english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ನಿಮ್ಮ ಜೀವದದಲ್ಲಿ ಎಂದೂ ಅಳಿಯದಂತ ಬದಲಾವಣೆಯನ್ನು ತರುವುದು ಹೇಗೆ?-1
ಅನುದಿನದ ಮನ್ನಾ

ನಿಮ್ಮ ಜೀವದದಲ್ಲಿ ಎಂದೂ ಅಳಿಯದಂತ ಬದಲಾವಣೆಯನ್ನು ತರುವುದು ಹೇಗೆ?-1

Sunday, 24th of March 2024
3 3 679
Categories : ಬದಲಾವಣೆ (Change)
ನಿಮ್ಮ ಜೀವನದಲ್ಲಿ ಯಾವುದಾದರೂ ಬದಲಾವಣೆಯು ಪರಿಣಾಮಕಾರಿಯಾಗಿಯೂ ಒಂದು ಮೌಲ್ಯ ತರುವಂತದ್ದು ಆಗಿರಬೇಕೆಂದರೆ ಅದು ಶಾಶ್ವತವಾದದ್ದು ಸ್ಥಿರತೆಯುಳ್ಳದ್ದು ಆಗಿರಬೇಕು. ಚಂಚಲತ್ವದಿಂದ ಕೂಡಿರುವ ಬದಲಾವಣೆಯು ಹತಾಶೆಯನ್ನು ನಿರಾಶೆಯನ್ನು ಒಳಗೊಂಡಿರುತ್ತದೆ. ಬಹುತೇಕ ಜನರು ಒಂದು ಭಯದಿಂದಲೂ ಕಳವಳದಿಂದಲೂ ಒಂದು ಬದಲಾವಣೆಯನ್ನು ಎದುರು ಗೊಳ್ಳುತ್ತಾರೆ ಏಕೆಂದರೆ ಅವರ ಮನಸ್ಸಿನ ಆಳವಾದ ಸ್ಥರದಲ್ಲಿ ಅವರಿಗೆ ನಿಜಕ್ಕೂ ಈ ಬದಲಾವಣೆಯು ಬಹುಕಾಲ ಉಳಿಯುವಂತದ್ದು ಎಂಬ ನಂಬಿಕೆ ಇರುವುದಿಲ್ಲ. ಎಲ್ಲಿ ಈಗ ತರುತ್ತಿರುವ ಬದಲಾವಣೆಯು ತಾತ್ಕಾಲಿಕವಾದದ್ದಾಗಿ ಬಿಡುತ್ತದೋ ಎಂಬ ಆತಂಕ ಅವರಿಗೆ ಇರುತ್ತದೆ.

ಇಂದು ನಾನು ಶಾಶ್ವತವಾಗಿರುವಂತಹ ಬದಲಾವಣೆಯನ್ನು ತರಲು ಇರುವ ತತ್ವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.

ಈ ತತ್ವಗಳು ಸರಳವಾಗಿದ್ದರೂ  ನೀವು ಅವುಗಳನ್ನು ಅಳವಡಿಸಿಕೊಂಡಾಗ ಅತೀ ಬಲವುಳ್ಳದ್ದಾಗಿ ಕಾರ್ಯ ಮಾಡುವಂಥದ್ದಾಗಿದೆ. ನೀವುವೈಯಕ್ತಿವಾಗಿ ನಿಮ್ಮಲ್ಲೇ ಒಂದು ವೈಯಕ್ತಿಕ ಬದಲಾವಣೆ ತರಲು ಅಥವಾ ಕಂಪನಿಯಾಗಿ ಒಂದು ಕಂಪನಿಯ ಆದಾಯವನ್ನು ಗರಿಷ್ಟಪಡಿಸಬೇಕೆಂದು ಪ್ರಯತ್ನಿಸುತ್ತಿರಬಹುದು.

ತತ್ವ -1:ನಿಮ್ಮ ಆಲೋಚನಾಮಟ್ಟವನ್ನು ಉನ್ನತೀಕರಿಸಿ
ನಿಮಗೀಗ ಇರುವ ಸ್ಥಿತಿಗತಿಗೆ ತಕ್ಕಂತೆ ನಿಮ್ಮ ಸುತ್ತಲಿನ ಜನರ ಸಂಸ್ಕೃತಿಗೆ ಪೂರ್ವಪರ ಯೋಚಿಸದೆ ಒಗ್ಗಿಕೊಳ್ಳಬೇಡಿರಿ. ಬದಲಾಗಿ ನಿಮ್ಮ ಲಕ್ಷ್ಯವನ್ನು ದೇವರ ಮೇಲೆ ಇರಿಸಿ. (ಆತನ ವಾಕ್ಯಗಳ ಮೇಲೆ ಇರಿಸಿ) ಆಗ ನೀವು ಆಂತರ್ಯದಿಂದ ಹೊರಗೂ ಕಾಣುವಂತ ಬದಲಾವಣೆಯನ್ನು ಕಾಣುತ್ತೀರಿ.

"ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ."(ರೋಮಾಪುರದವರಿಗೆ‬ ‭12:2‬)

ಮೊಟ್ಟಮೊದಲನೆಯದಾಗಿ ನಾವು ಶಾಶ್ವತವಾದ ಒಂದು ಬದಲಾವಣೆಯನ್ನು ತರಲು ಮಾಡಬೇಕಾಗಿರುವುದು ನಮ್ಮ ಲಕ್ಷ್ಯವನ್ನು ಬದಲಾಯಿಸುವಂತದ್ದು. ಯಾವಾಗಲೂ ಒಂದು ವಿಷಯವನ್ನು ನೆನಪಿಡಿರಿ. ನೀವು ಯಾವ ದಿಕ್ಕನ್ನು ಲಕ್ಷಿಸುತ್ತಿದ್ದೀರೋ ಆ ದಿಕ್ಕಿನಲ್ಲಿಯೇ ನೀವು ಚಲಿಸುವವರಾಗಿರುತ್ತೀರಿ.

ಈಗಷ್ಟೇ ನಾವು ಓದಿದಂತಹ ಮೇಲಿನ ದೇವರ ವಾಕ್ಯವು ನಾವು ಶಾಶ್ವತವಾದ ಬದಲಾವಣೆ ಹೊಂದಲು ನಮಗಿರುವ ನೀಲಿನಕಾಶೆಯಾಗಿದೆ.

1.ಪೂರ್ವಪರ ಯೋಚನೆ ಮಾಡದೇ ನಮ್ಮ ಸುತ್ತಲಿರುವ ಜನರ ಸಂಸ್ಕೃತಿಗೆ ನಾವು ಒಗ್ಗಿಕೊಳ್ಳಲು ಹೋಗಬಾರದು. ಅನೇಕ ಬಾರಿ ನಾವು ಈ ರೀತಿ ಒಗ್ಗಿಕೊಳ್ಳಲು ಹೋಗುವ ಕಾರಣವೇನೇಂದರೆ ಅದು ನಮಗೆ ಸುಲಭ ಎನಿಸುತ್ತದೆ ಅದಕ್ಕಾಗಿ. 
ನನಗೆ ಎಂದಿಗೂ ಧೂಮಪಾನ ಮಾಡಿಯೇ  ಇರದಂತಹ ಜನರು ತಿಳಿದಿದ್ದಾರೆ. ಆದರೆ ಅವರು
ಧೂಮಪಾನ ಮಾಡುವಂತಹ ಸಹೋದ್ಯೋಗಿಗಳ ಜೊತೆಗೆ ಸೇರಿಕೊಂಡಾಗ ಅವರು ಸಹ ಧೂಮಪಾನ ಮಾಡಲು ಆರಂಭಿಸಿದರು.

ನಿಮ್ಮ ಸುತ್ತಲಿರುವವರ ಸಂಸ್ಕೃತಿ ಹಾಗೂ ಜನರು ನಿಮ್ಮ ಭಕ್ತಿಯ ಮೌಲ್ಯಗಳನ್ನು ಮರುರೂಪಿಸಲು ಅವಕಾಶ ಕೊಡಬೇಡಿರಿ. ಹಾಗೆ ಮಾಡಿದ್ದಲ್ಲಿ ನೀವು ಸಹ ನದಿಯ ತಟದಲ್ಲಿ ಸತ್ತ ಮೀನುಗಳು ತೇಲುವಂತೆ ತೇಲಿ ಹೋಗಿ ಬಿಡುವಿರಿ.
ಪ್ರಾರ್ಥನೆಗಳು
ತಂದೆಯೇ, ನಿನ್ನ ಪರಿಪೂರ್ಣವಾದ ಜ್ಞಾನದಿಂದಲೂ ಆತ್ಮಿಕ ತಿಳುವಳಿಕೆಯಿಂದಲೂ ನಾನು ಸದಾ ತುಂಬಿರಬೇಕೆಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ. ಆಮೇನ್.


Join our WhatsApp Channel


Most Read
● ಆತ್ಮವಂಚನೆ ಎಂದರೇನು? -I
● ಕೊಡುವ ಕೃಪೆ -3
● ನಿಮ್ಮನ್ನು ಅಡ್ಡಿಪಡಿಸುವ ನಂಬಿಕೆಗಳನ್ನು ಸೀಮಿತಗೊಳಿಸುವುದು
● ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟ -3
● ಇದು ನಿಜಕ್ಕೂ ಮುಖ್ಯವಾದ ಸಂಗತಿಯಾ?
● ದೇವರಿಗೇ ಪ್ರಥಮ ಸ್ಥಾನ ನೀಡುವುದು.#1
● ಆರಂಭಿಕ ಹಂತದಲ್ಲಿಯೇ ಕರ್ತನನ್ನು ಕೊಂಡಾಡಿರಿ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್