english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಯಾರ ಸಂದೇಶವನ್ನು ನೀವು ನಂಬುವಿರಿ?
ಅನುದಿನದ ಮನ್ನಾ

ಯಾರ ಸಂದೇಶವನ್ನು ನೀವು ನಂಬುವಿರಿ?

Wednesday, 16th of July 2025
3 0 109
Categories : ಮೋಕ್ಷ (Salvation)
“ನಮ್ಮ ಸಂದೇಶವನ್ನು ಯಾರು ನಂಬಿದರು ಮತ್ತು ಕರ್ತನ ಬಾಹು ಯಾರಿಗೆ ಪ್ರಕಟವಾಯಿತು?” (ಯೆಶಾಯ 53:1) 

ದೇವರ ಮನುಷ್ಯನೊಬ್ಬನು ಒಂದು ದಿನ ಪ್ರಾರ್ಥನೆ ಮಾಡುವಾಗ ಒಂದು ದರ್ಶನದಲ್ಲಿ ಪರಲೋಕಕ್ಕೆ ಕರೆದೊಯ್ಯಲ್ಪಟ್ಟನು. ಅವನು ಪರಲೋಕಕ್ಕೆ ಭೇಟಿ ನೀಡಿದಾಗ, ಅವನು ಒಂದು ಹೊಳೆಯುವ ಪುಸ್ತಕವನ್ನು ನೋಡಿದನು. ಅದು ಯಾವ ಪುಸ್ತಕ ಎಂದು ಅವನು ಕರ್ತನನ್ನು ಕೇಳಿದನು. ಕರ್ತನು ಮುಗುಳ್ನಗುತ್ತಾ ಅದನ್ನು ಅವನೇ ಸ್ವತಃ ನೋಡುವಂತೆ ಹೇಳಿದನು. ಅದು ಸತ್ಯವೇದವಾಗಿತ್ತು. ಅದರಲ್ಲಿ ಅವನು ಕಂಡದ್ದು ಅವನನ್ನು ಆಶ್ಚರ್ಯಗೊಳಿಸಿತು; ಅದರಲ್ಲಿ ಸತ್ಯವೇದದ ಒಂದು ಅಧ್ಯಾಯ ತೆರೆದಿತ್ತು - ಅದು ಯೆಶಾಯ 53 ಆಗಿತ್ತು. 

ಇಂದಿನ ವಚನವು ಅನೇಕರು ರಕ್ಷಣೆಯ ಸುವಾರ್ತಾ ಸಂದೇಶವನ್ನು ತಿರಸ್ಕರಿಸುತ್ತಾರೆ ಎಂಬುದನ್ನು ನಮಗೆ ಸ್ಪಷ್ಟವಾಗಿ ಹೇಳುತ್ತದೆ. ಅನೇಕ ಜನರು ರಕ್ಷಣೆಯ ಸಂದೇಶವನ್ನು ವಿವಿಧ ಕಾರಣಗಳಿಗಾಗಿ ತಿರಸ್ಕರಿಸುತ್ತಾರೆ. ಕೆಲವು ಜನರು ತಾವು ರಕ್ಷಣೆಯ ಸಂದೇಶವನ್ನು ಸ್ವೀಕರಿಸಿಕೊಂಡು ಬಿಟ್ಟರೆ ಅವರು ಸಮಾಜದಿಂದ ಬಹಿಷ್ಕರಿಸಲ್ಪಡಬಹುದೇನೋ ಎಂದು ಸಮಾಜಕ್ಕೆ ಭಯಪಟ್ಟು ಸುವಾರ್ತೆ ಸಂದೇಶವನ್ನು ತಿರಸ್ಕರಿಸುತ್ತಾರೆ. 

ಯೋಹಾನ 9:22 ರಲ್ಲಿ, ಯೇಸು ಗುಣಪಡಿಸಿದ ಕುರುಡನ ತಂದೆತಾಯಿಗಳನ್ನು ನಾವು ನೋಡುವಾಗ, ಅವರು ಯೆಹೂದ್ಯರ ಭಯದಿಂದ ಆತನನ್ನು ಕ್ರಿಸ್ತನೆಂದು ಒಪ್ಪಿಕೊಳ್ಳಲಿಲ್ಲ. ಯಾಕೆಂದರೆ ಹಾಗೆ ಹೇಳಿದರೆ ಅವರೆಲ್ಲಿ ತಮ್ಮನ್ನು ಸಭಾಮಂದಿರದಿಂದ ಹೊರಹಾಕುತ್ತಾರೋ ಎಂದು ಅವರು ಭಯಪಟ್ಟರು. ಇಂದಿಗೂ ಸಹ, ಮನುಷ್ಯರ ಮತ್ತು ಸಮಾಜದ ಭಯದಿಂದಾಗಿ ಅನೇಕರು ನಿಜವಾದ ರಕ್ಷಣೆಯ ಸಂದೇಶದೊಂದಿಗೆ ರಾಜಿ ಮಾಡಿಕೊಳ್ಳುತ್ತಿದ್ದಾರೆ.

ನೀವು ಅವರಂತೆ ಇರಬೇಡಿ. ಗುಣಮುಖರಾಗಿ ಸಭಾಮಂದಿರದಿಂದ ಹೊರಗೆ ಹಾಕಲ್ಪಟ್ಟ ವ್ಯಕ್ತಿಯು ಏನು ಮಾಡಿದನೆಂದು ತಿಳಿದಿದ್ದೀರಾ - ಈ ಮನುಷ್ಯನು ಯೇಸು ತನಗಾಗಿ ಕಾಯುತ್ತಿರುವುದನ್ನು ಕಂಡುಕೊಂಡನು. 

ಇಂದು, ದೇವರ ವಾಕ್ಯಕ್ಕಾಗಿ ದೃಢವಾದ ನಿಲುವನ್ನು ತೆಗೆದುಕೊಳ್ಳಿ. ಅದಕ್ಕೆ ನಿಮಗೆ ಸಿಗುವ ಪ್ರತಿಫಲವೆಂದರೆ  ಯೇಸುವೇ ನಿಮಗೆ ಸಿಗುತ್ತಾನೆ. ಸಮಾಜದಲ್ಲಿ ತನ್ನ ಅಂತಸ್ತು ಮತ್ತು ಸ್ಥಾನಮಾನದ ಬಗ್ಗೆ ಚಿಂತಿಸದೆ ಬಹಿರಂಗವಾಗಿ ಯೇಸುವಿನ ಪಾದಗಳಿಗೆ ಅಡ್ಡಬಿದ್ದ ಯಾಯೀರನಂತೆ ಇರಿ, ಅದರ ಅಂತಿಮ ಫಲಿತಾಂಶವೆಂದರೆ ಅವನ ಸತ್ತ ಮಗಳು ಜೀವಂತಳಾದಳು.

Bible Reading: Proverbs 12-15
ಅರಿಕೆಗಳು
ಯೇಸುವೇ ನನ್ನ ಜೀವನದ ಪ್ರಭು, ನನ್ನ ದೇವರು ಮತ್ತು ನನ್ನ ಆತ್ಮದ ರಕ್ಷಕ. ನಾನು ಸತ್ಯವನ್ನು ತಿಳಿದುಕೊಂಡಿದ್ದೇನೆ ಆ ಸತ್ಯವು ನನ್ನನ್ನು ಬಿಡುಗಡೆಗೊಳಿಸಿದೆ.



Join our WhatsApp Channel


Most Read
● ಆ ಸುಳ್ಳುಗಳನ್ನು ಬಯಲಿಗೆಳೆಯಿರಿ.
● ದೇವರಿಂದ ಒದಗಿದ ಕನಸು
● ಕ್ಷಮಿಸಲು ಇರುವ ಪ್ರಾಯೋಗಿಕ ಹಂತಗಳು.
● ನಿಮ್ಮ ಮೇರೆಯಲ್ಲಿಯೇ ಇರಿ
● ಎರಡು ಸಾರಿ ಸಾಯಬೇಡಿರಿ
● ಅತ್ಯಂತ ಸಾಮಾನ್ಯ ಭಯಗಳು
● ಆತನು ನೋಡುತ್ತಿದ್ದಾನೆ.
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್