english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಉದ್ಯೋಗದ ಸ್ಥಳದಲ್ಲಿ ಮಿಂಚುವ ತಾರೆಯಾಗುವುದ -I
ಅನುದಿನದ ಮನ್ನಾ

ಉದ್ಯೋಗದ ಸ್ಥಳದಲ್ಲಿ ಮಿಂಚುವ ತಾರೆಯಾಗುವುದ -I

Wednesday, 17th of April 2024
2 1 509
Categories : ಉದ್ಯೋಗ ಸ್ಥಳ(Workplace)
ಇಂದಿನ ಸ್ಪರ್ಧಾತ್ಮಕ ಕೆಲಸದ ಪರಿಸರದಲ್ಲಿ ಅನೇಕರು ಅಲ್ಲೊಂದು ಬೆಳಗುವ ತಾರೆಗಳಾಗಬೇಕೆಂದು ಬಹಳಷ್ಟು ಹಂಬಲಿಸುತ್ತಾರೆ. ಒಂದು ಗುರುತಿಸುವಿಕೆಗಾಗಿ ಬಡ್ತಿಗಾಗಿ ಮತ್ತು ಯಶಸ್ಸಿಗಾಗಿ ಅವರು ಹಂಬಲಿಸುತ್ತಿರುತ್ತಾರೆ. ಆದಾಗಿಯೂ ದೇವರ ದೃಷ್ಟಿಯಲ್ಲಿ ನಿಜವಾದ ತಾರೆಯಾಗಲಿರುವ ಮಾರ್ಗವು ಯಾವಾಗಲೂ ಈ ಪ್ರಪಂಚದ ಯಶಸ್ಸಿನ ಮಾರ್ಗದಂತೆ ಇರುವುದಿಲ್ಲ.  ನಮ್ಮ ಉದ್ಯೋಗದಲ್ಲಿ ಉನ್ನತಿ ಮತ್ತು ಕರ್ತನ ಅನುಗ್ರಹ ಹೊಂದಿಕೊಳ್ಳುವ ಬಗ್ಗೆ ಸತ್ಯವೇದ ಏನನ್ನು ಬೋಧಿಸುತ್ತದೆ ನೋಡೋಣ ಬನ್ನಿ.

ನಡತೆಯ ಮಹತ್ವ.
"ಆದರೆ ಯೆಹೋವನು ಸಮುವೇಲನಿಗೆ - ನೀನು ಅವನ ಚೆಲುವಿಕೆಯನ್ನೂ ನೀಳವನ್ನೂ ನೋಡಬೇಡ; ನಾನು ಅವನನ್ನು ತಳ್ಳಿಬಿಟ್ಟಿದ್ದೇನೆ. ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ ಅಂದನು."(‭‭1 ಸಮುವೇಲನು‬ ‭16:7‬)

ಕರ್ತನು ನಮ್ಮ ಉದ್ಯೋಗದ ಸ್ಥಳದಲ್ಲಿ ಮುಖ್ಯಸ್ಥಾನ  ಕೊಡಲು ನಮ್ಮ ಹೊರ ತೋರಿಕೆಗಿಂತಲೂ  ಲೌಕಿಕ ಸಾಧನೆಗಳಿಗಿಂತಲೂ ನಮ್ಮ ನಡತೆಗೇ ಹೆಚ್ಚಿನ ಮೌಲ್ಯ ಕೊಡುವನಾಗಿದ್ದಾನೆ. ಹಾಗಾಗಿ ದೇವರನ್ನು ಮೆಚ್ಚಿಸುವಂತಹ ಹೃದಯವನ್ನು ಹೊಂದಿಕೊಳ್ಳುವಂಥದ್ದು ಬಹು ಅವಶ್ಯವಾದದ್ದು. ಅಂದರೆ ಪ್ರಾಮಾಣಿಕತೆಯ ದೀನತ್ವದ  ಮತ್ತು ಬಲವಾದ ಸೇವಾ ನೈತಿಕತೆಯ ಮನಸ್ಥಿತಿಯನ್ನು ಬೆಳೆಸಿಕೊಳ್ಳುವಂಥದ್ದು ಅನಿವಾರ್ಯ.

ಮನುಷ್ಯರನ್ನು ಮೆಚ್ಚಿಸುವುದರಲ್ಲಿರುವ ಅಪಾಯಗಳು
"ದಾಸತ್ವದಲ್ಲಿರುವವರೇ, ಈ ಲೋಕದಲ್ಲಿನ ನಿಮ್ಮ ಯಜಮಾನರಿಗೆ ಎಲ್ಲಾ ವಿಷಯಗಳಲ್ಲಿ ವಿಧೇಯರಾಗಿರಿ; ಮನುಷ್ಯರನ್ನು ಮೆಚ್ಚಿಸುವವರು ಮಾಡುವ ಪ್ರಕಾರ ನಿಮ್ಮ ಯಜಮಾನರು ನೋಡುತ್ತಿರುವಾಗ ಮಾತ್ರ ಸೇವೆ ಮಾಡದೆ ಕರ್ತನಿಗೆ ಭಯಪಡುವವರಾಗಿ ಸರಳಮನಸ್ಸಿನಿಂದ ಕೆಲಸಮಾಡಿರಿ."(‭‭ಕೊಲೊಸ್ಸೆಯವರಿಗೆ‬ ‭3:22‬)

ಬೆಕ್ಕಿನ ಉಪಸ್ಥಿತಿ ಇಲ್ಲದೆ ಹೋದರೆ ಇಲಿಗಳೆಲ್ಲಾ ಚೆಲ್ಲಾಟ ಆಡಲು ಆರಂಭಿಸುತ್ತವೆ. ಹಾಗೆಯೇ ಯಜಮಾನನು ಉದ್ಯೋಗದ ಸ್ಥಳದಲ್ಲಿ ಇಲ್ಲದೆ ಹೋದರೆ ಸಿಬ್ಬಂದಿಗಳು ಓಲಾಡಲು ಆರಂಭಿಸಿ ಬಿಡುತ್ತಾರೆ. ಹೇಗೂ ಈ ಒಂದು ನಡತೆಯು ಅಪ್ರಾಮಾಣಿಕತೆಯೂ ಮತ್ತು ಕಪಟತನವೂ  ಆಗಿದೆ. ದೇವರು ನಮ್ಮನ್ನು ಪ್ರಾಮಾಣಿಕ ಹೃದಯದಿಂದ ಸೇವೆ ಮಾಡಲು ಕರೆದಿದ್ದಾನೆಯೇ ಹೊರತು ಮತ್ತೊಬ್ಬರನ್ನು ಮೆಚ್ಚಿಸಲು ಅಲ್ಲ. ನಾವು ಮನುಷ್ಯರನ್ನು ಮೆಚ್ಚಿಸಬೇಕು  ಎಂದು ಕಾರ್ಯ ಮಾಡದೇ ದೇವರನ್ನೇ ಮೆಚ್ಚಿಸಲು ಪ್ರಯತ್ನಿಸುವಾಗ ನಮ್ಮ ನಿಜವಾದ ನಡತೆಯನ್ನು ಮತ್ತು ಪ್ರಾಮಾಣಿಕತೆಯನ್ನು ಪ್ರದರ್ಶಿಸುವವರಾಗುತ್ತೇವೆ.

ಯಾಕೋಬನ ಉದಾರಣೆ
"ಮತ್ತು ಯೆಹೋವನು ಅವನಿಗೆ - ನಿನ್ನ ತಂದೆತಾತಂದಿರ ದೇಶಕ್ಕೂ ನಿನ್ನ ಬಂಧುಗಳ ಬಳಿಗೂ ತಿರಿಗಿ ಹೋಗು; ನಾನು ನಿನ್ನೊಂದಿಗೆ ಇರುವೆನು ಎಂದು ಹೇಳಿದನು."(ಆದಿಕಾಂಡ‬ ‭31:3‬ )

ಯಾಕೋಬನ ಚರಿತ್ರೆಯು 'ಎಂತದ್ದೇ ಕಠಿಣ ಪರಿಸ್ಥಿತಿಯಲ್ಲಿಯೂ ಶ್ರದ್ಧೆಯಿಂದ ಕೆಲಸ ಮಾಡುವುದರ' ಮಹತ್ವವನ್ನು ತೋರಿಸಲು ನಮಗೆ ಉದಾಹರಣೆಯಾಗಿ ಇಡಲ್ಪಟ್ಟಿದೆ. ಅವನ ಯಜಮಾನನಾದ ಲಾಬಾನನು ಅವನನ್ನು ಕೆಟ್ಟದಾಗಿ ನಡೆಸಿಕೊಂಡರೂ ಯಾಕೋಬನು ತನ್ನ ಕೆಲಸದಲ್ಲಿ ನಂಬಿಗಸ್ತನಾಗಿಯೇ ಉಳಿದನು. ಯಾಕೋಬನು ತನ್ನ ಉದ್ಧಾರವು ದೇವರಿಂದಲೇ ಬರುತ್ತದೆಯೇ ಹೊರತು ಮನುಷ್ಯರಿಂದ ಅಲ್ಲ ಎಂಬ ವಿಚಾರದಲ್ಲಿ ಭರವಸೆ ಉಳ್ಳವನಾಗಿದ್ದನು. ಅದರ ಪ್ರತಿಫಲವಾಗಿಯೇ ದೇವರು  ಸ್ವದೇಶಕ್ಕೆ ಅವನನ್ನು ಹಿಂದಿರುಗಿ ಕರೆತಂದು, ಅಲ್ಲಿಯೇ ಅವನನ್ನು ದೊಡ್ಡ ಜನಾಂಗವನ್ನಾಗಿ ಮಾಡಿದನು.

ದೇವರಿಗೋಸ್ಕರ ಕೆಲಸ ಮಾಡುವಂಥದ್ದು.
"ನೀವು ಯಾವ ಕೆಲಸವನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಮನಃಪೂರ್ವಕವಾಗಿ ಮಾಡಿರಿ; [24] ಕರ್ತನಿಂದ ಪರಲೋಕ ಬಾಧ್ಯತೆಯೆಂಬ ಪ್ರತಿಫಲವನ್ನು ಹೊಂದುವೆವೆಂದು ತಿಳಿದಿದ್ದೀರಲ್ಲಾ. ನೀವು ಕರ್ತನಾದ ಕ್ರಿಸ್ತನಿಗೇ ದಾಸರಾಗಿದ್ದೀರಿ."(‭‭ಕೊಲೊಸ್ಸೆಯವರಿಗೆ‬ ‭3:23‭-‬24‬)

ತಮ್ಮ ಉದ್ಯೋಗ ಸ್ಥಳದಲ್ಲಿ ಬೆಳಗುವ ನಕ್ಷತ್ರವಾಗಲಿರುವ ಒಂದೇ ಒಂದು ಕೀಲಿ ಕೈ ಎಂದರೆ ನಾವು ದೇವರು ನೋಡುತ್ತಾನೆ ಎಂದು ಕೆಲಸ ಮಾಡುವಂತಹದಾಗಿದೆ. ಅದರ ಅರ್ಥ ಪ್ರತಿಯೊಂದು ಕಾರ್ಯದಲ್ಲೂ ಅದು ಎಷ್ಟು ಚಿಕ್ಕ ಕೆಲಸವಾಗಿರಲೀ  ಮನುಷ್ಯರ ದೃಷ್ಟಿಯಲ್ಲಿ ಎಷ್ಟೇ ಕನಿಷ್ಠವಾದರೂ ಸರಿಯೇ ಅದಕ್ಕೆ ನಮ್ಮ ಸಂಪೂರ್ಣ ಪ್ರಯತ್ನ ನಾವು ಹಾಕುವುದಾಗಿದೆ. ನಾವು ಉತ್ಕೃಷ್ಟತೆಯಿಂದಲೂ ಶ್ರದ್ಧೆಯಿಂದಲೂ ಕೆಲಸ ಮಾಡುವಾಗ ನಾವು ದೇವರನ್ನು ಸನ್ಮಾನಿಸುವವರೂ ಮತ್ತು ಆತನ ಮೇಲಿನ ಪ್ರೀತಿಯನ್ನು ಪ್ರದರ್ಶಿಸುವವರೂ ಆಗುತ್ತೇವೆ. ನಮ್ಮ ಉದ್ದೇಶ ದೇವರನ್ನು ಮೆಚ್ಚಿಸುವಂಥದ್ದು ಮಾತ್ರ  ಆಗಿರಬೇಕೆ ವಿನಃ ಮನುಷ್ಯರಿಂದ ಬರುವ ಮಾನ ಸನ್ಮಾನಗಳನ್ನು ಸಂಪಾದಿಸುವುದಾಗಿರಬಾರದು.

ಪದೋನ್ನತಿಗಾಗಿ ದೇವರ ಮೇಲೆ ಭರವಸೆ ಇಡುವಂಥದ್ದು.
"ಯಾಕಂದರೆ ಉದ್ಧಾರವು ಮೂಡಲಿಂದಾಗಲಿ ಪಡುವಲಿಂದಾಗಲಿ ಅರಣ್ಯದಿಂದಾಗಲಿ ಬರುವದಿಲ್ಲ. 7ದೇವರೇ ನ್ಯಾಯಾಧೀಶನಾಗಿ ಒಬ್ಬನನ್ನು ತೆಗೆದು ಇನ್ನೊಬ್ಬನನ್ನು ಸ್ಥಾಪಿಸುತ್ತಾನೆ."(ಕೀರ್ತನೆಗಳು‬ ‭75:6‭-‬7‬ )

ಕಡೆದಾಗಿ ಹೇಳುವುದೇನೆಂದರೆ, ನಮ್ಮ ಯಶಸ್ಸು ನಮ್ಮ ಪದೋನ್ನತಿಗಳು ಬರುವಂತದ್ದು ದೇವರಿಂದಲೇ. ನಾವು ದೇವರ ಮೇಲೆ ಭರವಸೆಯಿಂದ ಇದ್ದು ನಮ್ಮೆಲ್ಲಾ ಕಾರ್ಯಗಳಲ್ಲಿ ಆತನನ್ನು ಮೆಚ್ಚಿಸುವುದನ್ನೇ ಎದುರು ನೋಡಬೇಕು. ಆಗ ಆತನು ನಮಗಾಗಿ ಬಾಗಿಲುಗಳನ್ನು ತೆರೆದು ಆತನ ದಯೆಯನ್ನು ಅನುಗ್ರಹಿಸುತ್ತಾನೆ. ಭೂಮಿಯ ಮೇಲಿನ ಯಜಮಾನರು ನಮ್ಮ ಕೆಲಸವನ್ನು ಪ್ರಯತ್ನಗಳನ್ನು ಗುರುತಿಸದೇ ಹೋದರೂ ದೇವರು ನಮ್ಮ ನಂಬಿಗಸ್ತಿಕೆಯನ್ನು ನೋಡುತ್ತಾನೆ ಮತ್ತು ಅದಕ್ಕಾಗಿ ತಕ್ಕ ಕಾಲದಲ್ಲಿ ಪ್ರತಿಫಲ ಕೊಡುತ್ತಾನೆ ಎಂದು ನಾವು ಭರವಸೆ ಇಡಬಹುದು.

ಆದುದರಿಂದ, ನಮ್ಮ ಉದ್ಯೋಗದ ಸ್ಥಳದಲ್ಲಿ ಬೆಳಗುವ ನಕ್ಷತ್ರವಾಗುವುದೆಂದರೆ ನಮ್ಮ ಸುತ್ತಲಿನ ಜನರಿಂದ ಚಪ್ಪಾಳೆ ಹೊಂದುವುದಕ್ಕಿಂತಲೂ ದೇವರಿಗೋಸ್ಕರ ಶ್ರದ್ಧೆಯಿಂದ ಕೆಲಸ ಮಾಡುವಂತದ್ದಾಗಿದೆ. ನಾವು ನಡತೆಗೆ ಹೆಚ್ಚಿನ ಮಹತ್ವ ಕೊಡುವಾಗ ಮನುಷ್ಯನಿಂದ ಬರುವ ಹೊಗಳಿಕೆಯ ಶೋಧನೆಯಿಂದ ತಪ್ಪಿಸಿಕೊಂಡವರಾಗಿ ನಮ್ಮ ಉದ್ಧಾರಕ್ಕಾಗಿ ದೇವರ ಮೇಲೆ ನಾವು ಭರವಸೆ ಇಡುವವರಾಗುತ್ತೇವೆ. ಆಗ ನಿಜವಾದ ಯಶಸ್ಸನ್ನು ನಮ್ಮ ಕಾರ್ಯ ಸಾರ್ಥಕತೆಯನ್ನು ನಾವು ಕಂಡುಕೊಳ್ಳುತ್ತೇವೆ
ಅರಿಕೆಗಳು
ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುತ್ತೇನೆ; ನನ್ನ ಸಹಾಯವು ಎಲ್ಲಿಂದ ಬರುವದು. ಭೂಮ್ಯಾಕಾಶಗಳನ್ನು ನಿರ್ಮಿಸಿದ, ನಂಬಿಕೆಯನ್ನು ಹುಟ್ಟಿಸುವ ಪೂರೈಸುವ ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ.(ಕೀರ್ತನೆಗಳು 121:1-2)(ಇಬ್ರಿಯ 12:2)


Join our WhatsApp Channel


Most Read
● "ಆತನಿಗೆ ಎಲ್ಲವನ್ನೂ ತಿಳಿಸಿರಿ"
● ಮತ್ತೊಬ್ಬ ಯೇಸು, ಬೇರೊಂದು ಆತ್ಮ, ಮತ್ತು ಬೇರೊಂದು ಸುವಾರ್ತೆ-1
● ದೇವರು ದರ್ಶನಕೊಡುವ ಸಮಯವನ್ನು ಗುರುತಿಸಿಕೊಳ್ಳುವುದು
● ನಿಮ್ಮ ನಂಬಿಕೆಯಲ್ಲಿ ರಾಜಿ ಮಾಡಿಕೊಳ್ಳಬೇಡಿ
● ನಿಮ್ಮ ಜೀವದದಲ್ಲಿ ಎಂದೂ ಅಳಿಯದಂತ ಬದಲಾವಣೆಯನ್ನು ತರುವುದು ಹೇಗೆ?-1
● ಭಾನುವಾರದ ಬೆಳಗ್ಗೆ ನಿಗದಿತ ಸಮಯಕ್ಕೆ ಸಭೆಗೆ ಹೋಗುವುದು ಹೇಗೆ
● ಒಳಕೋಣೆ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್