english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ನಡೆಯುವುದನ್ನು ಕಲಿಯುವುದು
ಅನುದಿನದ ಮನ್ನಾ

ನಡೆಯುವುದನ್ನು ಕಲಿಯುವುದು

Friday, 3rd of May 2024
3 1 588
Categories : ಆಧ್ಯಾತ್ಮಿಕ ನಡಿಗೆ (Spiritual Walk)
"ನಾನೇ ಎಫ್ರಾಯೀವಿುಗೆ ನಡೆದಾಟವನ್ನು ಕಲಿಸಿದೆನು; ಅದನ್ನು ಕೈಯಲ್ಲಿ ಎತ್ತಿಕೊಂಡೆನು; ತನ್ನನ್ನು ಸ್ವಸ್ಥಮಾಡಿದವನು ನಾನೇ ಎಂದು ಅದಕ್ಕೆ ತಿಳಿಯಲಿಲ್ಲ."(‭‭ಹೋಶೇಯ‬ ‭11:3‬ ).

ನಮ್ಮ ಜೀವಿತದಲ್ಲಿ ಆಳವಾದ ಬದಲಾವಣೆ ಕಾಣಬೇಕೆಂದರೆ ನಾವು ಪವಿತ್ರಾತ್ಮನಿಗೆ ಅನುಸಾರವಾಗಿ ನಡೆಯುವುದನ್ನು (ಬದುಕುವುದನ್ನು) ಕಲಿಯುವಂತದ್ದು ಬಹಳ ಮುಖ್ಯವಾದ ಅಂಶವಾಗಿದೆ. ನಾವು ಹೇಗೆ ಈ ಲೋಕದಲ್ಲಿ ಬದುಕಬೇಕೆಂದು ಕಲಿಯುತ್ತೇವೆಯೋ ಹಾಗೆಯೇ ದೇವರ ಲೋಕದಲ್ಲಿಯೂ ಹೇಗೆ ಆತ್ಮೀಕವಾಗಿ ನಡೆಯಬೇಕೆಂಬುದನ್ನು ಕಲಿತುಕೊಳ್ಳಬೇಕು. ಹೇಗೆ ಭೌತಿಕವಾಗಿ ಕಲಿತೆವೋ ಹಾಗೆಯೇ ಆತ್ಮಿಕವಾಗಿಯೂ ಕಲಿಯಬೇಕು. ನಮ್ಮ ತಂದೆ ತಾಯಿಗಳು ನಮಗೆ ಭೌತಿಕವಾಗಿ ಹೇಗೆ ನಡೆಯಬೇಕೆಂದು ಕಲಿಸಿಕೊಟ್ಟರು. ಹಾಗೆಯೇ  ದೇವರ ಆತ್ಮನು ನಾವು ಆತ್ಮಿಕವಾಗಿ ಹೇಗೆ ನಡೆಯಬೇಕೆಂದು ನಮಗೆ  ಕಲಿಸಿಕೊಡುತ್ತಾನೆ.

ನಾವು ದೇವರನ್ನು ಮೆಚ್ಚಿಸುವ ಮಾರ್ಗದಲ್ಲಿ ಬೆಳೆಯಬೇಕೆಂದರೆ, ನಾವು ಆತನ ಜ್ಞಾವನ್ನು ಕುರಿತಾದ  ವಿಚಾರದಲ್ಲಿ ಬೆಳೆಯಬೇಕಾಗುತ್ತದೆ. ಅದಕ್ಕಾಗಿಯೇ ಅಪೋಸ್ತಲನಾದ ಪೌಲನು ಸಭೆಯ ಸದಸ್ಯರಿಗಾಗಿ ಹೀಗೆ ಪ್ರಾರ್ಥಿಸಿದನು.....
"ಆದಕಾರಣ ನಾವು ನಿಮ್ಮ ಸುದ್ದಿಯನ್ನು ಕೇಳಿದ ದಿವಸದಿಂದ ನಿಮಗೋಸ್ಕರ ಪ್ರಾರ್ಥಿಸುವದನ್ನು ಬಿಡದೆ ನೀವು ಸಕಲ ಆತ್ಮೀಯ ಜ್ಞಾನವನ್ನೂ ಗ್ರಹಿಕೆಯನ್ನೂ ಹೊಂದಿ ಕರ್ತನ ಚಿತ್ತದ ವಿಷಯವಾದ ತಿಳುವಳಿಕೆಯಿಂದ ತುಂಬಿಕೊಂಡು ಆತನಿಗೆ ಯೋಗ್ಯರಾಗಿ ನಡೆದು ಎಲ್ಲಾ ವಿಧದಲ್ಲಿ ಆತನನ್ನು ಸಂತೋಷಪಡಿಸುವವರಾಗಿರಬೇಕೆಂತಲೂ ನೀವು ಸಕಲ ಸತ್ಕಾರ್ಯವೆಂಬ ಫಲವನ್ನು ಕೊಡುತ್ತಾ ದೇವಜ್ಞಾನದಿಂದ ಅಭಿವೃದ್ಧಿಯಾಗುತ್ತಿರಬೇಕೆಂತಲೂ... "(ಕೊಲೊಸ್ಸೆಯವರಿಗೆ‬ ‭1:9‭-‬10‬)

ಸತ್ಯವೇದವನ್ನು ನಿಮ್ಮ ಬೌದ್ಧಿಕ ಜ್ಞಾನಾರ್ಜನೆಗಾಗಿ ಮಾತ್ರ ಬಳಸಬೇಡಿರಿ. ಬದಲಾಗಿ ನಿಮ್ಮ ಮನಸ್ಸನ್ನು ನೂತನ ಗೊಳಿಸಲು ಅದಕ್ಕೆ ಅನುಮತಿಸಿ.
 ಕರ್ತನೊಂದಿಗೆ ನಡೆಯುವುದರ ಮತ್ತೊಂದು ಗುಣಾತಿಶಯವೇನೆಂದರೆ ಅದು ಕಲಿಯುವ ಹೃದಯವನ್ನು ಹೊಂದಿರುವಂತದ್ದಾಗಿದೆ. ಇದು ನಮಗೆ ಕರ್ತನಿಂದ ಈಗಾಗಲೇ ನಾವು ಹೊಂದಿಕೊಂಡಿರುವಂತದ್ದನ್ನು ನಾವು ಅನುದಿನದ ದಿನಚರಿಯಲ್ಲಿ ಅಳವಡಿಸಿಕೊಂಡು ನಡೆಯಲು ನಮಗೆ ಸಹಾಯ ಮಾಡುತ್ತದೆ.

ಫರಿಸಾಯರ  ದೊಡ್ಡ ಪತನಕ್ಕೆ ಕಾರಣವೇನೆಂದರೆ ಅವರು ದೇವರ ಕುರಿತು ತಿಳಿಯಬಹುದಾದ ಎಲ್ಲಾ ವಿಚಾರವನ್ನು  ತಿಳಿದುಕೊಂಡಿದ್ದೇವೆ ಎಂದು ನಂಬಿದ್ದದ್ದಾದ್ದಾಗಿದೆ. ಈ ಕಾರಣದಿಂದಾಗಿ ಅವರು ತಮ್ಮ ಆತ್ಮಿಕ ಬೆಳವಣಿಗೆಯಲ್ಲಿ ನಿಶ್ಚಲವಾದ ಮನಸ್ಥಿತಿ ಹೊಂದಿದವರಂತೆ ಬಾಳುತ್ತಿದ್ದರು. ಕರ್ತನಾದ ಯೇಸು ಹೇಳುವುದೇನೆಂದರೆ ‭‭ "ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನು ಶಿಶುಭಾವದಿಂದ ದೇವರ ರಾಜ್ಯವನ್ನು ಅಂಗೀಕರಿಸುವದಿಲ್ಲವೋ ಅವನು ಅದರಲ್ಲಿ ಸೇರುವದೇ ಇಲ್ಲ ಎಂದು.." (ಮಾರ್ಕ‬ ‭10:15‬)

ನಾವು ಯಾವ ಹಂತಕ್ಕೆ ತಲುಪಿದ್ದರೂ ಸರಿಯೇ, ಇನ್ನೂ  ಹೆಚ್ಚಾಗಿ ಹೊಂದಿಕೊಳ್ಳಲು ನಾವು ಕಲಿಯುವ ಹೃದಯವನ್ನು ಹೊಂದಿರಬೇಕಷ್ಟೆ.
ಪ್ರಾರ್ಥನೆಗಳು
ತಂದೆಯೇ, ನನ್ನೆಲ್ಲಾ ಹೆಮ್ಮೆಯನ್ನು -ಅಹಂಕಾರವನ್ನು ಕ್ಷಮಿಸು. ಕಲಿಯುವಿಕೆಯ ಹೃದಯವನ್ನು ನಿನ್ನಿಂದ ಯೇಸು ನಾಮದಲ್ಲಿ ಬೇಡುತ್ತೇನೆ ತಂದೆಯೇ.ಆಮೆನ್.


Join our WhatsApp Channel


Most Read
● ಕರ್ತನಾದ ಯೇಸುವಿನ ಮುಖಾಂತರ ಕೃಪೆ
● ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟ -3
● ಅಶ್ಲೀಲತೆಯಿಂದ ಬಿಡುಗಡೆ ಕಡೆಗಿನ ಪಯಣ
● ದೇವರನ್ನು ಸ್ತುತಿಸಲು ಇರುವ ಸತ್ಯವೇದಕ್ಕನುಸಾರವಾದ ಕಾರಣಗಳು 
● ಯಜ್ಞವೇದಿಯ ಮೇಲೆ ಬೆಂಕಿಯನ್ನು ಪಡೆಯುವುದು ಹೇಗೆ?
● ದಿನ 13:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಹೊಸ ಒಡಂಬಡಿಕೆಯ ನಡೆದಾಡುವ ದೇವಾಲಯ.
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್