हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಗೌರವಿಸುವ ಜೀವಿತ ಜೀವಿಸಿ
Daily Manna

ಗೌರವಿಸುವ ಜೀವಿತ ಜೀವಿಸಿ

Saturday, 15th of February 2025
2 1 180
Categories : ಎಸ್ತರ್ ರಹಸ್ಯಗಳು: ಸರಣಿ (Secrets of Esther: Series)
"ನಿನ್ನ ಗೋತ್ರದವರೂ ಸಂತಾನದವರೂ ನಿರಂತರವೂ ನನ್ನ ಸನ್ನಿಧಿಯಲ್ಲಿ ಸೇವೆಮಾಡಬಹುದು ಎಂದು ಆಜ್ಞಾಪಿಸಿದ ಇಸ್ರಾಯೇಲ್‍ದೇವರಾದ ಯೆಹೋವನೆಂಬ ನಾನು ಈಗ ತಿಳಿಸುವದೇನಂದರೆ - ಅದು ನನಗೆ ದೂರವಾಗಿರಲಿ; ನನ್ನನ್ನು ಸನ್ಮಾನಿಸುವವರನ್ನು ಸನ್ಮಾನಿಸುವೆನು; ನನ್ನನ್ನು ತಿರಸ್ಕರಿಸುವವರು ತಿರಸ್ಕಾರಹೊಂದುವರು." (1 ಸಮುವೇಲ 2:30)

ಸನ್ಮಾನ ಎಂದರೆ ಬಹಳ ಗೌರವದಿಂದ ಕಾಣುವುದು ಎಂದರ್ಥ  ದುರದೃಷ್ಟವಶಾತ್, ನಾವು ಗೌರವದ ತತ್ವವನ್ನು ಹಿಂದಕ್ಕೆ ತೂರಿ  ಎಸೆಯುವ ಸಮಯದಲ್ಲಿ ಇದ್ದೇವೆ. ಕಿರಿಯರು ಈಗ ತಮ್ಮ ಹೆತ್ತವರನ್ನು ಅಗೌರವಿಸುತ್ತಾರೆ ಮತ್ತು ಅವರೇನಾದರೂ  ಶಿಸ್ತು ಪಡಿಸಲು ಪ್ರಯತ್ನಿಸಿದರೆ  ಪೊಲೀಸರಿಗೆ  ದೂರು ನೀಡುವಂತವರಾಗಿದ್ದಾರೆ. ನಮ್ಮ ಸಂಸ್ಕೃತಿ ಮತ್ತು ಧರ್ಮಗ್ರಂಥಗಳ ತತ್ವಗಳ ಬಗ್ಗೆ ನಮಗೆ ಇಂದು ಶೂನ್ಯ ಗೌರವವಿದೆ. ದೇವರ ವಾಕ್ಯ ಏನು ಹೇಳುತ್ತದೋ ಹಾಗೆ ಮಾಡದೇ ನಮ್ಮದೇ  ರೀತಿಯಲ್ಲಿ ನಾವು ಕೆಲಸಗಳನ್ನು ಮಾಡುವವರಾಗಿದ್ದೇವೆ. ಇಂದಿನ ಕಾಲದಲ್ಲಿ ಗೌರವದ  ಭಾಷೆ ಎಂಬುದೇ  ನಮಗೆ ಪರಕೀಯ ಭಾಷೆ ಎನಿಸುತ್ತಿದೆ. 

ಆದಾಗ್ಯೂ, ಎಸ್ತರಳು  ಗೌರವದ ತತ್ವವನ್ನು ಅರ್ಥಮಾಡಿಕೊಂದಿದ್ದಳು. ಅವಳು ಅನಾಥಳಾಗಿದ್ದರೂ, ಅವಳು ತನ್ನ ಚಿಕ್ಕಪ್ಪನು ಕೊಡುತ್ತಿದ್ದ ಸೂಚನೆಗಳನ್ನು ಅನುಸರಿಸಿದಳು. ಅವಳು ಈಗ ವಯಸ್ಕಳಾಗಿದ್ದರಿಂದ ತನ್ನ ಚಿಕ್ಕಪ್ಪನಿಗಿಂತ ಹೆಚ್ಚಾದ ಜ್ಞಾನವಿದೆ ಎಂದು ಅವಳು ಎಂದಿಗೂ ಉಬ್ಬಿಕೊಳ್ಳಲಿಲ್ಲ. ಬದಲಾಗಿ  ಅವಳು ಇನ್ನೂ ಹೆಚ್ಚಾಗಿ ಗೌರವಿಸಿ ಅವನ ಸೂಚನೆಗಳನ್ನು ಅನುಸರಿಸಿದಳು. ಸಿಂಹಾಸನಕ್ಕೆ  ಒಡತಿಯಾಗಬೇಕು ಎಂಬುದು ಅವಳ ಚಿಕ್ಕಪ್ಪನ ಕಲ್ಪನೆ ಎಂದು ನೀವು ಸಹ  ನನ್ನೊಂದಿಗೆ ಒಪ್ಪುತ್ತೀರಿ. ತನಗೆ  ಇದರಲೆಲ್ಲ ಆಸಕ್ತಿಯಿಲ್ಲ ತನಗೆ ನನ್ನ ಜೀವನದಲ್ಲಿ ನನ್ನದೇ ಆದ ಯೋಜನೆಗಳನ್ನು ಹೊಂದಿದ್ದೇನೆ  ಎಂದು ಅವಳು ಹೇಳಬಹುದಿತ್ತು, ಆದರೆ ಆಕೆ ಹಾಗೆ ಮಾಡಲಿಲ್ಲ. ಅವಳು ತನ್ನ ಚಿಕ್ಕಪ್ಪನ ಇಚ್ಛೆಯನ್ನು ಗೌರವಿಸಿ ಅದಕ್ಕೆ  ಒಪ್ಪಿಗೆ ನೀಡಿದಳು. ಅಷ್ಟೇ ಅಲ್ಲದೆ, ಅವಳು ಅರಮನೆಯಲ್ಲಿದ್ದಾಗ, ಅರಮನೆ ಮತ್ತು ಅರಸನ ನಿಬಂಧನೆಗಳನ್ನು ಗೌರವಿಸಿದಳು. ಹೌದು, ಅವಳು ಯಹೂದಿಯಾಗಿದ್ದಳು, ಆದರೆ ಅವಳು ತನ್ನ ರೀತಿಯಲ್ಲಿ ಕೆಲಸಗಳನ್ನು ಮಾಡಬೇಕೆಂದು ಎಂದಿಗೂ ಯಾರನ್ನೂ ಒತ್ತಾಯಿಸಲಿಲ್ಲ. ಒಂದು ಸಂದರ್ಭದಲ್ಲಿ, ಅವಳು ರಾಜನ ನಿಯೋಜಿತ ಕಂಚುಕಿಗೆ ಅವನಿಗೆ ಇಷ್ಟವಾದದ್ದನ್ನು ನೀಡುವಂತೆ ಹೇಳಿದಳು. 

"ಅರಸನ ನಿರ್ಣಯವೂ ಆಜ್ಞೆಯೂ ಪ್ರಕಟಿಸಲ್ಪಟ್ಟು [ಕಾರಭಾರಿಗಳು] ಅನೇಕಾನೇಕ ಕನ್ಯೆಯರನ್ನು ಕೂಡಿಸಿ ಶೂಷನ್ ಕೋಟೆಯಲ್ಲಿ ಹೇಗೈಯ ವಶಕ್ಕೆ ಒಪ್ಪಿಸಿದಾಗ ಎಸ್ತೇರಳೂ ಅರಮನೆಗೆ ತರಲ್ಪಟ್ಟು ಅಂತಃಪುರಪಾಲಕನಾದ ಹೇಗೈಯ ಪರಾಂಬರಿಕೆಯಲ್ಲಿದ್ದಳು.  ಹೇಗೈಯು ಆಕೆಯನ್ನು ಮೆಚ್ಚಿ ತನ್ನ ದಯೆಗೆ ಪಾತ್ರಳಾದ ಆಕೆಗೋಸ್ಕರ ತಕ್ಕ ಲೇಪನ ದ್ರವ್ಯಗಳನ್ನೂ ಭೋಜನಾಂಶವನ್ನೂ ಆರಿಸಿದ ಏಳು ಮಂದಿ ಸೇವಕಿಯರನ್ನೂ ಅರಮನೆಯಿಂದ ಬೇಗನೆ ಏರ್ಪಡಿಸಿ ಆಕೆಯನ್ನೂ ಆಕೆಯ ಸೇವಕಿಯರನ್ನೂ ಅಂತಃಪುರದ ಉತ್ತಮಭಾಗದಲ್ಲಿರಿಸಿದನು." ಎಂದು ಎಸ್ತೇರಳು 2:8-9ರಲ್ಲಿ ಸತ್ಯವೇದ ಹೇಳುತ್ತದೆ.  ಎಸ್ತೆರಳಿಗೆ ವಿಶೇಷ  ಆದ್ಯತೆ ನೀಡುವಂತೆ ಮಾಡಿದ ಕಂಚುಕಿ ಮುಂದೆ ಎಸ್ತೇರಳು ಬಹಳ  ಗೌರವಾನ್ವಿತ ಮತ್ತು ಸನ್ಮಾನ ಮನೋಭಾವದಿಂದ  ನಡೆದುಕೊಂಡಿರಬೇಕು ಇಲ್ಲವಾದರೆ, ಸೊಕ್ಕಿನ ಮತ್ತು ಹೆಮ್ಮೆಯ  ಸ್ತ್ರೀಯನ್ನು ಯಾರು ಇಷ್ಟ ಪಡುತ್ತಾರೆ?

ಆದ್ದರಿಂದ, ನಾವು ನಮ್ಮ ಹೃದಯಪೂರ್ವಕವಾಗಿ  ಮತ್ತೊಬ್ಬರನ್ನು ಗೌರವಿಸುವ ಜೀವನವನ್ನು ನಡೆಸಬೇಕು. ಎಸ್ತರಳು  ಕೇವಲ ಅದೃಷ್ಟದಿಂದ ರೈತ ಹುಡುಗಿಯಾಗಿದ್ದವಳು  ರಾಣಿಯಾಗಿ ಬದಲಾಗಲಿಲ್ಲ; ಅವಳು ಸಿಂಹಾಸನಕ್ಕೆ ಹೋಗುವ ದಾರಿಯನ್ನೂ  ಗೌರವಿಸಿದಳು. ಅವಳು ತುಂಬಾ ಗೌರವಯುತವಾಗಿ ನಡೆಯುತ್ತಿದ್ದು, ಅವಳೊಂದಿಗೆ ಸಂಪರ್ಕಕ್ಕೆ ಬರುವ ಎಲ್ಲರೂ ಸಹ  ಅವಳಿಗೆ ಆದ್ಯತೆ ನೀಡಿದರು. ಗೌರವಕ್ಕೆ ವಿರುದ್ಧವಾದದ್ದು ಹೆಮ್ಮೆಯಾಗಿದೆ. ನಿಮ್ಮ ಹೃದಯಪೂರ್ವಕವಾಗಿ  ಜನರನ್ನು, ನಿಯಮಗಳನ್ನು  ಮತ್ತು ವ್ಯವಸ್ಥೆಗಳನ್ನು ಗೌರವಿಸುವ ಸಮಯ ಇದಾಗಿದೆ . ನೀವು ಎಲ್ಲವನ್ನೂ ತಿಳಿದುಕೊಂಡವರು ಎಂಬುದನ್ನು ಸಾಬೀತುಪಡಿಸಬೇಕಾದ ಅವಶ್ಯಕತೆ ಇಲ್ಲ. ಏಕೆಂದರೆ ಇತರರಿಂದ ಕಲಿಯಲು ಯಾವಾಗಲೂ ಏನಾದರೂ ಇದ್ದೇ  ಇರುತ್ತದೆ. ಎಸ್ತರಳಿಗೆ  ಅರಮನೆಯ ನಿಬಂಧನೆಗಳು ತಿಳಿದಿರಲಿಲ್ಲ, ಆದರೆ ರಾಜನ ಕಂಚುಕಿಯಾದ ಹೇಗೈ ಗೆ ತಿಳಿದಿತ್ತು, ಆದ್ದರಿಂದ ಅವಳು ಅವನ ಮುಂದೆ ತಗ್ಗಿಸಿಕೊಳ್ಳುವಷ್ಟು ಬುದ್ಧಿವಂತಳಾಗಿದ್ದಳು. 

ಸ್ನೇಹಿತನೇ , ನಾವು ಮಹಿಮೆಯ ಅರಸನನ್ನು ಸಮೀಪಿಸುವಾಗ ನಾವು ಆತನನ್ನು ಹೊಗಳಬೇಕು ಮತ್ತು ಧನ್ಯವಾದ ಹೇಳಬೇಕು. ಅದು ಗೌರವದ ನಿಬಂಧನೆಯಾಗಿದೆ . ನಜರೇತಿನ ಜನರು ಯೇಸು ಯಾರಾಗಿದ್ದಾನೆಂದು ತಿಳಿದುಕೊಂಡು ಗೌರವಿಸಲು ಸಾಧ್ಯವಾಗಲಿಲ್ಲ ಅಥವಾ ಗೌರವಿಸಲಿಲ್ಲ  - ಅವರು ಆತನನ್ನು ಆತನ ಬಾಲ್ಯದಿಂದ  ಬಲ್ಲವರಾಗಿದ್ದೇವೆ ಎನ್ನುವ ಮಟ್ಟಕ್ಕೆ ಕೆಳಗಿಳಿಸಲು  ಪ್ರಯತ್ನಿಸಿದರು , ಏಕೆಂದರೆ ಆಗಮಾತ್ರ  ಅವರು ಆತನನ್ನು ತಮಗೆ ಸಮಾನನನ್ನಾಗಿ ಮಾಡಿಕೊಳ್ಳಬಹುದು ಎಂಬುದು ಅವರ ಯೋಚನೆಯಾಗಿತ್ತು. ಆದರೆ ಸಮಸ್ಯೆ ಏನೆಂದರೆ  ಆತನು ಯಾವುದೇ ಪೂರ್ವನಿದರ್ಶನ ಅಥವಾ ಸರಿಸಾಟಿಯಿಲ್ಲದ ಅರಸನಾಗಿದ್ದನು."ಯೇಸು ಅವರಿಗೆ - ಪ್ರವಾದಿಯು ಬೇರೆ ಎಲ್ಲಿದ್ದರೂ ಅವನಿಗೆ ಮರ್ಯಾದೆ ಉಂಟು; ಆದರೆ ಸ್ವದೇಶದಲ್ಲಿಯೂ ಸ್ವಂತ ಜನರಲ್ಲಿಯೂ ಸ್ವಂತ ಮನೆಯಲ್ಲಿಯೂ ಮಾತ್ರ ಮರ್ಯಾದೆಯಿಲ್ಲ ಎಂದು ಹೇಳಿದನು. (ಮಾರ್ಕ್ 6:4)

ನೀವು ಯಾವುದನ್ನು ಗೌರವಿಸಸುತ್ತೀರೋ ಅದು ನಿಮ್ಮ ಕಡೆಗೆ ಹರಿದು ಬರುತ್ತದೆ ಹಾಗೆ ನೀವು ಅವಮಾನಿಸಿರುವಂತದ್ದು  ನಿಮ್ಮಿಂದ ದೂರವಾಗುತ್ತದೆ. ನಾವು ಜನರೊಂದಿಗೆ ಮಾತನಾಡುವಾಗ, ನಾವು ಗೌರವ ಸಂಸ್ಕಾರ ವನ್ನು ಅಳವಡಿಸಿಕೊಳ್ಳಬೇಕು. ನಿಮ್ಮ ಪಾಸ್ಟರ್ ಗಳಿಗಿಂತ ನೀವು ಹೆಚ್ಚಾಗಿ  ತಿಳಿದುಕೊಂಡಿದ್ದೀರಿ ಎಂದು  ನೀವು ಸಾಬೀತುಪಡಿಸಬೇಕಾದ ಅವಶ್ಯಕತೆ ಇಲ್ಲ ; ಅವರನ್ನು  ಗೌರವಿಸಿ. ನೀವು ನಿಮ್ಮ ಹೆತ್ತವರಿಗಿಂತ ಹೆಚ್ಚು ವಿದ್ಯಾವಂತರೂ ಮತ್ತು ಶ್ರೀಮಂತರೂ ಆಗಿರಬಹುದು, ಆದರೂ  ನೀವು ಇನ್ನೂ ಹೆಚ್ಚಾಗಿ  ಅವರನ್ನು ಗೌರವಿಸಬೇಕು ಇದರಿಂದ ಜೀವನದಲ್ಲಿ ಇನ್ನೂ ಚೆನ್ನಾಗಿಯೂ ಮತ್ತು  ದೀರ್ಘಕಾಲದ ವರೆಗೂ ನೀವು ಬದುಕಬಹುದು. ಗೌರವವೆಂದರೆ ಅಷ್ಟು ಶಕ್ತಿಯುತವಾಗಿರುತ್ತದೆ. ಇದು ನಿಮ್ಮ ಹೆಜ್ಜೆಗಳನ್ನು ಸಿಂಹಾವಲೋಕನ ಮಾಡಲು ಮತ್ತು ದೇವರ ಆತ್ಮವು ನಿಮ್ಮ ಹೃದಯದಿಂದ ಹೆಮ್ಮೆ ಮತ್ತು ದುರಹಂಕಾರವನ್ನು ತೆಗೆದುಹಾಕಲು ಅವಕಾಶ ಮಾಡಿಕೊಡುವ ಸಮಯವಾಗಿದೆ, ಇದರಿಂದಾಗಿ ನೀವು ನಿಜವಾದ ರೂಪಾಂತರವನ್ನು ಅನುಭವಿಸಬಹುದು. 

Bible Reading: Numbers 4-6
Prayer
ತಂದೆಯೇ, ನೀನು  ನನ್ನ ಹೃದಯವನ್ನು ದೀನತೆಯ  ಮನೋಭಾವದಿಂದ ತುಂಬಬೇಕೆಂದು ಯೇಸುವಿನ ಹೆಸರಿನಲ್ಲಿ, ಪ್ರಾರ್ಥಿಸುತ್ತೇನೆ.ನೀನು  ನನ್ನ ಹೃದಯದಲ್ಲಿರುವ  ಪ್ರತಿ ಹೆಮ್ಮೆಯನ್ನು  ಹೊರಹಾಕಿ  ನಿನ್ನಲ್ಲಿರುವ  ದೀನತೆಯ ಮನೋಭಾವವನ್ನು ನಾನು ಹೊಂದಿಕೊಳ್ಳುವಂತೆ ನನಗೆ ಸಹಾಯ ಮಾಡಬೇಕೆಂದು ಪ್ರಾರ್ಥಿಸುತ್ತೇನೆ. ಇಂದಿನಿಂದ ನಾನು ನನ್ನ ಮುಂದೆ ಇರುವ ಪ್ರತಿಯೊಬ್ಬರನ್ನೂ  ಗೌರವಿಸುತ್ತೇನೆ ಮತ್ತು ನಾನು ಇನ್ನು ಮುಂದೆ ಯಾರನ್ನೂ ಸಹ ಕೀಳಾಗಿ ನೋಡುವುದಿಲ್ಲ ಎಂದು ಯೇಸುನಾಮದಲ್ಲಿ ಘೋಷಿಸುತ್ತೇನೆ . ಆಮೆನ್.


Join our WhatsApp Channel


Most Read
● ದೇವರಿಗಾಗಿ ಮತ್ತು ದೇವರೊಂದಿಗೆ.
● ನಂಬಿಕೆ ಎಂದರೇನು ?
● ದಿನ 20:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಮೂರು ನಿರ್ಣಾಯಕ ಪರೀಕ್ಷೆಗಳು
● ಮರೆತುಹೋದ ಆಜ್ಞೆ.
● ದೂರದಿಂದ ಹಿಂಬಾಲಿಸುವುದು
● ದಿನ 28:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login