english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ನೀವು ಹೊಟ್ಟೆಕಿಚ್ಚುನ್ನು ಹೇಗೆ ನಿರ್ವಹಿಸಬೇಕು
ಅನುದಿನದ ಮನ್ನಾ

ನೀವು ಹೊಟ್ಟೆಕಿಚ್ಚುನ್ನು ಹೇಗೆ ನಿರ್ವಹಿಸಬೇಕು

Friday, 18th of July 2025
2 0 101
Categories : ಆಶೀರ್ವಾದ ( Blessing)
ಹೊಟ್ಟೆಕಿಚ್ಚು ಪಡುವವರ ನಡುವೆಯೂ ಯೋಸೇಫನು ಯಶಸ್ಸನ್ನು ಸಾಧಿಸಿದ ರಹಸ್ಯವನ್ನು ಧರ್ಮಗ್ರಂಥವು ಪ್ರಕಟ ಪಡಿಸುತ್ತದೆ.

"ಯೆಹೋವನು ಯೋಸೇಫನ ಸಂಗಡ ಇದ್ದದರಿಂದ ಅವನು ಏಳಿಗೆಯಾಗಿ ಐಗುಪ್ತ್ಯನಾದ ತನ್ನ ದಣಿಯ ಮನೆಯೊಳಗೆ ಸೇವಕನಾದನು..." (ಆದಿಕಾಂಡ 39:2) 

ಎಷ್ಟೇ ಜನರು ನಿಮ್ಮ ಬಗ್ಗೆ  ಅಸೂಯೆ ಪಟ್ಟರೂ, ಅವರು ನಿಮ್ಮ ವಿರುದ್ಧ ಏನು ಹೇಳಿದರೂ ಮತ್ತು ಏನು ಮಾಡಿದರೂ ಪರವಾಗಿಲ್ಲ, ನೀವು ದೇವರ ಪ್ರಸನ್ನತೆಯಲ್ಲೇ ಇದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ಎಷ್ಟೇ ಕಷ್ಟವಾದರೂ, ಕರ್ತನೊಂದಿಗಿನ ನಿಮ್ಮ ಸಂಪರ್ಕವನ್ನು ಕಾಪಾಡಿಕೊಳ್ಳಿ.

ಹೊಟ್ಟೆಕಿಚ್ಚಿನ ನಕಾರಾತ್ಮಕತೆಯು  ದೇವರ ಸನ್ನಿಧಿಯಿಂದ ನಿಮ್ಮನ್ನು ದೂರಮಾಡಲು ಬಿಡಬೇಡಿ. ಅಸೂಯೆಯ ಬಾಣಗಳು ನಿಮ್ಮನ್ನು ದೇವರ ಮನೆಯಿಂದ ದೂರವಿಡಲು ಬಿಡಬೇಡಿ. ಬದಲಾಗಿ, ಆಗಲೇ ನೀವು ಕರ್ತನಿಗೆ ಇನ್ನಷ್ಟು ಹತ್ತಿರವಾಗಬೇಕು. ಯೋಸೇಫನನ್ನು ಗುಲಾಮನಾಗಿ ಖರೀದಿಸಿದ ವ್ಯಕ್ತಿಯೂ ಸಹ ಕರ್ತನು ಯೋಸೇಫನೊಂದಿಗೆ ಇರುವುದನ್ನು ನೋಡಿ ಅವನನ್ನು ತನ್ನ ಮನೆಯೆಲ್ಲದರ ಮೇಲೆ ವ್ಯವಸ್ಥಾಪಕನನ್ನಾಗಿ ಮಾಡಿದನು.

"ಅವನು ಯೋಸೇಫನನ್ನು ತನ್ನ ಮನೆಯ ಮೇಲೆಯೂ ಆಸ್ತಿಯ ಮೇಲೆಯೂ ಅಧ್ಯಕ್ಷನಾಗಿ ಇಟ್ಟಂದಿನಿಂದ ಯೆಹೋವನು ಯೋಸೇಫನ ನಿವಿುತ್ತವಾಗಿ ಆ ಐಗುಪ್ತ್ಯನ ಮನೆಯನ್ನು ಅಭಿವೃದ್ಧಿಗೆ ತಂದನು. ಮನೆಯಲ್ಲಾಗಲಿ ಹೊಲದಲ್ಲಾಗಲಿ ಅವನಿಗಿದ್ದ ಎಲ್ಲಾದರ ಮೇಲೆ ಯೆಹೋವನ ಆಶೀರ್ವಾದವುಂಟಾಯಿತು." (ಆದಿಕಾಂಡ 39:5)

ಎರಡನೆಯದಾಗಿ, ಪೋಟೀಫರನ ಮನೆಯು ಆಶೀರ್ವದಿಸಲ್ಪಟ್ಟಿತು ಏಕೆಂದರೆ ಅವನು ತನ್ನ ಜೀವನದ ಮೇಲೆ ದೇವರ ಕೃಪೆ ಮತ್ತು ಅಭಿಷೇಕವನ್ನು ಹೊತ್ತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದನು. ಇದು ಒಂದು ಪ್ರಬಲ ತತ್ವ; ನೀವು ಸರಿಯಾದ ಜನರೊಂದಿಗೆ ಸಂಪರ್ಕ ಹೊಂದಿರಬೇಕು. ನಿಮ್ಮ ಯಶಸ್ಸಿನ ಬಗ್ಗೆ ಹೊಟ್ಟೆಕಿಚ್ಚು ಪಡುವ ಜನರೊಂದಿಗಿನ ಸಂಪರ್ಕ ಕಡಿತಗೊಳಿಸಿ ಅಥವಾ ನಿಮ್ಮ ಮಾನ್ಯತೆಯನ್ನು ಮಿತಿಗೊಳಿಸಿ.

ಜ್ಞಾನಿಗಳ ಜೊತೆ ನಡೆಯುವವನು ಜ್ಞಾನಿಯಾಗುವನು, ಆದರೆ ಮೂರ್ಖರ ಒಡನಾಡಿ ನಾಶವಾಗುವನು. (ಜ್ಞಾನೋಕ್ತಿ 13:20)

ಸೈತಾನನ ತಂತ್ರಗಳಲ್ಲಿ ಒಂದು, ಜ್ಞಾನಿಗಳಾದ ಮತ್ತು ಪ್ರಬುದ್ಧರಾದ ಜನರಿಂದ ನಿಮ್ಮನ್ನು ಸಂಪರ್ಕ ಕಡಿತಗೊಳಿಸಲು ಪ್ರಯತ್ನಿಸುವುದು, ಏಕೆಂದರೆ ನೀವು ದೇವರ ಕೃಪೆ ಮತ್ತು ಶಕ್ತಿಯನ್ನು ತಮ್ಮ ಜೀವನದ ಮೇಲೆ ಹೊತ್ತ ಜನರೊಂದಿಗೆ ಸಂಪರ್ಕ ಹೊಂದಿರುವವರೆಗೆ, ನೀವು ಬೆಳೆಯುತ್ತೀರಿ ಎಂದು ಅವನಿಗೆ ತಿಳಿದಿದೆ. 

ಕೊನೆಯದಾಗಿ, ನಾನು ನಿಮಗೆ ಇನ್ನೂ ಕೆಲವು ಪ್ರಾಯೋಗಿಕ ಸಲಹೆಗಳನ್ನು ನೀಡುತ್ತೇನೆ. ಇಂದು, ಸಾಮಾಜಿಕ ಮಾಧ್ಯಮವು ಜನರು ಪರದೆಯ ಹಿಂದೆ ಅಡಗಿಕೊಂಡು ಅವರಿಗೆ ಸರಿಯಾಗಿ ತಿಳಿದಿಲ್ಲದ ಜನರ ಮೇಲೆಯೂ ಅವಮಾನಗಳ ಮಾತುಗಳನ್ನು ಎಸೆಯುವುದನ್ನು ತುಂಬಾ ಸುಲಭಗೊಳಿಸಿದೆ. 

ಯಾರಾದರೂ ನಿಮ್ಮ ವೈಯಕ್ತಿಕ ಪುಟ ಅಥವಾ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ನಿಮ್ಮ ಬಗ್ಗೆ ನಕಾರಾತ್ಮಕವಾಗಿ ಏನಾದರೂ ಹೇಳುತ್ತಿದ್ದರೆ, ನೀವು ಅವರ ಕಾಮೆಂಟ್‌ಗಳನ್ನು ಅಳಿಸಿ. ಆದಾಗ್ಯೂ, ಅವರ ನಡವಳಿಕೆ ಮುಂದುವರಿದರೆ, ಆ ವ್ಯಕ್ತಿಯನ್ನು ಅನ್‌ಫ್ರೆಂಡ್ ಮಾಡಿ ಅಥವಾ ನಿರ್ಬಂಧಿಸಿ ಮತ್ತು ವರದಿ ಮಾಡಿ. ಆನ್‌ಲೈನ್ ಬೆದರಿಸುವಿಕೆಯನ್ನು ಸಹಿಸಿಕೊಳ್ಳಬೇಕಾದ ಅವಶ್ಯಕತೆ ನಿಮಗಿಲ್ಲ.


Bible Reading: Proverbs 20-24
ಅರಿಕೆಗಳು
ಓ ಸೇನಾಧೀಶ್ವರನಾದ ಕರ್ತನೇ. ಯೇಸುವಿನ ಹೆಸರಿನಲ್ಲಿ ನಾನು ನಿಮಗೇ ಮೊರೆಯಿಡುತ್ತೇನೆ. ನನ್ನ ವಿರುದ್ಧ ರೂಪುಗೊಂಡ ಯಾವುದೇ ಆಯುಧವು ಜಯಿಸದು ಎಂಬುದನ್ನು ನಾನು ಅಂಗೇಕರಿಸುತ್ತೇನೆ . ನನ್ನ ವಿರುದ್ಧ ಹೂಡುವ ಪ್ರತಿಯೊಂದು ಅಸೂಯೆಯ ಬಾಣವು ಪವಿತ್ರಾತ್ಮನ ಬೆಂಕಿಯಿಂದ ನಾಶವಾಗಲಿ. ಅಸೂಯೆಯಿಂದ ನನ್ನ ಹಾದಿಯಲ್ಲಿ ಉಂಟಾದ ಪ್ರತಿಯೊಂದು ಅಡಚಣೆ ಮತ್ತು ತಡೆಗಳನ್ನು ಬೇರುಸಹಿತ ಕಿತ್ತುಹಾಕು. ಓ ಕರ್ತನೇ, ನನ್ನ ವಿಶ್ವಾಸಾರ್ಹತೆಗೆ( ಸಾಕ್ಷಿಗೆ) ಆದ ಯಾವುದೇ ಹಾನಿಯನ್ನು ಯೇಸುನಾಮದಲ್ಲಿ ಪುನಃಸ್ಥಾಪಿಸು.

Join our WhatsApp Channel


Most Read
● ಕನಸು ಕಾಣುವ ಧೈರ್ಯ
● ಗೌರವ ಮತ್ತು ಮೌಲ್ಯ
● ದಿನ 19:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಸಿಟ್ಟಿನ ಬಲೆಯಿಂದ ದೂರ ಉಳಿಯುವುದು
● ಸ್ವಸ್ಥ ಬೋಧನೆಯ ಪ್ರಾಮುಖ್ಯತೆ
● ದೇವರಿಗೇ ಪ್ರಥಮ ಸ್ಥಾನ ನೀಡುವುದು #2.
● "ಆತನಿಗೆ ಎಲ್ಲವನ್ನೂ ತಿಳಿಸಿರಿ"
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್