english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ದೇವರು ನಿಮ್ಮನ್ನು ಉಪಯೋಗಿಸಲು ಬಯಸುತ್ತಾನೆ.
ಅನುದಿನದ ಮನ್ನಾ

ದೇವರು ನಿಮ್ಮನ್ನು ಉಪಯೋಗಿಸಲು ಬಯಸುತ್ತಾನೆ.

Sunday, 3rd of March 2024
0 0 539
Categories : ಭಾವನೆ (Emotion)
" ನಾನು ನಿನಗೆ ಆಜ್ಞಾಪಿಸಿದ್ದೇನಲ್ಲಾ; ಸ್ಥಿರಚಿತ್ತನಾಗಿರು, ಧೈರ್ಯದಿಂದಿರು. ಅಂಜಬೇಡ, ಕಳವಳಗೊಳ್ಳಬೇಡ. ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುತ್ತಾನೆ ಎಂದು ಹೇಳಿದನು."(ಯೆಹೋಶುವ‬ ‭1:9‬)

ನಾವು ದೇವರನ್ನು ವಿಶ್ವಾಸಿಸಿ ನಡೆಯಬೇಕೆಂಬುದು ಕೇವಲ ಒಂದು ಆಶಯವಲ್ಲ. ದೇವರನ್ನು ವಿಶ್ವಾಸಿಸುವುದು ಎಂದರೆ ಆತನು ನಮ್ಮ ಮೂಲಕ ತನ್ನ ಕಾರ್ಯ ಸಾಧಿಸುವ ಸಾಮರ್ಥ್ಯ ಉಳ್ಳವನು ಎಂಬುದನ್ನು ನಾವು ಪ್ರಾಯೋಗಿಕವಾಗಿ ನಂಬಬೇಕಾದಂತದ್ದಾಗಿದೆ.ಅದಕ್ಕಾಗಿ ದೇವರು ತನ್ನ ಆತ್ಮನ ಮೂಲಕ ನಮ್ಮನ್ನು ಬಲಪಡಿಸುವವನಾಗಿದ್ದಾನೆ. ಆತನು ತನ್ನ ವಾಕ್ಯಗಳಿಂದ ನಮ್ಮನ್ನು ಸಜ್ಜುಗೊಳಿಸುವವನಾಗಿದ್ದಾನೆ. ಆತನು ಅದಕ್ಕಾಗಿ ಈ ದಿನವನ್ನು ನಮಗೆ ಕೊಟ್ಟಿದ್ದಾನೆ. ಆತನು ನಮಗಾಗಿ ತೆರೆದಿಟ್ಟಿರುವಂತಹ ಬಾಗಿಲುಗಳನ್ನು ನಾವು ಯೋಚಿಸಲು ಸಹ ಸಾಧ್ಯವಿಲ್ಲ. ಇದೆಲ್ಲವನ್ನು ಯಾವುದೇ ಉದ್ದೇಶವಿಲ್ಲದೆ ನಮಗೆ ಆತನು ಸುಮ್ಮನೆ ಕೊಟ್ಟಿದ್ದಾನೆ ಎಂದು ಭಾವಿಸುವಿರಾ? ಸ್ವಲ್ಪ ಯೋಚಿಸಿ ನೋಡಿರಿ.

ದೇವರು ನಿಮ್ಮನ್ನು ಆತನ ಮಹಿಮೆಗಾಗಿ ಬಳಸಿಕೊಳ್ಳದೆ ಹೋಗಿದ್ದರೆ, ಆತನು ಈ ಮಾರ್ಗಗಳನ್ನೆಲ್ಲಾ ಯಾತಕ್ಕಾಗಿ ನಿಮಗೆ ಮಾಡಬೇಕಿತ್ತು? ಅಲ್ಲವೇ?

"ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಶಕ್ತಿಯ ಪ್ರಕಾರ ನಾವು ಬೇಡುವದಕ್ಕಿಂತಲೂ ಯೋಚಿಸುವದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತನಾದ ದೇವರ... "(ಎಫೆಸದವರಿಗೆ‬ ‭3:20‭).

ನಮಗೆ ಆಗಾಗ ನಾವು ನಮ್ಮ ಸುತ್ತಲಿರುವ ಎಲ್ಲಾ ಜನರಿಗಿಂತ ಮನಮುರಿದವರೇನೋ? ಕೈ ಬಿಡಲ್ಪಟ್ಟವರೇನೋ? ಎಂದು ಅನಿಸುತ್ತಿರುತ್ತದೆ. ನಮಗಿಂತಲೂ ಇತರರು ಆ ಕೆಲಸಕ್ಕೆ ಹೆಚ್ಚು ಯೋಗ್ಯರೇನೋ ಎಂದೆಲ್ಲ ಅನ್ನಿಸುತ್ತದೆ. ಈ ಆಲೋಚನೆಗಳು ನಮ್ಮನ್ನು ಮತ್ತೆ ಕಪ್ಪೆಚಿಪ್ಪಿನಲ್ಲಿ ಬಚ್ಚಿಟ್ಟುಕೊಳ್ಳುವಂತೆ ಮಾಡುತ್ತದೆ. ಆದರೂ ನೀವು ನಿಜವಾಗಿ ದೇವರ ವಾಕ್ಯವನ್ನು ಗಮನವಿಟ್ಟು ನೋಡಿದರೆ ದೇವರು ಯಾವಾಗಲೂ ಮನಮುರಿದವರನ್ನೇ ಯೋಗ್ಯತೆ ಇಲ್ಲದವರನ್ನೇ ತನ್ನ ಕಾರ್ಯಗಳಿಗಾಗಿ ಉಪಯೋಗಿಸುವುದನ್ನು ಕಾಣುವಿರಿ. ದೇವರು ಎಂದಿಗೂ ನೀವು ನಿಮ್ಮ ಜೀವಿತದಲ್ಲಿ ಪರಿಪೂರ್ಣರಾಗಲಿ ಆಮೇಲೆ ಉಪಯೋಗಿಸೋಣ ಎಂದು ಕಾಯುವವನಲ್ಲ! ಆತನು ನಿಮ್ಮನ್ನು ಈಗಲೇ ಇಲ್ಲಿಯೇ ಉಪಯೋಗಿಸಲು ಬಯಸುತ್ತಾನೆ.

ಆತನು ನಮ್ಮೆಲ್ಲರೊಳಗೂ ಆತನ ವರಗಳು ಮತ್ತು ತಲಾಂತುಗಳನ್ನು ಹುದುಗಿಸಿಟ್ಟಿದ್ದಾನೆ ಮತ್ತು ನಂಬಿಕೆಯಿಂದ ನಾವು ಹೆಜ್ಜೆ ಇಟ್ಟು ಸಿಗುವಂತ ಎಲ್ಲಾ ಅವಕಾಶಗಳಲ್ಲೂ ಅದನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳುವ ಮಾರ್ಗವನ್ನು ಸಹ ನಮಗೆ ಅನುಗ್ರಹಿಸಿದ್ದಾನೆ.

"ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು."(ಜ್ಞಾನೋಕ್ತಿಗಳು‬ ‭3:5‭-‬6‬)

 ನಿಮ್ಮ ಬಳಿ ಎಷ್ಟೆಲ್ಲಾ ವರಗಳು ತಲಾಂತಗಳು ಇವೆ ಎಂಬುದು ಇಲ್ಲಿ ಮುಖ್ಯ ವಿಷಯವಲ್ಲ ಆದರೆ ನಿಮಗೆ ಕೊಟ್ಟಿರುವಂತಹದರಲ್ಲಿ ನೀವು ಎಷ್ಟು ಬಳಸಿಕೊಂಡಿದ್ದೀರಿ ಎಂಬುದೇ ಇಲ್ಲಿ ಮುಖ್ಯ ವಿಷಯವಾಗಿದೆ. ನೀವು ದೇವರು ನಿಮಗೆ ಈಗಾಗಲೇ ಕೊಟ್ಟಿರುವ ವರಗಳನ್ನು- ತಲಾಂತುಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಂಡಿದ್ದೀರಾ?
ಪ್ರಾರ್ಥನೆಗಳು
ಕರ್ತನೇ, ನನ್ನನ್ನೇ ನಾನು ನಿನಗೆ ಸಮರ್ಪಿಸಿಕೊಳ್ಳುತ್ತೇನೆ. ಕರ್ತನೇ, ನನ್ನ ಕೈಗಳನ್ನು ಸ್ವೀಕರಿಸು. ನನ್ನ ಕಾಲುಗಳನ್ನು ಸ್ವೀಕರಿಸು. ನನ್ನ ಹೃದಯವನ್ನು ಮುಟ್ಟು ಸ್ವಾಮಿ. ನನ್ನ ಮೂಲಕ ಮಾತಾಡು ನಿನ್ನ ಮಹಿಮೆಗಾಗಿ ಯೇಸು ನಾಮದಲ್ಲಿ ನನ್ನನ್ನು ಉಪಯೋಗಿಸು ಆಮೆನ್


Join our WhatsApp Channel


Most Read
● ಆತ್ಮವಂಚನೆ ಎಂದರೇನು? -I
● ಆತ್ಮದಲ್ಲಿ ಉರಿಯುತ್ತಿರ್ರಿ.
● ದಿನ 30:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಪ್ರತಿಫಲಿಸಲು ಸಮಯ ತೆಗೆದುಕೊಳ್ಳುವುದು.
● ವಾಗ್ದತ್ತ ದೇಶವನ್ನು ಸುತ್ತುವರೆದಿರುವ ಕೋಟೆಗಳೊಂದಿಗೆ ವ್ಯವಹರಿಸುವುದು.
● ನಂಬತಕ್ಕ ಸಾಕ್ಷಿ
● ಯಹೂದವು ಮುಂದಾಗಿ ಹೊರಡಲಿ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್