english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಸರ್ಪಗಳನ್ನು ತಡೆಯುವುದು.
ಅನುದಿನದ ಮನ್ನಾ

ಸರ್ಪಗಳನ್ನು ತಡೆಯುವುದು.

Friday, 5th of September 2025
3 1 160
Categories : ಬಿಡುಗಡೆ (Deliverance)
"ಅವರಲ್ಲಿ ಕೆಲವರು ಕರ್ತನನ್ನು ಪರೀಕ್ಷಿಸಿ ಸರ್ಪಗಳಿಂದ ನಾಶವಾದರು; ನಾವು ಪರೀಕ್ಷಿಸದೆ ಇರೋಣ. ಇದಲ್ಲದೆ ಅವರಲ್ಲಿ ಕೆಲವರು ಗುಣುಗುಟ್ಟಿ ಸಂಹಾರಕನ ಕೈಯಿಂದ ನಾಶವಾದರು; ನೀವು ಗುಣುಗುಟ್ಟಬೇಡಿರಿ".  (1 ಕೊರಿಂಥ 10:9-10) 

ಇಸ್ರೇಲ್ ಮಕ್ಕಳು, ಮರುಭೂಮಿಯಲ್ಲಿ ತಮ್ಮ ಎರಡನೇ ಪ್ರಯಾಣದಲ್ಲಿ ಸಂಚಾರಿಸುವಾಗ ಆಹಾರ, ಪರಿಸ್ಥಿತಿಗಳು ಎಲ್ಲದರ ಕುರಿತು, ಗೊಣಗುತ್ತಲೇ ಇದ್ದು ದೇವರನ್ನು  ದೂರುತ್ತಲೇ ಇದ್ದರು. ಇದು ದೇವರನ್ನು ಕೋಪಗೊಳುವಂತೆ ಮಾಡಿತು ಇದರಿಂದ ಆತನು ಅವರ ಮಧ್ಯದಲ್ಲಿ ವಿಷಪೂರಿತ ಹಾವುಗಳನ್ನು ಕಳುಹಿಸಿದನು,ಇದರಿಂದಾಗಿ ಅವರಲ್ಲಿ ಅನೇಕರು ಹಾವಿನಿಂದ ಕಚ್ಚಿಸಿಕೊಂಡು ಸತ್ತರು. (ಅರಣ್ಯಕಾಂಡ 21:4-6 ಓದಿ)

ಈ ಹೊಡೆತದಿಂದ , ಜನರು ಬೇಗನೆ ತಮ್ಮ ತಪ್ಪನ್ನು ಅರಿತುಕೊಂಡು ತಾವು ಪಾಪ ಮಾಡಿದ್ದೇವೆಂದು ದೀನತೆಯಿಂದ ಒಪ್ಪಿಕೊಂಡರು. ಆಗ ಮೋಶೆಯು ಜನರಿಗಾಗಿ ಮಧ್ಯಸ್ಥಿಕೆ ವಹಿಸಿದನು. (ಅರಣ್ಯಕಾಂಡ 21:7) 

ನಿರಂತರವಾಗಿ ಗೊಣಗುವ ಮತ್ತು ದೂರುವುದರಿಂದಾಗುವ ಅಪಾಯವೆಂದರೆ ನಾವು ಅಂತಿಮವಾಗಿ ದೇವರು ನಮಗೆ ನೀಡಿರುವ ಎಲ್ಲಾ ಒಳ್ಳೆಯ ವಿಷಯಗಳನ್ನು ಮರೆತುಬಿಡುತ್ತೇವೆ. ನೀವು ಗೊಣಗುಟ್ಟುವ ಮತ್ತು ದೂರುವ ಕ್ಷಣದಲ್ಲಿ, ನೀವು ಕೃತಜ್ಞತಾ ಹೀನರಂತೆ ವರ್ತಿಸಲು ಪ್ರಾರಂಭಿಸುತ್ತೀರಿ.

ಗೊಣಗುವಂತದ್ದು ಉತ್ತರವನ್ನು ಹುಡುಕುವ ಬದಲು ಸಮಸ್ಯೆಯ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುವಂತೆ ಮಾಡುತ್ತದೆ. ಇದು ದೇವರ ಶಕ್ತಿಯ ಮೇಲೆ ಆತುಕೊಳ್ಳುವ ಬದಲು ನಮ್ಮ ಮೇಲೆ  ನಾವು ಕೇಂದ್ರೀಕರಿಸುವಂತೆ ಮಾಡುತ್ತದೆ. 

ಗೊಣಗುಟ್ಟುವುದು ಮತ್ತು ದೂರುವಂತದ್ದರ ಅತ್ಯಂತ ಅಪಾಯಕಾರಿ ವಿಷಯವೆಂದರೆ ಅದು ಜನರ ಜೀವನದಲ್ಲಿ ವಿನಾಶವನ್ನು ಉಂಟುಮಾಡುವ ದುಷ್ಟ ದುರಾತ್ಮ ಶಕ್ತಿಗಳಿಗೆ ಬಾಗಿಲು ತೆರೆದುಕೊಡುತ್ತದೆ. ಗೊಣಗುವುದನ್ನು  ನಾವು ನಿಲ್ಲಿಸುವುದು ಎಷ್ಟು ಮುಖ್ಯ ವಿಷಯ ಎಂದು ಪವಿತ್ರಾತ್ಮನು ನಮಗೆ ಕಲಿಸಲು ಬಯಸುತ್ತಾನೆ, ಮತ್ತು ಆದ್ದರಿಂದಲೇ ಅವನು ಫಿಲಿಪ್ಪಿ 2:14-15 ರಲ್ಲಿ ಅಪೊಸ್ತಲ ಪೌಲನ ಮೂಲಕ ಹೀಗೆ ಬರೆದನು: 

" ಗುಣುಗುಟ್ಟದೆಯೂ ವಿವಾದವಿಲ್ಲದೆಯೂ ಎಲ್ಲವನ್ನು ಮಾಡಿರಿ.  ಹೀಗೆ ನೀವು ನಿರ್ದೋಷಿಗಳೂ ಯಥಾರ್ಥಮನಸ್ಸುಳ್ಳವರೂ ಆಗಿದ್ದು ವಕ್ರಬುದ್ಧಿಯುಳ್ಳ ಮೂರ್ಖಜಾತಿಯ ಮಧ್ಯದಲ್ಲಿ ದೇವರ ನಿಷ್ಕಳಂಕರಾದ ಮಕ್ಕಳಾಗಿರುವಿರಿ. ಇವರೊಳಗೆ ನೀವು ಸರ್ವರಿಗೂ ಜೀವದಾಯಕ ವಾಕ್ಯವನ್ನು ತೋರಿಸಿಕೊಡುವವರಾಗಿದ್ದು ಲೋಕದೊಳಗೆ ಹೊಳೆಯುವ ಜೋತಿರ್ಮಂಡಲಗಳಂತೆ ಕಾಣಿಸುವವರಾಗಿದ್ದೀರಲ್ಲಾ. ನೀವು ಹೀಗೆ ನಡೆದರೆ ನಾನು ಕೆಲಸ ಸಾಧಿಸಿದ್ದೂ ವ್ಯರ್ಥವಲ್ಲ, ನಾನು ಪ್ರಯಾಸಪಟ್ಟದ್ದೂ ವ್ಯರ್ಥವಲ್ಲ ಎಂಬ ಉತ್ಸಾಹವು ಕ್ರಿಸ್ತನ ದಿನದಲ್ಲಿ ನನಗೆ ಉಂಟಾಗುವದು."

ದೇವಮನುಷ್ಯನಾದ ಮೋಶೆಗೆ ಇನ್ನೊಂದು ವಿಷಯವನ್ನು ಮಾಡಬೇಕೆಂದು ಸೂಚಿಸಲಾಗಿತ್ತು: ಮೋಶೆಯು ತಾಮ್ರದ ಸರ್ಪವನ್ನು ಮಾಡಿ ಅದನ್ನು ಎತ್ತರವಾದ ಕಂಬದ ಮೇಲೆ ಇಟ್ಟನು; ಆಗ ಹಾವು ಯಾರನ್ನಾದರೂ ಕಚ್ಚಿದ್ದರೆ, ಅವರು ತಾಮ್ರದ ಸರ್ಪವನ್ನು ನೋಡಿದಾಗ ಬದುಕುಳಿಯುತ್ತಿದ್ದರು. (ಅರಣ್ಯಕಾಂಡ 21:9)

ಈ ಚಿತ್ರದಲ್ಲಿ ಅರ್ಥವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ನಮಗೆ ಮುಖ್ಯವಾದ ಮೂರು ವಿಷಯಗಳಿವೆ. 

1. ಹಳೆಯ ಒಡಂಬಡಿಕೆಯ ಉದ್ದಕ್ಕೂ ,ತಾಮ್ರ ಅಥವಾ ಹಿತ್ತಾಳೆಲೋಹವು ನ್ಯಾಯ ತೀರ್ಪಿನೊಂದಿಗೆ ಸಂಬಂಧ ಹೊಂದಿತ್ತು. 

2. ಹವ್ವಳನ್ನು ಪ್ರಲೋಭಿಸಲು ಸೈತಾನನು ತೋಟದಲ್ಲಿ ತೆಗೆದುಕೊಂಡ ರೂಪದ ಸಂಕೇತವೆಂದರೆ ಸರ್ಪ.

 3. ತಾಮ್ರದ ಸರ್ಪವನ್ನು ಸಾರ್ವಜನಿಕವಾಗಿ, ಹೊರಗೆ, ಎಲ್ಲರಿಗೂ ಕಾಣುವಂತೆ ಕಂಬದ ಮೇಲೆ ನೇತುಹಾಕಲಾಗಿತ್ತು.

ಸರ್ಪಗಳಿಂದ ಕಚ್ಚಲ್ಪಟ್ಟ ಜನರು ಕಂಬದ ಮೇಲಿನ ಸರ್ಪದ ಚಿತ್ರವನ್ನು ನೋಡಬೇಕಾಗಿತ್ತು,ಆಗ ಅವರು ಬದುಕುಳಿಯುತ್ತಿದ್ದರು. ನೀವು ಗೊಣಗುಟ್ಟಲು ಮತ್ತು ದೂರು ನೀಡಲು ಬಯಸಿದಾಗಲೆಲ್ಲಾ, ಯೇಸುವನ್ನು ನೋಡಿ, ಆತನು ನಮಗಾಗಿ ಹೇಗೆ ಬಳಲಿದರೂ, ಆತನು ಯಾರನ್ನೂ ದೂರದೇ ಮತ್ತು ಗೊಣಗುಟ್ಟದೆ ಮೌನವಾಗಿ ಸಹಿಸಿಕೊಂಡನು ಆಗ ತಂದೆಯಾದ ದೇವರು ಆತನನ್ನು ಬಹಳವಾಗಿ ಉನ್ನತೀಕರಿಸಿದನು. ನೀವೂ ಸಹಿಸಿಕೊಳ್ಳುವಾಗ ಅದೇ ಆಗುತ್ತದೆ.

ಅಲ್ಲದೆ, ನೀವು ಯಾವಾಗಲೂ ದೂರುವ ಮತ್ತು ಗೊಣಗುಟ್ಟುವ ಅಭ್ಯಾಸವನ್ನು ಹೊಂದಿದ್ದರೆ, ಯೇಸುವಿನ ಕಡೆಗೆ ನೋಡಿ ಆತನಿಂದ ಕೃಪೆಯನ್ನು ಬೇಡಿಕೊಳ್ಳಿ. ನೆನಪಿಡಿ, ಯೇಸು ನಮಗೆ ಪರಿಪೂರ್ಣ ಮಾದರಿಯಾಗಿದ್ದಾನೆ.

Bible Reading: Ezekiel 14-16
ಪ್ರಾರ್ಥನೆಗಳು
ತಂದೆಯೇ, ನನ್ನ ಜೀವನದಲ್ಲಿ ನನ್ನ ಪರಿಸ್ಥಿತಿಯ ಕುರಿತು ದೂರುತ್ತಿದ್ದಕ್ಕಾಗಿ ನನ್ನನ್ನು ಕ್ಷಮಿಸಿ. ನಿನ್ನನ್ನು ನೋಡಲು ಮತ್ತು ಇಂದು ನಾನು ಎದುರಿಸುತ್ತಿರುವ ಪ್ರತಿಯೊಂದು ಅಡೆತಡೆಯನ್ನು ಜಯಿಸಲು ನನಗೆ ಸಹಾಯ ಮಾಡಿ. ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸುತ್ತೇನೆ, ತಂದೆಯೇ ಆಮೆನ್.

Join our WhatsApp Channel


Most Read
● ಆತನ ಬೆಳಕಿನಲ್ಲಿ ಸಂಬಂಧಗಳ ಪೋಷಣೆ
● ಸುಮ್ಮನೆ ಓಡಬೇಡಿ.
● ಬಲವಾದ ಮೂರುಹುರಿಯ ಹಗ್ಗ
● ಆತನ ಪರಿಪೂರ್ಣ ಪ್ರೀತಿಯಲ್ಲಿರುವ ಬಿಡುಗಡೆಯನ್ನು ಕಂಡುಕೊಳ್ಳುವುದು
● ಸೆರೆಯಲ್ಲಿ ದೇವರ ಸ್ತೋತ್ರ
● ಯೇಸುವಿನ ಹೆಸರು.
● ದೇವರು ಮುಯ್ಯಿ ತೀರಿಸಲಿ.
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್