english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಯೇಸು ನಿಜವಾಗಿ ಖಡ್ಗ ಹಾಕಲೆಂದು ಬಂದನೇ?
ಅನುದಿನದ ಮನ್ನಾ

ಯೇಸು ನಿಜವಾಗಿ ಖಡ್ಗ ಹಾಕಲೆಂದು ಬಂದನೇ?

Wednesday, 18th of September 2024
4 3 408
Categories : ಅಂತಿಮ ಸಮಯ (End Time)
"ಭೂಲೋಕದ ಮೇಲೆ ಸಮಾಧಾನ ಹುಟ್ಟಿಸುವದಕ್ಕೆ ಬಂದೆನೆಂದು ನೆನಸಬೇಡಿರಿ; ಸಮಾಧಾನವನ್ನು ಹುಟ್ಟಿಸುವದಕ್ಕೆ ನಾನು ಬಂದಿಲ್ಲ, ಖಡ್ಗವನ್ನು ಹಾಕುವದಕ್ಕೆ ಬಂದೆನು. 35 ಹೇಗಂದರೆ ಮಗನಿಗೂ ತಂದೆಗೂ, ಮಗಳಿಗೂ ತಾಯಿಗೂ, ಸೊಸೆಗೂ ಅತ್ತೆಗೂ ಭೇದ ಹುಟ್ಟಿಸುವದಕ್ಕೆ ಬಂದೆನು.36ಹೀಗೆ ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವರು."(ಮತ್ತಾಯ 10:34-36)

ಸತ್ಯವೇದದಲ್ಲಿ ಬಹಳ ತಪ್ಪಾಗಿ ಅರ್ಥೈಸಿಕೊಂಡ ಈ ವಾಕ್ಯವೃಂದದಲ್ಲಿ ಒಂದಾದ ಈ ವಾಕ್ಯದಲ್ಲಿ ಯೇಸು ಸ್ವಾಮಿಯು ಮೀಕನ ಮಾತುಗಳನ್ನು ಇಲ್ಲಿ ಉಲ್ಲೇಖಿಸುತ್ತಿದ್ದಾನೆ(ಮೀಕ 7:6) ಅಷ್ಟೇ ಅಲ್ಲದೆ ಯೇಸು ಇಲ್ಲಿ ಹೇಳಿರುವ ಮಾತಿನಲ್ಲಿ ಉಪಯೋಗಿಸಿರುವ "ಖಡ್ಗ"ಎಂಬ ಪದವು ಅಕ್ಷರ ಖಡ್ಗವಲ್ಲ ಅದನ್ನು ಸಾಂಕೇತಿಕವಾಗಿ ಬಳಸಲಾಗಿದೆ ಅಷ್ಟೇ.

ಪೇತ್ರನು ಗೆತ್ಸೆಮನೆ ತೋಟದಲ್ಲಿ ಯೇಸುವನ್ನು ರಕ್ಷಿಸುವ ಸಲುವಾಗಿ ಕತ್ತಿಯನ್ನು ತೆಗೆದುಕೊಂಡು ಮಹಾಯಾಜಕನ ಸೇವಕನ ಕಿವಿಯನ್ನು ಕತ್ತರಿಸಿದಾಗ  ಸ್ವತಃ ಯೇಸುವೇ ಪೇತ್ರನನ್ನು ಗದರಿಸಿ "ನಿನ್ನ ಕತ್ತಿಯನ್ನು ತಿರಿಗಿ ಒರೆಯಲ್ಲಿ ಸೇರಿಸು; ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು." ಎಂದು ಹೇಳಿದನು (ಮತ್ತಾಯ 26:52)ನಂತರ ಇಡೀಲೋಕದ ರಕ್ಷಣೆಗಾಗಿ ಸ್ವಯಿಚ್ಚೆಯಿಂದಲೇ ತನ್ನ ಪ್ರಾಣವನ್ನು ಮರಣಕ್ಕೆ ಒಪ್ಪಿಸಿಕೊಟ್ಟನು.

ಅನೇಕರು ಬಂದು ನನ್ನನ್ನು "ನಾನು ಸಮಾಧಾನವನ್ನು ತರಲು ಬಂದಿಲ್ಲ ಖಡ್ಗವನ್ನು ಹಾಕಲಿಕ್ಕೆ ಬಂದಿದ್ದೇನೆ ಎಂದು ಯೇಸು ಏಕೆ ಹೀಗೆ ಹೇಳುತ್ತಾನೆ? "ಎಂದು ಪ್ರಶ್ನಿಸಿದ್ದಾರೆ.

ಯೇಸು ಕ್ರಿಸ್ತನಿಗೆ ಇರುವ ಮತ್ತೊಂದು ಹೆಸರೆಂದರೆ "ಸಮಾಧಾನದ ಅರಸ"( ಯೇಶಾಯ 9:6)

"ಶಾಂತಿಯನ್ನು ನಿಮಗೆ ಬಿಟ್ಟುಹೋಗುತ್ತೇನೆ, ನನ್ನಲ್ಲಿರುವಂಥ ಶಾಂತಿಯನ್ನು ನಿಮಗೆ ಕೊಡುತ್ತೇನೆ; ಲೋಕವು ಕೊಡುವ ರೀತಿಯಿಂದ ನಾನು ನಿಮಗೆ ಕೊಡುವದಿಲ್ಲ. ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ಹೆದರದಿರಲಿ." ಎಂದು ಯೋಹಾನ 14:27ರಲ್ಲಿ ಯೇಸು ಹೇಳಿದ್ದಾನೆ.

ಮೇಲಿನ ವಾಕ್ಯಗಳು ಮತ್ತು ಸತ್ಯವೇದದಲ್ಲಿನ ಬಹುತೇಕ ವಾಕ್ಯಗಳು ಯೇಸುವು ಮನುಷ್ಯರ ಮತ್ತು ದೇವರ ನಡುವೆ ಸಮಾಧಾನ ಏರ್ಪಡಿಸಲೆಂದು ಬಂದಿದ್ದಾನೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಇದಲ್ಲದೆ ಯೇಸುವು"ಯೇಸು ಅವನಿಗೆ - ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ." ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ (ಯೋಹಾನ 14:6)

ಯಾರು ದೇವರನ್ನು ಮತ್ತು ಆತನು ಏರ್ಪಡಿಸಿರುವ ರಕ್ಷಣೆಯ ಏಕೈಕ ಮಾರ್ಗವಾಗಿರುವ ಯೇಸುವನ್ನು ತಿರಸ್ಕರಿಸುತ್ತಾರೋ ಅವರು ದೇವರೊಂದಿಗೆ ಶಾಶ್ವತವಾಗಿಯೇ ಹೋರಾಡುವವರಾಗುತ್ತಾರೆ. ಆದರೆ ಪಶ್ಚಾತಾಪದಿಂದ ಮನ ತಿರುಗಿದವರು ದೇವರೊಂದಿಗೆ ಸಮಾಧಾನ ಹೊಂದುತ್ತಾರೆ.

ಈ ಒಂದು ಅಂತ್ಯಕಾಲದ ಸಮಯದಲ್ಲಿ ಒಳ್ಳೆಯದರ ಮತ್ತು ಕೆಟ್ಟದರ, ಕ್ರಿಸ್ತನಿಗೂ ಮತ್ತು ಕ್ರಿಸ್ತ ವಿರೋಧಿಗಳಿಗೂ ಕ್ರಿಸ್ತನನ್ನು ಅಂಗೀಕರಿಸಿದವರಿಗೂ ಮತ್ತು ಅಂಗೀಕರಿಸದೆ ಹೋದವರ ನಡುವೆ ಸಂಘರ್ಷ ಇದ್ದೇ ಇರುತ್ತದೆ. ಅನೇಕ ಬಾರಿ ಈ ಗುಂಪು  ಘರ್ಷಣೆಯು ಕುಟುಂಬದಲ್ಲೇ ಇರುತ್ತದೆ.ಒಂದೇ ಕುಟುಂಬದಲ್ಲಿ ಕೆಲವರು ವಿಶ್ವಾಸಿಗಳಾಗಿರುತ್ತಾರೆ, ಮಿಕ್ಕವರು ಅವಿಶ್ವಾಸಿಗಳಾಗಿರುತ್ತಾರೆ.

ಮತ್ತಾಯ 10:34-36 ರಲ್ಲಿ ಯೇಸು ನಾನು ಭೂಮಿಯ ಮೇಲೆ ಸಮಾಧಾನವನ್ನು ಹುಟ್ಟಿಸುವುದಕ್ಕೆ ಬರಲಿಲ್ಲ. ಖಡ್ಗ ಹಾಕಲೆಂದೆ ಬಂದದ್ದು  ಎಂದು ಹೇಳುವಂತದರಲ್ಲಿ " ಖಡ್ಗ" ಎಂಬುದು ವಿಭಾಗಿಸುವಂಥದ್ದು ಎಂಬುದರ ಸಾಂಕೇತಿಕ ರೂಪವಾಗಿದೆ. ಆತನು ಈ ಭೂಮಿ ಮೇಲೆ ಬಂದದರ ಪರಿಣಾಮವಾಗಿ ಕೆಲವು ಮಕ್ಕಳು ತಮ್ಮ ತಂದೆ ತಾಯಿಗಳ ವಿರುದ್ಧ ತಿರುಗಿ ಬೀಳುವರು ಮತ್ತು ಒಬ್ಬ ಮನುಷ್ಯನಿಗೆ ತನ್ನ ಮನೆಯವರೇ ವೈರಿಗಳಾಗುತ್ತಾರೆ ಎಂಬ ಅರ್ಥದಲ್ಲಿದೆ.

ಇದು ತಮ್ಮ ಸ್ವಂತ ಕುಟುಂಬದವರಿಂದ ತಿರಸ್ಕಾರಕ್ಕೊಳಗಾದರೂ ಚಿಂತೆ ಇಲ್ಲ ನಾವು ಕ್ರಿಸ್ತನನ್ನೇ ಹಿಂಬಾಲಿಸುತ್ತೇವೆ ಎಂಬುದನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಆಗುತ್ತದೆ. ಇದು ಕ್ರಿಸ್ತನನ್ನು ನಿಜವಾಗಿ ಹಿಂಬಾಲಿಸಿದಕ್ಕೆ ಅವರ ತೆತ್ತ ಬೆಲೆಯಾಗಿರುತ್ತದೆ.
ಯೇಸುಕ್ರಿಸ್ತನ ಮೇಲಿನ ಪ್ರೀತಿಯು ನಮ್ಮ ಕುಟುಂಬದವರ ಮೇಲಿನ ಪ್ರೀತಿಗಿಂತ ಹೆಚ್ಚಾಗಿರಬೇಕೆಂದು ಕರ್ತನಾದ ಯೇಸು ಸ್ಪಷ್ಟವಾಗಿ ಹೇಳಿದ್ದಾನೆ.(ಮತ್ತಾಯ 10:32 ಓದಿರಿ )

ಇತಿಹಾಸದುದ್ದಕ್ಕೂ ತಾವು ಮಾಡುವ ಹಿಂಸೆಯನ್ನು ಸಮರ್ಥಿಸಿಕೊಳ್ಳಲು ಈ ವಾಕ್ಯ ವೃಂದವನ್ನು ಕೆಲವರು ತಪ್ಪಾಗಿ ತಮ್ಮ ಹಿಂಸಾತ್ಮಕ ಆಕಾಂಕ್ಷೆಗಳಿಗೆ ಸರಿಹೊಂದುವಂತೆ ತಿರುಚಿದ್ದಾರೆ.
ಪ್ರಾರ್ಥನೆಗಳು
ತಂದೆಯೇ ನಿನ್ನ ವಾಕ್ಯದ ಮೂಲಕ ನೀನು ಕೊಡುವ ಸ್ಪಷ್ಟತೆ, ಉತ್ತೇಜನ ಮತ್ತು ನಿರೀಕ್ಷೆಗಾಗಿ ನಾನು ನಿನಗೆ ಸ್ತೋತ್ರ ಸಲ್ಲಿಸುತ್ತೇನೆ.
ತಂದೆಯೇ, ನಾನು ಅನುದಿನ ವಾಕ್ಯವನ್ನು ಓದುವಾಗ ನಿನ್ನೊಂದಿಗೆ ನನ್ನ ಬಾಂಧವ್ಯವು ಮತ್ತಷ್ಟು ಗಾಢವಾಗಿ ಬೆಳೆಸಿಕೊಳ್ಳಲು ನನಗೆ ಯೇಸುನಾಮದಲ್ಲಿ ಸಹಾಯ ಮಾಡಿ.
ತಂದೆಯೇ, ನಿನ್ನ ವಾಕ್ಯದ ಮೂಲಕವೇ ನಿನ್ನನ್ನೂ, ನಿನ್ನ ಚಿತ್ತವನ್ನೂ ನನಗೆ ತಿಳಿಸಿಕೊಟ್ಟು ನನ್ನ ಸ್ವಂತ ಚಿತ್ತದ ಮೇಲೆ ನಾನು ಎಂದಿಗೂ ಆಧಾರಗೊಳ್ಳದಂತೆ ಯೇಸು ನಾಮದಲ್ಲಿ ನನಗೆ ಸಹಾಯ ಮಾಡಿರಿ. ಆಮೆನ್.


Join our WhatsApp Channel


Most Read
● ದುರಾತ್ಮಗಳ ಪ್ರವೇಶವನ್ನು ಮುಚ್ಚುವ ಅಂಶಗಳು- I
● ನಿಮ್ಮ ಬಿಡುಗಡೆಯನ್ನು ಕಾಪಾಡಿಕೊಳ್ಳುವುದು ಹೇಗೆ
● ದಿನ 38:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಪ್ರವಾದನಾ ಪೂರಕ ಮಧ್ಯಸ್ಥಿಕೆ ಪ್ರಾರ್ಥನೆ ಎಂದರೇನು?
● ಮಹಾತ್ತಾದ ಕಾರ್ಯಗಳು
● ದೈತ್ಯರ ಜನಾಂಗ
● ಈ ದಿನಮಾನಗಳಲ್ಲಿ ಕಾಣುವ ಅಪರೂಪದ ಸಂಗತಿ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್