ಇಂದು, ನಾನು ನಿಮ್ಮ ಕಲ್ಪನೆಯ ಕುರಿತು ಮಾತನಾಡಲು ಬಯಸುತ್ತೇನೆ. ನೀವು ದಿನವಿಡೀ ವಿಷಯಗಳನ್ನು ಕಲ್ಪಿಸಿಕೊಳ್ಳುತ್ತಿರುತ್ತೀರಿ. ನೀವು ಕೇಳುವ ಮಾತುಗಳು ನಿಮ್ಮ ಕಲ್ಪನೆಯಲ್ಲಿ ಚಿತ್ರಗಳನ್ನು ರೂಪಿಸಿ ಬಿಡುತ್ತವೆ. ಹೆಚ್ಚಿನ ಜನರು ದುರದೃಷ್ಟವಶಾತ್ ಮತ್ತು ದೇವರ ವಾಕ್ಯಕ್ಕೆ ವಿರುದ್ಧವಾಗಿ, ತಮ್ಮ ಜೀವನದಲ್ಲಿ ಏನು ತಪ್ಪಾಗಿಬಿಡುತ್ತದೆಯೋ ಎಂದು ಭಯಪಡುವ ಅಥವಾ ಕಾಳಜಿ ವಹಿಸುವ ವಿಷಯಗಳನ್ನು ಕಲ್ಪಿಸಿಕೊಳ್ಳುವುದರಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಪತ್ರಿಕೆಗಳು ಮತ್ತು ಮಾಧ್ಯಮಗಳು ಸಹ ನಕಾರಾತ್ಮಕ ಕಲ್ಪನೆಗಳನ್ನು ಉತ್ತೇಜಿಸುವ ಸುದ್ದಿಗಳನ್ನು ಹರಡುವ ಮೂಲಕ ಅಂತಹ ಭಯಗಳಿಗೆ ಇಂಧನ ತುಂಬಿಸುತ್ತವೆ.
ನಿಮ್ಮಲ್ಲಿನ ಅಸ್ತವ್ಯಸ್ತವಾಗಿರುವ ಜಗತ್ತನ್ನು ಮರುರೂಪಿಸಲು ನಿಮ್ಮ ಕಲ್ಪನೆಯೇ ಪ್ರಬಲ ಸಾಧನವಾಗಬಹುದು. ನಾನು ಹೀಗೇಕೆ ಹೇಳುತ್ತಿದ್ದೇನೆ? ವಿವರಿಸುತ್ತೇನೆ. ನೀವು ಊಹಿಸುವ, ಪ್ರಚೋದಿಸುವ ಮತ್ತು ಪ್ರಾರಂಭಿಸುವ ಮಾತುಗಳು ನಿಮ್ಮ ನಂಬಿಕೆ ಮತ್ತು ಸಮಾಧಾನ ಸೇರಿದಂತೆ ಎಲ್ಲದರ ಮೇಲೂ ಪರಿಣಾಮ ಬೀರುತ್ತವೆ.
"ದೃಢ ಮನಸ್ಸುಳ್ಳವರನ್ನು ಪೂರ್ಣ ಸಮಾಧಾನದಲ್ಲಿ ನೆಲೆಗೊಳಿಸಿ ಕಾಯುವೆ, ಏಕೆಂದರೆ ಅವರಿಗೆ ನಿನ್ನಲ್ಲಿ ಭರವಸವಿದೆ."ಯೆಶಾಯ 26:3 ಹೇಳುತ್ತದೆ.
ಒಂದು ದಿನ ದೇವರು ಅಬ್ರಹಾಮನನ್ನು ರಾತ್ರಿಯಲ್ಲಿ ಎಬ್ಬಿಸಿ ಅವನ ಗುಡಾರದಿಂದ ಅವನನ್ನು ಹೊರಗೆ ಕರೆದೊಯ್ದು “ ಆತನು (ದೇವರು) ಅವನನ್ನು (ಅಬ್ರಹಾಮನನ್ನು) ಹೊರಗೆ ಕರೆತಂದು, “ಈಗ ಆಕಾಶದ ಕಡೆಗೆ ನೋಡಿ ನಕ್ಷತ್ರಗಳನ್ನು ಎಣಿಸಬಲ್ಲೆಯಾದರೆ ಅವುಗಳನ್ನು ಹೇಳು” ಎಂದು ಹೇಳಿದನು. ಆತನು ಅವನಿಗೆ, “ನಿನ್ನ ಸಂತತಿಯು ಹಾಗೆಯೇ ಆಗುವುದು” ಎಂದು ಹೇಳಿದನು.” “ಅವನು (ಅಬ್ರಹಾಮ) ಕರ್ತನನ್ನು ನಂಬಿದನು, ಮತ್ತು ಆತನು(ದೇವರು) ಅದನ್ನು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಿದನು” (ಆದಿಕಾಂಡ 15:6).
ದೇವರು ಅಬ್ರಹಾಮನನ್ನು ಆಶೀರ್ವದಿಸಲು ಬಯಸಿದನು ಆದರೆ ಆತನಿಗೆ ಅಬ್ರಹಾಮನ ಕಲ್ಪನೆಯ ಅಗತ್ಯವಿತ್ತು. ಅಬ್ರಹಾಮನಿಗೆ ಯಾವುದೇ ಮಕ್ಕಳಿಲ್ಲದ ಕಾರಣ ಮತ್ತು ಇನ್ನೂ ಇಂದ್ರಿಯಗಳಲ್ಲೇ ಬದುಕುತ್ತಿರುವುದರಿಂದ, ದೇವರು ಹೇಳಿದಂತೆ ಅವನ ಸಂತತಿಯು ಭೂಮಿಯ ಧೂಳಿನಷ್ಟು ಅಸಂಖ್ಯಾತವಾಗಿರುತ್ತದೆ ಎಂಬುದನ್ನು ಊಹಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ದೇವರು ಅವನಲ್ಲಿ ಕಲ್ಪನೆಯನ್ನು ಹುಟ್ಟಿಸುವ ಕಾರ್ಯ ಮಾಡಬೇಕಾಗಿತ್ತು ಮತ್ತು ಇದನ್ನು ಮಾಡಲು ಆತನು ಅವನನ್ನು ಹೊರಗೆ ಕರೆದೊಯ್ದು, ನಕ್ಷತ್ರಗಳನ್ನು ಅವನಿಗೆ ತೋರಿಸಿ ಅವುಗಳನ್ನು ಎಣಿಸಲು ಹೇಳಿದನು.
ಅಬ್ರಹಾಮನು ನಕ್ಷತ್ರಗಳನ್ನು ನೋಡುತ್ತಿದ್ದಂತೆ, ಅವನು ದೇವರ ಕಲ್ಪನೆಯನ್ನು ಗ್ರಹಿಸಿಕೊಂಡನು; ಆ ನಕ್ಷತ್ರಗಳಲ್ಲಿ ತನ್ನ ಮಕ್ಕಳ ಮುಖಗಳನ್ನು ಅವನು ಊಹಿಸಬಲ್ಲವನಾದನು. ಅವನು ದೇವರನ್ನು ನಂಬಿದ್ದನೆಂದು ಬೈಬಲ್ ಘೋಷಿಸುತ್ತದೆ, ನಂತರ ದೇವರು ಅವನ ಹೆಸರನ್ನು 'ಅಬ್ರಾಮ್' ಅಂದರೆ 'ಶ್ರೇಷ್ಠ ತಂದೆ' ಎಂಬುದರಿಂದ 'ಅಬ್ರಹಾಮ ' ಅಂದರೆ 'ಅನೇಕ ಜನಾಂಗಗಳ ತಂದೆ' ಎಂದು ಬದಲಾಯಿಸಿದನು.
ನೋಡಿ, ಅವನು ದೇವರನ್ನು ನಂಬುವವರೆಗೆ ಮತ್ತು ಆತನು ಹೇಳಿದ ವಿಷಯದ ದರ್ಶನವನ್ನು ಅವನೊಳಗೆ ಸಾಗಿಸುವವರೆಗೆ ದೇವರು ಅವನನ್ನು "ಅಬ್ರಹಾಮ" ಎಂದು ಕರೆಯಲು ಸಾಧ್ಯವಾಗಲಿಲ್ಲ.
ದೇವರು ತನ್ನ ಹೆಂಡತಿಯ ಹೆಸರನ್ನು 'ಸಾರಾಯಳು ' ಅಂದರೆ 'ವಿವಾದಾತ್ಮಕ' ಎನ್ನುವ ಪದದಿಂದ 'ಸಾರಾ' ಅಂದರೆ 'ರಾಜಕುಮಾರರ ರಾಣಿ' ಅಥವಾ 'ರಾಜಕುಮಾರರ ತಾಯಿ' ಎಂದು ಬದಲಾಯಿಸಿದನು. ಅಬ್ರಹಾಮನ ಹೃದಯದಲ್ಲಿ ತಾನು ಸ್ಥಾಪಿಸಿದ ಚಿತ್ರಣವನ್ನು ಜೀವಂತವಾಗಿಡಲು ದೇವರು ಇದನ್ನು ಮಾಡಿದನು.
ನಿಮ್ಮ ಕಲ್ಪನೆಯು ನಿಮ್ಮ ಜಗತ್ತನ್ನು ನಿರ್ಮಿಸಲು ಅಥವಾ ಮರುಸೃಷ್ಟಿಸಲು ನೀವು ಬಳಸಬಹುದಾದ ಪ್ರಬಲ ಸಾಧನವಾಗಿದೆ.
Bible Reading: Psalms 27-34
Prayer
ತಂದೆಯೇ, ನನ್ನ ಕಲ್ಪನೆಯನ್ನು ನಿಮ್ಮ ವಾಕ್ಯಕ್ಕೆ ಅನುಗುಣವಾಗಿ ಬಳಸಿಕೊಳ್ಳಲು ನನಗೆ ಸಹಾಯ ಮಾಡಿ ಇದರಿಂದ ಅದು ನನ್ನ ಜೀವನವನ್ನು ಯೇಸುನಾಮದಲ್ಲಿ ರೂಪಿಸಲಿ. ಆಮೆನ್.
Join our WhatsApp Channel

Most Read
● ಭವ್ಯಭವನದ ಹಿಂದಿರುವ ಮನುಷ್ಯ● ನಿಮ್ಮ ದೌರ್ಬಲ್ಯಗಳನ್ನು ದೇವರಿಗೆ ಒಪ್ಪಿಸಿ
● ನಿಮ್ಮ ಮಾರ್ಗದರ್ಶಕರು ಯಾರು - |
● ನಂಬಿಕೆಯಲ್ಲಿ ದೃಢವಾಗಿ ನಿಲ್ಲುವುದು
● ಅಶ್ಲೀಲತೆಯಿಂದ ಬಿಡುಗಡೆ ಕಡೆಗಿನ ಪಯಣ
● ನಿಮ್ಮ ಮಾರ್ಗದರ್ಶಕರು ಯಾರು - II
● ನಿಮ್ಮನ್ನು ನಡೆಸುತ್ತಿರುವವರು ಯಾರು?
Comments