"ಹೀಗಿರಲಾಗಿ ನೀವು ದೇವರಿಂದ ಆರಿಸಿಕೊಂಡವರೂ ಪ್ರತಿಷ್ಠಿತರೂ ಪ್ರಿಯರೂ ಆಗಿರುವದರಿಂದ ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ." (ಕೊಲೊಸ್ಸೆ 3:12)
"ಸಂದರ್ಭಕ್ಕನುಕ್ಕನುಗುಣವಾಗಿ ಧಿರಿಸುಗಳನ್ನು ಧರಿಸಿಕೊಳ್ಳಿ" ಎಂಬ ವಾಕ್ಯವನ್ನು ನೀವು ಕೇಳಿದ್ದೀರಾ? ಕುಟುಂಬದಲ್ಲಿ ಅಥವಾ ಕಚೇರಿಯಲ್ಲಿ ವಿಶೇಷ ಸಂದರ್ಭವಿದ್ದರೆ, ನಾವು ಅದಕ್ಕೆ ಸೂಕ್ತವಾಗಿ ಧರಿಸಿದ್ದೇವಾ ಎಂದು ಖಚಿತಪಡಿಸಿಕೊಳ್ಳುತ್ತೇವೆ.
ಅದೇ ರೀತಿ, ಪ್ರತಿದಿನ ನಾವು ದಯೆಯಿಂದ ನಮ್ಮನ್ನು ಧರಿಸಿಕೊಳ್ಳಬೇಕು ಎಂದು ಅಪೊಸ್ತಲ ಪೌಲನು ನಮಗೆ ನೆನಪಿಸುತ್ತಾನೆ.
ದಯೆ ಎಂಬುದು ಕೇವಲ ಮಾತಿಗಿಂತ ಹೆಚ್ಚಿನದಾಗಿರುತ್ತದೆ. ಅದು ಒಳ್ಳೆಯ ಭಾವನೆಗಳಿಗಿಂತ ಹೆಚ್ಚಿನದು. ಅದು ಪ್ರೀತಿಯ ಪ್ರಾಯೋಗಿಕ ಪ್ರದರ್ಶನವಾಗಿರುತ್ತದೆ. ನಿಜವಾದ ದಯೆಯು ಆತ್ಮನಿಂದ ಹುಟ್ಟುವಂತದಾಗಿದೆ (ಗಲಾತ್ಯ 5:22 ನೋಡಿ).
ನೀವು ಸಂಪರ್ಕಕ್ಕೆ ಬರುವ ಜನರಿಗೆ ದಯೆ ತೋರಿಸಲು ಒಂದು ಉತ್ತಮ ಕಾರಣವೆಂದರೆ ಆದಿಕಾಂಡ 8:22 ರಲ್ಲಿ ಕಂಡುಬರುವ ಬೀಜಕಾಲ ಮತ್ತು ಕೊಯ್ಲು ತತ್ವ.
"ಭೂವಿುಯು ಇರುವ ತನಕ ಬಿತ್ತನೆಯೂ ಕೊಯಿಲೂ, ಚಳಿಯೂ ಸೆಕೆಯೂ, ಬೇಸಿಗೆಕಾಲವೂ ಹಿಮಕಾಲವೂ, ಹಗಲೂ ಇರುಳೂ ಇವುಗಳ ಕ್ರಮ ತಪ್ಪುವದೇ ಇಲ್ಲ ಅಂದುಕೊಂಡನು."
ಭೂಮಿ ಇರುವವರೆಗೆ (ಮತ್ತು ಅದು ಬಹಳ ದೀರ್ಘ ಸಮಯ), ಬಿತ್ತನೆ ಮತ್ತು ಕೊಯ್ಲು ಮಾಡುವ ತತ್ವವು ನೈಸರ್ಗಿಕ ಮತ್ತು ಆತ್ಮೀಕ ಕ್ಷೇತ್ರದಲ್ಲಿಯೂ ಜಾರಿಯಲ್ಲಿರುತ್ತದೆ ಎಂದು ಇದು ಸೂಚಿಸುತ್ತದೆ. ಬೀಜ ಬಿತ್ತನೆಯ ಸಮಯ ಮತ್ತು ಕೊಯ್ಲಿನ ನಿಯಮದ ಪ್ರಕಾರ, ನಮ್ಮ ಸಂಪರ್ಕಕ್ಕೆ ಬರುವ ಜನರಿಗೆ ನಾವು ದಯೆ ತೋರಿದಾಗ, ನಾವು ದಯೆ ತೋರಿಸಿದ ವ್ಯಕ್ತಿಯಲ್ದಿದ್ದರೂ ಬೇರೆ ಯಾರಾದರೂ ಖಂಡಿತವಾಗಿಯೂ ನಮ್ಮೊಂದಿಗೆ ದಯೆಯಿಂದ ವರ್ತಿಸುತ್ತಾರೆ.
ಜ್ಞಾನೋಕ್ತಿ 11:17 ನಮಗೆ ಹೇಳುತ್ತದೆ, ದಯೆಯುಳ್ಳವನು ತನಗೆ ತಾನೇ ಒಳ್ಳೆಯದನ್ನು ಮಾಡಿಕೊಳ್ಳುತ್ತಾನೆ, ಕಠೋರಿಯು ತನ್ನ ಶರೀರವನ್ನು ಬಾಧಿಸಿಕೊಳ್ಳುತ್ತಾನೆ." ಆದ್ದರಿಂದ ನೀವು ಇತರರಿಗೆ ದಯೆ ತೋರಿಸಿದಾಗ ನಿಮ್ಮ ಆತ್ಮವು ಸುಧಾರಿಸುವುದನ್ನು ನೀವು ನೋಡುತ್ತೀರಿ. ನೀವು ಕೂಡ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನ ಪಡೆಯುತ್ತೀರಿ.
" ಅವನ ಜನರು ಒಬ್ಬ ಈಜಿಪ್ಟಿನವನು ಅಡವಿಯಲ್ಲಿ ಬಿದ್ದಿರುವುದನ್ನು ಕಂಡು, ಅವನನ್ನು ದಾವೀದನ ಬಳಿಗೆ ತಂದು, ಅವನಿಗೆ ರೊಟ್ಟಿ ಕೊಟ್ಟರು. ಅವನು ತಿಂದನು. ಅವನಿಗೆ ನೀರನ್ನು ಕುಡಿಸಿ, ಅಂಜೂರ ಹಣ್ಣಿನ ಉಂಡೆಯನ್ನೂ, ಒಣಗಿದ ಎರಡು ದ್ರಾಕ್ಷಿ ಗೊಂಚಲುಗಳನ್ನೂ ಅವನಿಗೆ ಕೊಟ್ಟರು. ಅವನು ಅವುಗಳನ್ನು ತಿಂದಾಗ ಚೇತರಿಸಿಕೊಂಡನು. ಅವನು ರಾತ್ರಿ ಹಗಲು ಮೂರು ದಿವಸದಿಂದ ರೊಟ್ಟಿ ತಿಂದಿರಲಿಲ್ಲ, ನೀರನ್ನೂ ಕುಡಿದಿರಲಿಲ್ಲ." (1 ಸಮುವೇಲ 30:11-12)
'ನನ್ನ ದಾರಿ ನಮ್ಮದು ' ಎನ್ನುವ ತಮ್ಮ ಕುರಿತು ಮಾತ್ರ ಕಾಳಜಿ ವಹಿಸುವ ಈ ಜಗತ್ತಿನಲ್ಲಿ, ದಯೆಯು ಎದ್ದು ಕಾಣುತ್ತದೆ ಮತ್ತು ಯಾವಾಗಲೂ ಇತರರ ಒಳಿತನ್ನು ಬಯಸುತ್ತದೆ. ದಾವೀದ ಮತ್ತು ಅವನ ಜನರು ಆ ಮನುಷ್ಯನಿಗೆ ದಯೆ ತೋರಿಸಿದರು ಮತ್ತು ಅವನನ್ನು ಆರೋಗ್ಯವಾಗಿಡಲು ಪ್ರಯತ್ನಿಸಿದರು. ಅಮಾಲೇಕ್ಯರು ಅವರಿಂದ ಕದ್ದ ಎಲ್ಲವನ್ನೂ ಮರುಪಡೆಯಲು ದಾವೀದನಿಗೆ ಸಹಾಯ ಮಾಡಿದ ನಿರ್ಣಾಯಕ ಮಾಹಿತಿಯನ್ನು ನೀಡಿದವನು ಇದೇ ವ್ಯಕ್ತಿ. (1ಸಮುವೇಲ 30:13-15)
ದಯೆ ಮತ್ತು ಪುನಃಸ್ಥಾಪನೆಯ ತತ್ವವು ಆಳವಾದ ಸಂಬಂಧ ಹೊಂದಿದೆ. ಈ ಸತ್ಯವನ್ನು ಕಳೆದುಕೊಳ್ಳಬೇಡಿ. ಕೊನೆಯದಾಗಿ, ನಮ್ಮ ದಯೆಯು ನಮ್ಮ ತಂದೆಯ ಹೃದಯವನ್ನು ಪ್ರತಿಬಿಂಬಿಸುತ್ತದೆ. "ಒಬ್ಬರಿಗೊಬ್ಬರು ದಯೆಯಿಂದಿರಿ, ಕೋಮಲ ಹೃದಯದಿಂದಿರಿ, ಕ್ರಿಸ್ತನಲ್ಲಿ ದೇವರು ನಿಮ್ಮನ್ನು ಕ್ಷಮಿಸಿದಂತೆ ಒಬ್ಬರನ್ನೊಬ್ಬರು ಕ್ಷಮಿಸಿ" (ಎಫೆಸ 4:32).
ಪ್ರಾರ್ಥನೆ
ತಂದೆಯೇ, ನನ್ನ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬರಿಗೂ ದಯೆಯಿಂದಿರಲು ನನಗೆ ದಯೆಯನ್ನು ಯೇಸುನಾಮದಲ್ಲಿ ಅನುಗ್ರಹಿಸು ಆಗ ನಾನು ನಿನ್ನ ದೈವಿಕ ಸ್ವಭಾವವನ್ನು ಪ್ರಾಯೋಗಿಕವಾಗಿ ಪ್ರತಿಬಿಂಬಿಸಬಹುದು. ಆಮೆನ್.
Bible Reading: Psalms 143-150; Proverbs 1
ಪ್ರಾರ್ಥನೆಗಳು
ತಂದೆಯೇ, ನನ್ನ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬರಿಗೂ ದಯೆಯಿಂದಿರಲು ನನಗೆ ದಯೆಯನ್ನು ಯೇಸುನಾಮದಲ್ಲಿ ಅನುಗ್ರಹಿಸು ಆಗ ನಾನು ನಿನ್ನ ದೈವಿಕ ಸ್ವಭಾವವನ್ನು ಪ್ರಾಯೋಗಿಕವಾಗಿ ಪ್ರತಿಬಿಂಬಿಸಬಹುದು. ಆಮೆನ್.
Join our WhatsApp Channel

Most Read
● ನಂಬಿಕೆಯ ಜೀವಿತ● ಮನುಷ್ಯ ಸ್ವಭಾವ
● ಅಂತ್ಯಕಾಲದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು : #1
● ಅಧರ್ಮದ ಆಳ್ವಿಕೆಯ ಬಲವನ್ನು ಮುರಿಯುವುದು-II
● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.
● ಕರ್ತನೊಂದಿಗೆ ನಡೆಯುವುದು
● ಕ್ರೈಸ್ತರು ದೇವದೂತರಿಗೆ ಆಜ್ಞೆ ನೀಡಬಹುದೇ?
ಅನಿಸಿಕೆಗಳು