english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ದೇವರ ಸ್ವಭಾವ
ಅನುದಿನದ ಮನ್ನಾ

ದೇವರ ಸ್ವಭಾವ

Thursday, 2nd of October 2025
2 1 59
Categories : ಗುಣ(character)
ಆದರೆ [ಪವಿತ್ರ] ಆತ್ಮನ ಫಲ [ಆತನ ಸಾನಿಧ್ಯವು ನಮ್ಮೊಳಗೆ ಸಾಧಿಸುವ ಕೆಲಸ] ಪ್ರೀತಿ, ಸಂತೋಷ (ಆನಂದ), ಶಾಂತಿ, ತಾಳ್ಮೆ (ಸಮಚಿತ್ತತೆ, ಸಹಿಷ್ಣುತೆ), ದಯೆ, ಒಳ್ಳೆಯತನ (ಉಪಕಾರ ಸ್ಮರಣೆ), ನಂಬಿಗಸ್ತಿಕೆ, ಸೌಮ್ಯತೆ (ದೀನತೆ, ನಮ್ರತೆ), ಸ್ವಯಂ ನಿಯಂತ್ರಣ (ಸ್ವ-ಸಂಯಮ, ಸಂಯಮ). ಅಂತಹ ವಿಷಯಗಳನ್ನು , (ಆಪಾದನೆಯನ್ನು ತರಬಹುದು)ಯಾವುದೇ ನಿಯಮವೂ ವಿರೋಧಿಸುವುದಿಲ್ಲ. (ಗಲಾತ್ಯ 5:22-23 ವರ್ಧಿತ) 

ಆತ್ಮನ ಫಲವಾದ ಆ ಒಂಬತ್ತು ಗುಣಲಕ್ಷಣಗಳು ದೇವರ ಗುಣ ಮತ್ತು ಸ್ವಭಾವವಾಗಿವೆ. ಅವು ನಮ್ಮ ಕರ್ತನಾದ ಯೇಸು ಕ್ರಿಸ್ತನ ಗುಣ ಮತ್ತು ಸ್ವಭಾವವಾಗಿವೆ. ಆತನು ಆತ್ಮನ ಫಲದ ನಡೆದಾಡುವ, ಮಾತನಾಡುವ ಅಭಿವ್ಯಕ್ತಿಯಾಗಿದ್ದನು. 

ಯಾಕಂದರೆ ದೇವರು ತನ್ನ ಮಗನಿಗೆ ಅನೇಕ ಮಂದಿ ಸಹೋದರರಿದ್ದು ಅವರಲ್ಲಿ ಆತನೇ ಹಿರಿಯನಾಗಿರಬೇಕೆಂದು ಉದ್ದೇಶಿಸಿ ತಾನು ಯಾರನ್ನು ತನ್ನವರೆಂದು ಮೊದಲು ತಿಳುಕೊಂಡನೋ ಅವರನ್ನು ತನ್ನ ಮಗನ ಸಾರೂಪ್ಯವುಳ್ಳವರಾಗುವದಕ್ಕೆ [ಮತ್ತು ಆಂತರಿಕವಾಗಿ ಆಂತರಿಕ ಹೋಲಿಕೆಯನ್ನು ಹಂಚಿಕೊಳ್ಳಬೇಕೆಂದು] ಮೊದಲೇ ನೇವಿುಸಿದನು. (ರೋಮನ್ನರು 8:29)

ವಾಸ್ತವವಾಗಿ, ದೇವರ ವಾಕ್ಯ ಮತ್ತು ಅಭಿಷೇಕದ ಅಂತಿಮ ಉದ್ದೇಶವೆಂದರೆ ನಮ್ಮನ್ನು ಪರಿವರ್ತಿಸಿ ನಮ್ಮ ಸ್ವಭಾವವನ್ನು ಆತನಂತೆಯೇ ಮಾಡುವುದು.  ನೀವು ಬಹಳ ಫಲಕೊಡುವದರಿಂದಲೇ ನನ್ನ ತಂದೆಗೆ ಮಹಿಮೆ ಉಂಟಾಗಿ ಗೌರವ ಬರುವುದು; ಇದುವೇ ನೀವು ನನ್ನ ಶಿಷ್ಯರೆಂದು ತೋರ್ಪಡಿಸುವಂತದ್ದು[ಯೋಹಾನ 15:8] 

ಜನರು ಪವಿತ್ರಾತ್ಮನ ವರಗಳನ್ನು ಪವಿತ್ರಾತ್ಮನ ಫಲವಿಲ್ಲದೆ ಕಾರ್ಯನಿರ್ವಹಿಸಲು ಪ್ರಯತ್ನಿಸಿದಾಗ, ಆ ವರಗಳು ಅಂತಿಮವಾಗಿ ಭ್ರಷ್ಟಗೊಳ್ಳುತ್ತದೆ ಮತ್ತು ಅದರ ಪೂರ್ಣತೆಯಲ್ಲಿ ಅದು ಕಾರ್ಯನಿರ್ವಹಿಸಲಾಗದು. ವರಗಳ ಅಂತಹ ದುರುಪಯೋಗದಿಂದ ತಂದೆಗೆ ಯಾವುದೇ ಮಹಿಮೆ ಸಿಗುವುದಿಲ್ಲ. ಆದ್ದರಿಂದ, ನೀವು ಆತನ ಸಾನಿಧ್ಯದೊಂದಿಗೆ ಸಂಪರ್ಕದಲ್ಲಿರುವುದು ಮತ್ತು ಫಲ ನೀಡುವುದು ಅತ್ಯಂತ ಕಡ್ಡಾಯವಾದ ಸಂಗತಿಯಾಗಿದೆ.

ಪವಿತ್ರಾತ್ಮನ ವರಗಳನ್ನು ಯಾವಾಗಲೂ ಆತ್ಮನ ಫಲದ ಸಾಮರಸ್ಯದಿಂದ ಮತ್ತು ಅದರ ಪ್ರಬಲ ಪ್ರಭಾವದ ಅಡಿಯಲ್ಲಿ ಬಳಸಬೇಕು. ಕೋಲಿನ ಕಥೆಯು ಅರಣ್ಯಕಾಂಡ 17 ರಲ್ಲಿ ಕಂಡುಬರುತ್ತದೆ; ದೇವರು ಒಬ್ಬ ಮಹಾಯಾಜಕನನ್ನು ಆರಿಸಿಕೊಳ್ಳಲು ಮೋಶೆಗೆ ಪ್ರತಿ ಕುಲದಿಂದಲೂ ಒಬ್ಬೊಬ್ಬ ಮನುಷ್ಯನು ಒಂದೊಂದು ಕೋಲನ್ನು ತಂದು ಗುಡಾರದ ಬಾಗಿಲಿನ ಮುಂದೆ ಇಡುವಂತೆ ಆಜ್ಞಾಪಿಸಲು ಹೇಳಿದನು.ಒಂದು ರಾತ್ರಿಯಲ್ಲಿ ಯಾವ ಕೋಲು ಚಿಗುರಿ ಎಲೆ ಬಿಟ್ಟು ಮೊಗ್ಗೆ ಹೊಡೆದು ಅರಳಿ ಕಾಯಿ - ಹಣ್ಣು ಬಿಟ್ಟಿರುವುದೋ ಆ ಕೋಲು ಯಾವ ಯಾಜಕನದೋ ಅವನೇ ತನ್ನ ಆಯ್ಕೆಯ ಯಾಜಕ ಎನ್ನುವುದಕ್ಕೆ ಸಂಕೇತವಾಗಿದೆ ಎಂದು ದೇವರು ಹೇಳಿದ್ದನು.

ಮರುದಿನ ಮೋಶೆಯು ಸಾಕ್ಷಿ ಗುಡಾರದೊಳಗೆ ಹೋದಾಗ, ಲೇವಿ ಕುಲದವರಿಗಾಗಿ ಆರೋನನ ಕೋಲು ಚಿಗುರಿ ಮೊಗ್ಗುಗಳನ್ನು ಬಿಟ್ಟು, ಹೂವುಗಳನ್ನು ಬಿಟ್ಟು, ಬಾದಾಮಿ ಹಣ್ಣುಗಳನ್ನು ಕೊಟ್ಟಿತ್ತು. (ಅರಣ್ಯ ಕಾಂಡ 17:8) 

ಕರ್ತನಾದ ಯೇಸು, "ನೀವು  ಅವರ ಫಲಗಳಿಂದಲೇ ಅವರನ್ನು ತಿಳಿದುಕೊಳ್ಳುವಿರಿ..." ಎಂದು ಹೇಳಿದನು (ಮತ್ತಾಯ. 7:16). ದೇವರು ಆರಿಸಿಕೊಂಡ ಮಹಾಯಾಜಕನೂ ಸಹ ಕೋಲಿನಲ್ಲಿ ಹುಟ್ಟಿದ ಫಲದಿಂದ ತಿಳಿದುಬಂದನು.

Bible Reading: Micah 4-7; Nahum 1 
ಅರಿಕೆಗಳು
ನಾನು ತಲೆಗೆ (ಕರ್ತನಾದ ಯೇಸು ಕ್ರಿಸ್ತನಿಗೆ) ಸಂಪರ್ಕ ಹೊಂದಿರುವುದರಿಂದ, ನನ್ನ ಜೀವನವು ಬಹಳ ಫಲ ನೀಡಿ ತಂದೆಗೆ ಗೌರವವನ್ನು  ಮಹಿಮೆಯನ್ನು ತರುತ್ತದೆ.


Join our WhatsApp Channel


Most Read
● ಸಾಲದಿಂದ ಹೊರಬನ್ನಿ : ಕೀಲಿಕೈ # 1
● ದಿನ 19:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದೇವರ ಆಲಯದಲ್ಲಿರುವ ಸ್ತಂಭಗಳು
● ದೇವರ ಎಚ್ಚರಿಕೆಗಳನ್ನು ಕಡೆಗಣಿಸಬೇಡಿರಿ
● ದಿನ 17:40 ದಿನಗಳ ಉಪವಾಸ ಪ್ರಾರ್ಥನೆ.
● ಸಮರುವಿಕೆಯ ಕಾಲ- 3
● ದಿನ 18:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್