ದೇವರ ವಾಕ್ಯದ ವಿಷಯದಲ್ಲಿ ಕ್ರೈಸ್ತರಾದ ನಾವು ರಾಜಿ ಮಾಡಿಕೊಳ್ಳಬಾರದು ಎಂದು ಸತ್ಯವೇದ ಸ್ಪಷ್ಟವಾಗಿ ಹೇಳುತ್ತದೆ.
"ಯೆಹೋವನ ಧರ್ಮಶಾಸ್ತ್ರವನ್ನು ಅನುಸರಿಸಿ ಸದಾಚಾರಿಗಳಾಗಿ ನಡೆಯುವವರು ಧನ್ಯರು. ಆತನ ಕಟ್ಟಳೆಗಳನ್ನು ಕೈಕೊಂಡು ಸಂಪೂರ್ಣಮನಸ್ಸಿನಿಂದ ಆತನನ್ನು ಹುಡುಕುವವರು ಭಾಗ್ಯವಂತರು. ಅವರು ಆತನ ಮಾರ್ಗದಲ್ಲಿ ನಡೆಯುತ್ತಾರೆ; ಅನ್ಯಾಯಮಾಡುವದೇ (ರಾಜಿ ಮಾಡಿಕೊಳ್ಳುವುದೇ)ಇಲ್ಲ.
ನಿನ್ನ ನೇಮಗಳನ್ನು ಜಾಗರೂಕತೆಯಿಂದ ಕೈಕೊಂಡು ನಡಿಸಬೇಕೆಂದು ನೀನೇ ಆಜ್ಞಾಪಿಸಿರುತ್ತೀ.(ಕೀರ್ತನೆಗಳು 119:1-4)
ಸೊಲೊಮೋನನು ಭೂಮಿಯನ್ನು ಆಳಿದ ಮಹಾನ್ ಅರಸರಲ್ಲಿ ಒಬ್ಬನಾಗಿದ್ದನು ಆದರೆ ಅವನ ದೃಷ್ಟಿಗೆ ಅತ್ಯಲ್ಪವೆಂದು ತೋರುವ ರಾಜಿ ಮಾಡಿಕೊಳ್ಳುವಿಕೆಯು ಅವನಿಗೆ ದುಃಖಾಂತ್ಯ ತಂದಿತು. ಧರ್ಮೋಪದೇಶಕಾಂಡ 17:16-17 ರಲ್ಲಿ "ಅರಸನು ಕುದುರೆಯ ದಂಡನ್ನು ಕೂಡಿಸಿಕೊಳ್ಳಬಾರದು. ಕುದುರೆಗಳನ್ನು ಸಂಪಾದಿಸಿಕೊಳ್ಳುವದಕ್ಕಾಗಿ ತನ್ನ ಪ್ರಜೆಗಳನ್ನು ಐಗುಪ್ತದೇಶಕ್ಕೆ ಹೋಗಗೊಡಿಸಬಾರದು. ಏಕೆಂದರೆ ನೀವು ಇನ್ನು ಆ ದೇಶಕ್ಕೆ ಹೋಗಲೇಕೂಡದೆಂದು ಯೆಹೋವನು ಆಜ್ಞಾಪಿಸಿದ್ದನು
ಏಕೆಂದರೆ ಇಸ್ರಾಯೇಲಿನ ರಾಜರು ತಾವು ಅಜೇಯರಾಗಿ ಉಳಿಯಲು ಕುದುರೆಗಳು ಮತ್ತು ರಥಗಳ ಮೇಲೆ ತಮ್ಮ ಭರವಸೆಯನ್ನು ಇಡದೇ, ತನ್ನ ಜನರು ತನ್ನ ಮೇಲೆ ಮಾತ್ರ ಅವಲಂಬಿತರಾಗಬೇಕೆಂದು ದೇವರು ಬಯಸಿದನು.
ಹಾಗೆಯೇ ಅರಸನು ಅನೇಕ ಸ್ತ್ರೀಯರನ್ನು ಮದುವೆಮಾಡಿಕೊಳ್ಳಬಾರದು; ಮಾಡಿಕೊಂಡರೆ ಅವನ ಮನಸ್ಸು ಯೆಹೋವನ ಕಡೆಯಿಂದ ತಿರುಗುವದಕ್ಕೆ ಅವಕಾಶವಾಗುವದು ಎಂದು ಯೆಹೋವನು ಇಸ್ರಾಯೇಲ್ ಅರಸರಾಗುವವರಿಗೆ ಸೂಚನೆಯನ್ನು ನೀಡಿದ್ದನು.
"ಕುದುರೆಯು ಯುದ್ಧದ ದಿನಕ್ಕೆ ಸಿದ್ಧವಾಗಿದ್ದರೂ ; ರಕ್ಷಣೆಯು ಕರ್ತನಿಂದಲೇ" ಎಂದು ಸೊಲೊಮೋನನೇ ಜ್ಞಾನೋಕ್ತಿ 21:31 ರಲ್ಲಿ ಬರೆದಿರುವುದರಿಂದ ಅವನಿಗೆ ಇದರ ಪೂರ್ಣ ಅರಿವಿತ್ತು.
ಆದರೂ ಕುದುರೆಗಳನ್ನು ಆಮದು ಮಾಡಿಕೊಳ್ಳುವ ವಿಷಯವು ಸೊಲೊಮೋನನಿಗೆ ಎಲ್ಲೋ ಒಂದು ಸಣ್ಣ ವಿಷಯವಾಗಿ ತೋರಿರಬಹುದು, ಆದರೆ ಅದು ದೇವರಿಗೆ ಮುಖ್ಯ ವಿಷಯವಾಗಿತ್ತು. ಈ ವಿಷಯದಲ್ಲಿ ಅವನು ಮಾಡಿಕೊಂಡ ರಾಜಿ ದೇವರಿಂದ ಅವನನ್ನು ನಿಧಾನವಾಗಿ ಬೇರ್ಪಡಿಸಲು ಪ್ರಾರಂಭಿಸಿತು.
ಅವನು ರಾಜಿ ಮಾಡಿಕೊಂಡ ಮುಂದಿನ ಕ್ಷೇತ್ರವೆಂದರೆ ಅವನು ಹಲವಾರು ಸ್ತ್ರೀಯರ ಹಿಂದೆ ಹೋದದ್ದು.
"ಅರಸನಾದ ಸೊಲೊಮೋನನು ಫರೋಹನ ಮಗಳಲ್ಲದೆ ಮೋವಾಬ್ಯರು, ಅಮ್ಮೋನಿಯರು, ಎದೋಮ್ಯರು, ಚೀದೋನ್ಯರು, ಹಿತ್ತಿಯರು ಎಂಬೀ ಜನಾಂಗಗಳ ಸ್ತ್ರೀಯರನ್ನೂ ಮೋಹಿಸಿದನು. ಯೆಹೋವನು ಈ ಜನಾಂಗಗಳ ವಿಷಯದಲ್ಲಿ ಇಸ್ರಾಯೇಲ್ಯರಿಗೆ - ನಿಮಗೂ ಅವರಿಗೂ ಕೊಟ್ಟುಕೊಳ್ಳುವದು ನಡೆಯಬಾರದು; ಅದು ನಡೆಯುವದಾದರೆ ಅವರು ನಿಮ್ಮ ಮನಸ್ಸನ್ನು ತಮ್ಮ ದೇವತೆಗಳ ಕಡೆಗೆ ತಿರುಗಿಸಾರು ಎಂದು ಆಜ್ಞಾಪಿಸಿದ್ದರೂ ಸೊಲೊಮೋನನು ಅವರ ಸ್ತ್ರೀಯರಲ್ಲಿ ಅನುರಕ್ತನಾಗಿದ್ದನು. ಅವನಿಗೆ ರಾಜವಂಶದವರಾದ ಏಳುನೂರು ಮಂದಿ ಪತ್ನಿಯರಲ್ಲದೆ ಮುನ್ನೂರು ಮಂದಿ ಉಪಪತ್ನಿಯರಿದ್ದರು. ಈ ಸ್ತ್ರೀಯರು ಅವನ ಮನಸ್ಸನ್ನು ಕೆಡಿಸಿಬಿಟ್ಟರು."(I ಅರಸುಗಳು 11:1-3)
ಅನ್ಯ ಜನಾಂಗದ ಸ್ತ್ರೀಯರನ್ನು ಮದುವೆಯಾಗುವ ಮೂಲಕ ತನ್ನ ರಾಜಕೀಯ ಸ್ಥಿರತೆ ಕಾಪಾಡಿಕೊಳ್ಳಬಹುದು ಎಂದು ಹೇಳುವುದಕ್ಕೆ ಸೊಲೊಮೋನನಿಗೆ ತನ್ನದೇ ಆ ಕಾರಣಗಳಿದ್ದಿರಬೇಕು. ಆದರೆ ಅದೇ ಸ್ತ್ರೀಯರೇ ಅವನನ್ನು ಜೀವವುಳ್ಳ ದೇವರಿಂದ ದೂರಮಾಡಿಬಿಟ್ಟರು.
ಸೈತಾನನು ಸಾಮಾನ್ಯವಾಗಿ ನಮ್ಮನ್ನು ಸಣ್ಣ ವಿಷಯಗಳಲ್ಲಿ ವಿಶ್ರಾಂತಿ ಪಡೆಯುವಂತೆ ಮಾಡುವ ಮೂಲಕ ಮುಂದೆ ಹೆಚ್ಚು ಮುಖ್ಯವಾದ ವಿಷಯಗಳಲ್ಲೂ ಅದೇ ಅಭ್ಯಾಸ ಮುಂದುವರೆಯುವಂತೆ ಮಾಡಲು ಕ್ರಮೇಣ ಮನವೊಲಿಸುವ ಮೂಲಕ ತನ್ನ ದೊಡ್ಡ ಆಕ್ರಮಣವನ್ನು ಮಾಡುತ್ತಾನೆ.
ಅವನು ಬಾಗಿಲಲ್ಲಿ ಕಾಲಿಡಲು ಸಾಧ್ಯವಾದರೆ, ತಾನು ದೊಡ್ಡ ವಿಜಯವನ್ನು ಗಳಿಸಿದ್ದೇನೆ ಎಂದೂ ನಮ್ಮನ್ನು ದೇವರಿಂದ ದೂರವಿಡುವಂತೆ ಮಾಡಬಹುದು ಎಂದೂ ಅವನು ಭಾವಿಸುತ್ತಾನೆ. ಆದಾಗ್ಯೂ, ಅಪೊಸ್ತಲ ಪೌಲನು ನಮಗೆ, "... ಸೈತಾನನಿಗೆ ಎಷ್ಟು ಮಾತ್ರಕ್ಕೂ ಸ್ಥಳವಕಾಶ ಕೊಡಬೇಡಿ" (ಎಫೆಸ 4:27) ಎಂದು ಎಚ್ಚರಿಸುತ್ತಾನೆ.
ಈ ದೇವರವಾಕ್ಯಗಳನ್ನು ಧ್ಯಾನಿಸಿ:
"ಸ್ವಲ್ಪ ಹುಳಿ ಇಡೀ ಕಣಕವನ್ನೇ ಹುಳಿ ಮಾಡುತ್ತದೆ."(ಗಲಾತ್ಯ 5:9)
"ದ್ರಾಕ್ಷಿತೋಟಗಳನ್ನು ಹಾಳುಮಾಡುವ ನರಿಗಳನ್ನೂ ನರಿಮರಿಗಳನ್ನೂ ಹಿಡಿಯಿರಿ. ನಮ್ಮ ದ್ರಾಕ್ಷಿತೋಟಗಳಲ್ಲಿ ಹೂಗಳು ಅರಳಿವೆ."(ಸೊಲೊಮೋನನ ಪರಮ ಗೀತೆ 2:15)
ವಾಕ್ಯಕ್ಕೆ ಸಂಬಂಧಿಸಿದಂತೆ ನಿಮ್ಮ ಜೀವನದ ಯಾವ ಕ್ಷೇತ್ರಗಳನಲ್ಲಿ ನೀವು ರಾಜಿ ಮಾಡಿಕೊಂಡಿದ್ದೀರಿ? ಅವುಗಳನ್ನು ಬರೆಯಿರಿ.ಅದಕ್ಕಾಗಿ ಪಶ್ಚಾತ್ತಾಪಪಟ್ಟು ಅವುಗಳನ್ನು ಜಯಿಸಲು ಆತನ ಕೃಪೆಯನ್ನು ಬೇಡಿಕೊಳ್ಳಿ.
Bible Reading: Nehemiah 10-11
ಪ್ರಾರ್ಥನೆಗಳು
ನನ್ನ ಜೀವನದಲ್ಲೂ ಮತ್ತು ನನ್ನ ಆಲೋಚನೆಗಳಲ್ಲೂ ನಾನು ರಾಜಿ ಮಾಡಿಕೊಳ್ಳುವ ಎಲ್ಲಾ ಮನಃಸ್ಥಿತಿಯನ್ನು ಯೇಸುನಾಮದಲ್ಲಿ ಬಂಧಿಸುತ್ತೇನೆ.
ಇಂದು ನಾನು ಶರೀರದಿಚ್ಚೆಯ ನೊಗಗಳನ್ನು, ಕಣ್ಣುಗಳ ಆಸೆಯನ್ನು ಮತ್ತು ನನ್ನನ್ನು ಹಿಡಿದಿರುವ ಬದುಕುಬಾಳಿನ ಹೆಮ್ಮೆಯನ್ನು ಯೇಸುನಾಮದಲ್ಲಿ ಮುರಿದುಹಾಕುತ್ತೇನೆ (1 ಯೋಹಾನ 2:16).
ನಾನು ಯೇಸು ಕ್ರಿಸ್ತನ ನಾಮದಲ್ಲಿ ನನ್ನ ಓಟವನ್ನು ಚೆನ್ನಾಗಿ ಓಡಿ ಮುಗಿಸುತ್ತೇನೆ.
Join our WhatsApp Channel

Most Read
● ನಂಬಿಕೆಯಲ್ಲಿರುವ ಬಲ● ದೇವರ ಎಚ್ಚರಿಕೆಗಳನ್ನು ಕಡೆಗಣಿಸಬೇಡಿರಿ
● ನಿಮ್ಮ ಹೃದಯವನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳಿ
● ಭೂಮಿಗೆ ಉಪ್ಪೋ ಅಥವಾ ಉಪ್ಪಿನ ಸ್ತಂಭವೋ
● ದಿನ 14:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಒಂದು ಜನಾಂಗವನ್ನು ಉಳಿಸಿದ ಕಾಯುವಿಕೆ
● ಲಂಬಕೋನ ಹಾಗೂ ಸಮತಲದ ಕ್ಷಮಾಪಣೆ.
ಅನಿಸಿಕೆಗಳು