english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಚಾಣಾಕ್ಷತೆಯಿಂದ ಕೆಲಸ ಮಾಡಿ
ಅನುದಿನದ ಮನ್ನಾ

ಚಾಣಾಕ್ಷತೆಯಿಂದ ಕೆಲಸ ಮಾಡಿ

Friday, 4th of July 2025
2 1 87
Categories : ಉದ್ಯೋಗ ಸ್ಥಳ(Workplace)
'ಪ್ರಪಂಚವನ್ನೆಲ್ಲಾ ಗೆದ್ದುಕೊಂಡರೂ ಒಬ್ಬನು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅದರಿಂದ ಅವನಿಗೆ ದೊರಕುವ ಲಾಭವೇನು? ಅಥವಾ ಮನುಷ್ಯರು ತನ್ನ ಪ್ರಾಣಕ್ಕೆ ಈಡಾಗಿ ಏನನ್ನು ತಾನೇ ಕೊಡಬಲ್ಲನು? "(ಮತ್ತಾಯ 16:26) 

ನೀವು ಎಷ್ಟು ಕಷ್ಟಪಟ್ಟು ಕೆಲಸ ಮಾಡುತ್ತೀರಿ ಎಂಬುದು ಮುಖ್ಯವಲ್ಲ; ನೀವು ಎಷ್ಟು ಚಾಣಾಕ್ಷತೆಯಿಂದ ಕೆಲಸ ಮಾಡುತ್ತೀರಿ ಎಂಬುದು ಮುಖ್ಯ: 

ಒಬ್ಬ ಮನುಷ್ಯನು ತುಂಬಾ ಕಷ್ಟಪಟ್ಟು ಕೆಲಸ ಮಾಡಿದರೆ ಅವನು ಶ್ರೀಮಂತನಾಗುತ್ತಾನೆ ಎಂದು ಹೇಳಲಾಯಿತು. ಅವನಿಗೆ ತಿಳಿದಿರುವ ಏಕೈಕ ಕಠಿಣ ಕೆಲಸವೆಂದರೆ ಗುಂಡಿಗಳನ್ನು ಅಗೆಯುವುದು. ಆದ್ದರಿಂದ ಅವನು ತನ್ನ ಹಿತ್ತಲಿನಲ್ಲಿ ದೊಡ್ಡ ಗುಂಡಿಗಳನ್ನು ಅಗೆಯಲು ಪ್ರಾರಂಭಿಸಿದನು. ಅವನು ಶ್ರೀಮಂತನಾಗಲಿಲ್ಲ; ಅವನಿಗೆ ಸರಿಯಾಗಿ ಬೆನ್ನುನೋವು ಮಾತ್ರ ಬಂತು. ಅವನು ಕಷ್ಟಪಟ್ಟು ಕೆಲಸ ಮಾಡಿದನು ಆದರೆ ಯಾವುದೇ ಆದ್ಯತೆಗಳಿಲ್ಲದೆ ಗುರಿಯಿಲ್ಲದೆ ಕೆಲಸ ಮಾಡಿದನು.

ಇಂದು ಹೆಚ್ಚಾಗಿ ಕೇಳಲಾಗುವ ಮಿಲಿಯನ್ ಡಾಲರ್ ಪ್ರಶ್ನೆ  - ಜನರು, ಸಂಸ್ಥೆಗಳು ಅಥವಾ ವ್ಯವಹಾರಗಳು ಏಕೆ ವಿಫಲಗೊಳ್ಳುತ್ತವೆ?ಅದಕ್ಕೆ ಪ್ರಮುಖ ಕಾರಣವೆಂದರೆ, 'ಆದ್ಯತೆಗಳನ್ನು' ನಿಭಾಯಿಸುವಲ್ಲಿನ ವೈಫಲ್ಯತೆ. 

ವಿದ್ಯಾರ್ಥಿ: ಅವನ ಅಥವಾ ಅವಳ ಆದ್ಯತೆಯೊಂದಿಗೆ ವ್ಯವಹರಿಸಲಿಲ್ಲವಾದರೆ - ಅಂದರೆ ಅಧ್ಯಯನಗಳೊಂದಿಗೆ ವ್ಯವಹರಿಸದೆ ತಮ್ಮ ಅನುಕೂಲಕಕ್ಕೆ ತಕ್ಕಂತೆ  ಮುಂದೂಡುತ್ತಲೇ ಇದ್ದರೆ. ಅದು ಆದ್ಯತೆ ಯನ್ನು ನಿಭಾಯಿಸುವ ವೈಫಲ್ಯತೆಯಾಗುತ್ತದೆ.

ಮದುವೆಯನ್ನು ಪರಿಗಣಿಸಿ: ಸಂಗಾತಿಗಳಲ್ಲಿ ಒಬ್ಬರು ಪರಸ್ಪರ ಗುಣಮಟ್ಟದ ಸಮಯವನ್ನು ಮತ್ತೊಬ್ಬರೊಂದಿಗೆ ಕಳೆಯದೇ ಇತರ ಪ್ರಮುಖವಾದ ಕೆಲಸಗಳನ್ನು ಮಾಡುತ್ತಲೇ ಇದ್ದರೆ ಅದು ಆದ್ಯತೆ ಯನ್ನು ನಿಭಾಯಿಸುವ ವೈಫಲ್ಯತೆಯಾಗುತ್ತದೆ.
ಅದು ಇಡೀ ಲೋಕವನ್ನೇ ಗಳಿಸಿಕೊಂಡು ತನ್ನ ಪ್ರಾಣವನ್ನೇ ಕಳೆದುಕೊಂಡ ಮನುಷ್ಯನಂತೆ ಆಗುತ್ತದೆ.

ನೀವು ಪ್ರಗತಿ ಹೊಂದುತ್ತಿಲ್ಲ,ಅಥವಾ ನಿಮ್ಮ ಜೀವಿತದಲ್ಲಿ ಒಂದೇ  ವೃತ್ತಾಕಾರವಾಗಿ ಸುತ್ತಾಡುತ್ತಿದ್ದೀರಿ ಎಂದು ನಿಮಗೆ ಅನಿಸುತ್ತಿದೆಯೇ? ನಿಮ್ಮ ಜೀವನದ ಕುರಿತು ನಿರಾಶೆಗೊಂಡಿದ್ದೀರಾ? ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ "ಹೌದು" ಆಗಿದ್ದರೆ, ನಿಮ್ಮ 'ಆದ್ಯತೆಗಳೆಲ್ಲವೂ' ಗೊಂದಲಕ್ಕೊಳಗಾಗಿರಬಹುದು. 

ಪ್ರಾರ್ಥನೆ ಮತ್ತು ವಾಕ್ಯದೊಂದಿಗೆ ದಿನವನ್ನು ಪ್ರಾರಂಭಿಸುವ ಮೂಲಕ ಕರ್ತನಾದ ಯೇಸುವನ್ನು ನಿಮ್ಮ ಪ್ರಮುಖ ಆದ್ಯತೆಯನ್ನಾಗಿ ಮಾಡಿ. ಇದನ್ನು ಮಾಡುವುದರಿಂದ ನಿಮಗೆ ಬಹಳಷ್ಟು ತೊಂದರೆ ಮತ್ತು  ಮನಸ್ಸಿಗೆ ಉಂಟಾಗಬಹುದಾದ ನೋವುಗಳಿಂದ ರಕ್ಷಣೆ ಸಿಗಬಹುದು. ನೀವು ಆತ್ಮನ ಧ್ವನಿಯನ್ನು ಕೇಳುತ್ತಿದ್ದೀರಾ? 

Bible Reading: Psalms 77-80
ಪ್ರಾರ್ಥನೆಗಳು
ಓ ದೇವರೇ, ನೀನೇ ನನ್ನ ದೇವರು; ನಾನು ನಿನ್ನನ್ನು ಅತ್ಯಾಸಕ್ತಿಯಿಂದ ಮುಂಜಾನೆಯಲ್ಲಿಯೇ ಹುಡುಕುತ್ತೇನೆ. ನಾನು ನಿನ್ನ ರಾಜ್ಯ ಮತ್ತು ನಿನ್ನ ನೀತಿಗಾಗಿ ತವಕ ಪಡುವಾಗ , ಯೇಸುನಾಮದಲ್ಲಿ ಎಲ್ಲವೂ ನನಗೆ ಒದಗಿಬರುವುದು. ಆಮೆನ್.


Join our WhatsApp Channel


Most Read
● ಭಾನುವಾರದ ಬೆಳಗ್ಗೆ ನಿಗದಿತ ಸಮಯಕ್ಕೆ ಸಭೆಗೆ ಹೋಗುವುದು ಹೇಗೆ
● ಒಂದು ಗಂಟೆ ಹಾಗೂ ಒಂದು ದಾಳಿಂಬ ಹಣ್ಣು
● ಯಾರೂ ವಿನಾಯಿತಿ ಹೊಂದಿದವರಿಲ್ಲ.
● ಶುದ್ಧೀಕರಣದ ತೈಲ
● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
● ಬೆಟ್ಟಗಳ ಮತ್ತು ತಗ್ಗಿನ ದೇವರು.
● ಆರಾಧನೆಯನ್ನು ಜೀವನಶೈಲಿಯನ್ನಾಗಿ ಮಾಡಿ ಕೊಳ್ಳುವುದು
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್