ಅನುದಿನದ ಮನ್ನಾ
0
0
9
ದೇವರ ಸಾನಿಧ್ಯವನ್ನು ಸಲಿಗೆಯಾಗಿ ತೆಗೆದಕೊಳ್ಳುವುದು.
Thursday, 19th of June 2025
Categories :
ದೇವರ ಉಪಸ್ಥಿತಿ (Presence of God)
"ಇದನ್ನು ಕೇಳಿ ಆತನ ಬಂಧುಗಳು ಅವನಿಗೆ ಹುಚ್ಚುಹಿಡಿದದೆ ಎಂದು ಹೇಳಿ ಆತನನ್ನು ಹಿಡಿಯುವದಕ್ಕೆ ಹೊರಟರು".(ಮಾರ್ಕ 3:21).
ಆತನ ಬಂಧುಗಳೇ ಆತನಿಗೆ ಹುಚ್ಚು ಹಿಡಿದಿದೆ ಎಂದು ಭಾವಿಸಿದರು ಎಂಬುದನ್ನು ಊಹಿಸಿನೋಡಿ. ಇವರು ಆತನೊಂದಿಗೇ ವಾಸಿಸುತ್ತಿದ್ದ ಜನರು, ಆತನ ದತ್ತು ತಂದೆ ಯೋಸೇಫನೊಂದಿಗೆ ಆತನ ಬಾಲ್ಯದ ದಿನಗಳಿಂದಲೂ ಬಡಗಿಯ ಕೆಲಸ ಮಾಡುವುದನ್ನು ನೋಡಿದ್ದರು.ನೋಡಿದರೆ ಅವರೆಲ್ಲಾ ಯೇಸುವಿನ ಸೇವೆಯನ್ನು ಕಂಡು ಅತ್ಯಂತ ಕೃತಜ್ಞತೆಯಿಂದ ಇದ್ದು ಮತ್ತು ಆತನ ಸೇವೆಗೆ ಬೆಂಬಲ ನೀಡುವವರಾಗಿರಬೇಕಿತ್ತು.
ಅಯ್ಯೋ! ಅವರಿಗಿದ್ದ ಸಲಿಗೆಯೇ ಆತನು ನಿಜವಾಗಿಯೂ ಯಾರೆಂಬುದರ ಕುರಿತು ಭಯವನ್ನು ಕಳೆದುಕೊಳ್ಳುವಂತೆ ಮಾಡಿತು.
ಈ ಕೆಳಗಿನ ವಾಕ್ಯವನ್ನು ಓದಿ:
ಯೋಹಾನ 7:5 ಏಕೆಂದರೆ ಆತನ ಸಹೋದರರು [ಸಹ] ಆತನನ್ನು ನಂಬಲಿಲ್ಲ, ಆತನಲ್ಲಿ ನೆಲೆಗೊಳ್ಳಲಿಲ್ಲ ಅಥವಾ ಭರವಸೆ ಇಡಲಿಲ್ಲ ಅಥವಾ ಅವಲಂಬಿಸಲಿಲ್ಲ. (Amplified)
ಯೇಸುವಿನ ದಿನಗಳಲ್ಲಿ ಮಾತ್ರವಲ್ಲದೆ ಇಂದಿಗೂ ಸಹ ಅದೇ ಸಮಸ್ಯೆ ಇದೆ. ಜನರು ಆತನ ಸಾನಿಧ್ಯಕ್ಕೆ ಪ್ರವೇಶಿಸುವಾಗಲೂ ತುಂಬಾ ನಿರಾಶಾದಾಯಕರಾಗಿದ್ದಾರೆ. ನೀವು ಮೊದಲು ದೇವರ ಮನೆಗೆ ಆಳವಾದ ನಿರೀಕ್ಷೆಯ ಪ್ರಜ್ಞೆಯೊಂದಿಗೆ ಬಂದು ಆತನ ಸಾನಿಧ್ಯದಲ್ಲಿ ಯಾವಾಗ ರಕ್ಷಿಸಲ್ಪಟ್ಟಿರಿ ಅಥವಾ ಸ್ಪರ್ಶಿಸಲ್ಪಟ್ಟಿದ್ದೀರಿ ಎಂಬುದನ್ನು ನೆನಪಿಡಿ.
ಆಗ ಹೇಗೆ ನೀವು ದೇವರ ಮನೆಗೆ ಸಮಯಕ್ಕೆ ಸರಿಯಾಗಿ ಹೋಗುತ್ತಿದ್ದಿರಿ ಎಂಬುದನ್ನು ಒಮ್ಮೆ ಯೋಚಿಸಿ. ನಿಮ್ಮಲ್ಲಿ ಇನ್ನೂ ಅದೇ ನಿರೀಕ್ಷೆಯ ಭಾವನೆ ಇದೆಯೇ? ನೀವು ಮೊದಲ ಹಾಗೆ ಸೇವೆಗಳಿಗೆ ಸಮಯಕ್ಕೆ ಸರಿಯಾಗಿ ಬರುತ್ತೀರಾ? (ಖಂಡಿತ, ತಡವಾಗಿ ಬರುವುದಕ್ಕೆ ಲಕ್ಷಾಂತರ ನೆಪಗಳಿರಬಹುದು)
ದೇವರ ಸಾನಿಧ್ಯವನ್ನು ಸಲುಗೆಯಾಗಿ ತೆಗೆದುಕೊಳ್ಳುವ ದುಃಖಕರ ಪರಿಣಾಮಗಳನ್ನು ಹಳೆಯ ಒಡಂಬಡಿಕೆಯಲ್ಲಿ ಉಜ್ಜನೆಂಬ ವ್ಯಕ್ತಿಯ ಜೀವಿತದ ಮೂಲಕ ಚಿತ್ರಿಸಲಾಗಿದೆ.
ಹಳೆಯ ಒಡಂಬಡಿಕೆಯ ಒಂದು ಭಾಗದಲ್ಲಿ,
"ದಾವೀದನೂ ಎಲ್ಲಾ ಇಸ್ರಾಯೇಲ್ಯರೂ ಕಿನ್ನರಿ, ಸ್ವರಮಂಡಲ, ದಮ್ಮಡಿ, ಝಲ್ಲರಿ, ತಾಳ ಇವುಗಳನ್ನು ಬಾರಿಸಿಕೊಂಡು ಪೂರ್ಣಾಸಕ್ತಿಯಿಂದ ಗೀತಗಳನ್ನು ಹಾಡುತ್ತಾ ಯೆಹೋವನ ಮುಂದೆ ನರ್ತನಮಾಡುತ್ತಾ ಹೋದರು. ಅವರು ನಾಕೋನನ ಕಣಕ್ಕೆ ಬಂದಾಗ ಎತ್ತುಗಳು ಎಡವಿದ್ದರಿಂದ ಉಜ್ಜನು ಕೈಚಾಚಿ ದೇವರ ಮಂಜೂಷವನ್ನು ಹಿಡಿದನು.ಆಗ ಯೆಹೋವನು ಉಜ್ಜನ ಮೇಲೆ ಕೋಪಗೊಂಡು ಈ ತಪ್ಪಿನ ಸಲವಾಗಿ ಅವನನ್ನು ಹತಮಾಡಿದನು; ಅವನು ಅಲ್ಲೇ ದೇವರ ಮಂಜೂಷದ ಬಳಿಯಲ್ಲಿ ಸತ್ತನು".(2 ಸಮುವೇಲ 6:6-7)
ದೇವರ ಸ್ಪಷ್ಟ ಉಪಸ್ಥಿತಿಯನ್ನು ಪ್ರತಿನಿಧಿಸುವ ಒಡಂಬಡಿಕೆಯ ಮಂಜೂಷವು ಸುಮಾರು 20 ವರ್ಷಗಳಷ್ಟು ಕಾಲ ಅಬೀನಾದಾಬನ (ಉಜ್ಜನ ತಂದೆ) ಮನೆಯಲ್ಲಿತ್ತು ಎಂದು ನೀವು ನೋಡುತ್ತೀರಿ. ಇಪ್ಪತ್ತು ವರ್ಷಗಳು ಎನ್ನುವುದು ಬಹಳ ದೊಡ್ಡ ಸಮಯವೇ ಹಾಗಾಗಿ ಬಹುಶಃ ಉಜ್ಜನು ಪ್ರತಿದಿನ ಒಡಂಬಡಿಕೆಯ ಮಂಜೂಷವನ್ನು ನೋಡುತ್ತಿದ್ದು ಬಹುಶಃ ಅದರ ಕಾರಣದಿಂದ ಪ್ರತಿದಿನ ಅದರ ಮುಂದೆಯೇ ಓಡಾಡುತ್ತಿದ್ದನು ಎನಿಸುತ್ತದೆ.
ದೇವರ ಮಂಜೂಷದೊಂದಿಗೆ ಹೆಚ್ಚು ಸಲುಗೆ ಹೊಂದುವ ಮೂಲಕ, ಅವನು ಅದರ ಮೇಲಿನ ಗೌರವವನ್ನು ಕಳೆದುಕೊಂಡಿದ್ದನು. ಎತ್ತುಗಳು ಎಡವಿ ಬಿದ್ದಾಗ, ಉಜ್ಜನು ದೇವರು ಕೆಳಗೆ ಬೀಳದಂತೆ ಸಹಾಯ ಮಾಡಲು ಆಕಸ್ಮಿಕವಾಗಿ ಕೈ ಚಾಚಿದನು. ದೇವರ ಸಾನ್ನಿಧ್ಯದ ಸಲುಗೆಯು ಉಜ್ಜನಿಗೆ ದೇವರನ್ನು ಬೀಳದಂತೆ ಸಹಾಯದ ಅಗತ್ಯವಿರುವ ಮತ್ತೊಂದು ವಿಗ್ರಹ ಎಂದು ಭಾವಿಸುವಂತೆ ಮಾಡಿತು. ನಾವು ದೇವರನ್ನು ಹೊರುವುದಿಲ್ಲ; ಆತನು ನಮ್ಮನ್ನು ಹೊರುವವನಾಗಿದ್ದಾನೆ. ಆತನು ಎಡವಿ ಬೀಳುವುದಿಲ್ಲ ಆದರೆ ಆತನು ನಮ್ಮನ್ನು ಎಡವಿ ಬೀಳದಂತೆ ತಡೆಯುವವನಾಗಿದ್ದಾನೆ ಎಂಬುದು ಉಜ್ಜನಿಗೆ ತಿಳಿದಿರಲಿಲ್ಲ. ಉಜ್ಜನ ಈ ಅಜಾಗರೂಕ ವರ್ತನೆಯಿಂದಾಗಿ, ದೇವರು ಅವನನ್ನು ಹೊಡೆದನು ಆದರಿಂದ ಅವನು ಸ್ಥಳದಲ್ಲೇ ಸತ್ತನು.
ಯೇಸು ಅವರಿಗೆ - ಪ್ರವಾದಿಯು ಬೇರೆ ಎಲ್ಲಿದ್ದರೂ ಅವನಿಗೆ ಮರ್ಯಾದೆ ಉಂಟು; ಆದರೆ ಸ್ವದೇಶದಲ್ಲಿಯೂ ಸ್ವಂತ ಜನರಲ್ಲಿಯೂ ಸ್ವಂತ ಮನೆಯಲ್ಲಿಯೂ ಮಾತ್ರ ಮರ್ಯಾದೆಯಿಲ್ಲ( ಗೌರವ- ಭಕ್ತಿ) ಎಂದು ಹೇಳಿದನು. ಆತನು ಅಲ್ಲಿ ಕೆಲವು ಮಂದಿ ರೋಗಿಗಳ ಮೇಲೆ ಕೈಯಿಟ್ಟು ಸ್ವಸ್ಥಮಾಡಿದ್ದೇ ಹೊರತು ಬೇರೆ ಯಾವ ಮಹತ್ಕಾರ್ಯವನ್ನೂ ಮಾಡುವದಕ್ಕಾಗಲಿಲ್ಲ. ಅವರು ತನ್ನನ್ನು ನಂಬದೆ ಹೋದದ್ದಕ್ಕೆ ಆತನು ಆಶ್ಚರ್ಯಪಟ್ಟನು. ... (ಮಾರ್ಕ 6:4-6)
"ಸಲುಗೆಯು ತಿರಸ್ಕಾರವನ್ನು ಉಂಟುಮಾಡುತ್ತದೆ" ಎಂದು ಹೇಳಲಾಗುತ್ತದೆ. ಪರಿಶುದ್ಧ ದೇವರೊಂದಿಗೆ ನಡೆಯುವಾಗ, ನಾವು ಎಂದಿಗೂ ಆತನನ್ನೂ ಮತ್ತು ಆತನ ಉಪಸ್ಥಿತಿಯನ್ನು ಲಘುವಾಗಿ ಪರಿಗಣಿಸುವಷ್ಟು ಸಲುಗೆ ಹೊಂದಬಾರದು ಆದರೆ ಪ್ರತಿದಿನ ಆಳವಾದ ಭಕ್ತಿಯಿಂದ ಆತನೊಂದಿಗೆ ನಡೆಯಬೇಕು.
Bible Reading: Job 19-23
ಪ್ರಾರ್ಥನೆಗಳು
ತಂದೆಯೇ, ನಾನು ನಿನ್ನ ಉಪಸ್ಥಿತಿಯನ್ನು ಗೌರವಿಸದೇ ವಿಫಲವಾದ ಯಾವುದೇ ಕ್ಷಣವನ್ನು ದಯಮಾಡಿ ಯೇಸುನಾಮದಲ್ಲಿ ಕ್ಷಮಿಸಿ. ನಿನ್ನ ಶಕ್ತಿ ಮತ್ತು ಪವಿತ್ರತೆಯನ್ನು ಮರೆಯುವಷ್ಟು ನಿನ್ನೊಂದಿಗೆ ಸಲುಗೆ ತೆಗೆದುಕೊಳ್ಳದಂತೆ ನನಗೆ ಯೇಸುನಾಮದಲ್ಲಿ ಸಹಾಯ ಮಾಡು. ಆಮೆನ್.
Join our WhatsApp Channel

Most Read
● ಆತನ ಆವರ್ತನಕ್ಕೆ ಅನುಗುಣವಾಗಿ ನಮ್ಮನ್ನು ಹೊಂದಿಸಿಕೊಳ್ಳುವುದು.● ಇದು ಅಧಿಕಾರ ವರ್ಗಾವಣೆಯ ಸಮಯ
● ದಿನ 02 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಅಚ್ಚುಮೆಚ್ಚಲ್ಲ, ಆದರೆ ಆತ್ಮೀಯತೆ
● ನಾವು ದೇವದೂತರಿಗೆ ಪ್ರಾರ್ಥನೆ ಮಾಡಬಹುದೇ
● ಇನ್ನು ಸಾವಕಾಶವಿಲ್ಲ.
● ದೇವರು ಹೇಗೆ ಒದಗಿಸುತ್ತಾನೆ #1
ಅನಿಸಿಕೆಗಳು