english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಯೂದನ ಪತನದಿಂದ ಕಲಿಯಬಹುದಾದ 3 ಪಾಠಗಳು
ಅನುದಿನದ ಮನ್ನಾ

ಯೂದನ ಪತನದಿಂದ ಕಲಿಯಬಹುದಾದ 3 ಪಾಠಗಳು

Thursday, 13th of November 2025
1 0 62
Categories : ಆಯ್ಕೆಗಳು (Choices) ಗುಣ(character) ಪಾಪ (sin) ಮಾನವ ಹೃದಯ (Human Heart) ವಂಚನೆ (Deception)
ಯೇಸುವಿನ ಮೂಲ ಹನ್ನೆರಡು ಶಿಷ್ಯರಲ್ಲಿ ಒಬ್ಬನಾದ ಇಸ್ಕಾರಿಯೋತ ಯೂದನು, ಶತ್ರುವಿನ ಪ್ರಲೋಭನೆಗಳಿಗೆ ಮಣಿದು ತನ್ನನ್ನು ಅಪಾಯಕ್ಕೆ ಗುರಿಮಾಡಿಕೊಂಡ ಪಶ್ಚಾತ್ತಾಪಪಡದ ಹೃದಯದ ಸ್ಪಷ್ಟ ಜ್ಞಾಪನೆಯಾಗಿ ಕಾರ್ಯನಿರ್ವಹಿಸುವ ಎಚ್ಚರಿಕೆಯ ಕಥೆಯನ್ನು ನೀಡುತ್ತಾನೆ. ಯೂದನ ಕಥೆಯ ಮೂಲಕ, ಪಾಪದ ಸ್ವರೂಪ ಮತ್ತು ನಮ್ಮ ಹೃದಯಗಳನ್ನು ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ನಾವು ಅಮೂಲ್ಯವಾದ ಒಳನೋಟಗಳನ್ನು ಪಡೆಯುತ್ತೇವೆ.

ಪಾಠ #1: ಸಣ್ಣ ಸಣ್ಣ ಹೊಂದಾಣಿಕೆಗಳು ದೊಡ್ಡ ವೈಫಲ್ಯಗಳಿಗೆ ಕಾರಣವಾಗಬಲ್ಲವು.

"ಹಣದ ಪ್ರೀತಿಯು ಸಕಲ ವಿಧವಾದ ಕೆಟ್ಟತನಕ್ಕೆ ಬೇರಾಗಿದೆ. ಕೆಲವರು ಹಣಕ್ಕಾಗಿ ಆತುರಪಟ್ಟು ನಂಬಿಕೆಯಿಂದ ದೂರಹೋಗಿ ಅನೇಕ ದುಃಖಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ".(1 ತಿಮೊಥೆಯ 6:10)

ಯೂದನ ಪತನವು ರಾತ್ರೋರಾತ್ರಿ ಸಂಭವಿಸಲಿಲ್ಲ. ಇದು ಸಣ್ಣ ಅಪರಾಧಗಳೊಂದಿಗೆ ಪ್ರಾರಂಭವಾಯಿತು. ಹಣದ ಚೀಲದಿಂದ ಕದಿಯುವ ಮೂಲಕ, ಯೂದನು ದುರಾಶೆಯು ತನ್ನ ಹೃದಯದಲ್ಲಿ ನುಸುಳಲು ಅವಕಾಶ ಮಾಡಿಕೊಟ್ಟನು. ಅಂತಹ ಅತ್ಯಲ್ಪವೆಂದು ತೋರುವ ಆಯ್ಕೆಗಳೇ ಹೆಚ್ಚಾಗಿ ಹೆಚ್ಚಿನ ಪತನಗಳಿಗೆ ಅಡಿಪಾಯ ಹಾಕುತ್ತವೆ. ಈ ಸಣ್ಣ ಹೊಂದಾಣಿಕೆಗಳನ್ನು ಗುರುತಿಸಿಕೊಂಡು ಅವು ಇನ್ನು ಹೆಚ್ಚು ಅಪಾಯಕಾರಿಯಾದ ಯಾವುದೋ ಒಂದಕ್ಕೆ ಹಿಮಪಾತವಾಗುವ ಮೊದಲು,ಅದನ್ನು ಪರಿಹರಿಸುವುದು ಅತ್ಯಗತ್ಯ.

ಪಾಠ #2: ಕೇವಲ ಬಾಯಿಮಾತಿಂದ ಮಾಡುವ ಸೇವೆಯು ರೂಪಾಂತರವನ್ನು ಖಾತರಿಪಡಿಸುವುದಿಲ್ಲ.

“ನನ್ನನ್ನು, ‘ಸ್ವಾಮೀ, ಸ್ವಾಮೀ,’ ಎಂದು ಹೇಳುವವರೆಲ್ಲರೂ ಪರಲೋಕ ರಾಜ್ಯವನ್ನು ಪ್ರವೇಶಿಸುವುದಿಲ್ಲ. ಆದರೆ ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತವನ್ನು ಮಾಡುವವನೇ ಅದರಲ್ಲಿ ಪ್ರವೇಶಿಸುವನು.(ಮತ್ತಾಯ 7:21) 


ಯೂದನು ಯೇಸುವಿನ ಆಪ್ತ ವಲಯದಲ್ಲಿ ಇದ್ದನು, ಯಾವಾಗಲೂ ಆತನ ಪಕ್ಕದಲ್ಲಿ ಕುಳಿತು, ಆತನು ಮಾಡುತ್ತಿದ್ದ ಅದ್ಭುತಗಳನ್ನು ವೀಕ್ಷಿಸುತ್ತಾ ಆತನ ಬೋಧನೆಗಳನ್ನು ನೇರವಾಗಿ ಕೇಳುತ್ತಿದ್ದನು. ಆದಾಗ್ಯೂ, ಕ್ರಿಸ್ತನ ಸಾಮೀಪ್ಯವು ಸ್ವಯಂಚಾಲಿತವಾಗಿ ಅವನನ್ನು  ಮಾನಸಾಂತರ ಪಡಿಸಲಿಲ್ಲ. ನಿಮ್ಮನ್ನು ನೀವು ಕ್ರೈಸ್ತರು ಎಂದು ಕರೆದುಕೊಳ್ಳುವಂತದ್ದು ಏನನ್ನೂ ಬದಲಾಯಿಸುವುದಿಲ್ಲ. ಅದಕ್ಕೆ ಪ್ರಾಮಾಣಿಕವಾದ ಹೃದಯ ಮತ್ತು ಯಥಾರ್ಥವಾದ ಪಶ್ಚಾತ್ತಾಪ ಬೇಕಾಗುತ್ತದೆ. ನಿಜವಾದ ಸಂಬಂಧ ಮತ್ತು ಕ್ರಿಸ್ತನಿಗೆ ಶರಣಾಗತಿ ಇಲ್ಲದೆ ಹೋದರೆ, ಎಷ್ಟೇ ಸಾಮೀಪ್ಯವಿದ್ದರೂ ಸಹ ಅದು ಅರ್ಥಹೀನವೆಂದು ಸಾಬೀತುಪಡಿಸಬಹುದು.


 ಪಾಠ #3: ಅಪರಾಧವನ್ನು ಒಪ್ಪಿಕೊಳ್ಳದಂತ ಪಾಪವು ಶತ್ರುವಿನ ಕಾರ್ಯಕ್ಕೆ ಬಾಗಿಲು ತೆರೆಯುತ್ತದೆ.

 "ನಾವು ನಮ್ಮ ಪಾಪಗಳನ್ನು ದೇವರಿಗೆ ಅರಿಕೆಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವುದರಿಂದ ನಮ್ಮ ಪಾಪಗಳನ್ನು ಕ್ಷಮಿಸಿ, ಸಕಲ ಅನೀತಿಯಿಂದ ನಮ್ಮನ್ನು ಶುದ್ಧಿಮಾಡುವನು. (1 ಯೋಹಾನ 1:9)

ಯೂದನ ತಪ್ಪೊಪ್ಪಿಕೊಳ್ಳದ ಕಳ್ಳತನದ ಪಾಪವು ಅವನನ್ನು ಸೈತಾನನ ಪ್ರಭಾವಕ್ಕೆ ಗುರಿಯಾಗುವಂತೆ ಮಾಡಿತು. ಕ್ಷಮೆಯನ್ನು ಹುಡುಕುವ ಬದಲು, ಅವನು ತನ್ನ ಅಪರಾಧಗಳನ್ನು ಮುಚ್ಚಿಕೊಂಡು, ಶತ್ರುವಿಗೆ ನೆಲೆಯನ್ನು ನೀಡಿದನು. ಪಿಶಾಚನು ಇದನ್ನೇ ಬಂಡವಾಳ ಮಾಡಿಕೊಂಡು ಯೂದನನ್ನು ದ್ರೋಹದ ಹಾದಿಗೆ ಕರೆದೊಯ್ದನು. ಪಾಪವನ್ನು ಅರಿಕೆ ಮಾಡುವಂತದ್ದು ಕ್ಷಮೆಯನ್ನು ತರುವುದಲ್ಲದೆ, ಶತ್ರುವಿನ ದಾಳಿಯ ವಿರುದ್ಧ ರಕ್ಷಣಾತ್ಮಕ ತಡೆಗೋಡೆಯಾಗಿಯೂ ಕಾರ್ಯನಿರ್ವಹಿಸುತ್ತದೆ.

ಯೂದನ ಕಥೆಯನ್ನು ವಿಶ್ಲೇಷಿಸಿ ನೋಡುವಾಗ, ಅವನ ದ್ರೋಹದ ಪ್ರಯಾಣವು ಹಲವಾರು ಆಯ್ಕೆಗಳಿಂದ ಸುಗಮವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಪಶ್ಚಾತ್ತಾಪದ ಅನುಪಸ್ಥಿತಿ ಮತ್ತು ಪಾಪದ ಆಕರ್ಷಣೆಗೆ ಅವನು ಬಲಿಯಾಗುವುದು ಅವನನ್ನು ಕ್ರಿಸ್ತನ ಬೆಳಕಿನಿಂದ ಬೇರ್ಪಡಿಸಿ  ಶತ್ರುವಿನ ಹಿಡಿತಕ್ಕೆ ಮತ್ತಷ್ಟು ಸೆಳೆಯಿತು. 

ವಿಶ್ವಾಸಿಗಳಾಗಿ, ಯೂದನ ಕಥೆಯು ನಾವು ದೇವರ ಮಾರ್ಗದಿಂದ ದಾರಿ ತಪ್ಪಿದರೆ ಅದರಲ್ಲಿ ಅಡಗಿರುವ ಅಪಾಯಗಳ ಎದ್ದುಕಾಣುವ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಜಾಗರೂಕರಾಗಿರಬೇಕಾದ ನಮ್ಮ ಹೃದಯಗಳನ್ನು ನಿರಂತರವಾಗಿ ಪರೀಕ್ಷಿಸಬೇಕಾದ ಮತ್ತು ಕ್ಷಮೆಯನ್ನು ಹುಡುಕಬೇಕಾದ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ. ಇದಲ್ಲದೆ, ಯೂದನ ಕಥೆಯು ಎಲ್ಲಾ ವಿಶ್ವಾಸಿಗಳಿಗೆ ನಿಜವಾದ ಪಶ್ಚಾತ್ತಾಪದ ಮಹತ್ವದ ಬಗ್ಗೆ ಸ್ಪಷ್ಟ ಕರೆಯಾಗಿದೆ. 

ಒಬ್ಬರು ಚರ್ಚ್‌ನಲ್ಲಿದ್ದರೂ, ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರೂ ಅಥವಾ ಆತ್ಮೀಕ ನಾಯಕರ ಹತ್ತಿರದಲ್ಲೇ ಇದ್ದರೂ ಅದು ಒಬ್ಬರನ್ನು ಪಾಪದ ಅಪಾಯಗಳಿಂದ ರಕ್ಷಿಸುವುದಿಲ್ಲ. ಮಾನಸಾಂತರವೂ ಹೃದಯದಲ್ಲಿ ಸಂಭವಿಸುವುದರಿಂದ ಪಾಪದಿಂದ ದೂರ ಸರಿದು ಕ್ರಿಸ್ತನ ಕಡೆಗೆ ಪ್ರಾಮಾಣಿಕವಾಗಿ ತಿರುಗುವುದು ಅಗತ್ಯವಾಗಿರುತ್ತದೆ. 

ನಾವು ಮುಂದುವರಿಯುತ್ತಿದ್ದಂತೆ, ನಾವು ಮಾಡಬಹುದಾದ ಸಣ್ಣ ರಾಜಿಗಳನ್ನು ಮಾಡಿಕೊಳ್ಳುವ ಕುರಿತು ಎಚ್ಚರದಿಂದಿರೋಣ, ಆಗ ಅವು ಉಂಟುಮಾಡಬಹುದಾದ ಸಂಭಾವ್ಯ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುತ್ತೇವೆ. ನಾವು ನಿಜವಾಗಿಯೂ ಕ್ರಿಸ್ತನನ್ನು ಹುಡುಕಬೇಕೇ ವಿನಃ ಕೇವಲ, ಆತನ ಬಳಿಯಲ್ಲಿ ಇರುವವರಾಗಿರೋಣ. ಮತ್ತು ಮುಖ್ಯವಾಗಿ, ನಮ್ಮ ಪಾಪಗಳನ್ನು ಅರಿಕೆಮಾಡುತ್ತಾ  ಪ್ರತಿಯೊಂದು ವಿಷಯದಲ್ಲೂ ಆತನ ಮಾರ್ಗದರ್ಶನವನ್ನು ಹುಡುಕುತ್ತಾ, ನಮ್ಮ ರಕ್ಷಕನೊಂದಿಗೆ ಯಾವಾಗಲೂ ಸಂವಹನದ ಮಾರ್ಗಗಳನ್ನು ನೋಡಲು ನಮ್ಮ ಹೃದಯಗಳನ್ನು ತೆರೆದಿಡೋಣ.

Bible Reading: John 12-14
ಪ್ರಾರ್ಥನೆಗಳು
ಪ್ರಿಯ ತಂದೆಯೇ, ಶತ್ರುವಿನ ಸೂಕ್ಷ್ಮ ಬಲೆಗಳಿಂದ ನಮ್ಮ ಹೃದಯಗಳನ್ನು ಕಾಪಾಡು. ನಮ್ಮ ತಪ್ಪು ಹೆಜ್ಜೆಗಳನ್ನು ಗುರುತಿಸಲು ಮತ್ತು ನಿಜವಾದ ಪಶ್ಚಾತ್ತಾಪಕ್ಕೆ ನಮ್ಮನ್ನು ಕರೆದೊಯ್ಯಲು ನಮಗೆ ಸಹಾಯ ಮಾಡು. ನಿಮ್ಮೊಂದಿಗಿನ ನಮ್ಮ ಸಂಬಂಧವು ಸತ್ಯ ಮತ್ತು ಪ್ರೀತಿಯಲ್ಲಿ ಬೇರೂರಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ಯಾವಾಗಲೂ ನಿಮ್ಮನ್ನು ಪ್ರಾಮಾಣಿಕವಾಗಿ ಹುಡುಕುವವರಾಗಿರುವಂತೆ ಆಗಲಿ. ಯೇಸುವಿನ ಹೆಸರಿನಲ್ಲಿ ಬೇಡುತ್ತೇನೆ. ಆಮೆನ್.

Join our WhatsApp Channel


Most Read
● ನಿಮ್ಮ ಗುರಿಯನ್ನು ತಲುಪಲು ಬಲವನ್ನು ಹೊಂದಿಕೊಳ್ಳಿರಿ.
● ನಿಮ್ಮ ಜೀವದದಲ್ಲಿ ಎಂದೂ ಅಳಿಯದಂತ ಬದಲಾವಣೆಯನ್ನು ತರುವುದು ಹೇಗೆ?- 2
● ದ್ವಾರ ಪಾಲಕರು / ಕೋವರ ಕಾಯುವವರು
● ದಿನ 37 :40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದೇವದೂತರ ಸಹಾಯವನ್ನು ಸಕ್ರಿಯಗೊಳಿಸುವುದು ಹೇಗೆ
● ನಿಮ್ಮ ರೂಪಾಂತರವನ್ನು ತಡೆಯುತ್ತಿರುವುದೇನು ಎಂಬುದನ್ನು ತಿಳಿದುಕೊಳ್ಳಿರಿ.
● ಗೌರವ ಮತ್ತು ಮೌಲ್ಯ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್