english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ನೀವೊಂದು ಉದ್ದೇಶಕ್ಕಾಗಿ ಹುಟ್ಟಿದ್ದೀರಿ.
ಅನುದಿನದ ಮನ್ನಾ

ನೀವೊಂದು ಉದ್ದೇಶಕ್ಕಾಗಿ ಹುಟ್ಟಿದ್ದೀರಿ.

Sunday, 31st of March 2024
2 1 575
Categories : ಉದ್ದೇಶಗಳು (purpose)
"ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು. ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ ಅವನು ಶಿಕ್ಷಿತನೂ ತನ್ನ ದೇಹವನ್ನೆಲ್ಲಾ ಸ್ವಾಧೀನಪಡಿಸಿಕೊಳ್ಳುವದಕ್ಕೆ ಸಮರ್ಥನೂ ಆಗಿದ್ದಾನೆ. 3ನಾವು ಕುದುರೆಗಳನ್ನು ಸ್ವಾಧೀನ ಮಾಡಿಕೊಳ್ಳಬೇಕೆಂದಿರುವಾಗ ಅವುಗಳ ಬಾಯಿಗೆ ಕಡಿವಾಣಹಾಕುತ್ತೇವಲ್ಲಾ; ಆಗ ಅವುಗಳ ದೇಹವನ್ನೆಲ್ಲಾ ತಿರುಗಿಸುವದಕ್ಕೆ ಆಗುತ್ತದೆ.4 ಹಡಗುಗಳನ್ನು ನೋಡಿರಿ. ಅವು ಬಹು ದೊಡ್ಡವು, ಬಲವಾದ ಗಾಳಿಯಿಂದ ಬಡಿಸಿಕೊಂಡು ಹೋಗುತ್ತವೆ. ಆದರೂ ನಡಿಸುವವನು ಬಹು ಸಣ್ಣ ಚುಕ್ಕಾಣಿಯಿಂದ ಅವುಗಳನ್ನು ತನ್ನ ಮನಸ್ಸಿಗೆ ಬಂದ ಕಡೆಗೆ ತಿರುಗಿಸುತ್ತಾನೆ. 5ಹಾಗೆಯೇ ನಾಲಿಗೆಯು ಕೂಡ ಚಿಕ್ಕ ಅಂಗವಾಗಿದ್ದರೂ ದೊಡ್ಡ ಕಾರ್ಯಗಳನ್ನು ಕೊಚ್ಚಿಕೊಳ್ಳುತ್ತದೆ."(ಯಾಕೋಬನು‬ ‭3:2‭-‬5‬)

ಈ ಮೇಲಿನ ದೇವರ ವಾಕ್ಯವು ನಮ್ಮ ಜೀವಿತವನ್ನು ಬಿರುಗಾಳಿಗೆ ಸಿಕ್ಕಿಕೊಂಡು ಹೋಯ್ದಾಡುವ ಹಡಗಿಗೆ ಹೋಲಿಸಿದೆ. ಅಪೋಸ್ತಲನಾದಂತ ಯಾಕೋಬನು ಹೀಗಿದ್ದರೂ ನಾವು ನಮ್ಮ ಹಡಗನ್ನು ಅದರ ತೀರಕ್ಕೆ ನಡೆಸಲು ಸಾಧ್ಯ ಎಂದು ಇಲ್ಲಿ ವಿವರಿಸುತ್ತಿದ್ದಾನೆ.

ಅಪೋಸ್ತಲನಾದ ಯಾಕೋಬನು 5 ಸಂಗತಿಗಳನ್ನು ಇಲ್ಲಿ ಉಲ್ಲೇಖಿಸಿದ್ದಾನೆ.

  1. ಹಡಗು - ನಮ್ಮ ಜೀವನ
  2. ನಾವೀಕ - ನಮ್ಮ ಆತ್ಮೀಕ ಮನುಷ್ಯ
  3. ಬಲವಾದ ಗಾಳಿ - ನಮ್ಮ ಜೀವನದಲ್ಲಿ ಬರುವ  ಸನ್ನಿವೇಶಗಳು
  4. ಚುಕ್ಕಾಣಿ -ನಮ್ಮ ನಾಲಿಗೆ
  5. ಸಮುದ್ರ -ಲೋಕದಲ್ಲಿನ ಜೀವನ

ನಮ್ಮ ತಾಣವನ್ನು ನಾವು ತಲುಪಲು ನಮಗೆ ಸಹಾಯ ಮಾಡುವ ಮೂಲಭೂತ ಸತ್ಯಗಳಾವುವೆಂದರೆ:-

  1. ನೀವು ಮತ್ತು ನಾನು ದೇವರಿಂದ ಪಡೆದ ಸಾಮರ್ಥ್ಯಗಳಿಂದ ತುಂಬಲ್ಪಟ್ಟವರಾಗಿದ್ದೇವೆ.
  2. ಅಪರಿಚಿತವಾಗಿ ಅಪ್ಪಳಿಸುವ ಬಲಗಳು ನಮ್ಮ ಜೀವನವನ್ನು ನಿಯಂತ್ರಿಸಲು ದಿಕ್ಕು ತಪ್ಪಿಸಲು ಪ್ರಯತ್ನಿಸಬಹುದು.
  3. ಆದರೂ ನೀವು ನಿಮ್ಮ ಜೀವನವನ್ನು ಸರಿಯಾದ ದಿಕ್ಕಿನಲ್ಲಿ ನಡೆಸಬಹುದು.

1.ನೀವು ಮತ್ತು ನಾನು ದೇವರಿಂದ ಪಡೆದ ಸಾಮರ್ಥ್ಯಗಳಿಂದ ತುಂಬಲ್ಪಟ್ಟವರಾಗಿದ್ದೇವೆ.

ಕರ್ತನಾದ ಯೇಸು ನಿಮಗಾಗಿ ಅಮೂಲ್ಯವಾದ ಕ್ರಯ ವನ್ನು ಕೊಟ್ಟು ನಿಮ್ಮ ಮೇಲೆ ಬಹಳಷ್ಟು ಹೂಡಿಕೆ ಮಾಡಿದ್ದಾನೆ( ಎಫೆಸ್ಸೆ 4:8ಓದಿರಿ )ನೀವು ವಿಭಿನ್ನವಾದವರೂ  ನೀವು ವರಗಳಿಂದಲೂ ತಲಾಂತುಗಳಿಂದಲೂ ತುಂಬಿಸಲ್ಪಟ್ಟವರೂ  ಆಗಿದ್ದೀರಿ. ನೀವೊಂದು ನಿರ್ದಿಷ್ಟ ಕಾರ್ಯಕ್ಕಾಗಿ ಒಳ್ಳೆಯ ವಸ್ತುಗಳಿಂದ ತುಂಬಿಸಲ್ಪಟ್ಟ ವ್ಯಾಪಾರಿ ಹಡಗಿನಂತಿದ್ದೀರಿ, ಪವಿತ್ರಾತ್ಮನ ಸಹಾಯದಿಂದ ನೀವು ಮತ್ತು ನಾನು ದೇವರ ಮಹಿಮೆಗಾಗಿ ಮತ್ತು ನಮ್ಮ ಸುತ್ತಲಿನವರ ಪ್ರಯೋಜನಾರ್ಥವಾಗಿ ಈ ಎಲ್ಲಾ ವರಗಳನ್ನು ಕಂಡುಕೊಂಡು, ಪರಿಷ್ಕರಿಸಿ,ಉಪಯೋಗಿಸಬೇಕಾಗಿದೆ.

2.ಅಪರಿಚಿತವಾಗಿ ಅಪ್ಪಳಿಸುವ ಬಲಗಳು ನಮ್ಮ ಜೀವನವನ್ನು ನಿಯಂತ್ರಿಸಲು ದಿಕ್ಕು ತಪ್ಪಿಸಲು ಪ್ರಯತ್ನಿಸಬಹುದು.

ನಾವು ಕ್ರೈಸ್ತರೆಂದ ಮಾತ್ರಕ್ಕೆ ಯಾವುದೇ ಬಿರುಗಾಳಿಗೆ ನಾವು ಸಿಲುಕದವರು ಎಂಬ ಅರ್ಥವಲ್ಲ. 'ನೀವು ಯೇಸುವನ್ನು ನಂಬಿ ಆತನನ್ನು ಹಿಂಬಾಲಿಸಿದರೆ ನಿಮ್ಮ ಜೀವನವು  ಹೂವಿನ ಹಾಸಿಗೆಯಂತಿರುತ್ತದೆ' ಎಂದು ಯಾರಾದರೂ ಬೋಧಿಸಿದರೆ ಆ ಬೋಧನೆಗಳು ಸುಳ್ಳು ಬೋಧನೆಗಳಾಗಿವೆ.
ಅನೇಕ ಸಲ ಈ ಬಲಗಳು ನಿಮ್ಮ ವಿರುದ್ಧವಾಗಿ ಏಕೆ ಬಂದಿತು ಎನ್ನಲು ಯಾವುದೇ ಸ್ವಾಭಾವಿಕವಾದ  ಅಥವಾ ತರ್ಕಬದ್ದವಾದ ವಿವರಣೆ ಕೊಡಲು ಇದಕ್ಕೆ ಸಾಧ್ಯವಾಗದು. ಆದುದರಿಂದಲೇ ನಾನು ಇದನ್ನು ಅಪರಿಚಿತ ಬಲವೆಂದು ಹೇಳಿದ್ದು.

ಒಂದು ದಿನ ಶಿಷ್ಯರು ಯೇಸುವಿನೊಂದಿಗೆ ದೋಣಿಯಲ್ಲಿದ್ದರು. ಆಗ ಇದ್ದಕ್ಕಿದ್ದಂತೆ ಆ ದೋಣಿಯನ್ನೂ,ಅದರಲ್ಲಿದ್ದವರನ್ನೂ ಮುಳುಗಿಸುವಂಥ ಬಿರುಗಾಳಿ ಎದ್ದಿತು.

ಆಸಕ್ತಿಕರ ವಿಷಯವೇನೆಂದರೆ ಈ ಒಂದು ಪ್ರಯಾಣವು ಕರ್ತನ ಅಜ್ಞಾನುಸಾರವಾಗಿ ಮಾಡಿದ ಪ್ರಯಾಣವಾಗಿತ್ತು:

"ಆ ಹೊತ್ತು ಸಾಯಂಕಾಲವಾದಾಗ ಕರ್ತನು ಅವರಿಗೆ - ಆಚೇದಡಕ್ಕೆ ಹೋಗೋಣ ಎಂದು ಹೇಳಲು.."(ಮಾರ್ಕ‬ ‭4:35‬)
'ನಾವು ಕರ್ತನ ಆಜ್ಞೆಗೆ ವಿಧೇಯರಾದೆವು ಆದರೂ ಏಕೆ ಈ ರೀತಿಯ ಭಯಂಕರ ಬಿರುಗಾಳಿಯನ್ನು ಎದುರಿಸಬೇಕಾಯಿತು' ಎಂದು ನಾವು ಬಹುತೇಕರು ಕೂಗಾಡುವಂತೆಯೇ ಶಿಷ್ಯರೂ ಸಹ ಆಶ್ಚರ್ಯದಿಂದಲೇ ಅಂದು ಕೂಗಾಡಿರಬಹುದು.

ಕೆಲವೊಮ್ಮೆ ನಾವು ವಿಧೇಯತೆಯಿಂದ ನಡೆಯುವಾಗ ಎದುರಿಸುವ ಬಿರುಗಾಳಿಯು ಸಾಮಾನ್ಯವಾಗಿ ಎದುರಿಸುವ ಬಿರುಗಾಳಿಗಿಂತಲೂ ಹೆಚ್ಚು ಪ್ರಬಲವಾಗಿರುತ್ತದೆ.

ಮುಖ್ಯವಾದ ಸಂಗತಿ ಏನೆಂದರೆ ನಾವು ಈ ಬಿರುಗಾಳಿಯನ್ನು ನೋಡಿ ನಮ್ಮ ಪ್ರಯತ್ನವನ್ನು ಬಿಟ್ಟುಬಿಡಬಾರದು. ನಾವು ಗತಕಾಲದಲ್ಲಿ ಹಿಡಿದುಕೊಂಡಿದ್ದಕ್ಕಿಂತ ಇನ್ನೂ ಹೆಚ್ಚಾಗಿ ಈಗ ಯೇಸುವಿನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕು.

ಇನ್ನೊಂದು ಆಸಕ್ತಿಕರ ವಿಷಯವೇನೆಂದರೆ ಆ ಬಿರುಗಾಳಿಯ ಆರ್ತನಾದವು  ಯೇಸುವನ್ನು ಎಚ್ಚರಗೊಳಿಸಲಿಲ್ಲ. ಆದರೆ ಶಿಷ್ಯರ ಕೂಗು ಯೇಸುವನ್ನು ಎಚ್ಚರಗೊಳಿಸಿತು. ಹಾಗಾಗಿ ಪ್ರಾರ್ಥನೆಯಲ್ಲಿ ಆತನಿಗೇ ಮೊರೆಯಿಡಿರಿ.

3.ಆದರೂ ನೀವು ನಿಮ್ಮ ಜೀವನವನ್ನು ಸರಿಯಾದ ದಿಕ್ಕಿನಲ್ಲಿ ನಡೆಸಬಹುದು.

ನಿಮ್ಮ ಜೀವನವು ಹಡಗಿದ್ದ ಹಾಗಿದ್ದು ದೇವರು ನಿಮ್ಮನ್ನು ಅದಕ್ಕೆ ನಾವೀಕರನ್ನಾಗಿ ನೇಮಿಸಿದ್ದಾನೆ. ಯಾವುದೇ ಹಡಗು ತಾನೇ ತಾನಾಗಿ ತನ್ನ ತೀರವನ್ನು ತಲುಪುವುದಿಲ್ಲ. ಯಾವಾಗಲೂ ಅದನ್ನು ನಡೆಸುವ ನಾವಿಕನೊಬ್ಬನು ಅದಕ್ಕೆ  ಇದ್ದೇ ಇರುತ್ತಾನೆ.

ಎಂತದ್ದೇ ಬಲವಾದ ಹುಚ್ಚು ಗಾಳಿಯ ಮಧ್ಯದಲ್ಲೂ ಸಹ ನಾವಿಕನು ತಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂದು ಹಾಗೂ ಹೇಗೆ ಹೋಗಬೇಕು ಎಂಬುದನ್ನು ತಿಳಿದವನಾಗಿರುತ್ತಾನೆ.

ಮೂರು ಸಂಗತಿಗಳು ನಿಮ್ಮ ಹಡಗನ್ನು ಸಾಗಿಸಲು ನಿಮಗೆ ಸಹಾಯ ಮಾಡುತ್ತವೆ.

  1. ದರ್ಶನಗಳು
  2. ನಿರೀಕ್ಷೆ
  3. ಅರಿಕೆ
ಅರಿಕೆಗಳು
"‭ನಾನು ಕ್ರಿಸ್ತನಲ್ಲಿ ನೂತನಸೃಷ್ಟಿಯಾದವನು/ಯಾದವಳು. ಇಗೋ, ಪೂರ್ವಸ್ಥಿತಿ ಹೋಗಿ ಎಲ್ಲಾ ನೂತನವಾಯಿತು.(2 ಕೊರಿಂಥದವರಿಗೆ‬ ‭5:17‬)ನಾನು ಕ್ರಿಸ್ತನಲ್ಲಿನ ನನ್ನ ಉದ್ದೇಶವನ್ನು ನೆರವೇರಿಸುವೆನು.ಆಮೆನ್.


Join our WhatsApp Channel


Most Read
● ದಿನ 30:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಇನ್ನೂ ಯಾವುದಕ್ಕಾಗಿ ಕಾಯುತ್ತಿದ್ದೀರಿ?
● ಮೂರು ನಿರ್ಣಾಯಕ ಪರೀಕ್ಷೆಗಳು
● ಪರಿಸ್ಥಿತಿಯ ದಯೆಯಲ್ಲಿ ಇರಬೇಡಿರಿ
● ಸಭೆಯಲ್ಲಿ ಐಕ್ಯತೆಯನ್ನು ಕಾಪಾಡಿಕೊಳ್ಳುವುದು
● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.
● ನಂಬತಕ್ಕ ಸಾಕ್ಷಿ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್