हिंदी मराठी తెలుగు മലയാളം தமிழ் ಕನ್ನಡ Contact us Contact us Listen on Spotify Listen on Spotify Download on the App StoreDownload iOS App Get it on Google Play Download Android App
 
Login
Online Giving
Login
  • Home
  • Events
  • Live
  • TV
  • NoahTube
  • Praises
  • News
  • Manna
  • Prayers
  • Confessions
  • Dreams
  • E-Books
  • Commentary
  • Obituaries
  • Oasis
  1. Home
  2. Daily Manna
  3. ಅಸೂಯೆಯ ಮನೋಭಾವವನ್ನು ಜಯಿಸುವುದು
Daily Manna

ಅಸೂಯೆಯ ಮನೋಭಾವವನ್ನು ಜಯಿಸುವುದು

Thursday, 17th of July 2025
2 0 103
Categories : ಆತ್ಮಿಕ ಯುದ್ಧ (Spiritual warfare) ಆಶೀರ್ವಾದ ( Blessing)
"ಅವನ ಐಶ್ವರ್ಯವು ದಿನೇ ದಿನೇ ಹೆಚ್ಚಿದ್ದರಿಂದ ಬಹು ಧನವಂತನಾದನು; ಅವನಿಗೆ ದನಕುರಿಗಳ ಸಂಪತ್ತೂ ಅನೇಕ ಸೇವಕಜನವೂ ಇದ್ದವು. ಇದನ್ನು ನೋಡಿ ಫಿಲಿಷ್ಟಿಯರು ಹೊಟ್ಟೆಕಿಚ್ಚುಪಟ್ಟರು". (ಆದಿಕಾಂಡ 26:13-14) 

ಯಾವುದೇ ಸ್ಪಷ್ಟ ಕಾರಣವಿಲ್ಲದೆ, ಫಿಲಿಷ್ಟಿಯರು ಇಸಾಕನ ಕಡೆಗೆ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದರು. ಒಂದು ಕಾಲದಲ್ಲಿ ಅವರು ಮುಕ್ತವಾಗಿ ಮತ್ತು ಸ್ನೇಹಪರರಾಗಿದ್ದರು, ಆದರೆ ಈಗ, ಇದ್ದಕ್ಕಿದ್ದಂತೆ, ಅವನ ಕಡೆಗಿನ ಅವರ ವರ್ತನೆಗಳು ಬದಲಾದವು. ಅವರು ಅಸೂಯೆ ಪಟ್ಟರು ಮತ್ತು ಇಸಾಕನ ಜೀವನದ ಮೇಲೆ ದೇವರ ಆಶೀರ್ವಾದದಿಂದ ಅವರು ಹೆದರಿಕೊಂಡಿದ್ದರು. 

ನಿಮ್ಮ ಜೀವನದಲ್ಲಿ ದೇವರ ಆಶೀರ್ವಾದವು ಪ್ರಕಟವಾಗಲು ಪ್ರಾರಂಭಿಸಿದಾಗ, ನೀವು ಅದನ್ನು ಮರೆಮಾಡಲು ಸಾಧ್ಯವಿಲ್ಲ. ಆದ್ದರಿಂದ ಯಾವುದೇ ಸ್ಪಷ್ಟ ಕಾರಣವಿಲ್ಲದೆ ಜನರು ನಿಮ್ಮ ಬಗ್ಗೆ ಅಸೂಯೆಪಡಲು ಆರಂಭಿಸುತ್ತಾರೆ ಅದಕ್ಕಾಗಿ ಸಿದ್ಧರಾಗಿರಿ.

"ನಾನು ಯಾರಿಗೂ ಯಾವುದೇ ತಪ್ಪು ಮಾಡಿಲ್ಲ, ಆದರೂ ಜನರು ಏಕೆ ಈ ರೀತಿ ವರ್ತಿಸುತ್ತಿದ್ದಾರೆ." ಎಂದು ಅನೇಕ ಜನರು ನನಗೆ ಬರೆಯುತ್ತಾರೆ.ನನ್ನ ಸ್ನೇಹಿತನೇ, ಸರಳ ಇದಕ್ಕೆ ಉತ್ತರವೆಂದರೆ, ಅವರು ನಿಮ್ಮ ಜೀವನದ ಮೇಲೆ ದೇವರು ನೀಡಿರುವ ಆಶೀರ್ವಾದದ ಕುರಿತು ಅಸೂಯೆ ಪಡುತ್ತಿದ್ದಾರೆ ಅಷ್ಟೇ. 

ಆದಿಕಾಂಡ 37 ನೇ ಅಧ್ಯಾಯದಲ್ಲಿ, ದೇವರ ಆಶೀರ್ವಾದವು ಯೋಸೇಫನ ಮೇಲಿತ್ತು ಎಂದು ನಾವು ನೋಡುತ್ತೇವೆ, ಆದ್ದರಿಂದ ದೇವರು ಅವನಿಗೆ ಪ್ರವಾದನಾ ಕನಸುಗಳನ್ನು ನೀಡುವ ಮೂಲಕ ಅವನ ಭವಿಷ್ಯವನ್ನು ತೋರಿಸಲು ಪ್ರಾರಂಭಿಸಿದನು; ಅವನು ಒಬ್ಬ ಆಡಳಿತಗಾರನಾಗುವ ಕನಸುಗಳನ್ನು ಮತ್ತು ಅವನ ಸಹೋದರರು ಅವನ ಮುಂದೆ ಅಡ್ಡಬಿದ್ದು ನಮಸ್ಕರಿಸುವ ಕನಸುಗಳನ್ನು ಪಡೆಯಲು ಪ್ರಾರಂಭಿಸಿದನು.

ಯೋಸೇಫನು ಮಾಡಿದ ಅತಿ ದೊಡ್ಡ ತಪ್ಪೆಂದರೆ, ಅವನು ತನ್ನ ಆತ್ಮೀಕ ಕನಸುಗಳನ್ನು ತನ್ನ ಸಹೋದರರೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸಿದ್ದು ಇದುವೇ ಅವರನ್ನು ಅವನ ಮೇಲೆ ಇನ್ನಷ್ಟು ಅಸೂಯೆಪಡುವಂತೆ ಮಾಡಿ,ಕಡೆಗೆ ಅವರು ಅವನನ್ನು ಕೊಲ್ಲುವಷ್ಟು  ಯೋಚಿಸುವಂತೆ ಮಾಡಿತ್ತು (ಆದಿಕಾಂಡ 37:8). ಕೊನೆಯಲ್ಲಿ, ಅವರು ಅವನನ್ನು ಐಗುಪ್ತಕ್ಕೆ ಗುಲಾಮನಾಗಿ ಮಾರಿದರು. 

ದೇವರ ಹೃದಯಕ್ಕೆ ಸರಿಹೊಂದುವ ಮನುಷ್ಯನಾದ ದಾವೀದನು ಸಹ ಅಸೂಯೆ ವಿರುದ್ಧ ಹೋರಾಡಬೇಕಾಯಿತು "ದಾವೀದನು ಫಿಲಿಷ್ಟಿಯನನ್ನು ಸಂಹರಿಸಿ ಸರ್ವಜನರೊಡನೆ ಹಿಂದಿರುಗಿ ಬರುವಾಗ ಇಸ್ರಾಯೇಲ್ಯರ ಎಲ್ಲಾ ಪಟ್ಟಣಗಳಿಂದ ಸ್ತ್ರೀಯರು ಹೊರಗೆ ಬಂದು ದಮ್ಮಡಿತಾಳಗಳನ್ನು ಹಿಡಿದು ಸಂತೋಷದಿಂದ ಹಾಡುತ್ತಾ ಕುಣಿಯುತ್ತಾ ಅರಸನಾದ ಸೌಲನನ್ನು ಎದುರುಗೊಂಡರು. ಅವರು ಪರಸ್ಪರವಾಗಿ - ಸೌಲನು ಸಾವಿರಗಟ್ಟಳೆಯಾಗಿ ಕೊಂದನು; ದಾವೀದನು ಹತ್ತು ಸಾವಿರಗಟ್ಟಳೆಯಾಗಿ ಕೊಂದನು ಎಂದು ಹಾಡಿದರು. ಈ ಮಾತುಗಳ ದೆಸೆಯಿಂದ ಸೌಲನಿಗೆ ಬಹುವ್ಯಸನವೂ ಕೋಪವೂ ಉಂಟಾಗಿ ಅವನು - ದಾವೀದನು ಹತ್ತು ಸಾವಿರ ಗಟ್ಟಳೆಯಾಗಿ ಕೊಂದನೆಂದೂ ನಾನು ಸಾವಿರಗಟ್ಟಳೆಯಾಗಿ ಕೊಂದೆನೆಂದೂ ಹಾಡುತ್ತಾರಲ್ಲಾ! ರಾಜತ್ವದ ಹೊರತು ಅವನಿಗೆ ಇನ್ನೇನು ಕಡಿಮೆಯಾದ ಹಾಗಾಯಿತು ಅಂದುಕೊಂಡು ಅಂದಿನಿಂದ ಅವನ ಮೇಲೆ ಕಣ್ಣಿಟ್ಟನು." (1 ಸಮುವೇಲ 18:6-8)

ದಾವೀದನು ತನಗಿಂತ ಹೆಚ್ಚು ಯಶಸ್ವಿಯಾಗಿದ್ದರಿಂದ ಮತ್ತು ಜನರಿಂದ ಹೆಚ್ಚಿನ ಪ್ರಶಂಸೆಯನ್ನು ಪಡೆದಿದ್ದರಿಂದ ಸೌಲನಿಗೆ ದಾವೀದನ ಮೇಲೆ ಅಸೂಯೆ ಹುಟ್ಟಿತು. ನಿಮ್ಮ ಸುತ್ತಲಿನ ಜನರಿಗಿಂತ ನೀವು ದೇವರಿಂದ ಹೆಚ್ಚಾಗಿ ಬಳಸಲ್ಪಡುತ್ತಿರುವಾಗ, ನಿಮ್ಮ ವಿರುದ್ಧ ಅಸೂಯೆ ಹುಟ್ಟುತ್ತದೆ ಅದಕ್ಕೆ ಸಿದ್ಧರಾಗಿರಿ.

 ದೇವರು ನಿಮ್ಮನ್ನು ಏನು ಮಾಡಬೇಕೆಂದು ಕರೆದಿದ್ದಾರೋ ಅದನ್ನು ಮಾಡುವುದನ್ನು ನಿಲ್ಲಿಸಬೇಡಿ. ಅದನ್ನು ಇನ್ನಷ್ಟು ಮಾಡಿ. ಅದನ್ನು ಇನ್ನೂ ಉತ್ತಮವಾಗಿ ಮಾಡಿ. ನಮ್ಮ ಕರ್ತನಾದ ಯೇಸು ಕೂಡ ಆತನ ವಿರುದ್ಧದ ಅಸೂಯೆಯ ಮನೋಭಾವವನ್ನು ಜಯಿಸಬೇಕಾಯಿತು.

 ಪೊಂತ್ಯ ಪಿಲಾತನು ಯೇಸುವನ್ನು ಬಿಡುಗಡೆ ಮಾಡಲು ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾಗ, ಮತ್ತಾಯ 27:18 ರಲ್ಲಿ ಧರ್ಮಗ್ರಂಥವು ಹೇಳುತ್ತದೆ, "ಅವರು ಅಸೂಯೆಯಿಂದಲೇ ಆತನನ್ನು ಒಪ್ಪಿಸಿದ್ದಾರೆಂದು ಪೊಂತ್ಯ ಪಿಲಾತನಂತಹ ಆವಿಶ್ವಾಸಿಗೂ ಸಹ ತಿಳಿದಿತ್ತು. ಫರಿಸಾಯರು ಮತ್ತು ಸದ್ದುಕಾಯರು ಯೇಸುವಿನ ಮೇಲೆ ಅಸೂಯೆಯಿಂದಲೇ ಸುಳ್ಳು ಆರೋಪ ಹೊರಿಸಿದರು ಎಂಬುದು ಅವನಿಗೆ ಸ್ಪಷ್ಟವಾಗಿತ್ತು.

  ಯೇಸು ಔಪಚಾರಿಕವಾಗಿ ಶಿಕ್ಷಣ ಪಡೆಯದಿದ್ದರೂ ಜನಸಮೂಹವು ಆತನ ಬಳಿಗೆ ಹೋಗುತ್ತಿತ್ತು ಎಂಬ ಅಂಶವು ಫರಿಸಾಯರು ಮತ್ತು ಸದ್ದುಕಾಯರಿಂದ ಸಹಿಸಲಾಗಲಿಲ್ಲ. ಜನರು ಅಷ್ಟೊಂದು ಆತನನ್ನು ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ ಎಂಬುದನ್ನು ಅವರಿಗೆ ನೋಡಿ ಸಹಿಸಲಾಗಲಿಲ್ಲ. ನೀವು ಬದುಕಿರುವವರೆಗೂ ಇದನ್ನು ನೆನಪಿಡಿ. 

ನೀವು ಅಸೂಯೆಯೊಂದಿಗೆ ಹೋರಾಡುತ್ತಿದ್ದರೆ, ಅದು ನಿಮ್ಮ ಜೀವನದಲ್ಲಿರುವ ಯಶಸ್ಸು ಅಥವಾ ಅನುಗ್ರಹದ ಅಳತೆಯ ಸೂಚಕವಾಗಿದೆ.

ತಂದೆಯೇ, ನನ್ನ ಜೀವನವನ್ನು ನುಂಗಲು ಪ್ರಯತ್ನಿಸುತ್ತಿರುವ ಪ್ರತಿಯೊಂದು ಅಸೂಯೆಯ ಆತ್ಮವನ್ನು ಯೇಸುನಾಮದಲ್ಲಿ ನಾನು ಬಂಧಿಸುತ್ತೇನೆ.

Bible Reading: Proverbs 16-19
Prayer
ತಂದೆಯೇ, ನನ್ನ ಜೀವನವನ್ನು ನುಂಗಲು ಪ್ರಯತ್ನಿಸುತ್ತಿರುವ ಪ್ರತಿಯೊಂದು ಅಸೂಯೆಯ ಆತ್ಮವನ್ನು ಯೇಸುನಾಮದಲ್ಲಿ ನಾನು ಬಂಧಿಸುತ್ತೇನೆ.

Join our WhatsApp Channel


Most Read
● ನೀವು ಯಾರೊಂದಿಗೆ ನಡೆಯುತ್ತಿದ್ದೀರಿ?
● ಸಮಾಧಾನದ ಮೂಲ :ಕರ್ತನಾದ ಯೇಸು
● ದಿನ 02:40 ದಿನಗಳ ಉಪವಾಸ ಪ್ರಾರ್ಥನೆ ದಿನಗಳು
● ಧೈರ್ಯವಾಗಿರಿ.!
● ಬೀಜದ ಕುರಿತ ಒಂದು ಆಘಾತಕಾರಿ ಸತ್ಯ.
● ಜನರು ನೆಪಗಳನ್ನು ಹೇಳಲು ಇರುವ ಕಾರಣಗಳು - ಭಾಗ 1
● ನಿಮ್ಮ ಗುರಿಯನ್ನು ತಲುಪಲು ಬಲವನ್ನು ಹೊಂದಿಕೊಳ್ಳಿರಿ.
Comments
CONTACT US
Phone: +91 8356956746
+91 9137395828
WhatsApp: +91 8356956746
Email: [email protected]
Address :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
GET APP
Download on the App Store
Get it on Google Play
JOIN MAILING LIST
EXPLORE
Events
Live
NoahTube
TV
Donation
Manna
Praises
Confessions
Dreams
Contact
© 2025 Karuna Sadan, India.
➤
Login
Please login to your NOAH account to Comment and Like content on this site.
Login