english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಕಳೆದುಹೋಗಿದ್ದ ಕುರಿ ಸಿಕ್ಕ ಸಂತೋಷ
ಅನುದಿನದ ಮನ್ನಾ

ಕಳೆದುಹೋಗಿದ್ದ ಕುರಿ ಸಿಕ್ಕ ಸಂತೋಷ

Saturday, 18th of October 2025
2 1 132
Categories : ದೇವರ ಪ್ರೀತಿ (Love of God)
ನೂರು ಕುರಿಗಳನ್ನು ಹೊಂದಿರುವ ಕುರುಬನು, ಒಂದು ಕುರಿ ಕಾಣೆಯಾಗಿದೆ ಎಂದು ಅರಿತುಕೊಂಡು, ತೊಂಬತ್ತೊಂಬತ್ತು ಕುರಿಗಳನ್ನು ಅರಣ್ಯದಲ್ಲಿ ಬಿಟ್ಟು, ಕಳೆದುಹೋದದ್ದನ್ನು ಸಿಕ್ಕುವವರೆಗೂ ನಿರಂತರವಾಗಿ ಹುಡುಕುತ್ತಾನೆ. 
"ಅದೇನಂದರೆ - ನಿಮ್ಮೊಳಗೆ ಯಾವ ಮನುಷ್ಯನಾದರೂ ತನಗೆ ನೂರು ಕುರಿಗಳಿರಲಾಗಿ ಅವುಗಳಲ್ಲಿ ಒಂದು ಕಳೆದು ಹೋದರೆ ಅವನು ತೊಂಭತ್ತೊಂಭತ್ತನ್ನು ಅಡವಿಯಲ್ಲಿ ಬಿಟ್ಟು ಕಳೆದುಹೋದದ್ದು ಸಿಕ್ಕುವ ತನಕ ಅದನ್ನು ಹುಡುಕಿಕೊಂಡು ಹೋಗದೆ ಇದ್ದಾನೇ?"(ಲೂಕ 15:4).

ಇದು ದೇವರ ಹೃದಯ ಎಂಥದ್ದು ಎಂದು ಎದ್ದುಕಾಣುವ ಚಿತ್ರಣವನ್ನು ಚಿತ್ರಿಸುತ್ತದೆ - ಆ ಕುರುಬನಿಗೆ ಅದೆಷ್ಟು ಪ್ರೀತಿಯೆಂದರೆ ಪ್ರತಿಯೊಂದು ಕುರಿಯೂ ಅವನಿಗೆ ಅಮೂಲ್ಯವಾದುದು. "ಕರ್ತನೇ ನನ್ನ ಕುರುಬನು; ಹಾಗಾಗಿ ನನಗೆ ಕೊರತೆಯಾಗುವುದಿಲ್ಲ" (ಕೀರ್ತನೆ 23:1). ಎಂದು ಕೀರ್ತನೆಗಾರನು ನಮಗೆ ನೆನಪಿಸುತ್ತಾನೆ

ಇಲ್ಲಿ, ಕುರಿಗಳನ್ನು ಲೆಕ್ಕಿವಿರಿಸಿಕೊಂಡು ಅದನ್ನು ಪಾಲಿಸುವವನನ್ನು ಕುರುಬ ಎಂಬುದಾಗಿ ಕರೆಯುವುದು ಮಾತ್ರವಲ್ಲದೆ ಆತ್ಮಗಳ ಆರೈಕೆದಾರನಾಗಿ ಚಿತ್ರಿಸಿ ದೇವರು ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಇಟ್ಟಿರುವ ಅಳೆಯಲಾಗದ ಮೌಲ್ಯವನ್ನು ಎತ್ತಿ ತೋರಿಸುತ್ತದೆ. 

ಕುರುಬನು ಕಳೆದುಹೋಗಿದ್ದ ಆ ಕುರಿ ಮತ್ತೆ ಸಿಕ್ಕಿದಾಗ ಅವನು ಅದನ್ನು ಶಿಕ್ಷಿಸದೇ ಬದಲಾಗಿ ಅದನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಸಂತೋಷಪಡುತ್ತಾನೆ. ಈ ಕ್ರಿಯೆಯು ನಮ್ಮ ಹೊರೆಗಳನ್ನು ಹೊತ್ತುಕೊಂಡು ತನ್ನ ಪ್ರೀತಿಯಿಂದ ನಮ್ಮನ್ನು ಆವರಿಕೊಂಡ ಕ್ರಿಸ್ತನ ವಿಮೋಚನಾ ಕೃಪೆಯನ್ನು ಪ್ರತಿಬಿಂಬಿಸುತ್ತದೆ, "ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು."(ಮತ್ತಾಯ 11:28).

ಈ ಸಂತೋಷವನ್ನು ಅವನು ಒಬ್ಬನೇ ಅನುಭವಿಸದೇ; ಅದನ್ನು ಅವನ ಸ್ನೇಹಿತರು ಮತ್ತು ನೆರೆಹೊರೆಯವರೊಂದಿಗೂ ಹಂಚಿಕೊಳ್ಳುತ್ತಾನೆ. “ಮನೆಗೆ ಬಂದು ಸ್ನೇಹಿತರನ್ನೂ ನೆರೆಹೊರೆಯವರನ್ನೂ ಕೂಡಿಸಿ - ಕಳೆದುಹೋಗಿದ್ದ ಕುರಿ ಸಿಕ್ಕಿತು, ನನ್ನ ಸಂಗಡ ಸಂತೋಷಿಸಿರಿ ಎಂದು ಅವರಿಗೆ ಹೇಳುವನಲ್ಲವೇ."(ಲೂಕ 15:6). 

ಇದು ಮೌನವಾದ ಆಚರಣೆಯಲ್ಲ, ಬದಲಾಗಿ ಸಾರ್ವಜನಿಕ ಘೋಷಣೆಯಾಗಿದ್ದು, ಪಶ್ಚಾತ್ತಾಪಪಡುವ ಒಬ್ಬ ಪಾಪಿಗಾಗಿ ಪರಲೋಕದಲ್ಲಿ ಉಂಟಾಗುವ ಸಂತೋಷದ ಸಂಕೇತವಾಗಿದೆ. ನಮ್ಮ ಪರಲೋಕದ ತಂದೆಯು ಯಾರೊಬ್ಬರೂ ನಾಶವಾಗದೇ ಎಲ್ಲರೂ ಪಶ್ಚಾತ್ತಾಪಪಟ್ಟು ತನ್ನ ಬಳಿಗೆ ಬರಬೇಕೆಂದು ಬಯಸುವವನಾಗಿದ್ದಾನೆ (2 ಪೇತ್ರ 3:9).

ನಾವು ಪಾಪ ಮಾಡಿದಾಗ, ನಾವು ದಾರಿ ತಪ್ಪಿದಾಗ, ದಾರಿ ತಪ್ಪಿದ ಕುರಿಗಳಾಗುತ್ತೇವೆ. ಆದರೆ ನಮ್ಮ ಕುರುಬನಾದ ಯೇಸು ನಮ್ಮನ್ನು ಬಿಟ್ಟುಕೊಡುವುದಿಲ್ಲ. ಆತನ ಅನ್ವೇಷಣೆಯು ನಿರಂತರವಾದದ್ದು, ಆತನ ಪ್ರೀತಿ ಅಂತ್ಯವಿಲ್ಲದ್ದು. ರೋಮ 5:8 ರಲ್ಲಿ, ನಾವು ಇದರ ಕುರಿತ ಭರವಸೆಯನ್ನು ಕಂಡುಕೊಳ್ಳುತ್ತೇವೆ: “ ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣ ಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ." 

ಈ ದೃಷ್ಟಾಂತವು ದೇವರ ಮಿತಿಯಿಲ್ಲದ ಕರುಣೆಯನ್ನು ವಿವರಿಸುತ್ತದೆ, ಆದರೆ ಫರಿಸಾಯರು ಕರ್ತನಾದ ಯೇಸು ಪಾಪಿಗಳನ್ನು ಸ್ವೀಕರಿಸುತ್ತಾನೆ ಎಂದು ಗೊಣಗುತ್ತಿದ್ದರು. ಅವರ ಸ್ವ-ನೀತಿಯು ಪಶ್ಚಾತ್ತಾಪದ ಅಗತ್ಯಕ್ಕೆ ಅವರನ್ನು ಕುರುಡರನ್ನಾಗಿ ಮಾಡಿ, ನಮ್ಮ ಸ್ವ-ನೀತಿ ವರ್ತನೆಗಳ ಕುರಿತು ನಾವು ಎಚ್ಚರವಾಗಿದ್ದು ದೀನತೆಯಿಂದ ಆತನ ಕೃಪೆಯನ್ನು ಅಂಗೀಕರಿಸಿ ದೇವರ ಕೃಪೆಗಾಗಿ ನಮ್ಮ ನಿತ್ಯತ್ವದ ಅಗತ್ಯವನ್ನು ಗುರುತಿಸಿಕೊಳ್ಳಬೇಕೆಂದು ನಮಗೆ ನೆನಪಿಸುತ್ತದೆ. 

ಇಂದು, ಪ್ರತಿಯೊಂದು ಕುರಿಯನ್ನು ಗೌರವಿಸುವ, ಕಳೆದುಹೋದವುಗಳನ್ನು ಅವು ಸಿಗುವವರೆಗೂ ಹಿಂಬಾಲಿಸುವ ಪ್ರೀತಿಯ ಕುರುಬನನ್ನು ನಾವು ನೆನಪಿಸಿಕೊಳ್ಳೋಣ. ನಾವು ಪಡೆದಿರುವ ಕೃಪೆಗೆ ನಮ್ಮ ಹೃದಯಗಳು ಕೃತಜ್ಞತೆಯಿಂದ ಪ್ರತಿಧ್ವನಿಸಲಿ ಮತ್ತು ಕ್ರಿಸ್ತನ ವಿಮೋಚನಾ ಪ್ರೀತಿಯನ್ನು ಈ ಲೋಕದ ಕಳೆದುಹೋದ ಕುರಿಗಳೊಂದಿಗೆ ಹಂಚಿಕೊಳ್ಳುವ ಉತ್ಸಾಹಭರಿತ ಬಯಕೆಯಿಂದ ತುಂಬಿದ್ದು ಅವುಗಳನ್ನು ಕುರುಬನ ಅಪ್ಪುಗೆಗೆ ಹಿಂತಿರುಗಿಸಲಿ.

ಸ್ವಲ್ಪ ವರ್ಷಗಳ ಹಿಂದೆ ಯಾರಾದರೂ ಕ್ರಿಸ್ತನ ಪ್ರೀತಿಯನ್ನು ನನ್ನೊಂದಿಗೆ ಹಂಚಿಕೊಳ್ಳದೇ ಹೋಗಿದ್ದರೆ ಇದನ್ನು ನಾನು ಬರೆಯುತ್ತಲೇ ಇರಲಿಲ್ಲ ಮತ್ತು ನೀವು ಇದನ್ನು ಓದುತ್ತಿರಲಿಲ್ಲ. ಹಾಗಾಗಿ ಮುನ್ನಡೆಯಿರಿ  ಕರ್ತನು ನಿಮಗಾಗಿ ಏನು ಮಾಡಿದ್ದಾನೆಂದು ಪ್ರತಿದಿನ ಯಾರೊಂದಿಗಾದರೂ ಹಂಚಿಕೊಳ್ಳಿ. ಅವರು ತರುವ ಸುಗ್ಗಿ ಹೇಗಿರಬಹುದೆಂಬ ಕಲ್ಪನೆ ನಿಮಗಿಲ್ಲ.

Bible Reading: Matthew 25-26
ಪ್ರಾರ್ಥನೆಗಳು
ಪ್ರೀತಿಯುಳ್ಳ ಪರಲೋಕದ ತಂದೆಯೇ, ಕರ್ತನೇ, ನಿನ್ನ ಅಂತ್ಯವಿಲ್ಲದ ಪ್ರೀತಿಯಿಂದ ನಮ್ಮ ಹೃದಯಗಳನ್ನು ಬೆಳಗಿಸಿ. ನಮ್ಮ ಹೆಜ್ಜೆಗಳನ್ನು ಮಾರ್ಗದರ್ಶಿಸು, ಇದರಿಂದ ನಾವು ನಿನ್ನ ಕೃಪೆಯ ದಾರಿದೀಪಗಳಾಗಬಹುದು, ಕಳೆದುಹೋದ ಆತ್ಮಗಳನ್ನು ನಿನ್ನ ಅಪ್ಪುಗೆಗೆ ಹಿಂತಿರುಗಿಸಬಹುದು. ಪ್ರತಿ ದಿನಕ್ಕೂ ನಮ್ಮ ನಂಬಿಕೆಯನ್ನು ಯೇಸುನಾಮದಲ್ಲಿ ನೂತನ ಪಡಿಸು ಬಲಪಡಿಸು.ಆಮೆನ್.

Join our WhatsApp Channel


Most Read
● ಗೊಂದಲದ ಬಿರುಗಾಳಿಯ ನಡುವೆಯೂ ಇರಬೇಕಾದ ಧೃಡತೆ.
● ಆಲಸ್ಯದ ದೈತ್ಯನನ್ನು ಕೊಲ್ಲುವುದು
● ದೇವರ ರಾಜ್ಯಕ್ಕೆ ಹೋಗುವ ಮಾರ್ಗವನ್ನು ಆಲಂಗಿಸುವುದು.
● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
● ನಿಮ್ಮ ಮನೆಯಲ್ಲಿನ ವಾತಾವರಣವನ್ನು ಬದಲಾಯಿಸುವುದು -1
● ದಿನ 32:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಒಂದು ಗಂಟೆ ಹಾಗೂ ಒಂದು ದಾಳಿಂಬ ಹಣ್ಣು
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್