ಅನುದಿನದ ಮನ್ನಾ
1
0
68
ನಾನು ಧೈರ್ಯಗೆಡುವುದಿಲ್ಲ.
Friday, 30th of May 2025
Categories :
ಬಿಡುಗಡೆ (Deliverance)
"ಒಂದು ದಿವಸ ಪ್ರವಾದಿಮಂಡಲಿಯವರಲ್ಲೊಬ್ಬನ ಹೆಂಡತಿಯು ಎಲೀಷನ ಹತ್ತಿರ ಬಂದು ಅವನಿಗೆ - ನಿನ್ನ ಸೇವಕನಾದ ನನ್ನ ಗಂಡನು ಮರಣಹೊಂದಿದನು; ಅವನು ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿದ್ದನೆಂಬದು ನಿನಗೆ ಗೊತ್ತುಂಟಲ್ಲಾ; ಸಾಲಕೊಟ್ಟವನು ನನ್ನ ಇಬ್ಬರು ಮಕ್ಕಳನ್ನು ದಾಸರನ್ನಾಗಿ ತೆಗೆದುಕೊಂಡು ಹೋಗುವದಕ್ಕೆ ಬಂದಿದ್ದಾನೆ ಎಂದು ಮೊರೆಯಿಟ್ಟಳು." (2 ಅರಸುಗಳು 4:1)
ಪ್ರವಾದಿಯಾದ ಎಲೀಷನ ತಂಡದಲ್ಲಿ ಸೇವೆ ಸಲ್ಲಿಸಿದ ಒಬ್ಬ ವ್ಯಕ್ತಿಯ ವಿಧವೆಯಾದ ಹೆಂಡತಿಯು ಎಲೀಷನಿಗೆ ಇಲ್ಲಿ ಮನವಿ ಮಾಡುತ್ತಿದ್ದಾಳೆ. ಈ ಪಠ್ಯದಿಂದ ನಾವು ಕಲಿಯಬಹುದಾದ ಕೆಲವು ಅಮೂಲ್ಯ ಪಾಠಗಳಿವೆ.
ಅವಳ ಕುಟುಂಬದಲ್ಲಿ ಹತಾಶೆ ಇತ್ತು:-
ಅವಳು ಎಲೀಷನಿಗೆ ಮೊರೆಯಿಟ್ಟಳು . ಇಲ್ಲಿ “ಮೊರೆ ” ಎಂಬ ಪದದ ಅರ್ಥ “ನರಳುವುದು; ಅನಿಯಂತ್ರಿತವಾಗಿ ಅಳುವುದು; ದುಃಖದಿಂದ ಕಿರುಚುವುದು.” ಅವಳ ಈ ಮೊರೆಯು ಆಘಾತದಿಂದ ಹೊರರಟದ್ದಲ್ಲ ಬದಲಾಗಿ ಮುರಿದ ಹೃದಯದಿಂದ ನಿರೀಕ್ಷೆಯಿಂದ ಬಂದದ್ದಾಗಿತ್ತು;
ಮುರಿದ ಹೃದಯವು ಮನುಷ್ಯನು ಮೂಗುಮುರಿಯುವ ವಿಷಯವಾಗಿದೆ ಆದರೆ ಕರ್ತನಿಗೆ ಹಾಗಲ್ಲ. ನಿಮ್ಮ ಮುರಿದ ಹೃದಯವನ್ನು ಕರ್ತನ ಕಡೆಗೆ ತಂದು ಆತನಿಗೇ ಮೊರೆಯಿಡಿರಿ. ಆತನು ಖಂಡಿತವಾಗಿಯೂ ಬೇಗನೆ ಉತ್ತರಿಸುವನು.
"ಕುಗ್ಗಿದ ಮನಸ್ಸೇ ದೇವರಿಗೆ ಇಷ್ಟಯಜ್ಞ; ದೇವರೇ, ಪಶ್ಚಾತ್ತಾಪದಿಂದ ಜಜ್ಜಿಹೋದ ಮನಸ್ಸನ್ನು ನೀನು ತಿರಸ್ಕರಿಸುವದಿಲ್ಲ. ಎಂದು ಕೀರ್ತನೆ 51:17 ಹೇಳುತ್ತದೆ.
ಅವಳ ಕುಟುಂಬದಲ್ಲಿ ಒಂದು ಸಾವು ಸಂಭವಿಸಿತ್ತು:-
ಅವಳು "ಪ್ರವಾದಿಗಳ ಪುತ್ರರಲ್ಲಿ" ಒಬ್ಬನನ್ನು ಮದುವೆಯಾಗಿದ್ದಳು.ಅವರೆಲ್ಲರೂ ಇಸ್ರೇಲ್ನಲ್ಲಿ ಪ್ರವಾದಿಗಳು ಮತ್ತು ಧರ್ಮೋಪದೇಶಕರಾಗಲು ಪ್ರವಾದಿಯಾದ ಎಲೀಷನ ಅಡಿಯಲ್ಲಿ ತರಬೇತಿ ಪಡೆಯುತ್ತಿದ್ದ ವ್ಯಕ್ತಿಗಳಾಗಿದ್ದರು. ಅವಳ ಗಂಡ, ಅವಳ ಪ್ರೇಮಿ, ಅವಳ ಸ್ನೇಹಿತ, ಅವಳ ಪೂರೈಕೆದಾರ, ಅವಳ ರಕ್ಷಕ, ಮರಣದಿಂದಾಗಿ ಈಗ ಅವಳಿಂದ ದೂರವಾಗಿದ್ದನು. ಅವಳು ಈಗ ಸಂಪೂರ್ಣವಾಗಿ ಮುರಿದುಹೋದ ಹೃದಯದ ಮಹಿಳೆಯಾಗಿದ್ದಳು.
ಆತ್ಮನು ಹೇಳುವುದನ್ನು ನಾನು ಕೇಳಿದೆ, ಆತನು ದುಃಖಿಸುವವರನ್ನು ಸಮಾಧಾನಪಡಿಸುತ್ತಾನೆ, ಆತನು ನಿನ್ನ ಬೂದಿಗೆ ಬದಲಾಗಿ ನಿನಗೆ ಸೌಂದರ್ಯವನ್ನು ಮತ್ತು ನಿನ್ನ ದುಃಖಕ್ಕೆ ಬದಲಾಗಿ ಆನಂದದ ತೈಲವನ್ನು ಕೊಡುವನು. ಭಾರವಾದ ಆತ್ಮಕ್ಕೆ ಬದಲಾಗಿ ಆತನು ನಿನಗೆ ಸ್ತುತಿಯ ಉಡುಪನ್ನು ಕೊಡುವನು. (ಯೆಶಾಯ 61:3) ಯೇಸುವಿನ ಹೆಸರಿನಲ್ಲಿ ಇದನ್ನು ಸ್ವೀಕರಿಸಿ.
ಆಕೆಯ ಕುಟುಂಬದಲ್ಲಿ ಸಾಲವಿತ್ತು:-
ಆಕೆಯ ಪತಿ ಸತ್ತ ಕಾರಣದಿಂದಾಗಿ ಆಕೆಯು ತನ್ನ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಪರಿಣಾಮವಾಗಿ, ಆಕೆಯ ಸಾಲಗಾರರು ಆಕೆಯ ಮಕ್ಕಳನ್ನು ಗುಲಾಮರನ್ನಾಗಿ ಮಾಡಿಕೊಳ್ಳಲು ಕರೆದುಕೊಂಡು ಹೋಗಲು ಬಂದಿದ್ದರು. ಇದರ ಮೂಲಕ ಅವರು ಕೊಟ್ಟ ಸಾಲಕ್ಕೆ ವಜಾ ಹಾಕಿಕೊಳ್ಳಬಹುದಿತ್ತು. ಯಹೂದಿ ಕಾನೂನಿನ ಅಡಿಯಲ್ಲಿ ಇದನ್ನು ಅನುಮತಿಸಲಾಗಿದೆ (ಯಾಜಕಕಾಂಡ 25:39).
ಆಕೆ ಈಗ ಮೊದಲೇ ತನ್ನ ಗಂಡನನ್ನು ಕಳೆದುಕೊಂಡಿದ್ದಾಳೆ,ಜೊತೆಗೆ ಅಷ್ಟೇ ಸಾಲದಂತೆ ಈಗ ಆಕೆ ತನ್ನ ಮಕ್ಕಳನ್ನೂ ಸಹ ಕಳೆದುಕೊಳ್ಳುವ ಹಂತದಲ್ಲಿದ್ದಳು. ಆಕೆ ತನ್ನ ತಲೆಯ ಮೇಲೆ ಸಾಲವನ್ನೂ ಹೊತ್ತುಕೊಂಡು ಅದನ್ನು ಹೇಗೆ ತೀರಿಸಬೇಕು ಎಂಬುದು ಆಕೆಗೆ ತಿಳಿಯದಾಗಿದೆ.
ಇದನ್ನು ಓದುತ್ತಿರುವ ನಿಮ್ಮಲ್ಲಿಯೂ ಕೆಲವರು ಅಂತಹ ದೊಡ್ಡ ಸಾಲದಲ್ಲಿದ್ದೀರಿ. ಆದರೆ ಇಂದು ನಿಮ್ಮ ಪರಿಸ್ಥಿತಿ ಬದಲಾಗಲಿದೆ. ಆಕೆಯ ಕುಟುಂಬದಲ್ಲಿ ದೈವಭಕ್ತಿ ಇತ್ತು:- ಆಕೆಯ ಈ ಎಲ್ಲಾ ಸಮಸ್ಯೆಗಳ (ಹತಾಶೆ( depression), ಸಾವು( death) ಮತ್ತು ಸಾಲ(debts)– 3Dಗಳು)ಮಧ್ಯದಲ್ಲಿಯೂ ಅವಳು ಕರ್ತನ ಮೇಲಿನ ತನ್ನ ನಂಬಿಕೆಯಲ್ಲಿ ದೃಢವಾಗಿದ್ದಳು. ಅವಳು ತನ್ನ ಪರಿಸ್ಥಿತಿಗಾಗಿ ದೇವರನ್ನು ಶಪಿಸಲಿಲ್ಲ ಅಥವಾ ತಾನು ಸಿಲುಕಿರುವ ಗೊಂದಲದ ಕುರಿತು ಆತನನ್ನು ದೂಷಿಸಲೂ ಇಲ್ಲ. ಬದಲಾಗಿ, ಅವಳು ತನ್ನ ವಿಮೋಚಕನಾಗಿ ದೇವರನ್ನು ಎದುರು ನೋಡಿದಳು.
ಪ್ರಿಯರೇ, ನೀವು ದೇವರನ್ನು ಶಪಿಸಿದ್ದರೆ, ನೀವು ಸಿಲುಕಿರುವ ಗೊಂದಲದ ಕುರಿತು ಆತನ ಮೇಲೆ ಆರೋಪ ಮಾಡಿದ್ದರೆ, ನಿಮ್ಮನ್ನು ಕ್ಷಮಿಸುವಂತೆ ಆತನನ್ನು ಕೇಳಿಕೊಳ್ಳಿ. ಮೂರು ದಿನಗಳ ಕಾಲ ಉಪವಾಸ ಮಾಡಿ ಪ್ರಾರ್ಥಿಸಿ ಮತ್ತು ಆತನ ಬಲವಾದ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿ. ಕರ್ತನನ್ನು ಎಂದಿಗೂ ಅಸಡ್ಡೆ ಮಾಡಬೇಡಿ. ಕೆಲವೊಮ್ಮೆ, ಕೆಲವರು ಹತಾಶೆಯ ಹಂತವನ್ನು ತಲುಪಿದಾಗ, ಲೋಕ, ಶರೀರ ಮತ್ತು ಸೈತಾನ ಈ ಎಲ್ಲವೂ ದೇವರು ನಮ್ಮನ್ನು ನೋಡುವುದಿಲ್ಲ ಮತ್ತು ಆತನಿಗೆ ನಮ್ಮ ಕುರಿತು ಕಾಳಜಿ ಇಲ್ಲ ಎಂದು ಹೇಳುತ್ತವೆ.
ಆದರೆ ವಾಸ್ತವವೆಂದರೆ, ಆತನು ಕಾಳಜಿ ವಹಿಸುವವನಾಗಿದ್ದಾನೆ. ನಿಮ್ಮ ದೈನಂದಿನ ಭಕ್ತಿಪೂರ್ವಕ ಆರಾಧನೆ, ನಿಮ್ಮ ಕುಟುಂಬದಲ್ಲಿ ದೇವರ ಭಯವನ್ನು ಬೆಳೆಸಿಕೊಳ್ಳಿ. ಕರುಣಾ ಸದನದಲ್ಲಿ ನಡೆಯುವ ಸೇವೆಗಳಿಗೆ ಹಾಜರಾಗುವುದನ್ನು ತಪ್ಪಿಸಬೇಡಿ. ಆತನು ರಹಸ್ಯವಾಗಿ ನಿಮ್ಮ ಹೃದಯವನ್ನೇ ನೋಡುವ ಮತ್ತು ಬಹಿರಂಗವಾಗಿ ಪ್ರತಿಫಲ ನೀಡುವ ದೇವರಾಗಿದ್ದಾನೆ. ಈ ದೈನಂದಿನ ಮನ್ನವನ್ನು ಸಾಧ್ಯವಾದಷ್ಟು ಜನರಿಗೆ ಹಂಚಿರಿ. ನಾನು ನಿಮಗಾಗಿ ಪ್ರಾರ್ಥಿಸುತ್ತಿದ್ದೇನೆ. ನಿಮ್ಮ ಪರವಾಗಿ ದೇವರ ಕೈ ಚಲಿಸುವುದನ್ನು ನೀವು ನೋಡೇ ನೋಡುತ್ತೀರಿ.
Bible Reading: 2 Chronicles 23-25
ಪ್ರಾರ್ಥನೆಗಳು
ತಂದೆಯೇ, ನನಗೆ ಲಾಭ ಪಡೆಯಲು ಮಾಡಬೇಕಾದನ್ನು ಯೇಸುನಾಮದಲ್ಲಿ ಕಲಿಸು. ನಾನು ಹೋಗಬೇಕಾದ ದಾರಿಯಲ್ಲಿ ನನ್ನನ್ನು ಯೇಸುನಾಮದಲ್ಲಿ ಮುನ್ನಡೆಸು. (ಯೆಶಾಯ 48:17)
Join our WhatsApp Channel

Most Read
● ದೇವರ ಪರಿಪೂರ್ಣ ಚಿತ್ತಕ್ಕಾಗಿ ಪ್ರಾರ್ಥಿಸಿರಿ● ಬೀಜದಲ್ಲಿರುವ ಶಕ್ತಿ -3
● ಮದಲಿಂಗನನ್ನು ಭೇಟಿ ಮಾಡಲು ಸಿದ್ದರಾಗಿರಿ.
● ದಿನ 33:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಎದುರಾಗುವ ವಿರೋಧಗಳನ್ನು ನಂಬಿಕೆಯಿಂದ ಎದುರಿಸುವುದು.
● ನರಕ ಎನ್ನುವುದು ನಿಜವಾಗಿ ಇರುವಂಥ ಸ್ಥಳ
● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.
ಅನಿಸಿಕೆಗಳು