english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ದೇವರು ಮುಯ್ಯಿ ತೀರಿಸಲಿ.
ಅನುದಿನದ ಮನ್ನಾ

ದೇವರು ಮುಯ್ಯಿ ತೀರಿಸಲಿ.

Friday, 20th of June 2025
1 0 53
Categories : Revenge
ಇತ್ತೀಚಿನ ವೃತ್ತಪತ್ರಿಕೆಯ ಸುದ್ದಿಯೊಂದು, ತಮ್ಮನ್ನು ಹೆದರಿಸುತಿದ್ದ ತಮ್ಮ ಸಹಪಾಠಿಯನ್ನು ಕೊಂದ ಇಬ್ಬರು ಹದಿಹರೆಯದ ಹುಡುಗರ ಕುರಿತು ಓದಿದೆ. ಅವರು ಅವನನ್ನು ಸೇಡಿನಿಂದ ಕೊಂದರು. ಎಂಥಾ ಆಘಾತಕಾರಿ ಸಂಗತಿ! 

1 ಸಮುವೇಲ 25:4-9 ರಲ್ಲಿ ಓದುವಾಗ, ದಾವೀದನು ವೈಯಕ್ತಿಕವಾಗಿ ಬೆಲೆ ತೆತ್ತು, ನಾಬಾಲನ ಮನುಷ್ಯರನ್ನು ಮತ್ತು ಹಿಂಡುಗಳನ್ನು ಯಾವುದೇ ಅಪಾಯವಾಗದಂತೆ ರಕ್ಷಿಸುತ್ತಿದ್ದನೆಂದು ನಾವು ತಿಳಿದುಕೊಳ್ಳುತ್ತೇವೆ. 

ದಾವೀದ ಮತ್ತು ಅವನ ಜನರ ರಕ್ಷಣಾತ್ಮಕ ಉಪಸ್ಥಿತಿಯಿಂದಾಗಿ ನಾಬಾಲನು ತನ್ನ ಲಾಭವನ್ನು ಹೆಚ್ಚಿಸಿಕೊಳ್ಳುತ್ತಾ ಸುರಕ್ಷತೆ ಮತ್ತು ಸುಭದ್ರತೆಯಿಂದ ಬದುಕಲು ಸಾಧ್ಯವಾಗಿತ್ತು. ಇಲ್ಲಿಯವರೆಗೆ, ದಾವೀದನು ಅದಕ್ಕಾಗಿ ಏನನ್ನೂ ಪ್ರತಿಯಾಗಿ ಕೇಳಿರಲಿಲ್ಲ. ಒಂದು ದಿನ ದಾವೀದನು ತನಗಾಗಿ ಮತ್ತು ತನ್ನ ಜನರಿಗೆ ಕೆಲವು ವಸ್ತುಗಳನ್ನು ನಾಬಾಲಾನಿಂದ ಕೋರಿದನು. ದಾವೀದನು ಮತ್ತು ಅವನ ಜನರು ತನಗಾಗಿಯೂ ಮತ್ತು ತನ್ನ ಜನರಿಗಾಗಿಯೂ ಮಾಡಿದ್ದೆಲ್ಲದಕ್ಕೂ ಕೃತಜ್ಞನಾಗುವ ಬದಲು, ನಾಬಾಲನು ದಾವೀದನನ್ನೂ ಮತ್ತು ಅವನ ಜನರನ್ನು ಅವಮಾನಿಸಿದನು. ದಾವೀದನು ಅದರ ಬಗ್ಗೆ ಕೇಳಿದಾಗ, ಅವನು ಮನನೊಂದು, ಪ್ರತೀಕಾರದಿಂದ ತುಂಬಿ, ನಾಬಾಲನ ಮನೆಯಲ್ಲಿರುವ ಎಲ್ಲಾ ಮನುಷ್ಯರನ್ನು ಕೊಲ್ಲುವುದಾಗಿ ಪ್ರತಿಜ್ಞೆ ಮಾಡಿದನು (1 ಸಮು. 25:21, 22). 

ಆದಾಗ್ಯೂ, ನಾಬಾಲನ ಹೆಂಡತಿಯಾದ ಅಬೀಗೈಲಳು ಸೇಡು ತೀರಿಸಿಕೊಳ್ಳಲು ದಾರಿಯಲ್ಲಿ ಹೋಗುತ್ತಿದ್ದ ದಾವೀದನನ್ನೂ ಮತ್ತು ಅವನ ಜನರನ್ನು ಭೇಟಿಯಾದಳು. ಬುದ್ಧಿವಂತೆಯಾದ ಅಬೀಗೈಲಳು ದಾವೀದನಿಗೆ, "ಸ್ವಾಮೀ, ನೀನು ಸ್ವಹಸ್ತದಿಂದ ಮುಯ್ಯಿತೀರಿಸಿ ರಕ್ತಾಪರಾಧಕ್ಕೆ ಗುರಿಯಾಗದಂತೆ ಯೆಹೋವನು ನಿನ್ನನ್ನು ಕಾಪಾಡಿದ್ದಾನೆ....ನೀನು ಯೆಹೋವನ ಶತ್ರುಗಳೊಡನೆ ಯುದ್ಧಮಾಡುವದರಿಂದ ಆತನು ನಿನ್ನ ಮನೆಯನ್ನು ಶಾಶ್ವತವಾಗಿ ಸ್ಥಿರಪಡಿಸುವನು. ಆದದರಿಂದ ನಿನ್ನ ಜೀವಮಾನದಲ್ಲೆಲ್ಲಾ ನಿನ್ನಲ್ಲಿ ಕೆಟ್ಟತನವು ಕಾಣದಿರಲಿ;  ನಿರಪರಾಧಿಯ ರಕ್ತವನ್ನು ಸುರಿಸಿ ಮುಯ್ಯಿತೀರಿಸಿದ್ದರಿಂದುಂಟಾಗುವ ಪಶ್ಚಾತ್ತಾಪ ಮನೋವ್ಯಥೆಗಳಿಗೆ ಕಾರಣವಿರುವದಿಲ್ಲ." ಎಂದು ಸಲಹೆ ನೀಡಿದಳು (1 ಸಮುವೇಲ 25:24-31).

ಅಬೀಗೈಲಳು ಬುದ್ಧಿವಂತಿಕೆಯಿಂದ ಆಡಿದ ಮಾತುಗಳನ್ನು ದಾವೀದನು ಪಾಲಿಸಿ, ಆ ವಿಷಯವನ್ನು ದೇವರ ಕೈಯಲ್ಲಿ ಬಿಟ್ಟು ಹಿಂದೆ ಸರಿದನು. 

"ಮರುದಿನ ಅಮಲಿಳಿದನಂತರ  ಅಬೀಗೈಲಳು ನಾಬಾಲನಿಗೆ ತಾನು ಮಾಡಿದ್ದನ್ನೆಲ್ಲ ಹೇಳಿದಾಗ,  ಈ ವರ್ತಮಾನವನ್ನು ಅವನಿಗೆ ತಿಳಿಸಲಾಗಿ ಅವನ ಹೃದಯವು ನಿಂತುಹೋಯಿತು, ಅವನು ಸ್ತಬ್ಧನಾದನು. ಸುಮಾರು ಹತ್ತು ದಿನಗಳಾದ ನಂತರ ನಾಬಾಲನು ಯೆಹೋವನಿಂದ ಹತನಾಗಿ ಸತ್ತನು. (1 ಸಮು. 25:37, 38). 

ದೇವರು ದಾವೀದನ ಪರವಾಗಿ ಸೇಡು ತೀರಿಸಿಕೊಂಡನು. ಕರ್ತನು ಮುಖದಾಕ್ಷಿಣ್ಯ ಮಾಡುವವನಲ್ಲ. (ಅ. ಕೃತ್ಯಗಳು 10:34) ಆತನು ಪಕ್ಷಪಾತ ಮಾಡುವ ದೇವರಲ್ಲ. (ರೋಮನ್ನರು 12:11) ಆತನು ದಾವೀದನಿಗಾಗಿ ಮಾಡಿದ್ದನ್ನು, ಆತನು ಇಂದು ನಿಮಗೂ ನನಗೂ ಸಹ ಮಾಡುವನು.

ನಾವು ಯಾರಿಂದಲಾದರೂ ಮನನೊಂದಾಗ ನಮ್ಮೊಳಗೆ ನಮ್ಮ ಮೂಲ ಪ್ರವೃತ್ತಿಗಳು ಹುಟ್ಟಿಕೊಳ್ಳುವ ಸಂದರ್ಭಗಳಿರುತ್ತವೆ.  ನಮಗೆ ಸ್ವಾಭಾವಿಕವಾಗಿ ಸೇಡು ತೀರಿಸಿಕೊಳ್ಳುವ ಮನೋಭಾವ ಬರುತ್ತದೆ. ಚಲನಚಿತ್ರಗಳು ಮತ್ತು ಗೇಮಿಂಗ್ ಅಪ್ಲಿಕೇಶನ್‌ಗಳು "ದುಷ್ಟ ಜನರನ್ನು ಸ್ಫೋಟಿಸಲು" ನಮಗೆ ಅಂತ್ಯವಿಲ್ಲದ ಪ್ರೇರಣೆಯನ್ನು ಒದಗಿಸುತ್ತವೆ. ನಮ್ಮ ಶತ್ರುಗಳು "ನ್ಯಾಯಯುತವಾಗಿ ಶಿಕ್ಷಿಸಲ್ಪಟ್ಟಾಗ" ಅಥವಾ "ಹೊರಗೆ ಹಾಕಲ್ಪಲ್ಪಟ್ಟಾಗ" ಲೇ ನಾವು ಗೆದ್ದಂತೆ  ಎಂದು ನಮ್ಮ ಪತನಶೀಲ ಸ್ವಭಾವವು ನಮಗೆ ಹೇಳುತ್ತದೆ. 

ಆದಾಗ್ಯೂ, ದೇವರು ತನ್ನ ಜನರಿಗೆ ಅಲೌಕಿಕವಾದದ್ದನ್ನು ಮಾಡಲು ಆಜ್ಞಾಪಿಸುತ್ತಾನೆ. “ಪ್ರಿಯರೇ, ಎಂದಿಗೂ ಸೇಡು ತೀರಿಸಿಕೊಳ್ಳಬೇಡಿ, ಆದರೆ ಅದನ್ನು ದೇವರ ಕೈಗಳಿಗೆ ಒಪ್ಪಿಸಿ ಬಿಡಿ, ಏಕೆಂದರೆ “ಮುಯ್ಯಿ ತೀರಿಸುವುದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಕರ್ತನು ಹೇಳುತ್ತಾನೆ” ಎಂದು ಬರೆಯಲ್ಪಟ್ಟಿದೆ. (ರೋಮನ್ನರು 12:19) ನಾವು ಇನ್ನೊಬ್ಬರಿಂದ ಅನ್ಯಾಯಕ್ಕೊಳಗಾದಾಗ, ಲೆಕ್ಕಗಳನ್ನು ಇತ್ಯರ್ಥಪಡಿಸಲು ದೇವರಲ್ಲಿ ಭರವಸೆ ಇಡೋಣ.

ಈಗ, ಇದರ ಅರ್ಥ  ನಮ್ಮನ್ನು ನಾವು,ನಮ್ಮ ಖ್ಯಾತಿ, ಶರೀರ ಅಥವಾ ಆರ್ಥಿಕ ಯೋಗಕ್ಷೇಮವನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಬಾರದು ಅಥವಾ  ಸಂಬಂಧ ಪಟ್ಟ  ನಾಗರೀಕ ರಕ್ಷಣೆ ಅಧಿಕಾರಿಗಳಿಗೆ ಅಪರಾಧದ ಕುರಿತು ತಿಳಿಸಲು ಪ್ರಯತ್ನಿಸಬಾರದು ಎಂದಲ್ಲ. ಇದೆಲ್ಲವೂ ಅನುಮತಿಸಲಾಗಿದೆ.

ಸತ್ಯವೇದದ ಅರ್ಥವೇನೆಂದರೆ, ನಮಗಾದ ನೋವಿನ, ಕೋಪದ ಭಾವನೆಗಳಿಂದ ನಾವು ಇನ್ನೊಬ್ಬರ ಮೇಲೆ ದಾಳಿ ಮಾಡಿ ಅವರನ್ನು ನಾಶಮಾಡಲು ಪ್ರಯತ್ನಿಸಬಾರದು. ದೇವರು ಕಡೆಯಲ್ಲಿ ಎಲ್ಲರ ಖಾತೆಗಳನ್ನು ಇತ್ಯರ್ಥಪಡಿಸುತ್ತಾನೆ. 

ಯೇಸು ಶಿಲುಬೆಯಲ್ಲಿದ್ದಾಗ, 'ಆತನು ಬೈಯ್ಯುವವರನ್ನು  ಪ್ರತಿಯಾಗಿ ಬೈಯಲಿಲ್ಲ. ಆತನು ಅವಮಾನವನ್ನೂ ಬಾಧೆಯನ್ನನುಭವಿಸಿದಾಗ ಯಾರನ್ನೂ ಬೆದರಿಸದೆ ನ್ಯಾಯವಾಗಿ ತೀರ್ಪುಮಾಡುವ ತಂದೆಗೆ ತನ್ನನ್ನು ಒಪ್ಪಿಸಿಕೊಟ್ಟನು ".  (1 ಪೇತ್ರ 2:23)

Bible Reading: Job 24-29
ಪ್ರಾರ್ಥನೆಗಳು
1. ತಂದೆಯೇ, ಮುಯ್ಯಿ ತೀರಿಸುವ ಆಲೋಚನೆಗಳನ್ನು ನನ್ನ ಮನಸ್ಸಿನಲ್ಲಿ ಇಟ್ಟುಕೊಂಡಿದ್ದಕ್ಕಾಗಿ ನನ್ನನ್ನು ಕ್ಷಮಿಸಿ. "ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ದೇವರಿಗೆ ಅದನ್ನು ಬಿಡಿ" ಎಂದು ಹೇಳುವ ನಿನ್ನ ವಾಕ್ಯದಲ್ಲಿ ನಂಬಿಕೆ ಇಡಲು ನನಗೆ ಸಹಾಯ ಮಾಡಿ

2. ಕರ್ತನಾದ ಯೇಸುವೇ, ನೀನೇ ಸಮಾಧಾನದ ಪ್ರಭು . ನಿನ್ನ ಸಮಾಧಾನವು ನನ್ನ ಹೃದಯ ಮತ್ತು ನನ್ನ ಜೀವನದ ಪ್ರತಿಯೊಂದು ಕ್ಷೇತ್ರವನ್ನು ಯೇಸುನಾಮದಲ್ಲಿ ಆಳಲಿ. ಆಮೆನ್.


Join our WhatsApp Channel


Most Read
● ಚಾಡಿಮಾತು ಸಂಬಂಧಗಳನ್ನು ಹಾಳುಮಾಡುತ್ತದೆ
● ಅಂತ್ಯಕಾಲದ ಸಮಯದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು: #2
● ದುರಾತ್ಮಗಳ ಪ್ರವೇಶವನ್ನು ತಡೆಯುವ ಅಂಶಗಳು - II
● ಪರಿಸ್ಥಿತಿಯ ದಯೆಯಲ್ಲಿ ಇರಬೇಡಿರಿ
● ನಿಮ್ಮ ದಿನವೇ ನಿಮ್ಮನ್ನು ವ್ಯಾಖ್ಯಾನಿಸುತ್ತದೆ
● ಪ್ರಬುದ್ಧತೆಯು ಜವಾಬ್ದಾರಿಯಿಂದ ಆರಂಭವಾಗುತ್ತದೆ.
● ಪ್ರವಾದನೆಯ ಆತ್ಮ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್