ಅನುದಿನದ ಮನ್ನಾ
1
1
62
ಆತನು ನೋಡುತ್ತಿದ್ದಾನೆ.
Monday, 16th of June 2025
Categories :
ಶಿಷ್ಯತ್ವ (Discipleship)
ಆದರೆ ಯೆಹೋವನು ಸಮುವೇಲನಿಗೆ - ನೀನು ಅವನ ಚೆಲುವಿಕೆಯನ್ನೂ ನೀಳವನ್ನೂ ನೋಡಬೇಡ; ನಾನು ಅವನನ್ನು ತಳ್ಳಿಬಿಟ್ಟಿದ್ದೇನೆ. ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ ಅಂದನು. (1 ಸಮುವೇಲ 16:7)
ಒಂದು ದಿನ ಕರ್ತನಾದ ಯೇಸು ದೇವಾಲಯದಲ್ಲಿ ಬೊಕ್ಕಸದ ಎದುರು ಕುಳಿತಿದ್ದಾಗ, ಜನರು ಬೊಕ್ಕಸಕ್ಕೆ ಹಣವನ್ನು ಹೇಗೆ ಹಾಕುತ್ತಾರೆ ಎಂಬುದನ್ನು ಆತನು ನೋಡುತ್ತಿದ್ದನು. (ಮಾರ್ಕ 12:41)
ಕರ್ತನಾದ ಯೇಸು ದೇವಾಲಯದ ದೇಣಿಗೆ ಪೆಟ್ಟಿಗೆಯಲ್ಲಿ ಜನರು ಹಾಕಿದ ಮೊತ್ತವನ್ನು ಮಾತ್ರವಲ್ಲದೆ, ಜನರು ಕರ್ತನಿಗೆ ಹೇಗೆ ನೀಡುತ್ತಿದ್ದರು ಎನ್ನುವ ಅವರ ಹೃದಯದ ಆಂತರ್ಯದ ಮನೋಭಾವವನ್ನೂ ನೋಡುತ್ತಿದ್ದನು ಎಂಬುದಾಗಿ ನಾನು ನಂಬುತ್ತೇನೆ. ವಿಧವೆಯೊಬ್ಬಳು ಎರಡು ಕಾಸಿನಷ್ಟು ಅತ್ಯಲ್ಪವಾಗಿ ಕಾಣುವ ಕಾಣಿಕೆಯನ್ನು ಹಾಕಿದ್ದು ಕರ್ತನ ಕಣ್ಣುಗಳನ್ನು ಸೆರೆಹಿಡಿಯಲ್ಪಟ್ಟವು ಎಂಬುದೇ ಅದ್ಭುತವಾಗಿತ್ತು.
ಆಗ ಕರ್ತನ ಗಮನವನ್ನು ಸೆಳೆದದ್ದು ಕಾಣಿಕೆಗಳ ಮೊತ್ತವಲ್ಲ ಆ ವಿಧವೆಯ ಮನೋಭಾವ. ನಿಮ್ಮ ಕಾಣಿಕೆಯು ಕರ್ತನ ಗಮನವನ್ನು ಸೆಳೆಯುವ ಶಕ್ತಿಯನ್ನು ಹೊಂದಿದೆ ಎಂದು ಇದು ನನಗೆ ಹೇಳುತ್ತಿದೆ.
"..ಯೆಹೋವ ದೇವರಿಗೆ ಪೂರ್ಣವಾಗಿ ಸಮರ್ಪಿಸಿಕೊಂಡವರ ಹೃದಯವನ್ನು ಬಲಪಡಿಸುವುದಕ್ಕೆ ಆತನ ಕಣ್ಣುಗಳು ಭೂಲೋಕದ ಎಲ್ಲಾ ಕಡೆ ಪ್ರಸರಿಸುತ್ತದೆ"ಎಂದು
ಪೂರ್ವಕಾಲವೃತ್ತಾಂತ 16:9 ಹೇಳುತ್ತದೆ. ದುರ್ಬಲರು, ಬಡವರು, ಶಕ್ತಿಹೀನರು ಮತ್ತು ಅಗತ್ಯದಲ್ಲಿರುವವರಿಗೆ ಇದು ಒಳ್ಳೆಯ ಸುದ್ದಿ. ನಿಮಗೆ ಒಂದು ಪವಾಡದ ಅಗತ್ಯವಿದೆಯೇ? ಹಾಗಾದರೆ ನಿಮ್ಮ ಹೃದಯವು ಆತನಿಗೆ ನಂಬಿಗಸ್ಥವಾಗಿದ್ದರೆ, ನಿಮ್ಮ ಪರಿಸ್ಥಿತಿಯ ಮೇಲೆ ಆತನ ಬಲವು ಕಾಣಿಸಿಕೊಳ್ಳಲು ಕರ್ತನ ಕಣ್ಣುಗಳು ನಿಮ್ಮನ್ನು ನೋಡುತ್ತವೆ ಎಂದು ತಿಳಿದು ಕೊಳ್ಳಿರಿ.
"ಭೂಲೋಕದವರು ದೇವರ ದೃಷ್ಟಿಯಲ್ಲಿ ಕೆಟ್ಟು ಹೋಗಿದ್ದರು. ಹಿಂಸಾಚಾರವು ಲೋಕವನ್ನು ತುಂಬಿಕೊಂಡಿತ್ತು. [ದೇವರು ಭೂಮಿಯನ್ನು ನೋಡಲಾಗಿ ಅದು ಕೆಟ್ಟುಹೋಗಿತ್ತು, ಮನುಷ್ಯರೆಲ್ಲರೂ ಭೂಮಿಯ ಮೇಲೆ ತಮ್ಮ ನಡವಳಿಕೆಯನ್ನು ಕೆಡಿಸಿಕೊಂಡಿದ್ದರು." (ಆದಿಕಾಂಡ 6:11-12) ಆದರೆ ನೋಹನು ವಿಭಿನ್ನನಾಗಿದ್ದನು. ಅವನು ಜನಸಮೂಹದ ಮಾರ್ಗವನ್ನು ಅನುಸರಿಸದೆ ತನ್ನ ಕುಟುಂಬದೊಂದಿಗೆ ಕರ್ತನನ್ನು ಹುಡುಕುತ್ತಿದ್ದನು. "ಆದರೆ ನೋಹನು ಕರ್ತನ ದೃಷ್ಟಿಯಲ್ಲಿ ಕೃಪೆಯನ್ನು ಕಂಡುಕೊಂಡನು." ಎಂದು ಸತ್ಯವೇದ ಹೇಳುತ್ತದೆ(ಆದಿಕಾಂಡ 6:8)
ಯಾರೋ ಒಬ್ಬರು ಹೀಗೆ ಹೇಳಿದ್ದಾರೆ " ಸತ್ತ ಮೀನುಗಳು ಸಹ ಪ್ರವಾಹದ ನೀರಿನಲ್ಲಿ ತೇಲುತ್ತದೆ , ಆದರೆ ಜೀವಂತ ಮೀನುಗಳು ಮಾತ್ರವೆ ಪ್ರವಾಹಕ್ಕೆ ವಿರುದ್ಧವಾಗಿ ಹೋಗಬಹುದು" ಎಂದು. ಪ್ರತಿದಿನ ನಮ್ಮ ಸುತ್ತಲಿನ ಪರಿಸರದಲ್ಲಿ ಮೇಲಿಂದ ಮೇಲೆ ಭಕ್ತಿಹೀನತೆ ಹೆಚ್ಚುತ್ತಿದೆ, ಆದರೆ ಅದು ನಮ್ಮನ್ನು ಹಿಂಜಾರುವಂತೆ ಮಾಡಬಾರದು. ಬದಲಾಗಿ, ನಾವು ನೋಹನಂತೆ ಹೆಚ್ಚು ಹೆಚ್ಚು ಕರ್ತನಿಗೆ ಆತುಕೊಳ್ಳಬೇಕು.
ನೆನಪಿಡಿ, ಕರ್ತನ ಕಣ್ಣುಗಳಿಗೆ ಯಾವುದೂ ಮರೆಯಾಗಿಲ್ಲ. ಆದರಿಂದ "ಕರ್ತನೇ, ನಾನು ಪವಿತ್ರ ಜೀವನವನ್ನು ನಡೆಸಲು ಬಯಸುತ್ತೇನೆ. ನನಗೆ ಸಹಾಯ ಮಾಡು, ಕರ್ತನೇ" ಎಂದು ಹೇಳುತ್ತಾ ಪ್ರತಿದಿನ ಕರ್ತನಿಗೆ ಮೊರೆಯಿಡಿ, ಕರ್ತನು ನಿಮ್ಮ ಪರವಾಗಿ ತನ್ನ ಪ್ರತಾಪವನ್ನು ತೋರಿಸುತ್ತಾನೆ. ನಿಮ್ಮ ಶತ್ರುಗಳೂ ಸಹ ನಿಮ್ಮ ಜೀವನದಲ್ಲಿ ದೇವರು ಮಾಡುತ್ತಿರುವ ಕಾರ್ಯವನ್ನು ಹೌದೆಂದು ಅಂಗೀಕರಿಸಿಕೊಳ್ಳಬೇಕಾಗುತ್ತದೆ.
Bible Reading: Job 3-8
ಪ್ರಾರ್ಥನೆಗಳು
ತಂದೆಯೇ, ಪ್ರತಿದಿನ ನಿನಗೆ ನಿಷ್ಠನಾಗಿ ಉಳಿಯುವಂತ ಹೃದಯವನ್ನು ನನಗೆ ಯೇಸುನಾಮದಲ್ಲಿ ಅನುಗ್ರಹಿಸು; ಪ್ರತಿಯೊಂದು ಸನ್ನಿವೇಶದಲ್ಲೂ ಈ ದಿನ ಮತ್ತು ಯಾವಾಗಲೂ ನಿನ್ನ ಕೃಪೆ ಯೇಸುನಾಮದಲ್ಲಿ ನನ್ನ ಮೇಲೆ ಇರಲಿ ಆಮೆನ್.
ತಂದೆಯೇ, ಪ್ರತಿದಿನವೂ ನಾನು ಪ್ರಾರ್ಥಿಸುವಂತೆ ನನಗೆ ಕೃಪೆಯನ್ನು ಯೇಸುನಾಮದಲ್ಲಿ ಅನುಗ್ರಹಿಸು. ನಾನು ನಿನ್ನ ಸಮೀಪಕ್ಕೆ ಬರುವಾಗ, ನೀನು ವಾಗ್ದಾನ ಮಾಡಿದಂತೆ ನೀನು ನನ್ನ ಸಮೀಪಕ್ಕೇ ಯೇಸುನಾಮದಲ್ಲಿ ಬಾ .ಆಮೆನ್
Join our WhatsApp Channel

Most Read
● ಯೇಸುವನ್ನು ನೋಡುವ ಬಯಕೆ● ಬೀಜದಲ್ಲಿರುವ ಶಕ್ತಿ -3
● ಪರಿಣಾಮಕಾರಿಯಾಗಿ ಸತ್ಯವೇದವನ್ನು ಓದುವುದು ಹೇಗೆ
● ಸ್ಥಿರತೆಯಲ್ಲಿರುವ ಶಕ್ತಿ
● ನಿರುತ್ಸಾಹದ ಬಾಣಗಳನ್ನು ಗೆಲ್ಲುವುದು -II
● ನಿಮ್ಮ ಕೆಲಸದ ಕುರಿತ ಒಂದು ರಹಸ್ಯ
● ಕೆಲವು ನಾಯಕರು ಪಾಪದಲ್ಲಿ ಬಿದ್ದು ಹೋದದರಿಂದ ನಾವು ಸಹ ನಂಬಿಕೆಯನ್ನು ತ್ಯಜಿಸಬೇಕೆ?
ಅನಿಸಿಕೆಗಳು