english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಹನ್ನೆರಡು ಮಂದಿಯಲ್ಲಿ ಒಬ್ಬರು.
ಅನುದಿನದ ಮನ್ನಾ

ಹನ್ನೆರಡು ಮಂದಿಯಲ್ಲಿ ಒಬ್ಬರು.

Tuesday, 24th of June 2025
2 0 122
"ಮತ್ತು ಆತನು ಎಲ್ಲರಿಗೋಸ್ಕರ ಸತ್ತನು, ಜೀವಿಸುವವರು ಇನ್ನು ಮುಂದೆ ತಮಗಾಗಿ ಬದುಕದೆ, ತಮಗೋಸ್ಕರ ಸತ್ತು ಪುನರುತ್ಥಾನಗೊಂಡವನಿಗಾಗಿ ಬದುಕಬೇಕು" (2 ಕೊರಿಂಥ 5:15)

ಕ್ರಿಸ್ತನ ಭೂಯಾತ್ರೆಯ ಸಮಯದಲ್ಲಿ ಸುಮಾರು 5,000 ವಿಶ್ವಾಸಿಗಳಿದ್ದರು ಎಂದು ನಂಬಲಾಗಿದೆ. ಆ ವಿಶ್ವಾಸಿಗಳಲ್ಲಿ, ಮೂರು ವಿಧದವರಿದ್ದರು. ಹೆಚ್ಚಿನ ಸಂಖ್ಯೆಯ ವಿಶ್ವಾಸಿಗಳು ನಿತ್ಯಜೀವಕ್ಕಾಗಿ ಮಾತ್ರ ಯೇಸುವಿನ ಬಳಿಗೆ ಬಂದವರು. ಅವರು ನಿತ್ಯಜೀವವನ್ನು ಹೊಂದಿಕೊಳ್ಳುವುದಕ್ಕಾಗಿ ಆತನಿಗಾಗಿ ಸ್ವಲ್ಪ ಸೇವೆ ಸಲ್ಲಿಸಿದರು. ಮತ್ತೊಂದು 500 ಜನರು ಎಂದು ಹೇಳಬಹುದಾದ ಒಂದು ಸಣ್ಣ ಸಂಖ್ಯೆಯ ಗುಂಪು ಅದು ವಾಸ್ತವವಾಗಿ ಆತನನ್ನು ಹಿಂಬಾಲಿಸಿ ಆತನ ಸೇವೆ ಮಾಡಿತು. ನಂತರ ಅಪೋಸ್ತಲ ಶಿಷ್ಯರು ಇದ್ದರು. ಇವರು ಯೇಸುವಿನೊಂದಿಗೆ ಗುರುತಿಸಿಕೊಂಡವರು. ಅವರು ಯೇಸು ಜೀವಿಸಿದ ರೀತಿಯ ಜೀವನವನ್ನು ನಡೆಸಿದವರು. ಇವರಲ್ಲಿ ಪ್ರತಿಯೊಬ್ಬರೂ ಅಂತಿಮವಾಗಿ ಘೋರವಾಗಿ ಕೊಲ್ಲಲ್ಪಟ್ಟರು. ಅವರು ಕಷ್ಟಗಳು, ಅದ್ಭುತಗಳು ಮತ್ತು ಮಾನವ ರೂಪದಲ್ಲಿದ್ದ ದೇವರೊಂದಿಗಿನ ಅನ್ಯೋನ್ಯತೆಯನ್ನು ಅನುಭವಿಸಿದರು. 

ನಿಮ್ಮ ಜೀವನವನ್ನು ಯಾವ ಗುಂಪು ಉತ್ತಮವಾಗಿ ಪ್ರತಿನಿಧಿಸುತ್ತದೆ ಎಂದು ನೀವು ಹೇಳಬೇಕಾದರೆ, ನೀವು ಯಾವುದಕ್ಕೆ ಸೇರುತ್ತೀರಿ? - ಸರಳವಾಗಿ ನಂಬಿದ 5,000 ಜನರೋ, ರಕ್ಷಕನಿಂದ ಕಲಿಯುತ್ತಿರುವುದನ್ನು ಅನುಸರಿಸಿ ಕಾರ್ಯಗತಗೊಳಿಸಲು ಪ್ರಯತ್ನಿಸಿದ 500 ಜನರೋ ಅಥವಾ ರಕ್ಷಕನ ಜೀವನ ಮತ್ತು ಧ್ಯೇಯದೊಂದಿಗೆ ಸಂಪೂರ್ಣವಾಗಿ ಗುರುತಿಸಿಕೊಂಡ 12 ಜನರ ಗುಂಪಲ್ಲೋ?

ಕರ್ತನಾದ ಯೇಸು ನಮ್ಮಲ್ಲಿ ಪ್ರತಿಯೊಬ್ಬರನ್ನು ತನ್ನೊಂದಿಗೆ ಸಂಪೂರ್ಣವಾಗಿ ಗುರುತಿಸಿಕೊಳ್ಳಲು ಕರೆದಿದ್ದಾನೆ. “ಯಾವನಾದರೂ ದೇವರ ವಾಕ್ಯವನ್ನು ಕೈಕೊಂಡು ನಡೆದರೆ ಅವನಲ್ಲಿ ನಿಜವಾಗಿ ದೇವರ ಪ್ರೀತಿಯು ಪರಿಪೂರ್ಣವಾಗಿದೆ. ಇದರಿಂದಲೇ ನಾವು ದೇವರಲ್ಲಿದ್ದೇವೆಂಬುದನ್ನು ತಿಳಿದುಕೊಳ್ಳುತ್ತೇವೆ. ದೇವರಲ್ಲಿ ನೆಲೆಗೊಂಡವನಾಗಿದ್ದೇನೆಂದು ಹೇಳುವವನು ಯೇಸು ಜೀವಿಸಿದಂತೆಯೇ ತಾನೂ ಜೀವಿಸಬೇಕು..” (1 ಯೋಹಾನ 2;5b-6). 

ಇದುವೇ ನಿಜವಾದ ಕ್ರೈಸ್ತ ನಂಬಿಕೆಯ ಸಾರ; ಇದು ಕ್ರಿಸ್ತನಲ್ಲಿ ನಮ್ಮ ದೈವಿಕ ಗುರುತನ್ನು ಸ್ವೀಕರಿಸಲು, ಕೇವಲ ನಂಬಿಕೆಯನ್ನು ಮೀರಿ ಆತನೊಂದಿಗೆ ನಿಕಟವಾದ ಒಕ್ಕೂಟಕ್ಕೆ ಸೇರಲು ನಮ್ಮನ್ನು ಕರೆದೊಯ್ಯುವ ಆತ್ಮೀಕ ಪ್ರಯಾಣವಾಗಿದೆ.

ಕ್ರಿಸ್ತನೊಂದಿಗೆ ಗುರುತಿಸಲ್ಪಟ್ಟ ಜೀವನವನ್ನು ನಡೆಸುವುದು ಬಾಹ್ಯವಾಗಿ ಹೊರಹೊಮ್ಮುವ ಆಂತರಿಕ ರೂಪಾಂತರವನ್ನು ತರುತ್ತದೆ. ಅಪೊಸ್ತಲ ಪೌಲನು ಹೇಳುವಂತೆ, " ಹೀಗಿರಲಾಗಿ ಯಾವನಾದರೂ ಕ್ರಿಸ್ತನಲ್ಲಿದ್ದರೆ ಅವನು ನೂತನಸೃಷ್ಟಿಯಾದನು. ಇಗೋ, ಪೂರ್ವಸ್ಥಿತಿ ಹೋಗಿ ಎಲ್ಲಾ ನೂತನವಾಯಿತು." (2 ಕೊರಿಂಥ 5:17)

Bible Reading: Psalms 2-10
ಪ್ರಾರ್ಥನೆಗಳು
ತಂದೆಯೇ, ಯೇಸುವಿನ ಹೆಸರಿನಲ್ಲಿ, ನನಗೆ ಲಾಭದಾಯಕ ಜೀವಿತವನ್ನು ಕಲಿಸು. ನಾನು ಹೋಗಬೇಕಾದ ದಾರಿಯಲ್ಲಿ ನನ್ನನ್ನು ಮುನ್ನಡೆಸು. (ಯೆಶಾಯ 48:17)



Join our WhatsApp Channel


Most Read
● ವಿವೇಚನೆ v/s ತೀರ್ಪು
● ಇನ್ನೂ ಯಾವುದಕ್ಕಾಗಿ ಕಾಯುತ್ತಿದ್ದೀರಿ?
● ದೇವರು ತಾಯಂದಿರನ್ನು ವಿಶೇಷವಾಗಿ ಇರಿಸಿದ್ದಾನೆ
● ಅಗ್ನಿಯು ಸುರಿಯಲ್ಪಡಬೇಕು
● ರಹಸ್ಯವಾದ ಆತ್ಮೀಕ ದ್ವಾರಗಳು
● ಅವರ ದೈವಿಕ ದುರಸ್ತಿ ಅಂಗಡಿ
● ಚಿಂತೆಯಿಂದ ಹೊರಬರಲು ಈ ಸಂಗತಿಗಳ ಕುರಿತು ಯೋಚಿಸಿ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್