हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ದೇವರ ಸಮೀಪಕ್ಕೆ ಬನ್ನಿರಿ
Daily Manna

ದೇವರ ಸಮೀಪಕ್ಕೆ ಬನ್ನಿರಿ

Sunday, 1st of June 2025
1 0 87
Categories : ದೇವರೊಂದಿಗೆ ಆತ್ಮೀಯತೆ (Intimacy with God)
"ದೇವರ ಸಮೀಪಕ್ಕೆ ಬನ್ನಿರಿ ಆಗ ಆತನು ನಿಮ್ಮ ಸಮೀಪಕ್ಕೆ ಬರುತ್ತಾನೆ"(ಯಾಕೋಬ 4:8)

ಇಲ್ಲಿ ನಮಗೆ ಒಂದು ಅದ್ಭುತವಾದ ಆಹ್ವಾನ ಮತ್ತು ಒಂದು ಮಹಿಮೆಯ ವಾಗ್ದಾನ ನೀಡಲಾಗಿದೆ. 

1. ಒಂದು ಆಹ್ವಾನ - ದೇವರ ಸಮೀಪಕ್ಕೆ ಬನ್ನಿ. 
2. ವಾಗ್ದಾನ - ನೀವು ದೇವರ ಸಮೀಪಕ್ಕೆ ಬರುವಾಗ ,ನಾನೂ  ನಿಮ್ಮ ಸಮೀಪಕ್ಕೆ ಬರುತ್ತೇನೆ ಎಂದು ಆತನು ವಾಗ್ದಾನ ಮಾಡುತ್ತಾನೆ. 

ಇಬ್ರಿಯ 9:1-9 ನಮಗೆ ದೇವಾಲಯದಲ್ಲಿ, ಪವಿತ್ರ ಮತ್ತು  ಅತೀ ಪವಿತ್ರ ಸ್ಥಳವನ್ನು ಒಂದು ಪರದೆ ಬೇರ್ಪಡಿಸುತಿತ್ತು  ಎಂದು ಹೇಳುತ್ತದೆ. ಇದು ಮನುಷ್ಯನು ಪಾಪದಿಂದ ದೇವರಿಂದ ಬೇರ್ಪಟ್ಟಿದ್ದಾನೆ ಎಂಬುದನ್ನು  ಸೂಚಿಸುತಿತ್ತು. ಎಲ್ಲಾ ಇಸ್ರಾಯೇಲ್ಯರಿಗೋಸ್ಕರ  ದೇವರ ಸನ್ನಿಧಿಯನ್ನು ಪ್ರವೇಶಿಸಿ  ಅವರ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡಲು ಪ್ರತಿ ವರ್ಷದಲ್ಲಿ  ಒಮ್ಮೆ ಮಾತ್ರ ಅದು  ಮಹಾಯಾಜಕನು  ಮಾತ್ರ ಈ ಪರದೆಯನ್ನು ದಾಟಿ ಒಳಗೆ ಹೋಗಲು  ಅನುಮತಿ ಇತ್ತು.

ಆದರೆ ಕರ್ತನಾದ ಯೇಸು ಕ್ರಿಸ್ತನು ಶಿಲುಬೆಯ ಮೇಲೆ ತನ್ನ ರಕ್ತವನ್ನು ಸುರಿಸಿದ ನಂತರ, ಅದ್ಭುತವಾದ ಏನೋ ಒಂದು ಅಲ್ಲಿ  ಸಂಭವಿಸಿತು; ಅದೇನೆಂದರೆ ಈ ಪರದೆಯು ಮೇಲಿನಿಂದ ಕೆಳಕ್ಕೆ ಹರಿದುಹೋಯಿತು. ಈಗ ಪವಿತ್ರ ಮತ್ತು ಅತೀ ಪವಿತ್ರ ಸ್ಥಳಕ್ಕೆ ಹೋಗುವ ಮಾರ್ಗವು ಎಲ್ಲಾ ಜನರಿಗೂ ಅಂದರೆ , ಯೆಹೂದ್ಯರಿಗೂ  ಮತ್ತು ಅನ್ಯಜನರಿಗೂ  ಇಬ್ಬರಿಗೂ, ಎಲ್ಲಾ ಕಾಲಕ್ಕೂ ತೆರದಿಡಲ್ಪಟ್ಟಿದೆ  ಎಂದು ಅದು ಸೂಚಿಸಿತು. 

ನನ್ನ ಜೀವನದಲ್ಲಿ ದೇವರ ಸಮೀಪಕ್ಕೆ ಬರುವ ಕಲ್ಪನೆಯು ಒಂದು  ನಿಗೂಢವಾದ  ಮತ್ತು ಪ್ರತ್ಯೇಕವಾದ ವಿಷಯವೆಂದು ತೋರುತ್ತಿದ್ದ ಒಂದು  ಸಮಯವಿತ್ತು, ಅದು ಆಯ್ದ ಕೆಲವರಿಗೆ ಮಾತ್ರ ಮೀಸಲಾಗಿದೆ ಎನ್ನುವ ಕಲ್ಪನೆ ನನ್ನದಾಗಿತ್ತು. ಆದಾಗ್ಯೂ, ಪ್ರಾರ್ಥನೆಯ ಒಂದು ಸಮಯದಲ್ಲಿ , ಪವಿತ್ರಾತ್ಮನು ನನ್ನೊಂದಿಗೆ ಮಾತನಾಡುತ್ತಾ, "ನೀನು ನನ್ನನ್ನು ಎಷ್ಟು ತಿಳಿದುಕೊಳ್ಳಲು ಬಯಸುತ್ತೀಯಾ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ" ಎಂದು ಹೇಳಿದನು.

ದೇವರ ಸಾಮಿಪ್ಯಕ್ಕೆ ಹೋಗುವ ಸಾಮರ್ಥ್ಯವು ವಾಸ್ತವವಾಗಿ ಎಲ್ಲರಿಗೂ ದೊರಕುವಂತದ್ದೇ. ಕರ್ತನೊಂದಿಗಿನ ಸಂಬಂಧವನ್ನು ಗಾಢವಾಗಿಸಿಕೊಳ್ಳಲು  ಒಂದು ಮುಖ್ಯ ವಿಷಯವೆಂದರೆ ಆ  ವ್ಯಕ್ತಿಯಲ್ಲಿರುವ ಅವನ  ಸ್ವಂತ ಬಯಕೆ ಮತ್ತು ದೃಢಸಂಕಲ್ಪ.  ಯಾವ ಒಬ್ಬ ವ್ಯಕ್ತಿಯು  ದೇವರನ್ನು ತಿಳಿದುಕೊಳ್ಳಲು ಹೆಚ್ಚು ಹಂಬಲಿಸುತ್ತಾನೋ ಆಗ ಆಳವಾದ ಆತ್ಮೀಕ ಸಂಪರ್ಕವನ್ನು ಅನುಭವಿಸಲು ಅವನು ಹೆಚ್ಚು ಮುಕ್ತನಾಗುತ್ತಾನೆ.

ದೇವರೊಂದಿಗೆ  ನೀವು ಎಷ್ಟು ದೂರ ಹೋಗಲು ಬಯಸುತ್ತೀರಿ?
ಯೆಹೆಜ್ಕೆಲ  47ನೇ ಅಧ್ಯಾಯದಲ್ಲಿ ಪ್ರವಾದಿಯಾದ ಯೆಹೆಜ್ಕೇಲನಂತೆ (ದಯವಿಟ್ಟು ಇಡೀ ಅಧ್ಯಾಯವನ್ನು ಓದಿ) ದೇವರೊಳಗೆ  ನೀವು ಎಷ್ಟು ಆಳಕ್ಕೆ ಹೋಗಲು ಬಯಸುತ್ತೀರಿ, ಪಾದದವರೆಗೋ, ಮೊಣಕಾಲುವರೆಗೋ , ಸೊಂಟದವರೆಗೋ  ಅಥವಾ ಪವಿತ್ರಾತ್ಮನು  ನಿಮ್ಮನ್ನು ಹಿಡಿದಿಟ್ಟುಕೊಳ್ಳುವಷ್ಟು ಆಳಕ್ಕೋ ? ಇದೆಲ್ಲವೂ ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ.

ಕರ್ತನು ನಿಮಗೆ ಹೇಳುತ್ತಾನೆ, ನೀವು ನನ್ನ ಬಳಿಗೆ ಎಷ್ಟು ಸಮೀಪಕ್ಕೆ ಬರುತ್ತೀರೋ ನಾನು ನಿಮ್ಮ ಹತ್ತಿರ ಅಷ್ಟು ಸಾಮಿಪ್ಯಕ್ಕೆ ಬರುವೆನು ಎನ್ನುವೆನು.ಈ ಬ್ರಹ್ಮಾಂಡದ ಅರಸನೂ ಮತ್ತು ಸೃಷ್ಟಿಕರ್ತನೂ ಆದಾತನು  ನಿಮಗೆ ಹತ್ತಿರವಾಗಲು ಬಯಸುತ್ತಾನೆ! 

ಆದಾಗ್ಯೂ, ಆತನು ನಿಮ್ಮನ್ನು  ಬಲವಂತಪಡಿಸುವುದಿಲ್ಲ. ಆತನು ಆಯ್ಕೆಯನ್ನು ನಿಮಗೆ ಬಿಟ್ಟು ಕೊಡುತ್ತಾನೆ. ನೀವು ರಾಜಮನೆತನವನ್ನೇ  ನಿಮ್ಮ ಬಳಿಗೆ ಬರಲು ಹೇಳುತ್ತಿಲ್ಲ;ಆದರೆ ನೀವು ಆತನ ಬಳಿಗೆ ಹೋಗುತ್ತೀರಿ. ಶುಭ ಸುದ್ದಿ ಏನೆಂದರೆ, 2000 ವರ್ಷಗಳ ಹಿಂದೆ, ಈ ದೇವರು ಈ ಭೂಮಿಗೆ ಇಳಿದು, ಪಾಪರಹಿತ ಜೀವನವನ್ನು ನಡೆಸಿದನು, ತನ್ನ ರಕ್ತವನ್ನು ಸುರಿಸಿದನು, ಶಿಲುಬೆಯಲ್ಲಿ ಸತ್ತನು ಮತ್ತು ಮತ್ತೆ ಜೀವಿತನಾಗಿ ಎದ್ದನು. ಇಂದು, ನೀವು "ನಾನು ನನ್ನನ್ನು ನಿನಗೆ ಸಮರ್ಪಸಿಕೊಳ್ಳುತ್ತೇನೆ,ನಾನು ನಿನಗೆ ಶರಣಾಗುತ್ತೇನೆ"ಎಂದು ನೀವು ಹೇಳುತ್ತಾ ನೀವು ಆತನ ಬಳಿಗೆ ಹೋಗುತ್ತೀರಿ.
 
ತಪ್ಪಿಹೋದ ಮಗನು ಹೇಳಿದ್ದನ್ನು ನೋಡಿರಿ:
 "ನಾನು ಎದ್ದು ನನ್ನ ತಂದೆಯ ಬಳಿಗೆ ಹೋಗಿ ಅವನಿಗೆ - ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿನ್ನ ಮುಂದೆಯೂ ಪಾಪ ಮಾಡಿದ್ದೇನೆ; ಇನ್ನು ನಾನು ನಿನ್ನ ಮಗನೆನಿಸಿಕೊಳ್ಳುವದಕ್ಕೆ ಯೋಗ್ಯನಲ್ಲ; ನನ್ನನ್ನು ನಿನ್ನ ಕೂಲಿಯಾಳುಗಳಲ್ಲಿ ಒಬ್ಬನಂತೆ ಮಾಡು ಎಂದು ಹೇಳುವೆನು ಅಂದುಕೊಂಡು ಎದ್ದು ತನ್ನ ತಂದೆಯ ಕಡೆಗೆ ಬಂದನು. ಅವನು ಇನ್ನೂ ದೂರದಲ್ಲಿರುವಾಗ ಅವನ ತಂದೆಯು ಅವನನ್ನು ಕಂಡು ಕನಿಕರಪಟ್ಟು ಓಡಿಬಂದು ಅವನ ಕೊರಳನ್ನು ಅಪ್ಪಿಕೊಂಡು ಅವನಿಗೆ ಬಹಳವಾಗಿ ಮುದ್ದಿಟ್ಟನು"(ಲೂಕ 15:18-20)

ಪ್ರತಿದಿನ ಆತನ ಸಾಮಿಪ್ಯಕ್ಕೆ  ಬರುವುದು ಹೇಗೆ?
ದೇವರ ಸಾಮಿಪ್ಯಕ್ಕೆ ಬರುವುದು ಎಂದರೆ ಆತನೊಂದಿಗೆ ಸಮಯ ಕಳೆಯುವುದು, ಆತನನ್ನು ಆರಾಧಿಸುವುದು, ಪ್ರಾರ್ಥಿಸುವುದು ಮತ್ತು ಆತನೊಂದಿಗೆ ಮಾತನಾಡುವುದು ಮತ್ತು ನಮ್ಮ ಜೀವನದ ಪ್ರತಿಯೊಂದು ಅಂಶಕ್ಕೂ ಆತನನ್ನು ಆಹ್ವಾನಿಸುವುದು  ಆಗಿದೆ. ಇದನ್ನು ಮಾಡಲು ಪ್ರತಿದಿನ ಒಂದು ನಿಗದಿತ ಸಮಯವನ್ನು ನೇಮಿಸಿಕೊಳ್ಳಿ. ಆತನು ನಿಮ್ಮ ಮೂಲಕ ಏನು ಮಾಡುತ್ತಾನೆಂದು ನೋಡಿ ನೀವು ಆಶ್ಚರ್ಯಚಕಿತರಾಗುವಿರಿ. 

Bible Reading: 2 Chronicles 29-30
Prayer
ತಂದೆಯೇ, ನಿನ್ನ ವಾಕ್ಯವು ಹೇಳುತ್ತದೆ, “ನನ್ನ ಪರಲೋಕದ ತಂದೆಯು ನೆಡದ ಪ್ರತಿಯೊಂದು ಗಿಡವನ್ನು ಬೇರುಸಹಿತ ಕಿತ್ತುಹಾಕಲಾಗುವುದು.” ಎಂದು. ಹಾಗಾಗಿ ನಿನ್ನ ಜೊತೆಗೆ ನಾನು ನಡೆಯದಂತೆ ನನ್ನ ಬೆಳೆವಣಿಗೆಯನ್ನು ತಡೆಯುವ ಎಲ್ಲವನ್ನೂ ಬೇರುಸಹಿತ ಕಿತ್ತುಹಾಕಿ. ನಾನು ನನ್ನ ಪ್ರಾರ್ಥನಾ ಸಮಯವನ್ನು ಯೇಸುವಿನ ರಕ್ತದಡಿಯಲ್ಲಿ ಯೇಸುನಾಮದಲ್ಲಿ ಮರೆಮಾಚುತ್ತೇನೆ 

ತಂದೆಯೇ, ಪ್ರತಿದಿನ ಪ್ರಾರ್ಥಿಸಲು ನನಗೆ ಅನುಗ್ರಹವನ್ನು ನೀಡು . ನಾನು ನಿನ್ನ ಸಾಮಿಪ್ಯಕ್ಕೆ ಬರುವಾಗ , ನೀನು ವಾಗ್ದಾನ ಮಾಡಿದಂತೆ ನೀನೂ ಸಹ ನನ್ನ ಸಾಮಿಪ್ಯಕ್ಕೆ ಬರಬೇಕೆಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ. ಆಮೆನ್.


Join our WhatsApp Channel


Most Read
● ಸತ್ತವರೊಳಗಿಂದ ಮೊದಲು ಎದ್ದು ಬಂದವನು.
● ನಮ್ಮ ಆಯ್ಕೆಯ ಪರಿಣಾಮಗಳು
● ಸತ್ಯವೇದ ಆಧಾರಿತ ಸಮೃದ್ಧಿಯನ್ನು ಹೊಂದಲಿರುವ ರಹಸ್ಯ
● ದೂರದಿಂದ ಹಿಂಬಾಲಿಸುವುದು
● ದೈವೀಕ ಶಿಸ್ತಿನ ಸ್ವರೂಪ: 2
● ದಿನ 14:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದಿನ 27:40 ದಿನಗಳ ಉಪವಾಸ ಪ್ರಾರ್ಥನೆ
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login