ನಾವು ಶತ್ರುವಿಗೆ (ಸೈತಾನನಿಗೆ ) ಭಯಪಡಲು ಮುಖ್ಯ ಕಾರಣವೆಂದರೆ ನಾವು ನಂಬುವವರಾಗಿ ನಡೆಯದೇ, ನೋಡುವವರಾಗಿ ನಡೆಯುವುದರಿಂದಾಗಿದೆ.
ನಾನು ನಿಮ್ಮ ಗಮನವನ್ನು 2 ಅರಸು 6 ರ ಕಡೆಗೆ ಸೆಳೆಯಲಿಚ್ಚಿಸುತ್ತೇನೆ. ಸಿರಿಯಾದ ರಾಜನು ಇಸ್ರೇಲ್ ವಿರುದ್ಧ ಯುದ್ಧದಲ್ಲಿದ್ದನು. ತನ್ನ ಸಲಹೆಗಾರರೊಂದಿಗೆ ರಹಸ್ಯವಾಗಿ ಮಾಡಿದ ಯಾವುದೇ ಯೋಜನೆಗಳು ಇಸ್ರೇಲ್ ರಾಜನಿಗೆ ಸೋರಿಕೆಯಾಗುತಿತ್ತು ಎಂದು ತಿಳಿದು ಅವನಿಗೆ ಬಹಳ ಕಷ್ಟವಾಯಿತು. ಹೀಗಾಗಿ ತನ್ನ ಸಲಹೆಗಾರರಲ್ಲಿಯೇ ಯಾರೋ ಒಬ್ಬ ಗೂಢಚಾರನಿದ್ದಾನೆ ಎಂದು ಅವನು ಅನುಮಾನಿಸಲಾರಂಭಿಸಿದನು.ಆದರೆ ಅದು ಸತ್ಯವಾಗಿರಲಿಲ್ಲ ಎಂಬುದು ಅವನಿಗೆ ಖಚಿತವಾಯಿತು.
ಸಿರಿಯಾದ ರಾಜನು ರಹಸ್ಯವಾಗಿ ಕಾರ್ಯತಂತ್ರ ರೂಪಿಸಿದ ಎಲ್ಲವನ್ನೂ ಕರ್ತನ ಆತ್ಮನು ಪ್ರವಾದಿ ಎಲೀಷನಿಗೆ ಪ್ರಕಟಪಡಿಸುತ್ತಿದ್ದನು ಎಂದು ಅವನಿಗೆ ಸವಿವರವಾಗಿ ವಿವರಿಸಲಾಯಿತು. ಹೀಗಾಗಿ ಸಿರಿಯಾದ ರಾಜನು ತನ್ನ ಸೈನ್ಯಕ್ಕೆ ಪ್ರವಾದಿ ಎಲೀಷನನ್ನು ಸೆರೆಹಿಡಿದು ತರುವಂತೆ ಆಜ್ಞಾಪಿಸಿದನು.
"ದೇವರ ಮನುಷ್ಯನ ಸೇವಕನು ಬೆಳಿಗ್ಗೆ ಎದ್ದು ಹೊರಗೆ ಬಂದು ನೋಡಿದಾಗ ರಥರಥಾಶ್ವಸಹಿತವಾದ ಮಹಾಸೈನ್ಯವು ಬಂದು ಪಟ್ಟಣದ ಸುತ್ತಲೂ ನಿಂತಿರುವುದನ್ನು ಕಂಡು ತನ್ನ ಯಜಮಾನನಿಗೆ, “ಅಯ್ಯೋ, ಸ್ವಾಮಿ ನಾವು ಏನು ಮಾಡೋಣ?” ಎಂದನು.
ಆಗ ಎಲೀಷನು ಅವನಿಗೆ, “ಹೆದರಬೇಡ, ಅವರ ಕಡೆಯಲ್ಲಿರುವವರಿಗಿಂತಲೂ, ನಮ್ಮ ಕಡೆಯಲ್ಲಿರುವವರು ಹೆಚ್ಚಾಗಿದ್ದಾರೆ” ಎಂದು ಹೇಳಿ, “ಯೆಹೋವನೇ, ಇವನು ನೋಡುವಂತೆ ಇವನ ಕಣ್ಣುಗಳನ್ನು ತೆರೆ” ಎಂದು ಪ್ರಾರ್ಥಿಸಲು ಯೆಹೋವನು ಅವನ ಕಣ್ಣುಗಳನ್ನು ತೆರೆದನು. ಆಗ ಎಲೀಷನ ರಕ್ಷಣೆಗಾಗಿ ಸುತ್ತಣ ಗುಡ್ಡಗಳಲ್ಲಿ ಬಂದು ನಿಂತಿದ್ದ ಅಗ್ನಿಮಯವಾದ ರಥಾರಥಾಶ್ವಗಳು ಆ ಸೇವಕನಿಗೆ ಕಂಡವು." (2 ಅರಸುಗಳು 6:15-17)
ಎಲೀಷನ ಸೇವಕನು ನೋಡುತ್ತಿದ್ದನು ಆದರೆ ಅವನಿಗೆ ಕಾಣುತ್ತಿರಲಿಲ್ಲ. ಸಿರಿಯಾದ ಸೈನ್ಯವು ಅವರ ಪಟ್ಟಣವನ್ನು ಸುತ್ತುವರೆದಿರುವುದನ್ನು ಅವನು ನೋಡಿದನು, ಆದರೆ ದೇವರ ಜನರನ್ನು ರಕ್ಷಿಸುವ ದೇವದೂತರ ಸಮೂಹವನ್ನು ಅವನು ನೋಡಲಿಲ್ಲ. ಅವನು ಆತ್ಮೀಕ ಕುರುಡುತನದಲ್ಲಿ ನಡೆಯುತ್ತಿದ್ದನು.
ಈ ಕುರುಡುತನವನ್ನು ಹೋಗಲಾಡಿಸಲು ಪ್ರವಾದಿಯಾದ ಎಲೀಷನ ಪ್ರಾರ್ಥನೆಯು ಒಂದು ಪ್ರಬಲ ಸಾಧನವಾಯಿತು.
ಆದರಿಂದ "ಕರ್ತನೇ, ನಾನು ಯಾವುದನ್ನೆಲ್ಲಾ ನೋಡಬೇಕೆಂದು ನೀನು ಬಯಸುವೆಯೋ ಆ ವಿಷಯಗಳನ್ನು ನಾನು ನೋಡುವಂತೆ ನನ್ನ ಕಣ್ಣುಗಳನ್ನು ತೆರೆಮಾಡು" ಎಂದು ನಾವು ಪ್ರತಿದಿನ ಪ್ರಾರ್ಥಿಸಬೇಕು.
ನಮ್ಮ ಆತ್ಮೀಕ ಕಣ್ಣುಗಳು ತೆರೆದಾಗ, ನಾವು ದೇವರ ದೃಷ್ಟಿಕೋನದಿಂದ ಪ್ರತಿಯೊಂದು ಸಂಗತಿಗಳನ್ನು ನೋಡಲಾರಾಂಭಿಸುತ್ತೇವೆ. ನಾವು ಕ್ರಿಸ್ತನಲ್ಲಿ ಪರಲೋಕದಲ್ಲಿ ಕುಳಿತಿದ್ದೇವೆ ಎಂಬುದನ್ನು ಆಗ ನಾವು ನೋಡುತ್ತೇವೆ. ಕ್ರಿಸ್ತನು ಈಗಾಗಲೇ ವಿಜಯವನ್ನು ಸಾಧಿಸಿ ಸರ್ವವನ್ನು ಆಳುತ್ತಿದ್ದಾನೆ ಎಂಬುದನ್ನು ನಾವು ನೋಡುತ್ತೇವೆ. ಆಗ ನಾವು ಭಯದಲ್ಲಿ ನಡೆಯದೇ . ನಮ್ಮ ದೈನಂದಿನ ಜೀವನದಲ್ಲಿ, ನಮಗೆ ದುಸ್ತರವೆಂದು ತೋರುವ ಸವಾಲುಗಳನ್ನು ಮತ್ತು ವಿರೋಧವನ್ನು ಧೈರ್ಯವಾಗಿ ಎದುರಿಸಬಹುದು.
ಆದಾಗ್ಯೂ, ನಾವು ನೋಡುವವರಾಗಿ ನಡೆಯದೇ , ನಂಬಿಕೆಯಿಂದ ನಡೆಯಬೇಕೆಂಬುದನ್ನು ಆರಿಸಿಕೊಳ್ಳುವಾಗ ದೇವರು ತೆರೆಮರೆಯಲ್ಲಿ ನಮ್ಮ ಪರವಾಗಿ ಕಾರ್ಯ ಮಾಡುತ್ತಿದ್ದಾನೆ, ನಮ್ಮ ಒಳಿತಿಗಾಗಿ ಮತ್ತು ಆತನ ಮಹಿಮೆಗಾಗಿ ಎಲ್ಲಾ ಘಟನೆಗಳನ್ನು ಮತ್ತು ಸಂದರ್ಭಗಳನ್ನು ಸಂಘಟಿಸುತ್ತಿದ್ದಾನೆ ಎಂಬುದನ್ನು ನಾವು ನಂಬಬಹುದು. ಕರ್ತನು ನಮ್ಮ ಪರವಾಗಿದ್ದಾನೆ ಮತ್ತು ಆತನ ದೇವದೂತರು ನಮ್ಮ ಪರವಾಗಿ ಹೋರಾಡುತ್ತಿದ್ದಾರೆ ಎಂಬುದನ್ನು ಅರಿತುಕೊಂಡವರಾಗಿ ನಾವು ಸಮಾಧಾನವನ್ನು ಮತ್ತು ಧೈರ್ಯವನ್ನು ಪಡೆದುಕೊಳ್ಳಬಹುದು.
Bible Reading: 2 Chronicles 20-22
ಪ್ರಾರ್ಥನೆಗಳು
ತಂದೆಯೇ, ನೀವು ನಾನು ನೋಡಬೇಕೆಂದು ಬಯಸುವ ವಿಷಯಗಳನ್ನು ನೋಡುವಂತೆ ನನ್ನ ಆತ್ಮೀಕ ಕಣ್ಣುಗಳನ್ನು ಯೇಸುನಾಮದಲ್ಲಿ ತೆರೆಮಾಡು.
Join our WhatsApp Channel

Most Read
● ಮರೆಯಾದ ಸ್ಥಳವನ್ನು ಆಶ್ರಯಿಸಿಕೊಳ್ಳುವುದು.● ನಿತ್ಯತ್ವದ ಮನಃಸ್ಥಿತಿಯಲ್ಲಿ ಬದುಕುವುದು.
● ನಿಮ್ಮ ಮನಸ್ಸನ್ನು ಶಿಸ್ತುಗೊಳಿಸಿ
● ದೈತ್ಯರ ಜನಾಂಗ
● ನಿಮ್ಮ ಮನೆಯ ವಾತಾವರಣವನ್ನು ಬದಲಾಯಿಸುವುದು -5
● ದಿನ 02:40 ದಿನಗಳ ಉಪವಾಸ ಪ್ರಾರ್ಥನೆ ದಿನಗಳು
● ದೇವರು ಹೇಗೆ ಒದಗಿಸುತ್ತಾನೆ #1
ಅನಿಸಿಕೆಗಳು