english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಹೆಚ್ಚು ಪರಿಣಾಮಕಾರಿ ಜನರ 9 ಅಭ್ಯಾಸ: ಅಭ್ಯಾಸ ಸಂಖ್ಯೆ 2
ಅನುದಿನದ ಮನ್ನಾ

ಹೆಚ್ಚು ಪರಿಣಾಮಕಾರಿ ಜನರ 9 ಅಭ್ಯಾಸ: ಅಭ್ಯಾಸ ಸಂಖ್ಯೆ 2

Sunday, 11th of January 2026
2 1 119
Categories : ಹೆಚ್ಚು ಪರಿಣಾಮಕಾರಿ ಜನರ 9 (9 Habit of Highly Effective people)
"ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು.” (ಜ್ಞಾನೋಕ್ತಿ 4:23) 

ಹೆಚ್ಚು ಪರಿಣಾಮಕಾರಿ ಜನರು : ಜೀವನವು ಮೊದಲು ಹೊರಗಿನ ಸಮಸ್ಯೆಗಳಿಂದ ಕುಸಿಯುವುದಿಲ್ಲ - ಅದು ಒಳಗಿನಿಂದ ಕುಸಿಯಲು ಪ್ರಾರಂಭಿಸುತ್ತದೆ ಎನ್ನುವ ಅನೇಕರು ಕಡೆಗಣಿಸುವ ಸತ್ಯವನ್ನು ಅರ್ಥಮಾಡಿಕೊಳ್ಳುತ್ತಾರೆ. ಅಭ್ಯಾಸಗಳು ವಿಫಲಗೊಳ್ಳುವ ಮೊದಲು, ಹೃದಯವು ಅಲೆಯುತ್ತಿರುತ್ತದೆ. ನಿರ್ಧಾರಗಳು ಕುಸಿಯುವ ಮೊದಲು, ಆಲೋಚನೆಗಳು ಕೊಳೆಯುತ್ತವೆ. ಪರಿಣಾಮಕಾರಿತ್ವದ ನಿಜವಾದ ಯುದ್ಧಭೂಮಿ ಸನ್ನಿವೇಶವಲ್ಲ, ಆದರೆ ಆಂತರಿಕ ಜೀವನ ಎಂಬುದನ್ನು ದೇವರವಾಕ್ಯವು ಪ್ರಕಟಪಡಿಸುತ್ತದೆ. 

ದೇವರು ಎಂದಿಗೂ ನಮ್ಮ ನಡವಳಿಕೆ ನೋಡಿ ಪ್ರಾರಂಭಿಸುವುದಿಲ್ಲ; ಆತನು ಹೃದಯದಿಂದ ಪ್ರಾರಂಭಿಸುತ್ತಾನೆ.

1. ಹೃದಯವು ದೈವೀಕ ಕರೆಯ ನಿಯಂತ್ರಣ ಕೇಂದ್ರವಾಗಿದೆ 

ಬೈಬಲ್ ಹೃದಯವನ್ನು ಕಾವ್ಯಾತ್ಮಕ ರೂಪಕವಾಗಿ ಪರಿಗಣಿಸುವುದಿಲ್ಲ - ಅದು ಅದನ್ನು ಜೀವನದ ಆಜ್ಞಾ ಕೇಂದ್ರವಾಗಿ ಪರಿಗಣಿಸುತ್ತದೆ. ಎಲ್ಲಾ ಸಮಸ್ಯೆಗಳು - ಹೊಳೆಗಳು, ಫಲಿತಾಂಶಗಳು, ನಿರ್ದೇಶನಗಳು - ಹೃದಯದಿಂದ ಹರಿಯುತ್ತವೆ ಎಂಬುದಾಗಿ ಜ್ಞಾನೋಕ್ತಿಗಳು ಘೋಷಿಸುತ್ತವೆ. ನಿಮ್ಮ ಹೃದಯವನ್ನು ಬದಲಾಯಿಸಿಕೊಳ್ಳಿ ಆಗ ಜೀವನ ಬದಲಾಗುತ್ತದೆ. ಹೃದಯವನ್ನು ನಿರ್ಲಕ್ಷಿಸಿ ನೋಡಿ, 

ಆಗ ಯಾವುದೇ ಬಾಹ್ಯ ಶಿಸ್ತು ಅದನ್ನು ಸರಿದೂಗಿಸಲು ಸಾಧ್ಯವಿಲ್ಲ. 

“ಹೃದಯದಲ್ಲಿ ತುಂಬಿರುವುದನ್ನೆ ಬಾಯಿ ಮಾತನಾಡುತ್ತದೆ” (ಮತ್ತಾಯ 12:34) ಎಂದು ಹೇಳಿದಾಗ ಕರ್ತನಾದ ಯೇಸು ಈ ಸತ್ಯವನ್ನು ಬಲಪಡಿಸಿದನು. 

ಪದಗಳು, ಪ್ರತಿಕ್ರಿಯೆಗಳು, ಆಯ್ಕೆಗಳು ಮತ್ತು ವರ್ತನೆಗಳು ಕೇವಲ ಲಕ್ಷಣಗಳಾಗಿವೆ. ಮೂಲ ಯಾವಾಗಲೂ ಆಂತರಿಕವಾಗಿರುತ್ತದೆ. 

ಹೆಚ್ಚು ಪರಿಣಾಮಕಾರಿ ಜನರು ಕೇವಲ ಯಾವುದು ಬಾಹ್ಯವಾಗಿ ಕಾಣುತ್ತಿದೆಯೋ ಅದನ್ನು ನಿರ್ವಹಿಸುವುದಿಲ್ಲ; ಬದಲಾಗಿ ಅವರು ತಮ್ಮ ಆಂತರಿಕ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಾರೆ. ಅವರು ಈ ಕೆಳಕಂಡ ಕಠಿಣ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾರೆ: 

  • ಯಾವ ಆಲೋಚನೆಯನ್ನು ರೂಪಿಸಲು ನಾನು  ಅನುಮತಿಸುತ್ತಿದ್ದೇನೆ? 
  • ನಾನು ಯಾವ ಭಾವನೆಗಳನ್ನು ಪೋಷಿಸುತ್ತಿದ್ದೇನೆ?
  • ನನ್ನ ಕ್ರಿಯೆಗಳನ್ನು ಯಾವ ಉದ್ದೇಶಗಳು ನಡೆಸುತ್ತಿವೆ?

2. ಆಲೋಚಿಸುವ ಜೀವನವು ಜೀವನದ ದಿಕ್ಕನ್ನು ನಿರ್ಧರಿಸುತ್ತದೆ.

ಬೈಬಲ್ ಇದರ ಕುರಿತು ಬಹಳ ಸ್ಪಷ್ಟವಾಗಿದೆ: 

“ಮನುಷ್ಯನು ತನ್ನ ಹೃದಯದಲ್ಲಿ ಯೋಚಿಸುವ, ಹಾಗೆಯೇ ಅವನು ಇದ್ದಾನೆ ” (ಜ್ಞಾನೋಕ್ತಿ 23:7). 

ಇದು ಒಂದು ಗಂಭೀರ ತತ್ವವನ್ನು ಪ್ರಕಟ ಪಡಿಸುತ್ತದೆ - ಜೀವನವು ಅಂತಿಮವಾಗಿ ಪ್ರಬಲ ಆಲೋಚನೆಗಳ ದಿಕ್ಕಿನಲ್ಲಿ ಚಲಿಸುತ್ತದೆ. ಅದಕ್ಕಾಗಿಯೇ ದೇವರು "ಈ ಧರ್ಮಶಾಸ್ತ್ರವು ಯಾವಾಗಲೂ ನಿನ್ನ ಬಾಯಲ್ಲಿರಲಿ; ಹಗಲಿರುಳು ಅದನ್ನು ಧ್ಯಾನಿಸುತ್ತಾ ಅದರಲ್ಲಿ ಬರೆದಿರುವದನ್ನೆಲ್ಲಾ ಕೈಕೊಂಡು ನಡಿ. ಆಗ ನಿನ್ನ ಮಾರ್ಗದಲ್ಲೆಲ್ಲಾ ಸಫಲನಾಗುವಿ, ಕೃತಾರ್ಥನಾಗುವಿ. ಎಂದು ಆಜ್ಞಾಪಿಸಿದನು. (ಯೆಹೋಶುವ 1:8). 

ಧ್ಯಾನವು ದೈವಿಕ ಸತ್ಯವು ವಿನಾಶಕಾರಿ ಚಿಂತನೆಯ ಮಾದರಿಗಳನ್ನು ತಿದ್ದಿ ಬರೆಯಲು ಅನುಮತಿಸುವ ಶಿಸ್ತಾಗಿವೆ. ಅಪೊಸ್ತಲನಾದ ಪೌಲನು ಇದನ್ನು ಮತ್ತಷ್ಟು ಗಾಡವಾಗಿ ತೆಗೆದುಕೊಂಡು, ಕ್ರಿಸ್ತನನ್ನು ನಂಬುವವರು ತಮ್ಮ ಪ್ರತಿಯೊಂದು ಆಲೋಚನೆಯನ್ನು ಸೆರೆಹಿಡಿಯುವಂತೆ ಒತ್ತಾಯಿಸುತ್ತಾನೆ (2 ಕೊರಿಂಥ 10:5). ಆಲೋಚನೆಗಳು ತಟಸ್ಥವಾಗಿರುವುದಿಲ್ಲ.ಅದನ್ನು ನಿಯಂತ್ರಿಸದೆ ಬಿಟ್ಟರೆ, ಅವು ಸತ್ಯವನ್ನು ವಿರೋಧಿಸುವ ಮತ್ತು ಬೆಳವಣಿಗೆಯನ್ನು ಹಾಳುಮಾಡುವ ಚಿಂತನೆಯ ಮಾದರಿಗಳ ಭದ್ರವಾದ ಕೋಟೆಗಳನ್ನು ನಿರ್ಮಿಸುತ್ತವೆ. 

ಹೆಚ್ಚು ಪರಿಣಾಮಕಾರಿಯಾದ ವಿಶ್ವಾಸಿಗಳು ತಮ್ಮ ಮನಸ್ಸಿನ ಬಾಗಿಲನ್ನು ತಟ್ಟುವ ಪ್ರತಿಯೊಂದು ಆಲೋಚನೆಗೆ ಮಣೆ ಹಾಕುವುದಿಲ್ಲ. ಅವರು ತಮ್ಮ ಮನಸ್ಸನ್ನು ಕ್ರಿಸ್ತನಿಗೆ ಒಪ್ಪಿಸಿ ಕ್ರಿಸ್ತನ ಮಾನದಂಡ ದಲ್ಲಿ ಶೋಧಿಸುತ್ತಾರೆ, ಮೌಲ್ಯಮಾಪನ ಮಾಡಲು ಸಮರ್ಪಸಿಕೊಳ್ಳುತ್ತಾರೆ (ರೋಮನ್ನರು 12:2).

3. ಭಾವನಾತ್ಮಕ ಶಿಸ್ತು ಎಂದರೆ ಆತ್ಮೀಕ ಪರಿಪಕ್ವತೆ

ಅನೇಕ ಜನರು ಪ್ರಾಮಾಣಿಕರು, ಪ್ರಾರ್ಥನಾಶೀಲರು ಮತ್ತು ಪ್ರತಿಭಾನ್ವಿತರು - ಆಗಿದ್ದರೂ ಸಹ ಅಸ್ಥಿರತೆ ವುಳ್ಳವರು. ಏಕೆ? ಏಕೆಂದರೆ ಅವರಲ್ಲಿ ಸತ್ಯ ಆಳಬೇಕಾದ ಸ್ಥಳದಲ್ಲಿ ಭಾವನೆಗಳು ಆಳುತ್ತಿವೆ.

ಧರ್ಮಗ್ರಂಥವು ಎಂದಿಗೂ ಭಾವನಾತ್ಮಕ ನಿಗ್ರಹವನ್ನು ಕಲಿಸುವುದಿಲ್ಲ, ಆದರೆ ಅದು ಭಾವನೆಗಳ ಮೇಲೆ ಆಡಳಿತ ನಡೆಸಬೇಕೆಂದು ಬಲವಾಗಿ ಕಲಿಸುತ್ತದೆ. ಅರಸನಾದ ದಾವೀದನು ಸಾಮಾನ್ಯವಾಗಿ ತನ್ನ ಆತ್ಮಕ್ಕೆ ವಿಧೇಯನಾಗುವ ಬದಲು : 

“ಓ ನನ್ನ ಆತ್ಮವೇ, ನೀನು ಕುಗ್ಗಿರುವುದೇನು?ವ್ಯಥೆಪಡುವುದೇನು ದೇವರಲ್ಲಿ ಭರವಸೆಯಿಡು” (ಕೀರ್ತನೆ 42:5)ಎಂದುಅದರೊಟ್ಟಿಗೆ 

ಮಾತನಾಡುತ್ತಿದ್ದನು. ಇದು ಪ್ರಬುದ್ಧತೆ - ಮನಸ್ಥಿತಿಗಳಿಗೆ ಶರಣಾಗುವ ಬದಲು ಆಂತರಿಕ ಸ್ಥಿತಿಗಳ ಮೇಲೆ ಸತ್ಯದ ಮೂಲಕ ಆಜ್ಞಾಪಿಸುವುದಾಗಿದೆ. ಅಪೊಸ್ತಲ ಪೌಲನು ಸಹ ಬರೆಯುವಾಗ ಅದೇ ವಿಷಯವನ್ನು ಹೇಳುತ್ತಾನೆ, 

“ಇತರರನ್ನು ಹೋರಾಟಕ್ಕೆ ಕರೆದ ಮೇಲೆ ನಾನೇ ಅಯೋಗ್ಯನೆನಿಸಿಕೊಂಡೇನೋ ಎಂಬ ಭಯದಿಂದ ನನ್ನ ಮೈಯನ್ನು ಜಜ್ಜಿ ಸ್ವಾಧೀನ ಪಡಿಸಿಕೊಳ್ಳುತ್ತೇನೆ..” (1 ಕೊರಿಂಥ 9:27). 

ಹೆಚ್ಚು ಪರಿಣಾಮಕಾರಿ ಜನರು ಆಳವಾಗಿ ಭಾವಿಸುತ್ತಾರೆ - ಆದರೆ ಅವರು ಭಾವನೆಗಳಿಂದ ಕುರುಡಾಗಿ ನಡೆಸಲ್ಪಡುವುದಿಲ್ಲ. ಭಾವನೆಗಳು ಏರಿಳಿತಗೊಂಡಾಗ ಅವರು ಸತ್ಯದ ಮೂಲಕ ತಮಗೆ ತಾವು ಲಂಗರು ಹಾಕಿಕೊಳ್ಳುತ್ತಾರೆ.

4. ಆಂತರಿಕ ಜೋಡಣೆಯು ಬಾಹ್ಯ ಅಧಿಕಾರವನ್ನು ಉಂಟುಮಾಡುತ್ತದೆ.

"ದೇವರು ಮನುಷ್ಯರಂತೆ ಹೊರತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ " ಎಂದು ದೇವರು ಪ್ರವಾದಿಯಾದ ಸಮುವೇಲನಿಗೆ ಹೇಳಿದನು.(1 ಸಮುವೇಲ 16:7). 

ಧರ್ಮಗ್ರಂಥದಲ್ಲಿನ ಅಧಿಕಾರವು ಸಾರ್ವಜನಿಕ ಗೋಚರತೆಯಿಂದಲ್ಲ, ಆಂತರಿಕ ಸ್ಥಾನದಿಂದ ಹರಿಯುತ್ತದೆ. ಅದಕ್ಕಾಗಿಯೇ ಯೋಸೇಫನು ಈಜಿಪ್ಟನ್ನು ಆಳಬಲ್ಲವನಾದನು. ದಾನಿಯೇಲನು ಸಾಮ್ರಾಜ್ಯಗಳ ಮೇಲೆ ಪ್ರಭಾವ ಬೀರಬಲ್ಲವನಾದನು ಮತ್ತು ಕರ್ತನಾದ ಯೇಸು ಅಧಿಕಾರದಿಂದ 

ಮಾತನಾಡಬಲ್ಲವನಾದನು - ಏಕೆಂದರೆ ಅವರ ಆಂತರಿಕ ಪ್ರಪಂಚವು ದೇವರಿಂದ ನಿಯಂತ್ರಿಸಲ್ಪಟ್ಟಿದ್ದವು. ಹೃದಯವನ್ನು ಕಾಪಾಡಿಕೊಳ್ಳುವಾಗ, ನಿರ್ಧಾರಗಳು ಸ್ಪಷ್ಟವಾಗಿರುತ್ತವೆ. ಆಲೋಚನೆಗಳು ನವೀಕರಿಸಲ್ಪಟ್ಟಾಗ, ಕ್ರಿಯೆಗಳು ಜ್ಞಾನಯುತವಾಗಿರುತ್ತದೆ. ಭಾವನೆಗಳನ್ನು ಶಿಸ್ತುಬದ್ಧಗೊಳಿಸಿದಾಗ, ಸಹಿಷ್ಣುತೆ ಸಾಧ್ಯವಾಗುತ್ತದೆ.

ಹೆಚ್ಚು ಪರಿಣಾಮಕಾರಿ ಜನರು ಸಾರ್ವಜನಿಕವಾಗಿ ಪ್ರಭಾವಿಗಳಾಗಿ ಕಾಣಿಸಿಕೊಳ್ಳುವ ಮೊದಲೇ ಖಾಸಗಿ ಜೀವನದಲ್ಲಿ ವಿಜಯವನ್ನು ಸಾಧಿಸಿರುತ್ತಾರೆ. ಆಂತರಿಕ ಮನುಷ್ಯ ಬಲಶಾಲಿಯಾಗಿದ್ದರೆ, ಮಾತ್ರವೇ ಬಾಹ್ಯ ಜೀವನವು ಅಂತಿಮವಾಗಿ ಅದನ್ನು ಅನುಸರಿಸುತ್ತದೆ ಎಂಬುದು ಅವರಿಗೆ ಇದು ತಿಳಿದಿದೆ. ಇದು 

ಅಭ್ಯಾಸ ಸಂಖ್ಯೆ 2—ಮತ್ತು ಅದು ಇಲ್ಲದೆ ಹೋದರೆ, ಯಾವುದೇ ಮಟ್ಟದ ವರಗಳು ಅಥವಾ ಅವಕಾಶವು ಕಾಲಾನಂತರದಲ್ಲಿ ಪರಿಣಾಮಕಾರಿತ್ವವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. 

Bible Reading: Genesis 32-33
ಪ್ರಾರ್ಥನೆಗಳು
ತಂದೆಯೇ, ದಯವಿಟ್ಟು ನನ್ನ ಹೃದಯವನ್ನು ಕಾಪಾಡಲು ನನಗೆ ಸಹಾಯ ಮಾಡು. ನನ್ನ ಆಲೋಚನೆಗಳನ್ನು ಪವಿತ್ರಗೊಳಿಸು ನನ್ನ ಭಾವನೆಗಳನ್ನು ನಿಯಂತ್ರಿಸಲು ನನಗೆ ಸಹಾಯ ಮಾಡು ಮತ್ತು ನನ್ನೊಳಗಿನ ಪ್ರತಿಯೊಂದು ತಪ್ಪು ಮಾದರಿಯನ್ನು ಯೇಸುನಾಮದಲ್ಲಿ ಕಿತ್ತುಹಾಕು ನನ್ನ ಆಂತರಿಕ ಜೀವನವನ್ನು ಯೇಸುನಾಮದಲ್ಲಿ ನಿಮ್ಮ ವಾಕ್ಯದೊಂದಿಗೆ ಅನುಗುಣವಾಗಿ ರುವಂತೆ ಸಹಾಯ ಮಾಡು. ಆಮೆನ್!


Join our WhatsApp Channel


Most Read
● ಅಶ್ಲೀಲ ಸಾಹಿತ್ಯ
● ಪರಲೋಕ ಎಂದು ಕರೆಯಲ್ಪಡುವ ಸ್ಥಳ
● ಕೊಡುವ ಕೃಪೆ - 1
● ಮನಸ್ತಾಪವು ಆತ್ಮೀಕ ದೃಷ್ಟಿಕೋನವನ್ನು ವಿರೂಪಗೊಳಿಸುತ್ತದೆ
● ಇಸ್ಕಾರಿಯೋತ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು -2
● ದ್ವಾರ ಪಾಲಕರು / ಕೋವರ ಕಾಯುವವರು
● ಅನಂತವಾದ ಕೃಪೆ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2026 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್