english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಬೀಜದ ಕುರಿತ ಒಂದು ಆಘಾತಕಾರಿ ಸತ್ಯ.
ಅನುದಿನದ ಮನ್ನಾ

ಬೀಜದ ಕುರಿತ ಒಂದು ಆಘಾತಕಾರಿ ಸತ್ಯ.

Friday, 6th of June 2025
1 1 63
Categories : ಬೀಜದ ಶಕ್ತಿ (Power of Seed)
"ಇನ್ನೂ ಆತನು ಅವರಿಗೆ ಹೇಳಿದ್ದು - ಒಬ್ಬನು ಭೂವಿುಯಲ್ಲಿ ಬೀಜವನ್ನು ಹಾಕಿ ರಾತ್ರಿ ಮಲಗುತ್ತಾ ಹಗಲು ಎದ್ದಿರುತ್ತಾ ಇರಲು ಅವನಿಗೆ ತಿಳಿಯದ ರೀತಿಯಲ್ಲಿ ಆ ಬೀಜವು ಹುಟ್ಟಿ ಬೆಳೆಯುವದು. ಇದರಂತೆ ದೇವರ ರಾಜ್ಯ". 
(ಮಾರ್ಕ 4:26-27) 

ದೇವರ ವಾಕ್ಯವು ನಮ್ಮ ಹೃದಯಗಳಲ್ಲಿ ನೆಟ್ಟು ಬೆಳೆದು ಫಲ ನೀಡಬೇಕಾದ ಒಂದು ಬೀಜಕ್ಕೆ ಹೋಲಿಕೆಯಾಗಿದೆ  (ಲೂಕ 8:11). ಒಂದು ಬೀಜವು ನೆಲದಲ್ಲಿ ಯಾವುದೇ ಅಡೆತಡೆ ಇಲ್ಲದೇ ಉಳಿದುಕೊಳ್ಳಬೇಕಾದಂತೆಯೇ, ದೇವರ ವಾಕ್ಯಗಳಲ್ಲಿರುವ ಆತನ ವಾಗ್ದಾನಗಳ ಮೇಲೆ ನಂಬಿಕೆ ಮತ್ತು ಭರವಸೆಯನ್ನು ಇಡುವ ಮೂಲಕ ನಮ್ಮ ಜೀವನದಲ್ಲಿ ದೇವರವಾಕ್ಯವನ್ನು ಬೇರೂರಲು ನಾವು ಅನುಮತಿಸಬೇಕು. ದೇವರ ವಾಕ್ಯವು ಆತನ ಉದ್ದೇಶಗಳನ್ನು ಸಾಧಿಸದೇ  ಆತನ ಬಳಿಗೆ ವ್ಯರ್ಥವಾಗಿ ಹಿಂತಿರುಗುವುದಿಲ್ಲ. ಎಂದು ಸತ್ಯವೇದ ನಮಗೆ ಹೇಳುತ್ತದೆ (ಯೆಶಾಯ 55:11).

ವಾಕ್ಯದ ಪರಿವರ್ತಕ ಶಕ್ತಿಯನ್ನು ಅನುಭವಿಸಲು, ನಾವು ಅದಕ್ಕೆ ನಮ್ಮ ಹೃದಯದಲ್ಲಿ ಕಾರ್ಯ ಮಾಡಲು ಸಮಯ ಮತ್ತು ಸ್ಥಳವನ್ನು ನೀಡಬೇಕು. ಆದಾಗ್ಯೂ, ಪ್ರತಿದಿನ ಕೆಲವು ನಿಮಿಷಗಳ ಕಾಲ ಸತ್ಯವೇದವನ್ನು ಅನ್ನು ಓದುವುದಷ್ಟೇ  ಸಾಕಾಗುವುದಿಲ್ಲ. ನಮ್ಮ ಆಲೋಚನೆಗಳು, ಮಾತುಗಳು ಮತ್ತು ಕ್ರಿಯೆಗಳನ್ನು ದೇವರ ವಾಕ್ಯದ ಬೋಧನೆಗಳೊಂದಿಗೆ ಸಮನ್ವಯಗೊಳಿಸಲು ನಾವು ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡಬೇಕು. ಯಾಕೋಬ 1:22 ನಮಗೆ ನೆನಪಿಸುವಂತೆ, ನಾವು ಕೇವಲ ವಾಕ್ಯವನ್ನು ಕೇಳುವವರಾಗಿರದೆ, ಅದನ್ನು ಮಾಡುವವರಾಗಿಯೂ ಇರಬೇಕು. ನಾವು ವಾಕ್ಯದಲ್ಲಿ ಸ್ವಲ್ಪ ಸಮಯ ಕಳೆದರೂ ಉಳಿದ ಸಮಯವನ್ನು ಅದರ ಬೋಧನೆಗಳಿಗೆ ವಿರುದ್ಧವಾಗಿ ಜೀವಿಸುತ್ತಾ ಕಳೆದರೆ, ಅದು ಬೆಳೆಯುವ ಮೊದಲೇ  ನಾವು ಮೂಲಭೂತವಾಗಿ ಆ ಬೀಜವನ್ನು ಅಗೆದು ತೆಗೆಯುತ್ತಿದ್ದೇವೆ ಎಂದರ್ಥ.

ಉದಾಹರಣೆಗೆ, ನೀವು ಪ್ರತಿದಿನ ಬೆಳಿಗ್ಗೆ ಐದು ನಿಮಿಷಗಳನ್ನು ವಾಕ್ಯದಲ್ಲಿ ಕಳೆಯುವಾಗ , ಇತರರೊಂದಿಗೆ ದಯೆಯಿಂದ ಮಾತನಾಡುವ ಮಹತ್ವದ ಬಗ್ಗೆ ಓದುತ್ತೀರಿ ಎಂದು ಹೇಳೋಣ (ಎಫೆಸ 4:29). ಆದರೂ, ದಿನವಿಡೀ, ನೀವು ನಿರ್ದಯವಾದ  ಮಾತು ಮತ್ತು ಹರಟೆಯಲ್ಲಿ ತೊಡಗಿಸಿಕೊಳ್ಳುವುದನ್ನು ಮುಂದುವರಿಸುತ್ತೀರಿ ಎಂದಿಟ್ಟುಕೊಳ್ಳಿ. ಈ ರೀತಿಯ ನಡವಳಿಕೆಯು ನಿಮ್ಮ ಜೀವನದಲ್ಲಿ ವಾಕ್ಯವು ಕಾರ್ಯ ಮಾಡಲು  ಅಡ್ಡಿತಂದು  ಆತ್ಮೀಕ ಫಲದ ಬೆಳವಣಿಗೆಯನ್ನು ತಡೆಗಟ್ಟುತ್ತದೆ (ಗಲಾತ್ಯ 5:22-23). 

ಈ ಮಾದರಿಯನ್ನು ಎದುರಿಸಲು, ದೇವರ ವಾಕ್ಯದ ಕುರಿತು  ಧ್ಯಾನಿಸುವುದು ಅತ್ಯಗತ್ಯ. ಯೆಹೋಶುವ 1:8 ರಲ್ಲಿ ನಾವು ವಾಕ್ಯದಲ್ಲಿ ಬರೆಯಲಾದ ಎಲ್ಲವನ್ನೂ ಮಾಡಲು ಗಮನವಹಿಸುವಂತೆ ಹಗಲಿರುಳು ಆ ವಾಕ್ಯದ ಕುರಿತು ಧ್ಯಾನಿಸುವಂತೆ ಅದು ನಮ್ಮನ್ನು ಪ್ರೋತ್ಸಾಹಿಸುತ್ತದೆ. ನಾವು ದೇವರವಾಕ್ಯದಲ್ಲಿ ಕಂಡುಕೊಂಡ ಸತ್ಯಗಳ ಕುರಿತು ಆಳವಾಗಿ ಯೋಚಿಸುವಾಗ, ಅವು ನಮ್ಮ ಆಲೋಚನೆಗಳು, ಭಾವನೆಗಳು, ನಿರ್ಧಾರಗಳು ಮತ್ತು ಕ್ರಿಯೆಗಳ ಮೇಲೆ ಪ್ರಭಾವ ಬೀರಲು ನಾವು ಅವಕಾಶ ಮಾಡಿಕೊಡುವವರಾಗುತ್ತೇವೆ. 

ಮತ್ತಾಯ 13:3-9 ರಲ್ಲಿ ಇರುವ ಬಿತ್ತುವವನ ಸಾಮ್ಯವನ್ನು ಪರಿಗಣಿಸಿ. ಕರ್ತನಾದ ಯೇಸು ದೇವರ ವಾಕ್ಯಕ್ಕೆ ತೋರುವ  ವಿಭಿನ್ನ ಪ್ರತಿಕ್ರಿಯೆಗಳ ಕುರಿತು ಇಲ್ಲಿ ಬೋದಿಸುತ್ತಾನೆ. ಒಳ್ಳೆಯ ನೆಲದ ಮೇಲೆ ಬೀಳುವ ಬೀಜವು ವಾಕ್ಯವನ್ನು ಕೇಳುವ, ಅರ್ಥಮಾಡಿಕೊಳ್ಳುವ ಮತ್ತು ಫಲ ನೀಡುವವರನ್ನು ಪ್ರತಿನಿಧಿಸುತ್ತದೆ. ಒಳ್ಳೆಯ ನೆಲದಂತಾಗಲು, ನಾವು ವಾಕ್ಯವನ್ನು ಆಂತರಿಕಗೊಳಿಸಬೇಕು ಮತ್ತು ಅದು ನಮ್ಮ ದೈನಂದಿನ ಜೀವನದ ಮೇಲೆ ಪ್ರಭಾವ ಬೀರುವಂತೆ ಮಾಡಬೇಕು.

ಪ್ರತಿದಿನವೂ ದೇವರವಾಕ್ಯದಲ್ಲಿನ  ಒಂದು ನಿರ್ದಿಷ್ಟ ಸತ್ಯದ ಕುರಿತು ಆಲೋಚಿಸಲು ಸಮಯ ತೆಗೆದುಕೊಳ್ಳಿ. ಉದಾಹರಣೆಗೆ, ನಿಮ್ಮ ಬೆಳಗಿನ ಆರಾಧನೆಯ ಸಮಯದಲ್ಲಿ ದೇವರು ನಿಮ್ಮೊಂದಿಗೆ ಕ್ಷಮೆಯ ಕುರಿತು ಮಾತನಾಡಿದರೆ (ಮತ್ತಾಯ 6:14-15), ದಿನವಿಡೀ ಆ ಸತ್ಯವನ್ನು ನೆನಪಿಟ್ಟುಕೊಳ್ಳಲು ಮತ್ತು ಅದನ್ನು ಜೀವಿತದಲ್ಲಿ ಅಳವಡಿಸಿಕೊಳ್ಳಲು ನಿಮಗೆ ಸಹಾಯ ಮಾಡುವಂತೆ ಆತನನ್ನು ಬೇಡಿಕೊಳ್ಳಿ. ಕ್ಷಮೆಯ ಅಗತ್ಯವಿರುವ ಸಂದರ್ಭಗಳನ್ನು ನೀವು ಎದುರಿಸುವಾಗ, ವಾಕ್ಯವು ನೀವು  ಪ್ರತಿಕ್ರಿಯಿಸುವುದಕ್ಕೆ  ಮಾರ್ಗದರ್ಶನ ಮಾಡಲು ಅನುಮತಿಸಿ.

ಇನ್ನೂ ಹೆಚ್ಚಾಗಿ ಹೇಳಬೇಕೆಂದರೆ , "ಕಬ್ಬಿಣವು ಕಬ್ಬಿಣವನ್ನು ಹರಿತಗೊಳಿಸುವಂತೆ, ಮಿತ್ರನು ಮಿತ್ರನನ್ನು ಹರಿತಗೊಳಿಸುತ್ತಾನೆ" ಎಂದು ಜ್ಞಾನೋಕ್ತಿ 27:17 ಹೇಳುವಂತೆ, ದೈವಿಕ ಪ್ರಭಾವಗಳಿರುವ ಸ್ನೇಹಿತರಿಂದ  ನಿಮ್ಮನ್ನು ಸುತ್ತುವರೆದಿರುವುದು ಅತ್ಯಗತ್ಯ. ಇತರ ವಿಶ್ವಾಸಿಗಳೊಂದಿಗೆ ಸಹವಾಸದಲ್ಲಿ ತೊಡಗಿಸಿಕೊಳ್ಳುವುದು ದೇವರವಾಕ್ಯದ ಸತ್ಯಗಳನ್ನು ಬಲಪಡಿಸಲು ಮತ್ತು ನಿಮ್ಮ ನಂಬಿಕೆಯನ್ನು ಜೀವಂತವಾಗಿರಿಸಿಕೊಳ್ಳಲು ನೀವು ಶ್ರಮಿಸುವಾಗ ಬದ್ಧತೆಯನ್ನು ಒದಗಿಸಲು ಸಹಾಯ ಮಾಡುತ್ತದೆ. 

ನಿಮ್ಮ ಕ್ರಿಯೆಗಳಲೆಲ್ಲಾ ದೇವರ ವಾಕ್ಯವೇ  ಪ್ರತಿಬಿಂಬಿಸುವಂತೆ ಮಾಡಲು  ಪ್ರಜ್ಞಾಪೂರ್ವಕವಾದ ಪ್ರಯತ್ನ ಮಾಡಿ ಎಂದು  ಕೊಲೊಸ್ಸೆ 3:17 ಸಲಹೆ ನೀಡುತ್ತದೆ ಇದರರ್ಥ ನಮ್ಮ ಜೀವನದ ಪ್ರತಿಯೊಂದು ಅಂಶವು ದೇವರ ವಾಕ್ಯ ಮತ್ತು ಆತನ ಚಿತ್ತದೊಂದಿಗೆ ಹೊಂದಿಕೆಯಾಗಬೇಕು. ಆದ್ದರಿಂದ, ನಮ್ಮ ಜೀವನದಲ್ಲಿ ದೇವರ ವಾಕ್ಯದ ಸಂಪೂರ್ಣ ಮಹಿಮೆಯನ್ನು ಅನುಭವಿಸಲು, ನಾವು ಕೇವಲ ಜ್ಞಾನವನ್ನು ಪಡೆಯುವುದನ್ನು ಬಿಟ್ಟು ಇನ್ನೂ ಮುಂದೆ ಹೋಗಬೇಕು. ನಾವು ವಾಕ್ಯವನ್ನು ಧ್ಯಾನಿಸಬೇಕು, ಅದು ನಮ್ಮ ಆಲೋಚನೆಗಳು ಮತ್ತು ಕ್ರಿಯೆಗಳನ್ನು ರೂಪಿಸಲು ಅನುವು ಮಾಡಿಕೊಡುತ್ತದೆ. ಹಾಗೆ ಮಾಡುವುದರಿಂದ, ನಾವು ನಿಜವಾಗಿಯೂಇನ್ನೂ ಹೆಚ್ಚಾಗಿ  ಕ್ರಿಸ್ತನ ಸಾರೂಪ್ಯಕ್ಕೆ  ಸಾಗಬಹುದು (ರೋಮನ್ನರು 8:29) ಮತ್ತು ದೇವರು ನಮ್ಮ ಜೀವನದಲ್ಲಿ ಬಯಸುವ ಆತ್ಮೀಕ ಫಲವನ್ನು ಹೊಂದಬಹುದು (ಯೋಹಾನ 15:5).

"ನಿನ್ನ ವಾಕ್ಯವೇ  ನನ್ನ ಕಾಲಿಗೆ ದೀಪ ಮತ್ತು ನನ್ನ ದಾರಿಗೆ ಬೆಳಕು."ಎನ್ನುವ ಕೀರ್ತನೆ 119:105 ಅನ್ನು ನೆನಪಿಡಿ. ಕತ್ತಲೆಯಿಂದ ತುಂಬಿರುವ ಈ ಲೋಕದಲ್ಲಿ ದೇವರ ವಾಕ್ಯವು ನಿಮ್ಮ ಮಾರ್ಗದರ್ಶನ ನೀಡುವ  ಬೆಳಕಾಗಿರಲಿ, ಆಗ ನೀವು ನಿಮ್ಮ ಜೀವನದಲ್ಲಿ ರೂಪಾಂತರ ಮತ್ತು ಬೆಳವಣಿಗೆಯನ್ನು ನೋಡುವಿರಿ. 

Bible Reading: Ezra 6-7
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನಮ್ಮ ಜೀವನದಲ್ಲಿ ಮಾರ್ಗದರ್ಶನ ನೀಡುವ ಬೆಳಕಾಗಿ ಕಾರ್ಯನಿರ್ವಹಿಸುವ ನಿಮ್ಮ ವಾಕ್ಯದ ಕೃಪಾವರಕ್ಕಾಗಿ ಸ್ತೋತ್ರ. ನಾವು ವಾಕ್ಯವನ್ನು ಓದುವುದು  ಮಾತ್ರವಲ್ಲದೆ ಅದರ ಕುರಿತು ನಿಜವಾಗಿಯೂ ಧ್ಯಾನಿಸುವಂತೆಯೂ  ಮತ್ತು ಅದರ ಬೋಧನೆಗಳನ್ನು ನಮ್ಮ ಆಲೋಚನೆಗಳು, ಮಾತುಗಳು ಮತ್ತು ಕಾರ್ಯಗಳಲ್ಲಿ  ಅಳವಡಿಸಿಕೊಳ್ಳಲು ಯೇಸುನಾಮದಲ್ಲಿ ನಮಗೆ ಸಹಾಯ ಮಾಡಿ. ಆಮೆನ್.


Join our WhatsApp Channel


Most Read
●  ದಿನ 24:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಮನ್ನಾ, ಕಲ್ಲಿನ ಹಲಗೆಗಳು ಮತ್ತು ಆರೋನನ ಕೋಲು
● ದಿನ 13:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ನಿಮ್ಮ ಬಿಡುಗಡೆಯನ್ನು ಕಾಪಾಡಿಕೊಳ್ಳುವುದು ಹೇಗೆ
● ಕರ್ತನೇ, ನಾನು ಏನು ಮಾಡಬೇಕೆಂದು ನೀನು ಬಯಸುತ್ತೀ?
● ಆಲಸ್ಯದ ದೈತ್ಯನನ್ನು ಕೊಲ್ಲುವುದು
● ಆರಾಧನೆಯನ್ನು ಜೀವನಶೈಲಿಯನ್ನಾಗಿ ಮಾಡಿಕೊಳ್ಳುವುದು.
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್