ಅನುದಿನದ ಮನ್ನಾ
0
0
102
ದೇವರು ವಿಭಿನ್ನವಾಗಿ ನೋಡುವವನಾಗಿದ್ದಾನೆ.
Tuesday, 3rd of June 2025
Categories :
ಮಾನವ ಹೃದಯ (Human Heart)
ದೇವರು ಹೃದಯವನ್ನು
ನೋಡುತ್ತಾನೆ ಸೌಲನು ದೇವರ ಆಜ್ಞೆಗಳಿಗೆ ನಿರಂತರವಾಗಿ ಅವಿಧೇಯನಾಗಿದ್ದರಿಂದ ಕರ್ತನು ಅವನನ್ನು ಅರಸು ಸ್ಥಾನದಿಂದ ತಿರಸ್ಕರಿಸಿದ್ದನು. ತರುವಾಯ ಕರ್ತನು ಪ್ರವಾದಿಯಾದ ಸಮುವೇಲನಿಗೆ ಇಷಯನ ಮನೆಗೆ ಹೋಗಿ ಅವನ ಮಕ್ಕಳಲ್ಲಿ ಒಬ್ಬನನ್ನು ಇಸ್ರೇಲಿನ ಭವಿಷ್ಯದ ರಾಜನನ್ನಾಗಿ ಅಭಿಷೇಕಿಸುವಂತೆ ಆಜ್ಞಾಪಿಸಿದನು.
ಪ್ರವಾದಿಯಾದ ಸಮುವೇಲನು ಅವನಿಗೆ ನಿಯೋಜಿಸಲಾದ ಕೆಲಸದಲ್ಲಿದ್ದಾಗ, ಎಲಿಯಾಬನು (ಇಷಯನ ಮಕ್ಕಳಲ್ಲಿ ಒಬ್ಬನಾದ ಮತ್ತು ದಾವೀದನ ಸಹೋದರನಾದ ) ಪ್ರವಾದಿಯಾದ ಸಮುವೇಲನ ಮುಂದೆ ಬಂದು ನಿಂತನು. ಅವನು ತುಂಬಾ ಸುಂದರನಾಗಿದ್ದದರಿಂದ ಪ್ರವಾದಿಯಾದ ಸಮುವೇಲನು, “ಖಂಡಿತವಾಗಿಯೂ ಇವನೇ ಕರ್ತನಿಂದ ಆರಿಸಲ್ಪಟ್ಟವನಾಗಿರಬೇಕು" ಎಂದು ಭಾವಿಸಿದನು.
"ಆದರೆ ಯೆಹೋವನು ಸಮುವೇಲನಿಗೆ - ನೀನು ಅವನ ಚೆಲುವಿಕೆಯನ್ನೂ ನೀಳವನ್ನೂ ನೋಡಬೇಡ; ನಾನು ಅವನನ್ನು ತಳ್ಳಿಬಿಟ್ಟಿದ್ದೇನೆ. ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ ಅಂದನು."(1 ಸಮುವೇಲ 16:7)
ಕರ್ತನು ಎಲಿಯಾಬನನ್ನು ಏಕೆ ನಿರಾಕರಿಸಿದನು?
ಶಾರೀರಿಕವಾಗಿ ಅಥವಾ ಮುಖ ಲಕ್ಷಣ ನೋಟದಲ್ಲಿ ಅವನು ಬುದ್ಧಿವಂತನಾಗಿಯೂ, ಸುಂದರನಾಗಿಯೂ ಅವನು ಕಣ್ಮನ ಸೆಳೆಯುವವನಾಗಿದ್ದನು.ಆದರೆ ಅವನ ಹೃದಯವು (ಆಂತರಿಕ ಮನುಷ್ಯನು ) ದೇವರಿಗೆ ಇಷ್ಟವಾಗಲಿಲ್ಲವಾದ್ದರಿಂದ ಆತನು ಅವನನ್ನು ನಿರಾಕರಿಸಿದನು. ಕರ್ತನು ನಮ್ಮನ್ನು ನೋಡುವ ರೀತಿ ಮನುಷ್ಯನು ನೋಡುವ ರೀತಿಗಿಂತ ವಿಭಿನ್ನವಾಗಿರುತ್ತದೆ.
ಮನುಷ್ಯನು ಹೊರ ನೋಟವನ್ನು ನೋಡುತ್ತಾನೆ ಆದರೆ ದೇವರು ಆಂತರ್ಯವನ್ನೇ ಆಳವಾಗಿ ನೋಡುತ್ತಾನೆ - ಆತನು ಹೃದಯವನ್ನು (ಆತ್ಮ ಮನುಷ್ಯನನ್ನೇ ) ನೋಡುವವನಾಗಿದ್ದಾನೆ. ಈಗ ದಯವಿಟ್ಟು ಅರ್ಥಮಾಡಿಕೊಳ್ಳಿ, ಚೆನ್ನಾಗಿ ಉಡುಪುಗಳನ್ನು ಧಾರಣೆ ಮಾಡಿಕೊಂಡು ಚೆನ್ನಾಗಿ ಕಾಣುವುದು ತಪ್ಪಲ್ಲ. ಆದರೆ ನಾವು ನಮ್ಮ ಹೃದಯಗಳ (ಆತ್ಮ ಮನುಷ್ಯ ಅಥವಾ ಆಂತರಿಕ ಮನುಷ್ಯ)ಸ್ಥಿತಿಯ ಕುರಿತೂ ಅಷ್ಟೇ ಕಾಳಜಿ ವಹಿಸಬೇಕು.
ಮನುಷ್ಯನೊಂದಿಗಿನ ದೇವರ ಎಲ್ಲಾ ವ್ಯವಹಾರಗಳು ಆ ವ್ಯಕ್ತಿಯ ಹೃದಯದ (ಆಂತರಿಕ ಮನುಷ್ಯ)ಸ್ಥಿತಿಯನ್ನು ಆಧರಿಸಿರುತ್ತದೆ. ಅರಸನಾದ ಸೌಲನಿಗೆ ಹೋಲಿಸಿದರೆ ದಾವೀದನು ಅಷ್ಟು ಸುಂದರನಾಗಿರಲಿಲ್ಲ. ಆದರೆ ಆಗ ಅವನು ದೇವರ ಹೃದಯಕ್ಕೆ ಒಪ್ಪುವ ವ್ಯಕ್ತಿಯಾಗಿದ್ದನು. (1 ಸಮುವೇಲ 13:14, ಅಪೊಸ್ತಲರ ಕೃತ್ಯಗಳು 13:22).
ಆದ್ದರಿಂದ ನೀವು ಹೃದಯದ ಮಹತ್ವವನ್ನು ಮತ್ತು ನಮ್ಮ ಹೃದಯವನ್ನು ಕಾಪಾಡುವ ತುರ್ತು ಅಗತ್ಯವನ್ನು ಕಂಡು ಕೊಳ್ಳಬಹುದು.
Bible Reading: 2 Chronicles 33-35
ಪ್ರಾರ್ಥನೆಗಳು
ತಂದೆಯೇ, ನನ್ನ ಆಂತರಿಕ ಮನುಷ್ಯನನ್ನು ಸಹಿಷ್ಣುತೆಯಿಂದ ಬಲಪಡಿಸಿ, ಇದರಿಂದ ನಾನುನಿನ್ನ ಹೃದಯದ ಆಳವಾದ ವಿಷಯಗಳನ್ನು ಅನುಸರಿಸುವುದನ್ನು ನಿಲ್ಲಿಸದೇ ಉತ್ಸಾಹ ಮತ್ತು ಶ್ರದ್ಧೆಯಿಂದ ನಿನ್ನ ಚಿತ್ತವನ್ನು ಮಾಡಬಲ್ಲೆನು.
ತಂದೆಯಾದ ದೇವರೇ, ನೀನು ಯೆಹೋವ ಶಾಲೋಮ್, ಶಾಂತಿಯ ಕರ್ತನು. ದಯವಿಟ್ಟು ನನ್ನ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ನನಗೆ ನಿನ್ನ ಶಾಂತಿಯನ್ನು ಅನುಗ್ರಹಿಸು.
ತಂದೆಯೇ, ನೀನಿತ್ತ ಆದೇಶಗಳನ್ನು ಪಾಲಿಸಲು ಕಷ್ಟವಾಗುವಾಗ ನನ್ನ ಸೇವೆಯ ಕರೆಯನ್ನು ಪೂರೈಸಲು ನನಗೆ ಶಕ್ತಿಯನ್ನು ಅನುಗ್ರಹಿಸು ಎಂದು ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸುತ್ತೇನೆ. ಆಮೆನ್.
Join our WhatsApp Channel

Most Read
● ವಾಗ್ದತ್ತ ದೇಶವನ್ನು ಸುತ್ತುವರೆದಿರುವ ಕೋಟೆಗಳೊಂದಿಗೆ ವ್ಯವಹರಿಸುವುದು.● ಜೀವಬಾದ್ಯರ ಪುಸ್ತಕ
● ದಿನ 35:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಕ್ರಿಸ್ತ ಕೇಂದ್ರಿತ ಮನೆಯನ್ನು ನಿರ್ಮಿಸುವುದು.
● ಕೊಡುವ ಕೃಪೆ -3
● ನಿಮ್ಮ ದಿನವೇ ನಿಮ್ಮನ್ನು ವ್ಯಾಖ್ಯಾನಿಸುತ್ತದೆ
● ಇನ್ನೆಷ್ಟರವರೆಗೆ?
ಅನಿಸಿಕೆಗಳು