english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಬದಲಾಗದ ಸತ್ಯ
ಅನುದಿನದ ಮನ್ನಾ

ಬದಲಾಗದ ಸತ್ಯ

Tuesday, 3rd of February 2026
3 3 68
Categories : ಆಧ್ಯಾತ್ಮಿಕ ನಡಿಗೆ (Spiritual Walk) ದೇವರವಾಕ್ಯ ( Word of God ) ನಂಬಿಕೆಗಳನ್ನು(Beliefs) ವಂಚನೆ (Deception)
ದೇವರ ವಾಕ್ಯ ಅಭಿಪ್ರಾಯಗಳಿಂದ ತುಂಬಿರುವ ಜಗತ್ತಿನಲ್ಲಿ ಭದ್ರವಾದ ನೆಲೆಯನ್ನು ಕಂಡುಕೊಳ್ಳುವಂತದ್ದು ಮರಳಿನ ಮೇಲೆ ನಿಲ್ಲಲು ಪ್ರಯತ್ನಿಸಿದಂತೆ ಭಾಸವಾಗುತ್ತದೆ. ಇಂದು, ಜನರು "ನಿಮಗೆ ಸತ್ಯ ಎನಿಸುವುದರಲ್ಲಿ ಜೀವಿಸಿ" ಎಂದು ಹೇಳುವುದನ್ನು ನಾವು ಹೆಚ್ಚಾಗಿ ಕೇಳುತ್ತೇವೆ. ನಿಮ್ಮ ಭಾವನೆಗಳ ಕುರಿತು ಪ್ರಾಮಾಣಿಕವಾಗಿರುವುದು ಒಳ್ಳೆಯದಾದರೂ, ವೈಯಕ್ತಿಕ ಅಭಿಪ್ರಾಯ ಮತ್ತು ಸಂಪೂರ್ಣ ವಾಸ್ತವದ ನಡುವೆ ದೊಡ್ಡ ವ್ಯತ್ಯಾಸವಿದೆ.

"ವೈಯಕ್ತಿಕ ಸತ್ಯ"ದ ಪುರಾಣ ಸತ್ಯ
ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ ಎಂಬ ಕಲ್ಪನೆಯು ಜನಪ್ರಿಯವಾಗಿದೆ, ಆದರೆ ಅದು ನಿಜವಾಗಿ ನೋಡಿದರೆ ಒಂದು ಬಲೆಯಾಗಿದೆ. ಪ್ರತಿಯೊಬ್ಬರೂ ತಮಗೆ ಸರಿ  ಎನಿಸಿದ್ದೆ ಸರಿ ಎಂಬುದರ ಕುರಿತು  ಪ್ರತಿಯೊಬ್ಬರೂ ಅಂದುಕೊಳ್ಳುವುದಾದರೆ, ನಿಜವಾಗಿಯೂ ಯಾವುದೂ  ಸರಿಯಾಗಿರುವುದಿಲ್ಲ.
ಸತ್ಯವೇದವು ವಿಭಿನ್ನ ದೃಷ್ಟಿಕೋನವನ್ನು ನೀಡುತ್ತದೆ. ಸತ್ಯವು ನಾವು ಕಂಡುಹಿಡಿದದ್ದಲ್ಲ; ಆದರೆ ಅದು ನಾವು ಕಂಡುಕೊಳ್ಳುವ ಸಂಗತಿಯಾಗಿದೆ ಎಂದು ಅದು ನಮಗೆ ಹೇಳುತ್ತದೆ. 

ಎಂದು 2 ತಿಮೋತಿ 3:16-17 ನಲ್ಲಿ, ನಾವು ಓದುತ್ತೇವೆ
"ದೈವ ಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ, ಖಂಡನೆಗೂ, ತಿದ್ದುಪಡಿಗೂ, ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಆದ್ದರಿಂದ ದೇವರ ಮನುಷ್ಯನು ಎಲ್ಲವನ್ನೂ ಬಲ್ಲವನಾಗಿದ್ದು ಸಕಲಸತ್ಕಾರ್ಯಗಳಿಗೆ ಸನ್ನದ್ಧನಾಗುವನು." 

ಇದರರ್ಥ ಸತ್ಯವೇದವು ಕೇವಲ ಸಲಹೆಗಳ ಪುಸ್ತಕವಲ್ಲ. ಇದು ಜನಪ್ರಿಯ ಪ್ರವೃತ್ತಿಗಳು ಹೇಗೆ ಬದಲಾದರೂ ನಮ್ಮನ್ನು ಸರಿಯಾದ ಹಾದಿಯಲ್ಲಿ ಇರಿಸಿಕೊಳ್ಳಲು ವಿನ್ಯಾಸಗೊಳಿಸಲಾದ "ದೇವರ ಬಾಯಿಂದ ಹೊರಟ" ಮಾರ್ಗದರ್ಶಿ ಪುಸ್ತಕವಾಗಿದೆ.
ಮಾನವ ಭಾವನೆಗಳು ಹವಾಮಾನದಂತೆ ಏರಿಳಿತಗೊಳ್ಳುತ್ತವೆ, ಆದರೆ ದೇವರ ಸ್ವಭಾವವು ಸ್ಥಿರವಾಗಿರುತ್ತದೆ.

"ಎಲ್ಲಾ ಒಳ್ಳೆಯ ವರಗಳು ಮತ್ತು ಪರಿಪೂರ್ಣವಾದ ವರಗಳು ಮೇಲಿನಿಂದ ಬಂದವುಗಳೇ, ಅವು ಸಕಲ ವಿಧವಾದ ಬೆಳಕಿಗೆ ಮೂಲಕರ್ತನಾದ ದೇವರಿಂದ ಇಳಿದು ಬರುತ್ತವೆ; ಆತನು ನೆರಳಿನಂತೆ ಬದಲಾಗುವವನಲ್ಲ, ಚಂಚಲಚಿತ್ತನೂ ಅಲ್ಲ." ಎಂದು ಯಾಕೋಬ 1:17  ವಿವರಿಸುತ್ತದೆ.
ಒಂದು ದೀಪಸ್ತಂಭದ ಬಗ್ಗೆ ಯೋಚಿಸಿ. ಅಲೆಗಳು ಬಡಿಯುತ್ತಿದ್ದರೂ ಎತ್ತರದಲ್ಲಿ ಇರುವುದರಿಂದ ಅದು ಚಲಿಸುವುದಿಲ್ಲ. ಅದೇ ರೀತಿಯಲ್ಲಿ, ದೇವರ ವಾಕ್ಯವು ಒಂದು ಸ್ಥಿರವಾದ ಉಲ್ಲೇಖ ಬಿಂದುವನ್ನು ಒದಗಿಸುತ್ತದೆ. ಲೋಕವು ನೈತಿಕತೆಯ "ಬದಲಾಗುವ ನೆರಳುಗಳೊಂದಿಗೆ" ಹೋರಾಡುತ್ತಿರುವಾಗ, ಸತ್ಯವೇದ ನಿತ್ಯ ನಿರಂತರ ಬೆಳಕಾಗಿ ಉಳಿದಿದೆ. 

ಭಾವನೆಗಳು ಮೋಸಗೊಳಿಸಬಹುದು 

ನಮ್ಮ ಅನುಭವಗಳು ನಿಜವಾದರೂ, ಅವು ಯಾವಾಗಲೂ ವಿಶ್ವಾಸಾರ್ಹವಲ್ಲ. ನಾವೆಲ್ಲರೂ ಯಾವುದೋ ಒಂದು ವಿಷಯದ ಕುರಿತು ಇದೇ ಖಚಿತ ಎಂದು ಭಾವಿಸಿರುತ್ತೇವೆ, ಆಮೇಲೆ ನಾವು ಅದು ತಪ್ಪು ಎಂಬುದನ್ನೂ ಕಂಡುಕೊಂಡಿದ್ದೇವೆ. ಅದಕ್ಕಾಗಿಯೇ ನಮ್ಮ "ಧೈರ್ಯ"ವನ್ನು ಅನುಸರಿಸುವುದು ಕೆಲವೊಮ್ಮೆ ನಮ್ಮನ್ನು ತೊಂದರೆಗೆ ದೂಡಬಹುದು.ಎಂದು ಜ್ಞಾನೋಕ್ತಿ 14:12 ನಮಗೆ ಗಂಭೀರ ಎಚ್ಚರಿಕೆ ನೀಡುತ್ತದೆ. 
"ಮನುಷ್ಯನಿಗೆ ಸರಿ ಎಂದು ತೋಚುವ ಒಂದು ಮಾರ್ಗವುಂಟು ಕಟ್ಟಕಡೆಗೆ ಅದು ಮರಣವೇ " 

ಈ ಕ್ಷಣಕ್ಕೆ ಅದು ಸರಿಯಾಗಿದೆ ಎಂದು ಭಾವಿಸುವುದಾದರೆ ಅದು ಸುರಕ್ಷಿತ ಎಂದು ಅರ್ಥವಲ್ಲ ಎಂದು ಇದು ವಿವರಿಸುತ್ತದೆ. ನಾವು ನಿಜವಾಗಿಯೂ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆಯೇ ಎಂದು ನೋಡಲು ನಾವು ದೇವರ ವಾಕ್ಯಕ್ಕೆ  ಹೋಲಿಸಿ ನಮ್ಮ ಭಾವನೆಗಳನ್ನು ಪರಿಶೀಲಿಸಬೇಕಾಗಿದೆ.

ನಿಜವಾದ ಬಿಡುಗಡೆಯ ಮಾರ್ಗ
ಅನೇಕ ಜನರು "ಸತ್ಯ" ಎಂಬುದು ನಿರ್ಬಂಧಿತ ನಿಯಮಗಳ ಗುಂಪೆಂದು ಭಾವಿಸುತ್ತಾರೆ. ಆದಾಗ್ಯೂ, ಕರ್ತನಾದ ಯೇಸು ಇದಕ್ಕೆ ವಿರುದ್ಧವಾಗಿ ನಮಗೆ ಬೋದಿಸಿದನು. 

ಯೋಹಾನ 8:32 ರಲ್ಲಿ ಆತನು ಹೇಳುತ್ತಾನೆ
"ಇದಲ್ಲದೆ ನೀವು ಸತ್ಯವನ್ನು ತಿಳಿದುಕೊಳ್ಳುವಿರಿ ಮತ್ತು ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವುದು” ಎಂದು ."

ಇದು ಕೇವಲ ಒಂದು ಒಳ್ಳೆಯ ಉಲ್ಲೇಖವಲ್ಲ; ಇದು ಒಂದು ವಾಗ್ದಾನ. ನಾವು ನಮ್ಮ ಸ್ವಂತ ನಿಯಮಗಳನ್ನು ರಚಿಸುವ ಹೊರೆಯನ್ನು ಹೊರಲು ಪ್ರಯತ್ನಿಸುವುದನ್ನು ನಿಲ್ಲಿಸಿ ದೇವರ ವಿನ್ಯಾಸವನ್ನು ಅನುಸರಿಸುವಾಗ, ಒಂದು ಹೊರೆ ನಮ್ಮಿಂದ ತೆಗೆಯಲ್ಪಡುತ್ತದೆ. 

ಗಲಾತ್ಯ 5:1 ಕೂಡ ಇದನ್ನು ಬಲಪಡಿಸುತ್ತದೆ: ಅದು
" ಕ್ರಿಸ್ತನು ನಮ್ಮನ್ನು ಸ್ವತಂತ್ರರಾಗಿರಿಸಬೇಕೆಂದೇ ನಮಗೆ ಬಿಡುಗಡೆ ಮಾಡಿದನು. ಅದರಲ್ಲಿ ಸ್ಥಿರವಾಗಿ ನಿಲ್ಲಿರಿ, ದಾಸತ್ವದ ನೊಗದಲ್ಲಿ ತಿರುಗಿ ಸಿಕ್ಕಿಕೊಳ್ಳಬೇಡಿರಿ." ಎನ್ನುತ್ತದೆ

ನಿಜವಾದ ಸ್ವಾತಂತ್ರ್ಯವೆಂದರೆ ನಾವು ಏನು ಬೇಕಾದರೂ ಮಾಡುವ ಸಾಮರ್ಥ್ಯವಲ್ಲ; ನಮ್ಮದೇ ಆದ ದೋಷಪೂರಿತ ತರ್ಕವನ್ನು ಅನುಸರಿಸುವುದರಿಂದ ಬರುವ ತಪ್ಪುಗಳು ಮತ್ತು ಗೊಂದಲಗಳಿಂದ ಮುಕ್ತರಾಗಿ  ದೇವರವಾಕ್ಯದಲ್ಲಿ ನಾವು ಹೇಗೆ ಬದುಕಬೇಕೆಂದು ಉದ್ದೇಶಿಸಲ್ಪಟ್ಟಿದ್ದೇವೋ ಹಾಗೆ ಬದುಕುವ ಶಕ್ತಿಯಾಗಿದೆ.

ನಿಮ್ಮ ಜೀವನವನ್ನು ಮುನ್ನಡೆಸುವುದು
ಇಬ್ರಿಯ 4:12 ರಲ್ಲಿ ಸತ್ಯವೇದವನ್ನು ಅನ್ನು "ಜೀವಂತ ಮತ್ತು ಕ್ರಿಯಾಶೀಲ" ಎಂದು ವಿವರಿಸಲಾಗಿದೆ. ಅದು ನಾವು ನಿಜವಾಗಿಯೂ ಯಾರೆಂದು ತೋರಿಸುವ ಕನ್ನಡಿಯಂತಿದೆ ಮತ್ತು ಎಲ್ಲಿಗೆ ಹೋಗಬೇಕೆಂದು ತೋರಿಸುವ ದಿಕ್ಸೂಚಿಯಂತಿದೆ ಎಂದು ವಿವರಿಸುತ್ತದೆ."ನಿನ್ನ ಸತ್ಯ" ಮತ್ತು "ನನ್ನ ಸತ್ಯ" ಎಂಬ ಮಾತುಗಳಲ್ಲಿ ಕಳೆದುಹೋಗುವ ಬದಲು, ನಾವು ನಿಜವಾದ ಸತ್ಯದಲ್ಲಿ ಮಾತ್ರ ಸಮಾಧಾನವನ್ನು ಕಂಡುಕೊಳ್ಳಬಹುದು. ನಮ್ಮ ಆತ್ಮಗಳು ಹುಡುಕುತ್ತಿರುವ ಸ್ಪಷ್ಟತೆ ಮತ್ತು ನಿರ್ದೇಶನವನ್ನು ಒದಗಿಸುವ ಏಕೈಕ ವಿಷಯ ಅದುವೇ ಆಗಿದೆ. 

Bible Reading: Leviticus 5-6
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನಿನ್ನ ಬದಲಾಗದ ಸತ್ಯದ ಮೂಲಕ ನಮಗೆ ಮಾರ್ಗದರ್ಶನ ನೀಡು. ಎಲ್ಲಕ್ಕಿಂತ ಹೆಚ್ಚಾಗಿ ನಿನ್ನ ವಾಕ್ಯವನ್ನೇ ವಿವೇಚಿಸಿ ಸ್ವೀಕರಿಸುವಂತೆ ನಮಗೆ ಸಹಾಯ ಮಾಡು. ನಿನ್ನ ಪ್ರೀತಿ ಮತ್ತು ಕೃಪೆಯ ಶಾಶ್ವತವಾದ, ವಿಮೋಚನಾ ಸತ್ಯದಲ್ಲಿ ನಾವು ಸ್ವಾತಂತ್ರ್ಯವನ್ನೂ ಮತ್ತು ಸಮಾಧಾನವನ್ನೂ ಯೇಸುನಾಮದಲ್ಲಿ ಕಂಡುಕೊಳ್ಳುವಂತಾಗಲಿ. ಆಮೆನ್

Join our WhatsApp Channel


Most Read
● ಅದ್ಭುತಗಳಲ್ಲಿ ಕಾರ್ಯ ಮಾಡುವುದು - ಕೀಲಿಕೈ #1
● ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಂಥದ್ದು ಆಂತರಿಕ ಸ್ವಸ್ಥತೆಯನ್ನು ತರುತ್ತದೆ.
● ಕಟ್ಟಬೇಕಾದ ಬೆಲೆ
● ಆತ್ಮೀಕ ಬಾಗಿಲುಗಳನ್ನು ಮುಚ್ಚುವುದು
● ದೂರದಿಂದ ಹಿಂಬಾಲಿಸುವುದು
● ಮನಃಪೂರ್ವಕ ಹುಡುಕಾಟ
● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2026 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್