ನೀವು ಎಂದಾದರೂ ಏನಾದರೂ ತಪ್ಪು ಮಾಡಿ ಅದನ್ನು ಮರೆಮಾಡಲು ನಿಮ್ಮ ಬಲದಲ್ಲಿ ಸಾಧ್ಯವಾದದನ್ನೆಲ್ಲಾ ಮಾಡಲು ಪ್ರಯತ್ನಿಸಿದ್ದೀರಾ?
ಆದಾಮ ಮತ್ತು ಹವ್ವ ಅದನ್ನು ಮಾಡಿದ್ದರು. ಹವ್ವಳು ಸರ್ಪದ ಮೋಸಕ್ಕೆ ಮಣಿದು ಒಳ್ಳೆಯದು ಮತ್ತು ಕೆಟ್ಟದ್ದರ ಅರಿವನ್ನು ಮೂಡಿಸುವ ಮರದ ಹಣ್ಣನ್ನು ತಿಂದಳು. ಆದಿಕಾಂಡ 3:6 ಹೇಳುವಂತೆ ಅವಳು ತನ್ನ ಜೊತೆಯಲ್ಲಿದ್ದ ತನ್ನ ಗಂಡನಾದ ಆದಾಮನಿಗೂ ಸಹ ಅದನ್ನು ತಿನ್ನಲು ಕೊಟ್ಟಳು ಮತ್ತು ಅವನು ಸಹ ಆ ಹಣ್ಣನು ತಿಂದನು.
"ತರುವಾಯ ಯೆಹೋವದೇವರು ಸಂಜೆಯ ತಂಗಾಳಿಯಲ್ಲಿ ತೋಟದೊಳಗೆ ಸಂಚರಿಸುತ್ತಿರುವಾಗ ಆ ಸ್ತ್ರೀಪುರುಷರು ಆತನ ಸಪ್ಪಳವನ್ನು ಕೇಳಿ ಆತನಿಗೆ ಕಾಣಿಸಬಾರದೆಂದು ತೋಟದ ಮರಗಳ ಹಿಂದೆ ಅಡಗಿಕೊಂಡರು."
ಕರ್ತನಾದ ದೇವರ ಸಾನಿಧ್ಯದಿಂದ ಮರೆಮಾಡಿಕೊಳ್ಳಲು ಸಾಧ್ಯವೇ ಇಲ್ಲ, ಆದರೂ ಅವರು ಅದಕ್ಕಾಗಿ ಪ್ರಯತ್ನಿಸಿದರು.
"ನಾವು ಯಾವಾತನಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ ದೃಷ್ಟಿಗೆ ಸಮಸ್ತವೂ ಮುಚ್ಚುಮರೆಯಿಲ್ಲದ್ದಾಗಿಯೂ ಬೈಲಾದದ್ದಾಗಿಯೂ ಅದೆ. ಆತನ ಸನ್ನಿಧಿಯಲ್ಲಿ ಅಗೋಚರವಾಗಿರುವ ಸೃಷ್ಟಿಯು ಒಂದೂ ಇಲ್ಲ". (ಇಬ್ರಿಯ 4:13)
ದಾವೀದನು ತುಂಬಾ ಹತಾಶನಾಗಿ, ತಾನು ಮಾಡಿದ ವ್ಯಭಿಚಾರ ಮತ್ತು ಕೊಲೆಯ ಪಾಪವನ್ನು ಮರೆಮಾಚಲು ಪ್ರಯತ್ನಿಸಿದನು. (2 ಸಮುವೇಲ 11 ಓದಿ)
"ಕಿವಿಯನ್ನು ಉಂಟುಮಾಡಿದವನು ಕೇಳುವುದಿಲ್ಲವೇ? ಕಣ್ಣನ್ನು ರೂಪಿಸಿದವನು ನೋಡುವುದಿಲ್ಲವೇ?" (ಕೀರ್ತನೆ 94:9) ಎಂದು ಮನುಷ್ಯನಿಗೆ ತಿಳಿದಿದೆ.
ಆದರೂ ಸಹ, ಮನುಷ್ಯನುತನ್ನ ಪಾಪವನ್ನು ಇನ್ನೂ ಮರೆಮಾಡಲು ಪ್ರಯತ್ನಿಸುತ್ತಾನೆ. "ಪಾಪ" (sin)ಎಂಬ ಪದವು "ಗುರಿಯನ್ನು ತಪ್ಪುವ" ಕ್ರಿಯೆಯನ್ನು ವಿವರಿಸುವ ಗ್ರೀಕ್ ಮತ್ತು ಹೀಬ್ರೂ ಪದಗಳಿಂದ ಹುಟ್ಟಿಕೊಂಡಿದೆ.
ವಾಸ್ತವವಾಗಿ, ನಮ್ಮಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ವಿಷಯದಲ್ಲಿ ಗುರಿಯನ್ನು ತಪ್ಪಿದ್ದೇವೆ. ನಾವು ನಮ್ಮ ಪಾಪವನ್ನು ಮರೆಮಾಡಬೇಕಾಗಿಲ್ಲ ಅಥವಾ ಅದನ್ನು ಸಮರ್ಥಿಸಿಕೊಳ್ಳ ಬೇಕಾಗಿಲ್ಲ ಏಕೆಂದರೆ ಯೇಸು ನಮಗೆ ಆಗಬೇಕಿದ್ದ ಎಲ್ಲಾ ಶಿಕ್ಷೆಯನ್ನು ಶಿಲುಭೆಯ ಮೇಲೆ ಅನುಭವಿಸಿ ಅದರ ಕ್ರಯವನ್ನು ಕಟ್ಟಿ ಮುಗಿಸಿ ನಮಗೆ ಹೊಂದಲು ಯೋಗ್ಯತೆಯೇ ಇಲ್ಲದ ಕ್ಷಮೆಯನ್ನು ತಂದು ಕೊಟ್ಟಿದ್ದಾನೆ. ಆದರಿಂದ ಆತನ ಮುಂದೆ ಎಲ್ಲವನ್ನೂ ಒಪ್ಪಿಕೊಳ್ಳಿ, ಆಗ ದೇವರ ಶಾಂತಿಯು ನಿಮ್ಮನ್ನು ತುಂಬಿಕೊಳ್ಳುತ್ತದೆ. ಕರ್ತನೊಂದಿಗಿನ ನಿಮ್ಮ ಅನ್ಯೋನ್ಯತೆಯು ಪುನಃಸ್ಥಾಪಿಸಲ್ಪಡುತ್ತದೆ.
ನೆನಪಿಡಿ, ಆತನು ಬೆಳಕಿನಲ್ಲಿರುವಂತೆ ನಾವು ಬೆಳಕಿನಲ್ಲಿ ನಡೆದರೆ, ಯೇಸು ಕ್ರಿಸ್ತನ ರಕ್ತವು ನಮ್ಮ ಶುದ್ಧೀಕರಣಕ್ಕಾಗಿ ಯಾವಾಗಲೂ ಲಭ್ಯವಿದೆ. ಹಾಗೆಯೇ, ನಾವು ಯಾರಿಗಾದರೂ ಅಪರಾಧ ಮಾಡಿದ್ದರೆ, ನಾವು ಅವರ ಬಳಿಗೆ ಹೋಗಿ ಕ್ಷಮೆ ಕೇಳಬೇಕು. (ಕೆಲವು ಸಂದರ್ಭಗಳಲ್ಲಿ ಅದು ಸಾಧ್ಯವಾಗದಿರಬಹುದು ಎಂಬುದು ನನಗೆ ಗೊತ್ತು).
ಇದು ನಾವು ಪ್ರೀತಿಯಲ್ಲಿ ನಡೆಯಲು ಮತ್ತು ನಮ್ಮೆಡೆಗೆ ಆತನ ಅನ್ಯೋನ್ಯತೆ ಹರಿಯುವಂತೆ ಮಾಡಲು ಮತ್ತು ಶಾಂತಿಯನ್ನು ಕಾಪಾಡಿಕೊಳ್ಳುವುದು ಹೀಗೆಯೇ. ಇಟ್ಟಿಗೆಗಳ ನಡುವೆ ಹಾಕುವ ಬಲವಾದ ಸಿಮೆಂಟ್ ಕಟ್ಟಡದ ಬಲವನ್ನು ನಿರ್ಧರಿಸುವಂತೆಯೇ, ಕ್ರೈಸ್ತರ ನಡುವಿನ ಬಲವಾದ ಅನ್ಯೋನ್ಯತೆಯು ಪ್ರತಿಯೊಂದು ಸ್ಥಳೀಯ ಚರ್ಚ್ನ ಬಲವನ್ನು ನಿರ್ಧರಿಸುತ್ತದೆ. ಇದನ್ನು ಮುಂದೂಡಬೇಡಿ.
Bible Reading: Esther 1-4
ಪ್ರಾರ್ಥನೆಗಳು
ತಂದೆಯೇ, ನೀತಿಯಿಂದ ನಡೆಯಲು , ಕರುಣೆಯನ್ನು ಪ್ರೀತಿಸಲು ಮತ್ತು ನಿಮ್ಮ ಮುಂದೆ ನಮ್ರತೆಯಿಂದ ನಡೆದುಕೊಳ್ಳಲು ಯೇಸುನಾಮದಲ್ಲಿ ನನಗೆ ಕೃಪೆಯನ್ನು ಅನುಗ್ರಹಿಸಿ. ಆಮೆನ್.
Join our WhatsApp Channel

Most Read
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ● ದಿನ 40:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದಿನ 03 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಯಜ್ಞವೇದಿಯ ಮೇಲೆ ಬೆಂಕಿಯನ್ನು ಪಡೆಯುವುದು ಹೇಗೆ?
● ಆತನ ಬಲದ ಉದ್ದೇಶ.
● ಆ ವಾಕ್ಯವನ್ನು ಹೊಂದಿಕೊಳ್ಳಿರಿ
● ನಮ್ಮ ಆಯ್ಕೆಯ ಪರಿಣಾಮಗಳು
ಅನಿಸಿಕೆಗಳು