english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಅಲೆದಾಡುವುದನ್ನು ನಿಲ್ಲಿಸಿ
ಅನುದಿನದ ಮನ್ನಾ

ಅಲೆದಾಡುವುದನ್ನು ನಿಲ್ಲಿಸಿ

Thursday, 12th of June 2025
3 0 74
Categories : ಮೋಕ್ಷ (Salvation)
"ನಾನು ತಪ್ಪಿಹೋದ ಕುರಿಯಂತೆ ಅಲೆಯುತ್ತಿದ್ದೇನೆ; ನಿನ್ನ ಸೇವಕನನ್ನು ಪರಾಂಬರಿಸು. ನಾನು ನಿನ್ನ ಆಜ್ಞೆಗಳನ್ನು ಮರೆಯುವದಿಲ್ಲ". (ಕೀರ್ತನೆ 119:176) 

ಮರುಭೂಮಿಯಲ್ಲಿ ದಾರಿ ತಪ್ಪುವ ಜನರು ಸಾಮಾನ್ಯವಾಗಿ ತಮಗೆ ತೋಚಿದ ದಿಕ್ಕನ್ನು  ಅನುಸರಿಸಲು ಪ್ರಯತ್ನಿಸುತ್ತಾ ವೃತ್ತಕಾರವಾಗಿ ಅಲ್ಲೇ ಸುತ್ತುತ್ತಲೇ ಇರುತ್ತಾರೆ.ಕಡೆಗೆ ನೋಡಿದರೆ  ಅವರು ಎಲ್ಲಿ ಪ್ರಯಾಣ ಪ್ರಾರಂಭಿಸಿದರೋ ಅದೇ ಸ್ಥಳದಲ್ಲೇ ಬಂದು ನಿಂತಿರುತ್ತಾರೆ. ಅವರು ಕಷ್ಟಪಟ್ಟು ಮಾರ್ಗ ಹುಡುಕುತ್ತಿದ್ದಂತೂ ನಿಜವೇ ಆದರೂ ಅವರಿಗೆ ಅದು ಸಿಕ್ಕಿರುವುದಿಲ್ಲ. 

ಜ್ಞಾನ ಮಾರ್ಗದಿಂದ ತಪ್ಪಿ ಅಲೆದಾಡುವ ಮನುಷ್ಯನು ಸತ್ತವರ ಸಭೆಯಲ್ಲಿ ವಿಶ್ರಾಂತಿ ಪಡೆಯುತ್ತಾನೆ. (ಜ್ಞಾನೋಕ್ತಿ 21:16)

ಇದು ಇಸ್ರೇಲ್ ಜನರು ತಮಗೆ ವಾಗ್ದಾನ ಮಾಡಿದ ದೇಶಕ್ಕೆ ಹೋಗುವ ದಾರಿಯಲ್ಲಿ ಮರುಭೂಮಿಯಲ್ಲಿ ಅಲೆದಾಡಿದನ್ನು ನನಗೆ ನೆನಪಿಸುತ್ತದೆ. ವಿಶ್ವಾಸಿಗಳಾದ ನಮಗೆ ಇದು ಒಂದು ಉತ್ತಮ ಪಾಠ. 

ನಮ್ಮ ಸ್ವಂತ ತರ್ಕ ಮತ್ತು ಆಸೆಗಳನ್ನು ಅನುಸರಿಸಲು ಪ್ರಯತ್ನಿಸುವಾಗ ಅನಾಯಾಸವಾಗಿನಾವು ದಾರಿ ತಪ್ಪಬಹುದಾಗಿದೆ  ಆಗ ನಾವು ಅದೇ ವೃತ್ತಗಳಲ್ಲಿ ಮತ್ತೆ ಮತ್ತೆ  ಅಲೆದಾಡುವವರಾಗುತ್ತೇವೆ.ಸಾಮಾನ್ಯವಾಗಿ ಯಾವುದನ್ನಾದರೂ  ಹೊಂದಿಕೊಳ್ಳುವ ಕುರಿತು , ಇತರರು ಏನು ಯೋಚಿಸುತ್ತಾರೋ ಎಂದು ಮತ್ತು ನಮ್ಮಲ್ಲಿರುವುದನ್ನು ಎಲ್ಲಿ ಕಳೆದುಕೊಂಡು ಬಿಡುತ್ತೇವೋ ಎಂದು ಚಿಂತಿಸುತ್ತಾ ಮಾಡಿದ ಕಾರ್ಯವನ್ನೇ ಮತ್ತೆ ಮತ್ತೆ ಮಾಡುತ್ತಿರುತ್ತೇವೆ.ಹೀಗೆ ನಮ್ಮ ಸ್ವಂತ ಜ್ಞಾನವನ್ನು ಅನುಸರಿಸಲು ಹೋಗಿ ಕಡೆಗೆ ,ನಾವೇ ಕಳೆದುಹೋಗುತ್ತೇವೆ.

ದೇವರು ನಾವು ಏನಾಗಿದ್ದೇವೆ ಎಂಬುದನ್ನು ನಮ್ಮ ಬಲಹೀನತೆಗಳೇನು ಎಂಬುದನ್ನು  ಅರ್ಥಮಾಡಿಕೊಳ್ಳುತ್ತಾನೆ ಹಾಗಾಗಿ  ನಾವು ಆತನ ಕಡೆಗೆ ತಿರುಗಿಕೊಂಡು ಆತನ ಮಾರ್ಗದರ್ಶನಕ್ಕಾಗಿ ಎದುರು ನೋಡುತೇವೆ ಎಂದು ತಾಳ್ಮೆಯಿಂದ ಆತನು  ಕಾಯುತ್ತಿದ್ದಾನೆ. 

ನೀವು ದೇವರಿಂದ ಹುಟ್ಟಿದ್ದೀರಿ, ದೇವರಿಂದ ನಡೆಸಲ್ಪಡುತ್ತೀರಿ. (1 ಯೋಹಾನ 5:4 ಓದಿ). ಆದರಿಂದ ನೀವು ಸ್ವೇಚ್ಚೆಯ ಜೀವನವನ್ನು ನಡೆಸದೇ ನಿಮ್ಮೊಳಗೆ ವಾಸಿಸುವ ಮಹಾನ್ ವ್ಯಕ್ತಿಯಾದ - ಪವಿತ್ರಾತ್ಮನ - ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರಬೇಕು.

ನಾವೆಲ್ಲರೂ ಕುರಿಗಳಂತೆ ದಾರಿತಪ್ಪಿ ತೊಳಲುತ್ತಿದ್ದೆವು, ಪ್ರತಿಯೊಬ್ಬನೂ ತನ್ನ ತನ್ನ ದಾರಿಯನ್ನು ಹಿಡಿಯುತ್ತಿದ್ದನು; ನಮ್ಮೆಲ್ಲರ ದೋಷಫಲವನ್ನೂ ಯೆಹೋವನು ಅವನ ಮೇಲೆ ಹಾಕಿದನು. (ಯೆಶಾಯ 53:6)

ಭಯದ ಆಧಾರದ ಮೇಲೆ ಆಯ್ಕೆಗಳನ್ನು ಮಾಡುವ ಬದಲು, ನಮಗೆ ತಿಳಿಯದಿರುವ ವಿಚಾರಗಳಲ್ಲಿ ದೇವರು ತನ್ನ ವಾಕ್ಯದಲ್ಲಿ ನಮಗೆ ಕೊಟ್ಟಿದ್ದಾನೆಂದು ಹೇಳುವ ವಾಗ್ದಾನಗಳ ಮೇಲೆ ನಾವು ನಂಬಿಕೆಯಿಟ್ಟು  ನಡೆಯುವುದನ್ನು ಆಯ್ಕೆ ಮಾಡಿ ಕೊಳ್ಳಬಹುದು. ನಿಮ್ಮ ಗೊಂದಲ ಮತ್ತು ಅಲೆದಾಡುವಿಕೆಯ ದಿನಗಳು ಮುಗಿದು ಹೋಗಲಿ ಎಂದೇ ಕರ್ತನಾದ ಯೇಸು ವಿಮೋಚನಾ ಕ್ರಯವನ್ನು ಈಗಾಗಲೇ ಪಾವತಿಸಿದ್ದಾನೆ. 

Bible Reading: Nehemiah 12-13
ಅರಿಕೆಗಳು
ನಾನು ಲೌಖಿಕ ವಿಚಾರಗಳನ್ನು  ಮೀರಿ ಅಲೌಖಿಕ ಜೀವಿತ ನಡೆಸಲೆಂದೆ ದೇವರಿಂದ ಹುಟ್ಟಿದ್ದೇನೆ. ದೇವರ ವಾಕ್ಯವು ನನ್ನ ಜೀವನದಲ್ಲಿ ನನ್ನ ದಾರಿದೀಪವಾಗಿದೆ. ನಾನು ವಾಕ್ಯವನ್ನು ಯೇಸುನಾಮದಲ್ಲಿ ನಂಬುತ್ತೇನೆ, ಒಪ್ಪಿಕೊಳ್ಳುತ್ತೇನೆ, ಅದರಂತೆ ನಡೆಯುತ್ತೇನೆ,ಅದನ್ನೇ ನಿರೀಕ್ಷಿಸುತ್ತೇನೆ ಮತ್ತು ಅದನ್ನೇ ಪ್ರಕಟಿಸುತ್ತೇನೆ. ಆಮೆನ್. (ಇದನ್ನು ಹೇಳುತ್ತಲೇ ಇರಿ)


Join our WhatsApp Channel


Most Read
● ಅಪರಾಧಗಳಿಗಿರುವ ಪರಿಪೂರ್ಣ ಪರಿಹಾರ.
● ಇಂತಹ ಪರಿಶೋಧನೆಗಳು ಏಕೆ?
● ದಿನ 17:40 ದಿನಗಳ ಉಪವಾಸ ಪ್ರಾರ್ಥನೆ
● ಆತ್ಮವಂಚನೆ ಎಂದರೇನು? - II
● ದಿನ 14:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಪ್ರಾಚೀನ ಇಸ್ರೇಲ್‌ನ ಮನೆಗಳಿಂದ ಕಲಿಯಬೇಕಾದ ಪಾಠಗಳು
● ಕೃತಜ್ಞತೆಯ ಯಜ್ಞ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್