ಅನುದಿನದ ಮನ್ನಾ
1
0
69
ಪಂಚಾಶತ್ತಾಮ ದಿನಕ್ಕಾಗಿ ಕಾಯುವುದು. ವರ್ಗಗಳು : ಪಂಚ ಶತ್ತಾಮ ದಿನ.
Saturday, 7th of June 2025
Categories :
ಪಂಚಾಶತ್ತಮ (Pentecost)
ಆದಿ ಶಿಷ್ಯರೆಲ್ಲಾ ಅತ್ಯಂತ ಶ್ರೇಷ್ಠ ಗುರುವಿನ ಅಡಿಯಲ್ಲಿ ತರಬೇತಿ ಪಡೆದಿದ್ದರು. ಆತನು ಶಿಲುಬೆಗೇರಿಸಲ್ಪಟ್ಟದ್ದನ್ನು ಅವರು ಕಣ್ಣಾರೆ ನೋಡಿದ್ದರು ಆದರೂ ಈಗ ಆತನು ಅವರ ಮಧ್ಯದಲ್ಲಿ ಜೀವಂತವಾಗಿ ತನ್ನನ್ನು ಪ್ರಕಟ ಪಡಿಸಿಕೊಂಡಿದ್ದನು. ಇದೆಲ್ಲಾ ಕಂಡ ಆತನ ಶಿಷ್ಯರು ಅದೆಷ್ಟು ಉತ್ಸುಕತೆಯಿಂದ ಕೂಡಿದ್ದಿರಬೇಕು?
ಅವರು ಹೋಗಿ ತಮಗೆ ತಿಳಿದಿರುವ ಎಲ್ಲರಿಗೂ ಯೇಸು ಕ್ರಿಸ್ತನೇ ನಿಜವಾಗಿಯೂ ಕರ್ತನು ಮತ್ತು ಮೆಸ್ಸೀಯನೆಂದು ಹೇಳಲು ಎಷ್ಟು ತವಕದಿಂದ ಆಶಿಸಿರಬೇಕು?.
ಆದರೂ ಕರ್ತನು ಅವರಿಗೆ, " ಇಗೋ ನನ್ನ ತಂದೆಯು ವಾಗ್ದಾನಮಾಡಿದ್ದನ್ನು ನಿಮಗೆ ಕಳುಹಿಸಿಕೊಡುತ್ತೇನೆ. ದೇವರು ಮೇಲಣ ಲೋಕದಿಂದ ನಿಮಗೆ ಶಕ್ತಿಯನ್ನು ಹೊದಿಸುವ ತನಕ ಈ ಪಟ್ಟಣದಲ್ಲೇ ಕಾದುಕೊಂಡಿರ್ರಿ ಎಂದು ಹೇಳಿದನು. " (ಲೂಕ 24:49)
ಅವರು ಪುನರುತ್ಥಾನಗೊಂಡ ಕರ್ತನ ಬಗ್ಗೆ ಜಗತ್ತಿಗೆ ಹೇಳಲು ಎಂತಹ ಉಮ್ಮಸ್ಸು ಮತ್ತು ಉತ್ಸಾಹದಿಂದಿದ್ದರೂ, ಯೇಸು ಅವರನ್ನು ಎಚ್ಚರಿಸಿ ಕಾರ್ಯವನ್ನು ಪೂರ್ಣಗೊಳಿಸಲು ಅವರ ಜ್ಞಾನ ಮತ್ತು ಶಕ್ತಿಯನ್ನು ಅವಲಂಬಿಸದೆ ಪವಿತ್ರಾತ್ಮನ ಶಕ್ತಿಯು ಅವರನ್ನು ಆವರಿಸುವವರೆಗೆ ಯೆರುಸಲೆಮ್ನಲ್ಲಿಯೇ ಕಾಯುವಂತೆ ಪ್ರೋತ್ಸಾಹಿಸಿದನು.
ಯಾರೂ ಸಹ ಕಾಯುವುದನ್ನು ಇಷ್ಟಪಡುವುದಿಲ್ಲ ಮತ್ತು ಇಂದಿನ ಸಮಾಜದಲ್ಲಿ ಕಾಯುವುದನ್ನು ಸಮಯ ವ್ಯರ್ಥ ಮಾಡುವುದು ಎಂದು ಪರಿಗಣಿಸುತ್ತಾ ಅದೊಂದು ಅನುತ್ಪಾದಕ ಸಮಯವೆಂದು ನೀವು ಅದನ್ನು ಹೆಸರಿಸಬಹುದು . ಬಹುತೇಕ ಎಲ್ಲವನ್ನೂ ತಕ್ಷಣವೇ ಮಾಡಲು ಸಾಧ್ಯವಾಗಿರುವಾಗ ಕಾಯುವುದು ಏಕೆ ಎಂಬುದು ಮಾನವನ ಮನಸ್ಸಿನ ನೈಸರ್ಗಿಕ ತರ್ಕ.ಆದರೆ ದೇವರ ದೈವಿಕ ಜ್ಞಾನದಲ್ಲಿ ಕಾಯುವುದೇ ಬಲವಾಗಿದೆ.
ಪ್ರಾರ್ಥನೆ ಮತ್ತು ಆರಾಧನೆಯಲ್ಲಿ ಕರ್ತನಿಗಾಗಿ ಕಾಯುವಂತದ್ದು ವಿಧೇಯತೆಯಿಂದ ಹುಟ್ಟುವ ಶರಣಾಗತಿಯ ಕ್ರಿಯೆಯಾಗಿದೆ. ದೇವರ ವಾಕ್ಯವನ್ನು ಧ್ಯಾನಿಸುತ್ತಾ, ಆರಾಧನೆ ಮತ್ತು ಪ್ರಾರ್ಥನೆಯಲ್ಲಿ ಕರ್ತನಿಗಾಗಿ ಕಾಯುವುದು ಶರೀರದ ಬಯಕೆಗಳನ್ನು ಕೊಲ್ಲುತ್ತದೆ. ಶಿಷ್ಯರು ಪಂಚಾಶತ್ತಾಮ ಹಬ್ಬವನ್ನು ಅನುಭವಿಸುವುದರ ನಿರ್ಣಾಯಕ ಅಂಶ ಇದುವೇ ಆಗಿತ್ತು ಮತ್ತು ಇಂದಿಗೂ ಸಹ ಇದು ನಿಜವಾಗಿದೆ.
"ಯುವಕರೂ ದಣಿದು ಬಳಲುವರು, ತರುಣರೂ ಸೊರಗಿ ಮುಗ್ಗರಿಸುವರು. ಯೆಹೋವನನ್ನು ( ಯೆಹೋವನಿಗಾಗಿ ಕಾಯುವವರೋ)ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು [ಏರುವರು]; ಓಡಿ ದಣಿಯರು, ನಡೆದು ಬಳಲರು".ಎಂದು ಯೆಶಾಯ 40:30-31 ರಲ್ಲಿ ದೇವರವಾಕ್ಯ ಹೇಳುತ್ತದೆ.
ಕಾಯುವಿಕೆಗೆ ಹೀಬ್ರೂ ಪದ 'ಕ್ವಾ' - ಇದರ ಅಕ್ಷರಶಃ ಅರ್ಥ ಸಮಯ ತೆಗೆದುಕೊಳ್ಳುವುದು ಅಥವಾ ಆತನೊಂದಿಗೆ ನಿಮ್ಮನ್ನು ( ಆತನು ನಿಮ್ಮೊಳಗೆ ನೀವು ಆತನೊಳಗೆ )ಆವರಿಸಿಕೊಂಡುಆತನ ಸನ್ನಿಧಿಯಲ್ಲಿ ಕಾಲಕಳೆಯುವುದು ಎಂದು. ಅದು ಎಷ್ಟು ಆಸಕ್ತಿದಾಯಕವಲ್ಲವೇ!
"ನಿನ್ನ ಸತ್ಯಾನುಸಾರವಾಗಿ ನನ್ನನ್ನು ನಡಿಸುತ್ತಾ ಉಪದೇಶಿಸು; ನೀನೇ ನನ್ನನ್ನು ರಕ್ಷಿಸುವ ದೇವರು; ಹಗಲೆಲ್ಲಾ ನಿನ್ನನ್ನೇ ಕಾಯುವವನಾಗಿದ್ದೇನೆ". ಎಂದು ಕೀರ್ತನೆ 25:5 ಹೇಳುತ್ತದೆ.
ಕಾಯುವ ಪ್ರಕ್ರಿಯೆಗೆ ಖಂಡಿತವಾಗಿಯೂ ಭರಿಸಬೇಕಾದ ಒಂದು ವೆಚ್ಚವಿದೆ ಮತ್ತು ಅದಕ್ಕಾಗಿಯೇ ಅನೇಕರು ಆ ಬೆಲೆಯನ್ನು ಭರಿಸಲು ಕಷ್ಟಪಡುತ್ತಾರೆ.
ಆದರೆ ಒಬ್ಬ ಮಹಾನ್ ದೇವರ ಮನುಷ್ಯನು ಒಮ್ಮೆ ಹೇಳಿದಂತೆ, "ದೇವರಿಗೆ ತೋರುವ ವಿಧೇಯತೆಯ ಶರಣಾಗತಿಯು ತೆತ್ತುವ ಬೆಲೆಗೆ ಯೋಗ್ಯವಾದದ್ದೇ."
Bible Reading: Ezra 8-10
ಪ್ರಾರ್ಥನೆಗಳು
ನಾನು ಕರ್ತನಿಗಾಗಿ ಕಾಯುತ್ತೇನೆ ಮತ್ತು ಆತನ ವಾಕ್ಯದಲ್ಲಿಯೇ ನಾನು ನನ್ನ ಭರವಸೆಯನ್ನು ಇಡುತ್ತೇನೆ. ನಾನು ಕರ್ತನಿಗಾಗಿ ಕಾಯುತ್ತೇನೆ ಮತ್ತು ಆತನ ಮಾರ್ಗವನ್ನು ಪಾಲಿಸುತ್ತೇನೆ. ಭೂಮಿಯನ್ನು ಬಾಧ್ಯತೆಯಾಗಿ ಪಡೆಯಲು ಆತನು ನನ್ನನ್ನು ಉನ್ನತೀಕರಿಸುವನು.
Join our WhatsApp Channel

Most Read
● ನಿಮ್ಮ ಜೀವನವನ್ನು ಬದಲಾಯಿಸಬೇಕೆಂದರೆ ಯಜ್ಞವೇಧಿಗೆ ಆದ್ಯತೆ ನೀಡಿ● ದಿನ 28:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದೇವರನ್ನು ಸ್ತುತಿಸಲು ಇರುವ ಸತ್ಯವೇದಕ್ಕನುಸಾರವಾದ ಕಾರಣಗಳು
● ದಿನ 20:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಪ್ರತಿಫಲಿಸಲು ಸಮಯ ತೆಗೆದುಕೊಳ್ಳುವುದು.
● ದೇವರ ಯೋಜನೆಯಲ್ಲಿರುವ ತಂತ್ರಗಾರಿಕೆಯ ಶಕ್ತಿ
● ಭವ್ಯಭವನದ ಹಿಂದಿರುವ ಮನುಷ್ಯ
ಅನಿಸಿಕೆಗಳು