english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ದೇವರು ದರ್ಶನಕೊಡುವ ಸಮಯವನ್ನು ಗುರುತಿಸಿಕೊಳ್ಳುವುದು
ಅನುದಿನದ ಮನ್ನಾ

ದೇವರು ದರ್ಶನಕೊಡುವ ಸಮಯವನ್ನು ಗುರುತಿಸಿಕೊಳ್ಳುವುದು

Saturday, 13th of April 2024
5 3 297
Categories : ದೈವೀಕ ದರ್ಶನ (Divine Visitation)
"ಯೆಹೋವನು ತಾನು ದರ್ಶನ ಕೊಟ್ಟು ಹೇಳಿದ್ದಂತೆಯೇ ಸಾರಳ ಮೇಲೆ ದಯವಿಟ್ಟು ಆಕೆಗೆ ಕೊಟ್ಟ ಮಾತನ್ನು ನೆರವೇರಿಸಿದನು."(ಆದಿಕಾಂಡ‬ ‭21:1‬)

ದೇವರ ವಾಕ್ಯ ಹೇಳುತ್ತದೆ, ಕರ್ತನು ಸಾರಾಳನ್ನು ದರ್ಶಿಸಿದನು ಎಂದು.ಸಾರಾಳ ಜೀವಿತದಲ್ಲಿ ಇದೊಂದು ಕರ್ತನ ದೈವಿಕ ದರ್ಶನದ ಸಮಯವಾಗಿತ್ತು. ದೇವರು ತಾನು ದರ್ಶಿಸುವ ಪ್ರತೀ ವ್ಯಕ್ತಿಯ ಜೀವಿತದಲ್ಲಿ ಅದಕೆಂದೇ ಕೆಲವೊಂದು ಸಮಯವನ್ನು ಆಯೋಜಿಸಿರುತ್ತಾನೆ.ನೀವು ಮತ್ತು ನಾನು ಆ ಸಮಯವನ್ನು ಗುರುತಿಸಿಕೊಳ್ಳಬೇಕಷ್ಟೇ.

 ಕರ್ತನಾದ ಯೇಸು ಸ್ವಾಮಿಯು ತನ್ನ ಜನರಾದ ಇಸ್ರಾಯೆಲ್ಯರನ್ನು ದರ್ಶಿಸಲೆಂದು ಬಂದನು. ದುರಂತವೆನೆಂದರೆ ಆ ಜನರು ಆ ಸಮಯವನ್ನು ಗುರುತಿಸಿಕೊಳ್ಳಲಾರದವರಾದರು.ಆತನು ತನ್ನ ಸ್ವಂತಕ್ಕೆ ಸ್ವಂತವಾದ ಜನರ ಬಳಿಗೆ ಬಂದನು ಆದರೆ ಅವರಾದರೋ ಆತನನ್ನು ಗುರುತಿಸಲೂ ಇಲ್ಲ ಆತನನ್ನು ಅಂಗೀಕರಿಸಿಕೊಳ್ಳಲೂ ಇಲ್ಲ.

"ತರುವಾಯ ಆತನು ಸಮೀಪಕ್ಕೆ ಬಂದಾಗ ಪಟ್ಟಣವನ್ನು ನೋಡಿ ಅದರ ವಿಷಯವಾಗಿ ಅತ್ತು - 42ನೀನಾದರೂ ಸಮಾಧಾನಕ್ಕೆ ಬೇಕಾದದ್ದನ್ನು ಇದೇ ದಿನದಲ್ಲಿ ತಿಳಿದುಕೊಂಡರೆ ಎಷ್ಟೋ ಒಳ್ಳೇದು. ಆದರೆ ಈಗ ಅದು ನಿನ್ನ ಕಣ್ಣಿಗೆ ಮರೆಯಾಗಿದೆ.43
44ದೇವರು ನಿನಗೆ ದರ್ಶನಕೊಟ್ಟ ಸಮಯವನ್ನು ನೀನು ತಿಳುಕೊಳ್ಳಲಿಲ್ಲವಾದದರಿಂದ ನಿನ್ನ ವೈರಿಗಳು ಒಡ್ಡುಕಟ್ಟಿ ನಿನ್ನ ಸುತ್ತಲೂ ಮುತ್ತಿಗೆ ಹಾಕಿ ಎಲ್ಲಾ ಕಡೆಗಳಲ್ಲಿಯೂ ನಿನ್ನನ್ನು ಬಂದುಮಾಡಿ ನಿನ್ನನ್ನೂ ನಿನ್ನೊಳಗಿರುವ ನಿನ್ನ ಜನರನ್ನೂ ನಿರ್ಮೂಲಮಾಡಿ ನಿನ್ನಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವ ದಿವಸಗಳು ನಿನ್ನ ಮೇಲೆ ಬರುವವು ಅಂದನು."(‭‭ಲೂಕ‬ ‭19:41‭-‬44‬)

ದೇವರ ಆಲೋಚನೆಯು ಯಾವಾಗಲೂ ನಿಮ್ಮನ್ನು ರಕ್ಷಿಸುವುದಕ್ಕಾಗಿ ಇದೆಯೇ ಹೊರತು ನಿಮ್ಮನ್ನು ನಾಶಪಡಿಸಲು ಅಲ್ಲ. ರೋಗಕ್ಕೆ ಬದಲಾಗಿ ಆರೋಗ್ಯವನ್ನು ಕೊರತೆಯ ಬದಲು ಸೌಲಭ್ಯವನ್ನು ಅನುಗ್ರಹಿಸುವುದಕ್ಕಾಗಿಯೇ ಅದು ಇರುವಂತದಾಗಿದೆ. ಹೇಗೂ ದೇವರು ನಮ್ಮ ಸಮಸ್ಯೆಗಳಿಗಾಗಿ ಪರಿಹಾರ ತರುವ ಆತನ ದರ್ಶನ ಸಮಯವನ್ನು ವಿಪತ್ತಿನಿಂದ ತಪ್ಪಿಸಿಕೊಳ್ಳುವ ಜ್ಞಾನದೊಂದಿಗೆ  ಗುರುತಿಸಿಕೊಳ್ಳಬೇಕು.

ದೇವರ ವಾಕ್ಯವು ಇನ್ನೂ ಮುಂದುವರೆದು ಹೇಳುವುದೇನೆಂದರೆ ಕರ್ತನು ತಾನು ಹೇಳಿದ ಹಾಗೆ ಸಾರಾಳಿಗೆ ಮಾಡಿದನು ಎಂದು. ವಾಗ್ದಾನಗಳ ಸಾಕಾರವು ಯಾವಾಗಲೂ ವಾಗ್ದಾನ ಕೊಡುವಾತನ ದರ್ಶನವನ್ನು ಹಿಂಬಾಲಿಸುತ್ತದೆ. ಸಾರಾಳು ಮೊದಲು ಕರ್ತನ ದರ್ಶನದ ಸಮಯವನ್ನು ಗ್ರಹಿಸಿಕೊಂಡಳು ಆನಂತರ ಅದರ ಸಾಕಾರವನ್ನು ಅನುಭವಿಸಿದಳು. ನೀವೂ ಸಹ ನಿಮ್ಮ ಜೀವಿತದಲ್ಲಿ ಮಹತ್ತರವಾದ ಕಾರ್ಯಗಳು ಸಾಕಾರಗೊಳ್ಳಬೇಕೆಂದು ಆಸೆಪಡುತ್ತಿದ್ದರೆ ಮೊದಲು ಆತನ ದರ್ಶನವನ್ನು ಅಪೇಕ್ಷಿಸಿರಿ ಆಮೇಲೆ ಎಂದಿಗೂ ನಿಮ್ಮ ಜೀವಿತ ಈಗಿದ್ದ ಹಾಗೆಯೇ ಇರುವುದಿಲ್ಲ.
ಪ್ರಾರ್ಥನೆಗಳು
 ತಂದೆಯೇ, ನನ್ನ ಜೀವಿತದಲ್ಲಿ ನಿನ್ನ ದರ್ಶನವಾಗುವ ಸಮಯವನ್ನು ನಾನು ಗ್ರಹಿಸಿಕೊಳ್ಳುವಂತೆ ನನ್ನ ಮನೋನೇತ್ರಗಳನ್ನು ತೆರೆಮಾಡು. ಯೇಸು ನಾಮದಲ್ಲಿ ಅದರ ತಿಳುವಳಿಕೆಯನ್ನು ನನಗೆ ಅನುಗ್ರಹಿಸು. ಆಮೆನ್.


Join our WhatsApp Channel


Most Read
● ನೀವು ಪಾವತಿಸಬೇಕಾದ ಬೆಲೆ
● ಸಂತೃಪ್ತಿಯ ಭರವಸೆ
● ಇಸ್ಕಾರಿಯೋತಾ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು - 1
● ನಿಮ್ಮ ರೂಪಾಂತರವು ಶತ್ರುವಿಗೆ ಭಯತರುತ್ತದೆ.
● ಕೆಟ್ಟ ನಡವಳಿಕೆಗಳಿಂದ ಬಿಡುಗಡೆ
● ಕರ್ತನೇ, ನನ್ನ ಚಿತ್ತ- ಚಂಚಲಗೊಳಿಸುವ ಸಂಗತಿಗಳಿಂದ ನನ್ನನ್ನು ಬಿಡಿಸು.
● ತಡೆಗಳನ್ನೊಡ್ಡುವ ಗೋಡೆ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್