english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಆತಂಕದಿಂದ ಕಾಯುವುದು
ಅನುದಿನದ ಮನ್ನಾ

ಆತಂಕದಿಂದ ಕಾಯುವುದು

Thursday, 26th of June 2025
2 0 106
"ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ".  (1 ಪೇತ್ರ 5:7)

ದೇವರವಾಕ್ಯವು ಮಾನವ ಜೀವನದ ವಾಸ್ತವಿಕ ಚಿತ್ರಣವನ್ನು ಚಿತ್ರಿಸುತ್ತದೆ. ಇದು ಪರೀಕ್ಷೆಗಳು, ತೊಂದರೆಗಳು ಅಥವಾ ಆತಂಕಗಳಿಲ್ಲದ ಪ್ರಯಾಣವನ್ನು ಎಂದಿಗೂ ಭರವಸೆ ನೀಡುವುದಿಲ್ಲ. ಆದಾಗ್ಯೂ, ಇದು ನಮಗೆ  ನಾವು ಆತಂಕಗಳನ್ನು ಎದುರಿಸುವಾಗಲೂ ನಾವು ಆ ಭಾರವನ್ನು ದೇವರ ಮೇಲೆ ಹಾಕಬಹುದು ಎನ್ನುವ ಸುಂದರವಾದ ಭರವಸೆಯನ್ನು ನೀಡುತ್ತದೆ. ಈ ಆಳವಾದ ವಾಗ್ದಾನವು ನಮ್ಮ ಹೋರಾಟಗಳನ್ನು ಪರಿವರ್ತಿಸಿ ನಮ್ಮ ಆತಂಕವನ್ನೆಲ್ಲ ಸಮಾಧಾನವಾಗಿ ಮತ್ತು ಹತಾಶೆಯನ್ನು ಭರವಸೆಯಾಗಿ ಪರಿವರ್ತಿಸುತ್ತದೆ. ಕೆಲವು ವಿಷಯಗಳು ಯಾವಾಗಲೂ ನಮ್ಮ ಕೈಮೀರಿದವುಗಳಾಗಿ ತೋರುತ್ತವೆ.ಆದರೆ ಅದು ಯಾವಾಗಲೂ ದೇವರ ಕೈನಿಯಂತ್ರಣದಲ್ಲಿರುತ್ತದೆ. 

ನನ್ನ ಮೊದಲ ಅಂತರರಾಷ್ಟ್ರೀಯ ಸುವಾರ್ತಾ ಪ್ರವಾಸದ ಸಮಯದಲ್ಲಿ, ನಾನು ತುಂಬಾ ಉತ್ಸುಕನಾಗಿದ್ದೆ. ನನ್ನ ಪ್ರವಾಸವನ್ನು ಪ್ರಾಯೋಜಿಸುತ್ತಿದ್ದ ದಂಪತಿಗಳು ನನಗೆ ಕರೆ ಮಾಡಿ ವೀಸಾ ಅರ್ಜಿಯು ತಡೆಗೆ ಸಿಲುಕಿದೆ ಎಂದು ಹೇಳಿದರು. ಅವರು ಈ ಕುರಿತು ಪ್ರಾರ್ಥಿಸಲು ನನಗೆ ಹೇಳಿದರು. ಇಡೀ ವಿಷಯದ ಕುರಿತು ಆತಂಕವು ನನ್ನೊಳಗೆ ವೇಗವಾಗಿ ಬೆಳೆಯುತ್ತಿತ್ತು. ನಾನು ಈ ವಿಷಯದ ಬಗ್ಗೆ ಪ್ರಾರ್ಥಿಸಲು ಪ್ರಾರಂಭಿಸಿದೆ. ಸುಮಾರು 2 ಗಂಟೆಗಳ ನಂತರ, ಇದ್ದಕ್ಕಿದ್ದಂತೆ, ಪವಿತ್ರಾತ್ಮನ ಸೌಮ್ಯವಾದ ಧ್ವನಿಯು "ಮಗನೇ, ನಾನು ಅದನ್ನು ನೋಡಿಕೊಂಡಿದ್ದೇನೆ" ಎಂದು ಹೇಳುವುದನ್ನು ನಾನು ಕೇಳಿದೆ.ಆಗ ನನ್ನಲ್ಲಿದ್ದ ಎಲ್ಲಾ ಆತಂಕಗಳು ನನ್ನನ್ನು ಬಿಟ್ಟುಹೋದವು,  ಆತನ ಆ ಶಾಂತಿಯು ಎಲ್ಲಾ ಗ್ರಹಿಕೆಯನ್ನು ಮೀರಿಸುವಂತದ್ದಾಗಿತ್ತು.

" ಸ್ಥಿರಚಿತ್ತನನ್ನು ಶಾಂತಿಯಲ್ಲಿ ನೆಲೆಗೊಳಿಸಿ ಕಾಯುವಿ; ಅವನಿಗೆ ನಿನ್ನಲ್ಲಿ ಭರವಸವಿದೆ. (ಯೆಶಾಯ 26:3)

ಜೀವನದ ಸಮಸ್ಯೆಗಳು ನಿಜವಾಗಿಯೂ ನಮ್ಮ ಮೇಲೆ ದೈಹಿಕವಾಗಿ, ಭಾವನಾತ್ಮಕವಾಗಿ ಮತ್ತು ಆತ್ಮೀಕವಾಗಿ ಕಠಿಣ  ಸವಾರಿಮಾಡುತ್ತಿರಬಹುದು . ಆದರೂ, ನಾವು ಪ್ರಾರ್ಥನೆಯಲ್ಲಿ ಕರ್ತನ ಬಳಿಗೆ ವಿಷಯಗಳನ್ನು ಕೊಂಡೊಯ್ಯಲು ಕಲಿಯುವಾಗ ಮತ್ತು ದಿನವಿಡೀ ಆತನ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುವಾಗ, ಆತನು ನಮ್ಮ ಕಾಳಜಿ ವಹಿಸುತ್ತಾನೆ ಎಂಬುದನ್ನು ನಂಬುವಾಗ, ನಮಗೆ ವಿಶ್ರಾಂತಿ ಸಿಗುತ್ತದೆ. 

"ನನ್ನಲ್ಲಿ ನಿಮ್ಮನ್ನು ನೀವೇ ಮರೆತು ಕಳೆದುಹೋಗಿರಿ, ಆಗ ನೀವು ನಿಮ್ಮನ್ನು ಕಂಡುಕೊಳ್ಳುವಿರಿ ... (ದಿನವಿಡೀ ಅದನ್ನು ಹಾಡಿ)" ಎಂಬ ಹಾಡು ನನಗೆ ನೆನಪಿಗೆ ಬರುತ್ತದೆ. ನಾವು ನಮ್ಮ ಚಿಂತೆಗಳನ್ನು ದೇವರ ಮೇಲೆ ಹಾಕಿದಾಗ, ನಾವು ನಮ್ಮ ಮನಸ್ಸನ್ನು ಆತನೊಂದಿಗೆ ಸಮನ್ವಯಗೊಳಿಸಿ ನಂಬಿಕೆಯ ವಾತಾವರಣವನ್ನು ಬೆಳೆಸಿಕೊಳ್ಳುತ್ತೇವೆ. ಈ ನಂಬಿಕೆಯ ಆಯಾಮದಲ್ಲೇ,  ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು. (ಫಿಲಿಪ್ಪಿ 4:7). 

Bible Reading: Psalms 19-26
ಪ್ರಾರ್ಥನೆಗಳು
1. ತಂದೆಯೇ, ನಿಮ್ಮ ವಾಕ್ಯವು ಹೇಳುತ್ತದೆ, "ನನ್ನ ಸ್ವರ್ಗೀಯ ತಂದೆಯು ನೆಡದ ಪ್ರತಿಯೊಂದು ಸಸ್ಯವನ್ನು ಬೇರುಸಹಿತ ಕಿತ್ತುಹಾಕಲಾಗುವುದು.ಎಂದು "ನಿಮ್ಮೊಂದಿಗೆ ನಾನು ನಡೆಯುವಾಗ ನನ್ನ ಬೆಳವಣಿಗೆಯನ್ನು ತಡೆಯುವ ಎಲ್ಲ ಸಂಗತಿಯನ್ನು ಬೇರುಸಹಿತ ಕಿತ್ತುಹಾಕಿ. ನಾನು ನನ್ನ ಪ್ರಾರ್ಥನಾ ಸಮಯವನ್ನು ಯೇಸುವಿನ ರಕ್ತದಿಂದ ಮರೆಮಾಚುತ್ತೇನೆ. 

2. ತಂದೆಯೇ, ಪ್ರತಿದಿನ ಪ್ರಾರ್ಥಿಸುವಂತೆ ನನಗೆ ನಿನ್ನ ದಯೆ ದೊರಕಲಿ ನಾನು ನಿನ್ನ ಸಮೀಪಕ್ಕೆ ಬರುವಾಗ, ನೀನು ವಾಗ್ದಾನ ಮಾಡಿದಂತೆ ನೀನು ನನ್ನ ಸಮೀಪಕ್ಕೆ ಯೇಸುನಾಮದಲ್ಲಿ ಬಾ ಆಮೆನ್.

Join our WhatsApp Channel


Most Read
● ನಿಮ್ಮ ನಂಬಿಕೆಯಲ್ಲಿ ರಾಜಿ ಮಾಡಿಕೊಳ್ಳಬೇಡಿ
● ಎಲ್ಲಾಮನುಷ್ಯರಿಗಾಗಿ ಇರುವ ಕೃಪೆ
● ಕೃಪೆಯಲ್ಲಿ ಬೆಳೆಯುವುದು
● ಸ್ವಸ್ಥ ಚಿತ್ತತೆ ಎಂಬುದು ಒಂದು ವರ
● ಕರ್ತನ ಸೇವೆ ಮಾಡುವುದು ಎಂದರೇನು II
● ಸ್ವಸ್ಥ ಬೋಧನೆಯ ಪ್ರಾಮುಖ್ಯತೆ
● ನೀವು ದೇವರಿಂದ ನೇಮಿಸಲ್ಪಡುವ ಮುಂದಿನ ಬಿಡುಗಡೆ ನಾಯಕರು ನೀವಾಗಬಹುದು
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್