"ಯೆಹೋವನೇ, ನೀನು ಇನ್ನೆಷ್ಟರವರೆಗೆ ನನ್ನನ್ನು ಸಂಪೂರ್ಣವಾಗಿ ಮರೆತಿರುವಿ?
ಇನ್ನೆಷ್ಟರವರೆಗೆ ನನಗೆ ವಿಮುಖನಾಗಿರುವಿ?
ನಾನು ಇನ್ನೆಷ್ಟರವರೆಗೆ ಹಗಲೆಲ್ಲಾ ದುಃಖಾಕ್ರಾಂತನಾಗಿ ಆಲೋಚಿಸಿಕೊಳ್ಳುತ್ತಾ ಇರಬೇಕು?
ಇನ್ನೆಷ್ಟರವರೆಗೆ ವಿರೋಧಿಯು ನನಗೆ ದೊರೆಯಾಗಿರಬೇಕು?
(ಕೀರ್ತನೆ 13:1-2)
ದಾವೀದನು ಕೇವಲ ಎರಡು ವಚನಗಳಲ್ಲಿ ನಾಲ್ಕು ಬಾರಿ, ದೇವರನ್ನು "ಇನ್ನೆಷ್ಟರವರೆಗೆ?" ಎಂಬ ಪ್ರಶ್ನೆಯನ್ನು ಕೇಳುತ್ತಾನೆ.
ಸೇವೆಯ ಆರಂಭದ ದಿನಗಳಲ್ಲಿ, ನಾನು ಮತ್ತು ನನ್ನ ಹೆಂಡತಿ ಸೇವೆಗಾಗಿ ರಸ್ತೆಯ ಮೂಲಕ ಪ್ರಯಾಣಿಸುವಾಗ , ಅವಳು ಆಗಾಗ್ಗೆ ನನ್ನನ್ನು " ಇನ್ನೂ ಎಷ್ಟು ಸಮಯ ಪ್ರಯಾಣ?" ಎಂದು ಕೇಳುತ್ತಿದ್ದಳು, ಹತ್ತು ನಿಮಿಷಗಳು ಕಳೆದುಹೋಗುತ್ತಿರಲಿಲ್ಲ, ಮತ್ತೆ ಸ್ವಲ್ಪ ಸಮಯದ ನಂತರ ಅವಳು, "ನಾವು ಯಾವಾಗ ತಲುಪುತ್ತಿದ್ದೇವೆ? ಏಕೆ ಇಷ್ಟು ಸಮಯ ತೆಗೆದುಕೊಳ್ಳುತ್ತಿದೆ?" ಎಂದು ಕೇಳುತ್ತಿರುತ್ತಿದ್ದಳು. ನಾನು ಅವಳಿಗೆ ನಿಜವಾದ ಚಿತ್ರಣವನ್ನು ಹೇಳೇ ಇರುವುದಿಲ್ಲ ಎಂಬುದನ್ನು ನಾನು ಒಪ್ಪಿ ಕೊಳ್ಳುತ್ತೇನೆ .
ಕಾಯುವುದು ಕೆಲವೊಮ್ಮೆ ದೇವರು ನಮ್ಮನ್ನು ಮರೆತಂತೆ ನಮಗೆ ತೋರುತ್ತದೆ ಕಾಯುವುದು ಕೆಲವೊಮ್ಮೆ ಆತನು ಇನ್ನು ಮುಂದೆ ನಮ್ಮ ಕುರಿತು ಕಾಳಜಿ ವಹಿಸುವುದಿಲ್ಲ ನಮ್ಮಿಂದ ತನ್ನ ಮುಖವನ್ನು ಮರೆಮಾಡಿಕೊಂಡಿದ್ದಾನೆ ಎಂದು ತೋರುತ್ತಿರುತ್ತದೆ. ಆಗ ಕಾಯುವುದು ನಿರಾಶಾದಾಯಕವೆನಿಸಲೂಬಹುದು.
ದಾವೀದನು ಈ ಕಾಯುವ ಪ್ರಕ್ರಿಯೆಯ ಮೂಲಕ ಹಾದು ಹೋದನು ಮತ್ತು ಅಂತಿಮವಾಗಿ, ' ಇನ್ನೆಷ್ಟರವರೆಗೆ' ಎಂದು ಮೊರೆಯಿಟ್ಟನು? ನೀವೂ ಸಹ ಈ ರೀತಿಯಲ್ಲಿ, "ಇನ್ನೆಷ್ಟರವರೆಗೆ ಕರ್ತನೇ?" ಎಂದು ಮೊರೆಯಿಡುತ್ತಿರಬಹುದು.
ಅಪೊಸ್ತಲನಾದ ಪೇತ್ರನು ನಮಗೆ ಹೇಳುವುದೇನೆಂದರೆ "ಕರ್ತನು ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ ತಡಮಾಡುತ್ತಾನೆಂಬದಾಗಿ ಕೆಲವರು ಅರ್ಥಮಾಡಿಕೊಳ್ಳುವ ಪ್ರಕಾರ ಆತನು ತಡಮಾಡುವವನಲ್ಲ.... (2 ಪೇತ್ರ 3:9).
ಒಂದು ಹಂತದಲ್ಲಿ, ನಮ್ಮಲ್ಲಿ ಅನೇಕರು ಈ "ಕೆಲವರು" ಅನ್ನುವ ಗುಂಪನ್ನು ಸೇರಿದ್ದೇವೆ. ನಾವು ಆಗಾಗ್ಗೆ ಕರ್ತನಿಗೆ "ಇದೇಕೆ ಇಷ್ಟು ಸಮಯ ತೆಗೆದುಕೊಳ್ಳುತ್ತಿದೆ? ನೀವು ಪ್ರತಿಕ್ರಿಯಿಸುವಲ್ಲಿ ಏಕೆ ನಿಧಾನವಾಗಿರುತ್ತೀರಿ?" ಎಂದು ಹೇಳುತ್ತಿರುತ್ತೇವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಕೂಡ ಈ ಪ್ರಶ್ನೆಗಳನ್ನು ಕೆಲವೊಂದು ಸಂಧರ್ಭದಲ್ಲಿ ಕೇಳಿದ್ದೇನೆ.
ನಮ್ಮ ಪ್ರಯಾಣದಲ್ಲಿ ನಮಗೆ ಸಹಾಯ ಮಾಡುವ ಎರಡು ಅದ್ಭುತ ವಾಗ್ದಾನಗಳನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ:
"ನಿನ್ನನ್ನು ಬಿಟ್ಟರೆ ನಿರೀಕ್ಷಿಸುವವನಿಗೆ ಕಾರ್ಯಕರ್ತನಾದ ಯಾವ ದೇವರನ್ನೂ ಆದಿಯಿಂದ ಯಾರೂ ಕೇಳಲಿಲ್ಲ, ಯಾರ ಕಿವಿಗೂ ಬೀಳಲಿಲ್ಲ, ಯಾರ ಕಣ್ಣೂ ಕಾಣಲಿಲ್ಲ.
(ಯೆಶಾಯ 64:4)
"ದೇವರು ತನಗಾಗಿ ಕಾಯುವವರಿಗಾಗಿ ಕಾರ್ಯನಿರ್ವಹಿಸುತ್ತಾನೆ" ಎಂದು ದೇವರ ವಾಕ್ಯ ಹೇಳುವುದನ್ನು ಗಮನಿಸಿ. ಇಂದು, ಕರ್ತನಿಗೆ ಹೇಳಿ, "ಕರ್ತನೇ, ನಾನು ಈ ವಿಷಯವನ್ನು ನಿನ್ನ ಕೈಗೆ ಒಪ್ಪಿಸುತ್ತಿದ್ದೇನೆ ಮತ್ತು ಇದನ್ನು ಪರಿಹರಿಸಲು ನಾನು ನಿನ್ನನ್ನೇ ಕಾಯುತ್ತಿದ್ದೇನೆ ಮತ್ತು ನಂಬುತ್ತೇನೆ." ಪ್ರತಿದಿನ ಈ ವಾಗ್ದಾನವನ್ನು ಆತನಿಗೆ ನೆನಪಿಸುತ್ತಿರಿ. ಕರ್ತನು ನಂಬಿಗಸ್ತನು ಮತ್ತು ಖಂಡಿತವಾಗಿಯೂ ನಿಮ್ಮ ಪರವಾಗಿ ಆತನು ಕಾರ್ಯನಿರ್ವಹಿಸುತ್ತಾನೆ.
"ಆತನು ದಣಿದವನಿಗೆ ಶಕ್ತಿಯನ್ನೂ, ಬಲಹೀನನಿಗೆ ಬಹುಬಲವನ್ನೂ ಕೊಡುತ್ತಾನೆ. ಯೌವನಸ್ಥರೋ ದಣಿದು ಬಳಲುವರು ಮತ್ತು ತರುಣರು ಸಂಪೂರ್ಣವಾಗಿ ಬೀಳುವರು. ಆದರೆ ಯೆಹೋವ ದೇವರನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು. ಅವರು ಹದ್ದುಗಳಂತೆ ರೆಕ್ಕೆಗಳಿಂದ ಬೆಟ್ಟವನ್ನು ಏರುವರು. ಅವರು ಓಡಿ ದಣಿಯರು. ನಡೆದು ಬಳಲರು."(ಯೆಶಾಯ 40:29–31)
ಎರಡನೆಯದಾಗಿ, ಪ್ರಾರ್ಥನೆಯಲ್ಲಿ ಕರ್ತನಿಗಾಗಿ ಕಾಯುವುದು ನಿಮ್ಮ ಜೀವನದ ಮೇಲೆ ವೇಗದ ಅಭಿಷೇಕ ತಂದು ನಿಮ್ಮಲ್ಲಿ ತ್ವರಿತ ಗತಿಯಲ್ಲಿ ಕಾರ್ಯಗಳನ್ನು ನೆರವೇರಿಸುತ್ತದೆ. ಈ ತ್ವರಿತ ಗತಿ ಮತ್ತು ವೇಗದ ಅಭಿಷೇಕ ಎಂದರೆ ಏನು ಎಂದು ನೀವು ಆಶ್ಚರ್ಯ ಪಡುತ್ತಿರಬಹುದು.
ದೇವರ ಹಸ್ತವು ಪ್ರವಾದಿಯಾದ ಎಲೀಯನ ಮೇಲೆ ಬಂದಾಗ, ಅವನು ಅಹಾಬನ ರಥಕ್ಕಿಂತ ಮುಂದೆ ಓಡಿದನು. (1 ಅರಸುಗಳು 18:46) ಆಗ ನೀವು ಯಾವುದೋ ಒಂದನ್ನು ಸಾಧಿಸಲು ವರ್ಷಗಳನ್ನು ತೆಗೆದುಕೊಂಡದ್ದನ್ನು ಸಾಧಿಸಲು ಕೇವಲ ದಿನಗಳಷ್ಟೇ ಬೇಕಾಗುತ್ತದೆ ಅಷ್ಟೇ. ಅದನ್ನು ಯೇಸುನಾಮದಲ್ಲಿ ಸ್ವೀಕರಿಸಿ.
ಇಸ್ರಾಯೇಲ್ಯರು ಈಜಿಪ್ಟ್ ಬಿಟ್ಟು ವಾಗ್ದತ್ತ ದೇಶಕ್ಕೆ ಪ್ರಯಾಣಿಸಬೇಕಾದಾಗ, ಅದು ಸಾಮಾನ್ಯವಾಗಿ 11 ದಿನಗಳ ಪ್ರಯಾಣ ಮಾತ್ರವಾಗಿತ್ತು, ಆದರೆ ಇಸ್ರಾಯೇಲ್ಯರಿಗೆ 40 ವರ್ಷಗಳು ಬೇಕಾಯಿತು. ಸಮಸ್ಯೆಯೆಂದರೆ ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸುವ ಮೊದಲು ಕಾಯುವ ಅವಧಿಯಲ್ಲಿ ಕರ್ತನು ಅವರಿಗೆ ಬೋದಿಸುತ್ತಿದ್ದ ವಿಷಯಗಳನ್ನು ಅವರು ಕಲಿಯುತ್ತಿರಲಿಲ್ಲ.
ಅನೇಕ ಜನರ ವಿಷಯದಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಕಾಯುವ ಅವಧಿಯಲ್ಲಿ ಕರ್ತನು ಅವರಿಗೆ ಕಲಿಸಲು ಪ್ರಯತ್ನಿಸುತ್ತಿರುವ ವಿಷಯಗಳನ್ನು ಅವರು ಬೇಗನೇ ಕಲಿಯದೇ ಇದರಿಂದಾಗಿ, ಅವರು ಒಂದೇ ಪರ್ವತವನ್ನು ಮತ್ತೆ ಮತ್ತೆ ಸುತ್ತುತ್ತಲೇ ಇರುತ್ತಾರೆ. ಆಮೇಲೆ ಕರ್ತನು ಇಸ್ರಾಯೇಲ್ಯರಿಗೆ ಏನು ಹೇಳಿದನೆಂದು ನೋಡಿ:
“ನೀವು ಈ ಬೆಟ್ಟವನ್ನು ಸುತ್ತಿದ್ದು ಸಾಕು. ಉತ್ತರಕ್ಕೆ ತಿರುಗಿಕೊಳ್ಳಿರಿ." (ಧರ್ಮೋಪದೇಶಕಾಂಡ 2:3 NASB)
ನೀವು ಕೇಳುಗರಲ್ಲದಿದ್ದರೂ ಕರ್ತನು ನಿಮಗೆ ಕಲಿಸುತ್ತಿರುವ ವಿಷಯಗಳನ್ನು ನೀವು ಆಚರಣೆಗೆ ತಂದಾಗ, ನಿಮ್ಮ ಮುಂದಿನ ಹಂತವು ಖಚಿತ.
Bible Reading: Esther 5-8
ಅರಿಕೆಗಳು
ಸರ್ವಶಕ್ತ ತಂದೆಯೇ, ನಿಮಗಾಗಿ ಕಾಯುವವರಿಗಾಗಿ ನೀವು ಖಂಡಿತವಾಗಿಯೂ ಕಾರ್ಯ ಮಾಡುವವರಾಗಿದ್ದೀರಿ. ನಾನು ಪ್ರತಿದಿನ ನಿಮ್ಮ ಸನ್ನಿಧಿಯಲ್ಲಿ ಕಾಯುತ್ತಿರುವಾಗ, ನನ್ನ ಶಕ್ತಿ ನವೀಕರಿಸಲ್ಪಡುತ್ತಿದೆ ಎಂದು ನಾನು ನಿಮಗೆ ಸ್ತೋತ್ರ ಸಲ್ಲಿಸುತ್ತೇನೆ. ನಾನು ರೆಕ್ಕೆಗಳನ್ನು ಹರಡಿಕೊಂಡು ಹದ್ದುಗಳಂತೆ ಮೇಲೆ ಏರುತ್ತೇನೆ .ನಾನು ಓಡಿದರೂ ದಣಿಯುವುದಿಲ್ಲ ; ನಾನು ನಡೆದರೂ ಬಳಲುವುದಿಲ್ಲ.
ನಾನು ಕೇವಲ ನಿಮ್ಮ ವಾಕ್ಯವನ್ನು ಕೇಳುವವನ/ಳಷ್ಟೇ ಆಗದೆ ನಿಮ್ಮ ವಾಕ್ಯವನ್ನು ನಡೆಸುವವನಾ/ಳಾಗುತ್ತೇನೆ ಎಂದು ಒಪ್ಪಿಕೊಳ್ಳುತ್ತೇನೆ. ಯೇಸುನಾಮದಲ್ಲಿ ನಾನು ಮುಂದಿನ ಹಂತಕ್ಕೆ ಹೋಗುತ್ತಿದ್ದೇನೆ. ಆಮೆನ್.
Join our WhatsApp Channel

Most Read
● ದೂರದಿಂದ ಹಿಂಬಾಲಿಸುವುದು● ಇಸ್ಕಾರಿಯೋತ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು- 3
● ಅಭಿಷೇಕಕ್ಕಿರುವ ಪ್ರಪ್ರಥಮ ಶತೃ
● ಕಳೆದು ಹೋದ ರಹಸ್ಯ
● ಪುರುಷರು ಏಕೆ ಪತನಗೊಳ್ಳುವರು -4
● ದಿನ 30:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಸ್ತ್ರೀ ಪುರುಷರು ಏಕೆ ಪತನಗೊಳ್ಳುವರು- 5
ಅನಿಸಿಕೆಗಳು