english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಸತ್ಯವೇದ ಆಧಾರಿತ ಸಮೃದ್ಧಿಯನ್ನು ಹೊಂದಲಿರುವ ರಹಸ್ಯ
ಅನುದಿನದ ಮನ್ನಾ

ಸತ್ಯವೇದ ಆಧಾರಿತ ಸಮೃದ್ಧಿಯನ್ನು ಹೊಂದಲಿರುವ ರಹಸ್ಯ

Friday, 30th of August 2024
2 1 326
Categories : ಸಮೃದ್ಧಿ (Prosperity)
"ಪ್ರಿಯನೇ, ನೀನು ಆತ್ಮ ವಿಷಯದಲ್ಲಿ ಅಭಿವೃದ್ಧಿಹೊಂದಿರುವ ಪ್ರಕಾರ ಎಲ್ಲಾ ವಿಷಯಗಳಲ್ಲಿಯೂ ಅಭಿವೃದ್ಧಿಹೊಂದಿ ಸುಕ್ಷೇಮವಾಗಿರಬೇಕೆಂದು ಪ್ರಾರ್ಥಿಸುತ್ತೇನೆ."(3 ಯೋಹಾನನು 1:2)

ನಿಜವಾದ ಸಮೃದ್ಧಿ ಎಂಬುದು ಯಾವಾಗಲೂ ದೈವೀಕ ಸೂಚನೆಗಳನ್ನು ಪೂರೈಸಲು ಬೇಕಾಕಷ್ಟು ದೈವೀಕ ಸೌಲಭ್ಯವನ್ನು ಹೊಂದಿಕೊಂಡಿರುತ್ತದೆ. ನಿಜವಾದ ಸತ್ಯವೇದ ಆಧಾರಿತ ಸಮೃದ್ಧಿ ಎಂದರೆ ಕೇವಲ ಹಣಕಾಸಿನ ಸಮೃದ್ಧಿ ಮಾತ್ರವಲ್ಲ. ಆದರೆ ಅದು ಜೀವನದ ಎಲ್ಲಾ ಕ್ಷೇತ್ರದಲ್ಲಿರುವ ಸಮೃದ್ಧಿಯಾಗಿರುತ್ತದೆ. ಉದಾಹರಣೆಗೆ ಆರೋಗ್ಯದಲ್ಲಿನ ಸಮೃದ್ಧಿ, ಬಾಂಧವ್ಯಗಳಲ್ಲಿ ಸಮೃದ್ಧಿ, ಇತ್ಯಾದಿ..

ಸಾಮಾನ್ಯವಾಗಿ ಎಲ್ಲರೂ ಎಲ್ಲಾಕಡೆ ಕೇಳಲಾಗುವ ಪ್ರಶ್ನೆ ಎಂದರೆ "ನನ್ನ ಜೀವನದಲ್ಲಿ ನಾನು ಈ ಸಮೃದ್ಧಿಯನ್ನು ಪಡೆಯುವುದು ಹೇಗೆ" ಎಂಬುದೇ.

ದೇವರ ಚಿತ್ತವನ್ನು ಶ್ರದ್ದೆಯಿಂದ ಅನುಸರಿಸುವುದೇ ನಮ್ಮ ಎಲ್ಲ ಪ್ರಯತ್ನಗಳಲ್ಲಿ ಏಳಿಗೆಯನ್ನು ಸಾಧಿಸಲು ಇರುವ ಖಚಿತವಾದ ಮಾರ್ಗವಾಗಿದೆ.
"ಅವನು ತನ್ನ ದೇವರ ಒಲುಮೆಯನ್ನು ಪಡಕೊಳ್ಳುವದಕ್ಕೋಸ್ಕರ ದೇವಾಲಯದ ಸೇವಾಸಂಬಂಧದಲ್ಲಿಯೂ ಧರ್ಮಶಾಸ್ತ್ರವಿಧಿಗಳ ಸಂಬಂಧದಲ್ಲಿಯೂ ತಾನು ಪ್ರಾರಂಭಿಸಿದ ಎಲ್ಲಾ ಕಾರ್ಯಗಳನ್ನು ಯಥಾರ್ಥಚಿತ್ತದಿಂದ ಮಾಡಿ ಕೊನೆಗಾಣಿಸಿದನು."(2 ಪೂರ್ವಕಾಲವೃತ್ತಾಂತ 31:21)

ಹಿಜ್ಕಿಯ ಎಂಬ ಯಹೂದದ ಅರಸನು ನಮ್ಮಂತೆ ಅತ್ಯಂತ ಅಪಾಯಕಾರಿಯಾದ ಪ್ರಕ್ಷುಬ್ದ ಸಮಯದಲ್ಲಿ ವಾಸಿಸುತ್ತಿದ್ದನು. ಎಲ್ಲಾ ಕಡೆಗಳಿಂದಲೂ ಪ್ರಬಲವಾದ ಶತ್ರುಗಳು ಅವನನ್ನು ಮುತ್ತುತ್ತಿದ್ದರು. ವಿಗ್ರಹಾರಾಧನೆ  ಅಂದಿನ ಜನಪ್ರಿಯ ವಾದಂತಹ ಧರ್ಮವಾಗಿತ್ತು. ಇವನ ತಂದೆ ತಾಯಿಗಳು  ತಮ್ಮ ನಿಜವಾದ ದೇವರನ್ನು ತೊರೆದು ಪ್ರಜೆಗಳನ್ನೂ ವಿಗ್ರಹಾರಾದನೆ ಮಾಡುವಂತೆ ಪ್ರೇರೇಪಿಸುತ್ತಿದ್ದರು (2 ಪೂ. ವೃ. 28).

ಇವೆಲ್ಲವುಗಳ ಮಧ್ಯದಲ್ಲೂ ಹಿಜ್ಕೀಯನು ಯಾವುದೇ  ರಾಜಿ ಮಾಡಿಕೊಳ್ಳದೆ ಯಹೋವನನ್ನು ಪೂರ್ಣ ಮನಸ್ಸಿನಿಂದ ಸೇವಿಸುವುದನ್ನೇ  ಆಯ್ಕೆ ಮಾಡಿಕೊಂಡನು.
ಜನರೆಲ್ಲರೂ ಸಹ  ಜೀವಸ್ವರೂಪನಾದ  ದೇವರನ್ನೇ ಆರಾಧಿಸಬೇಕೆಂದು ಅದಕ್ಕಾಗಿ ತನ್ನ ಶಕ್ತಿ ಮೀರಿ ಎಲ್ಲವನ್ನೂ  ಮಾಡಿದನು.

ಹಿಜ್ಕೀಯನು ತನ್ನ ದೇವರ ಆಜ್ಞೆಗಳನ್ನೆಲ್ಲ ಶ್ರದ್ಧೆಯಿಂದ ಕೈಗೊಂಡನು. ಇದರ ಪ್ರತಿಫಲವಾಗಿ ದೇವರು ಅವನನ್ನು ಬಹಳವಾಗಿ ಆಶೀರ್ವದಿಸಿದನು. ಹಿಜ್ಕೀಯನು  ಕೇವಲ ರಕ್ಷಿಸಲ್ಪಟ್ಟಿದ್ದು ಮಾತ್ರವಲ್ಲದೇ ಅಂತಹ ಸಮಯದಲ್ಲಿಯೂ ಪ್ರವರ್ಧಮಾನಕ್ಕೆ ಬಂದನು. ಏಕೆಂದರೆ ಬಹು ಸಂಖ್ಯಾತ ಜನರ ಅಭಿಪ್ರಾಯವನ್ನು ತಳ್ಳಿ ಹಾಕಿ ಜೀವ ಸ್ವರೂಪನಾದ ದೇವರನ್ನೇ ಅನುಸರಿಸಬೇಕೆಂಬ ನಿರ್ಧಾರವನ್ನು ಕೈಗೊಂಡಿದ್ದೆ ಇದಕ್ಕೆ ಕಾರಣ.ನಾವು ಸಹ ಇವನ ಮಾದರಿಯನ್ನೇ ಅನುಕರಿಸಬೇಕು.

ಎರಡನೆಯದಾಗಿ ಸತ್ಯವೇದ ಮಾನದಂಡಗಳ ಪ್ರಕಾರ ಜೀವಿಸುವಂತಹ ಪ್ರಭುದ್ಧವಾದ ಕ್ರೈಸ್ತರೊಂದಿಗೆ ಆರೋಗ್ಯಕರವಾದ ಬಾಂಧವ್ಯಗಳನ್ನು ಬೆಳೆಸಿಕೊಳ್ಳಲೂ ಸಹ ನಾವು ಪ್ರಯತ್ನಿಸಬೇಕು. ಕಡೆಯದಾಗಿ ಆದರೆ ಪ್ರಮುಖವಾಗಿ ನಮ್ಮ ಸಮಯ ಪ್ರತಿಭೆ ಮತ್ತು ಸಂಪತ್ತನ್ನು ಉಪಯೋಗಿಸಿಕೊಂಡು ನಾವು ಮಾಡುವ ಕೆಲಸಗಳ ಕುರಿತು ಜಾಗರೂಕತೆಯಿಂದ ಇರಬೇಕು.
ಪ್ರಾರ್ಥನೆಗಳು
1. ತಂದೆಯೇ ನಾನು ಸಮೃದ್ಧಿಯಾಗುವಂತೆ ಸರಿಯಾದ ವ್ಯಕ್ತಿಗಳೊಂದಿಗೆ ಯೇಸು ನಾಮದಲ್ಲಿ ನನ್ನನ್ನು ಕೂಡಿಸು.

2. ತಂದೆಯೇ ನನ್ನ ಎಲ್ಲಾ ಆಲೋಚನೆಗಳನ್ನು ನಿನ್ನ ವಾಕ್ಯ ಕ್ಕನುಗುಣವಾಗಿರುವಂತೆ ಯೇಸು ನಾಮದಲ್ಲಿ ಮಾರ್ಪಡಿಸು. ಆಗ ನಾನು ಸಮೃದ್ಧಿ ಹೊಂದಿ ನಿನಗೆ ಮಹಿಮೆ ತರುವಂತಾಗುವುದು. ಆಮೇನ್.


Join our WhatsApp Channel


Most Read
● ದೇವರು ನಿಮ್ಮನ್ನು ಉಪಯೋಗಿಸಲು ಬಯಸುತ್ತಾನೆ.
● ಸಮರುವಿಕೆಯ ಕಾಲ - 2
● ಜೀವನದ ಬಿರುಗಾಳಿಗಳ ಮಧ್ಯದಲ್ಲಿಯೂ ನಂಬಿಕೆಯನ್ನು ಕಂಡು ಕೊಳ್ಳುವುದು.
● ಆಳವಾದ ನೀರಿನೊಳಗೆ
● ನೋವಿನಲ್ಲೂ ದೇವರಿಗೆ ಒಡಂಬಟ್ಟು ನಡೆಯುವುದನ್ನು ಕಲಿಯುವುದು
● ಸರಿಯಾದ ಜನರೊಂದಿಗೆ ಸಹವಾಸ
● ಅಪ್ಪನ ಮಗಳು - ಅಕ್ಷಾ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್