮಾತುಗಳನ್ನು ಹೇಳುತ್ತಾನೆ.

 ಇದು ನಮಗೆ ಹೀಗೆ ಹೇಳುತ್ತದೆ: 

• ಮಧ್ಯಸ್ಥಗಾರ ಎಂದರೆ ತಂದೆಗೆ ತನ್ನ ಆಂತರ್ಯದ ಮಾತುಗಳನ್ನು ವ್ಯಕ್ತಪಡಿಸುವವನು. 

• ಮಧ್ಯಸ್ಥಗಾರ ಎಂದರೆ ತಂದೆಗೆ ಪರಿಸ್ಥಿತಿಯನ್ನು ಸ್ಪಷ್ಟವಾಗಿ ಪ್ರಸ್ತುತಪಡಿಸುವ ವ್ಯಕ್ತಿ.

"ಆಗ ಯೆಹೂದನು ತನ್ನ ತಂದೆಯಾದ ಇಸ್ರಾಯೇಲನಿಗೆ - ನೀನೂ ನಾವೂ ನಮ್ಮ ಮಕ್ಕಳೂ ಎಲ್ಲರೂ ಸಾಯದೆ ಬದುಕಿಕೊಳ್ಳುವಂತೆ ಆ ಹುಡುಗನನ್ನು ನನ್ನ ಜೊತೆಯಲ್ಲಿ ಕಳುಹಿಸಿಕೊಡಪ್ಪಾ; ನಾವು ಹೊರಟು ಹೋಗುವೆವು.  ನಾನೇ ಅವನಿಗೆ ಹೊಣೆ; ಅವನ ವಿಷಯ ನನ್ನನ್ನೇ ಕೇಳಬಹುದು. ನಾನು ಅವನನ್ನು ತಿರಿಗಿ ಕರಕೊಂಡು ಬಂದು ನಿನ್ನೆದುರಿನಲ್ಲಿ ನಿಲ್ಲಿಸದೆ ಹೋದರೆ ಆ ದೋಷ ಎಂದೆಂದಿಗೂ ನನ್ನ ಮೇಲೆ ಇರಲಿ.  ನಾವು ತಡಮಾಡದಿದ್ದರೆ ಇಷ್ಟರೊಳಗೆ ಎರಡನೆಯ ಸಾರಿ ಹೋಗಿ ಬರುತ್ತಿದ್ದೆವು ಎಂದು ಹೇಳಿದನು."(ಆದಿಕಾಂಡ 43:8-10) 

ಯೆಹೂದನ ಮಾತುಗಳನ್ನು ಗಮನಿಸಿ. "ನಾನು ಅವನನ್ನು ಹಿಂತಿರುಗಿಸದಿದ್ದರೆ, ಆ ತಪ್ಪನ್ನು ನಾನೇ ಹೊರುತ್ತೇನೆ". ಸಹೋದರರಲ್ಲಿ ಯಾರೂ ಮಾತನಾಡುತ್ತಿಲ್ಲ. ಏನಾಗುತ್ತಿದೆ ಎಂಬುದರ ಕುರಿತು ಅವರಿಗೆ ಯಾವುದೇ ತೊಂದರೆ ಇಲ್ಲ ಎಂಬಂತೆ ಕಾಣುತ್ತಿದೆ. ಆದರೆ ಇಲ್ಲಿ ಯೆಹೂದನು ಅವರೆಲ್ಲರ ಪರವಾಗಿ ಮಧ್ಯಸ್ತಿಕೆಗಾರನಾಗಿ ನಿಂತಿದ್ದಾನೆ. 

ಇದು ಮತ್ತೊಮ್ಮೆ ನನಗೆ ಹೇಳುತ್ತಿರುವುದು. 

• ಮಧ್ಯಸ್ಥಗಾರ ಎಂದರೆ ಮಧ್ಯದಲ್ಲಿ ನಿಲ್ಲಲು ಸಿದ್ಧನಾಗಿರುವ ವ್ಯಕ್ತಿ. 

ಯೆಹೂದನ ಮಧ್ಯಸ್ಥಿಕೆಯು ಅವನ ಕುಟುಂಬವನ್ನು ಮಾತ್ರವಲ್ಲದೆ ಇಡೀ ಕುಲವನ್ನು ಕ್ಷಾಮ ಮತ್ತು ಸನ್ನಿಹಿತವಾಗಿದ್ದ ಮರಣದಿಂದ ರಕ್ಷಿಸಿತು. 

ಅದೇ ರೀತಿ, ನಿಮ್ಮ ಮಧ್ಯಸ್ಥಿಕೆಯು ನಿಮ್ಮ ಕುಟುಂಬವನ್ನು ಮಾತ್ರವಲ್ಲದೆ ಕ್ರಿಸ್ತನ ದೇಹವನ್ನು ಸಹ ಉಳಿಸುತ್ತದೆ. ದೇವರು ನಿಜವಾಗಿಯೂ ಹುಡುಕುತ್ತಿರುವ ಎರಡು ರೀತಿಯ ಜನರಿದ್ದಾರೆ.

1. ಆರಾಧಕರು

ಯೋಹಾನ 4:23-24 ನಮಗೆ ಹೇಳುವುದೇನೆಂದರೆ, ಕರ್ತನು ಸ್ವತಃ ಸತ್ಯದಿಂದ ತಂದೆಯನ್ನು ಆರಾಧಿಸುವ ಆರಾಧಕರನ್ನು ಹುಡುಕುತ್ತಿದ್ದಾನೆ. 

2. ಮಧ್ಯಸ್ಥಗಾರರು

"ನಾನು ದೇಶವನ್ನು ಹಾಳುಮಾಡದಂತೆ ನನ್ನೆದುರಿಗೆ ದೇಶರಕ್ಷಣೆಗಾಗಿ ಪೌಳಿಯ ಒಡಕಿನಲ್ಲಿ ನಿಲ್ಲುವದಕ್ಕೂ ಗೋಡೆಯನ್ನು ಗಟ್ಟಿಮಾಡುವದಕ್ಕೂ ತಕ್ಕವನನ್ನು ನಾನು ಹುಡುಕಲು ಯಾರೂ ಸಿಕ್ಕಲಿಲ್ಲ."(ಯೆಹೆಜ್ಕೇಲ 22:30) 

ದೇವರು ಇನ್ನೂ ತನಗೂ ಜನರಿಗೂ ಮದ್ಯದಲ್ಲಿ ನಿಲ್ಲಬಲ್ಲ ವ್ಯಕ್ತಿಯನ್ನು ಹುಡುಕುತ್ತಿದ್ದಾನೆ. ದೇವರು ಮಧ್ಯಸ್ಥಗಾರನನ್ನು ಕಂಡುಕೊಂಡರೆ, ದೇವರು ತನ್ನ ಜೊತೆಗೆ -ದುಡಿಮೆ ಮಾಡಬಲ್ಲ ವ್ಯಕ್ತಿಯನ್ನು ಹೊಂದಿರುತ್ತಾನೆ. ಸತ್ಯವೆಂದರೆ ಆರಾಧಕರೂ ಮತ್ತು ಮಧ್ಯಸ್ಥಗಾರರೂ ನೀವು ಎರಡೂ ಆಗಿರಬಹುದು.

ಅಬ್ರಹಾಮನು ಒಬ್ಬ ನಿಜವಾದ ಆರಾಧಕನೂ ಮತ್ತು ಮಧ್ಯಸ್ಥಗಾರನೂ ಎರಡೂ ಆಗಿದ್ದನು, ದಾವೀದನು ಆರಾಧಕನೂ ಮತ್ತು ಮಧ್ಯಸ್ಥಗಾರನೂ ಎರಡೂ ಆಗಿದ್ದನು.

Bible Reading: Jeremiah 5-6
ಪ್ರಾರ್ಥನೆಗಳು
ತಂದೆಯೇ, ಕರುಣಾ ಸದನದೊಂದಿಗೆ ಸಂಪರ್ಕ ಹೊಂದಿದ ಪ್ರತಿಯೊಬ್ಬ ವ್ಯಕ್ತಿಯನ್ನು ಈ ವರ್ಷ ಅವರ ಅಲೌಕಿಕ ತಿರುವುಗಾಗಿ ಶ್ರೇಷ್ಠತೆಯ ಆತ್ಮದೊಂದಿಗೆ ಯೇಸುನಾಮದಲ್ಲಿ ಸಬಲಗೊಳಿಸು. 

ತಂದೆಯೇ, ಕರುಣಾ ಸದನ ಸಭೆಯಲ್ಲಿ ಅನಾರೋಗ್ಯ ಮತ್ತು ನೋವು ಅನುಭವಿಸುತ್ತಿರುವ ಪ್ರತಿಯೊಬ್ಬರನ್ನು ಗುಣಪಡಿಸಿ ಮತ್ತು ಅವರನ್ನು ಪರಿಪೂರ್ಣ ಆರೋಗ್ಯಕ್ಕೆ ಯೇಸುನಾಮದಲ್ಲಿ ಪುನಃಸ್ಥಾಪಿಸು. 

ತಂದೆಯೇ, ಕರುಣಾ ಸದನ ಸಭೆಗಳಿಗೆ ಸಂಪರ್ಕ ಹೊಂದಿದ ಪ್ರತಿಯೊಬ್ಬ ವ್ಯಕ್ತಿಯನ್ನು ಸೈತಾನನ ಎಲ್ಲಾ ಆಕ್ರಮಣಗಳಿಂದ ಬಿಡುಗಡೆ ಮಾಡಿ ಮತ್ತು ಈಗಲೇ ಅವರಿಗೆ ಯೇಸುನಾಮದಲ್ಲಿ ಬಿಡುಗಡೆ ಉಂಟಾಗಲಿ.

Join our WhatsApp Channel


Most Read
● ಕೃತಜ್ಞತಾ ಸ್ತೋತ್ರ ಸಲ್ಲಿಸುವುದರಲ್ಲಿರುವ ಬಲ
● ಅನ್ಯಭಾಷೆಯನ್ನಾಡುವುದು ಪ್ರಗತಿಯನ್ನು ತರುತ್ತದೆ.
● ಹೊಗಳಿಕೆವಂಚಿತ ನಾಯಕರು
● ನಿಮ್ಮ ಹೃದಯವನ್ನು ಪರೀಕ್ಷಿಸಿಕೊಳ್ಳಿ
● ಸಾಲದಿಂದ ಹೊರಬನ್ನಿ : ಕೀಲಿಕೈ # 1
● ಇಸ್ಕಾರಿಯೋತಾ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು - 1
● ಸಭೆಯಲ್ಲಿ ಐಕ್ಯತೆಯನ್ನು ಕಾಪಾಡಿಕೊಳ್ಳುವುದು
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್