english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ದೇವರಿಗಾಗಿ ದಾಹದಿಂದಿರುವುದು
ಅನುದಿನದ ಮನ್ನಾ

ದೇವರಿಗಾಗಿ ದಾಹದಿಂದಿರುವುದು

Wednesday, 27th of March 2024
2 2 645
Categories : ಅಭಿಷೇಕ(Anointing) ನಮ್ರತೆ (Humility) ಬದ್ಧತೆ (commitment) ಬಾಯಾರಿಕೆ (Thirst)
"ಅವರು ಆಚೇದಡಕ್ಕೆ ಸೇರಿದ ಮೇಲೆ ಎಲೀಯನು ಎಲೀಷನನ್ನು - ನಿನ್ನನ್ನು ಬಿಟ್ಟುಹೋಗುವ ಮೊದಲು ನಾನು ನಿನಗೋಸ್ಕರ ಏನು ಮಾಡಬೇಕನ್ನುತ್ತೀ ಹೇಳು ಎಂದು ಕೇಳಿದನು. ಅದಕ್ಕೆ ಎಲೀಷನು - ನಿನಗಿರುವ ಆತ್ಮದಲ್ಲಿ ನನಗೆ ಎರಡು ಪಾಲನ್ನು ಅನುಗ್ರಹಿಸು ಎಂದು ಬೇಡಿಕೊಂಡನು."(‭‭2 ಅರಸುಗಳು‬ ‭2:9‬)

ಮೊದಲನೇದಾಗಿ ಉನ್ನತವಾದ ಅಧಿಕಾರಕ್ಕೂ,ಬಲಕ್ಕೂ  ನಾವು ಮುನ್ನಡೆಯಲು ಬೇಕಿರುವ ಮುಖ್ಯ ಅವಶ್ಯವಾದ  ಸಂಗತಿ ಎಂದರೆ ಅದಕ್ಕಾಗಿ ದಾಹ ಪಡುವುದು.ಇದು ದೇವರಿಂದಲೇ ಹುಟ್ಟುವಂಥದ್ದಾಗಿದೆಯೇ ವಿನಹಃ  ಕೃತಕವಾಗಿ ಅದನ್ನು ನಾವೇ ಉಂಟು ಮಾಡಿಕೊಳ್ಳಲು ಸಾಧ್ಯವಿಲ್ಲ. ಎಲೀಷನು ಎಲೀಯನ ಸೇವಕನಾಗಿ ಎಲೀಯನು ಮಾಡಿದ ಅನೇಕ ಅದ್ಭುತಗಳನ್ನು ನೋಡಿದ್ದನು. ಆದರೆ ಎಲೀಷನು ಅದಕ್ಕಿಂತಲೂ ಹೆಚ್ಚಿನದನ್ನು ಬಯಸಿದನು. ಎಲೀಷನು ಎಲೀಯನಲ್ಲಿದ್ದಂತ ಆತ್ಮದ ಎರಡು ಪಟ್ಟು ಪಾಲನ್ನು ಬಯಸಿದನು. ಎಲಿಷನು ಎಲೀಯನ ಬಳಿ ಇದನ್ನು ಕೇಳಿದಾಗ ಪ್ರವಾದಿಯಾದ ಎಲೀಯನು"ನೀನು ಬೇಡಿಕೊಂಡದ್ದು ಬಹಳ ಕಷ್ಟಕರವಾದುದು" ಎಂದು ಹೇಳಿದನು. ಇದು ಅನುಗ್ರಹಿಸಲು ಸಾಧ್ಯವಿಲ್ಲದ್ದು ಎಂಬ ಕಾರಣಕ್ಕಾಗಿ ಇದನ್ನು ಹೇಳಲಿಲ್ಲ. ಆದರೆ ದೊಡ್ಡ ಅಭಿಷೇಕವು ಯಾವಾಗಲೂ ದೊಡ್ಡ ಜವಾಬ್ದಾರಿಯನ್ನು ಮತ್ತು ಸಂಕೀರ್ಣತೆಗಳನ್ನು ಒಳಗೊಂಡಿರುತ್ತದೆ ಎಂಬುದನ್ನು ಎಲೀಯನು  ಬಲ್ಲವನಾಗಿದ್ದನು.

ಎರಡನೆಯದಾಗಿ, ಸನ್ಮಾನಕ್ಕೆ ಮುಂಚೆ ದೀನತ್ವ ಬರುತ್ತದೆ. ಎಲೀಷನು  ಎಲೀಯನ ಸೇವಕನೆಂದು ಗುರುತಿಸಲ್ಪಟ್ಟವನಾಗಿದ್ದನು. ಮತ್ತೊಬ್ಬರ ಸೇವಕ ಅಥವಾ ಸೇವಕಿ ಎಂದು ಎಣಿಸಿಕೊಳ್ಳಲು ನಿಮಗೆ ಹೇಗನಿಸುತ್ತದೆ? ನಿಮ್ಮ ಹೆಸರು ಸಹ  ಯಾರೂ ಎಲ್ಲಿಯೂ ನಮೂದಿಸುವುದಿಲ್ಲ. ಇದುವೇ  ಪೂರ್ವ ಸಿದ್ಧತೆಯಾಗಿದೆ.ಅನೇಕ ದೇವ ಮನುಷ್ಯರಿಗೆ ಇರುವಂತಹ ಪೂರ್ವ ಸಿದ್ಧತೆ ಇದುವೇ ಆಗಿದೆ. ಯೋಸೇಫನನ್ನು ತೆಗೆದುಕೊಳ್ಳಿರಿ ಅವನು  ಫರೋಹನ ಸೇವಕನಾಗಿದ್ದನು. ದಾವಿದನನ್ನು ತೆಗೆದುಕೊಳ್ಳಿರಿ ಅವನು  ಸೌಲನ ಸೇವಕನಾಗಿದ್ದನು.

ಮೂರನೇದಾಗಿ, ಎಲೀಷನು ತನ್ನ ಕರೆಗೆ ತನ್ನನ್ನು ಸಂಪೂರ್ಣವಾಗಿ ಒಪ್ಪಿಸಿಕೊಟ್ಟಿದ್ದನು. ದೇವರ ವಾಕ್ಯ ಹೇಳುತ್ತದೆ ಎಲೀಷನು ಎಲೀಯನನ್ನು ಹಿಂಬಾಲಿಸಲು ಕರೆಯಲ್ಪಟ್ಟಾಗ ಯೌವನಸ್ತನಾದ ಅವನು ತನ್ನ ವ್ಯವಸಾಯವನ್ನು ಸಂಪೂರ್ಣವಾಗಿ ತ್ಯಜಿಸಿ ಎಲೀಯನನ್ನು  ಕೂಡಿಕೊಂಡನು ಎಂದು. ಅವನು ತಾನು ಉಳುತ್ತಿದ್ದ ಎತ್ತುಗಳನ್ನೇ ಕಡಿದು ಎಲ್ಲರಿಗೂ ಆಹಾರ ಮಾಡಿ ಊಟ ಬಡಿಸಿದನು. ಇದುವೇ ಎಲ್ಲವೂ ಅಥವಾ ಇನ್ನೇನೂ ಉಳಿದೇ ಇಲ್ಲ ಎನ್ನುವಂಥದ್ದು. ಅವನು ಹೊಸದಾಗಿ ಆರಂಭಿಸಿದ ಸೇವೆ ಕೈಗೂಡದಿದ್ದಲ್ಲಿ ಅವನು ಮತ್ತೆ ತಿರುಗಿ ತನ್ನ ವ್ಯವಸಾಯ ಕಾರ್ಯಕ್ಕೆ ಹೋಗಲು ಸಾಧ್ಯವಿಲ್ಲದಾಗಿತ್ತು. ಇದು ಮುಂದೇನಾಗುವುದೆಂಬುದನ್ನು ಸಹ ತಿಳಿಯದೆ ಎಲ್ಲವನ್ನು ಬಿಟ್ಟು ಆತ್ಮಕ್ಕೆ ವಿಧೇಯನಾಗಿ ಮುಂಚೂಣಿ ಸೈನಿಕನ ಹಾಗೆ ನಡೆಯುವಂಥ ಅವನ ಮನೋಭಾವವನ್ನು  ಪ್ರದರ್ಶಿಸುತ್ತದೆ.

ಅವನು ತನ್ನ ವ್ಯವಸಾಯದ ನೊಗಗಳನ್ನೆಲ್ಲಾ ಮುರಿದು ಸುಟ್ಟು ಹಾಕಿದಂತದ್ದು ನಾನಿನ್ನು ಎಂದಿಗೂ ಹಿಂದೆ ತಿರುಗಿ ನೋಡುವುದೇ ಇಲ್ಲ ಎಂಬುದನ್ನು ಸೂಚಿಸುತ್ತದೆ.

ನೀವು ದೇವರು ಅನುಗ್ರಹಿಸುವ ಮಹತ್ತರವಾದ ಅಭಿಷೇಕಕ್ಕೆ ತೆರಳಲು ಇಚ್ಛಿಸುವಿರಾ?"ನೀವು ನನ್ನನ್ನು ಹುಡುಕುವಿರಿ, ಮನಃಪೂರ್ವಕವಾಗಿ ಹುಡುಕಿದಾಗ ನನ್ನನ್ನು ಕಂಡುಕೊಳ್ಳುವಿರಿ."(ಯೆರೆಮೀಯ‬ ‭29:13‬).ದೇವರ ಅಭಿಷೇಕಕ್ಕಾಗಿ ನಿಮ್ಮ ಹೃದಯದಲ್ಲಿ ದಾಹ ಪಡಲು ಆರಂಭಿಸಿರಿ. ಇದುವೇ ಮಹತ್ತರ ಕಾರ್ಯಗಳು ಜರಗಲು ಆರಂಭ ಬಿಂದುವಾಗಿದೆ.
ಪ್ರಾರ್ಥನೆಗಳು
ತಂದೆಯೇ, ನಿನ್ನ ಪ್ರಸನ್ನತೆಗಾಗಿಯೂ ನಿನ್ನ ವಾಕ್ಯಕ್ಕಾಗಿಯೂ ಹಂಬಲಿಸುವ ದಾಹವನ್ನು ನನ್ನಲ್ಲಿ ಯೇಸು ನಾಮದಲ್ಲಿ ಸೃಷ್ಟಿಸು. ಆಗ ನಾನು ನಿನ್ನನ್ನು ಸೇರಿಕೊಳ್ಳುವೆನು. ಆಮೇನ್.


Join our WhatsApp Channel


Most Read
● ನಿಮ್ಮ ಮನೆಯ ವಾತಾವರಣವನ್ನು ಬದಲಾಯಿಸುವುದು -3
● ನಿಮ್ಮ ಮಾರ್ಗದರ್ಶಕರು ಯಾರು - |
● ಪವಿತ್ರಾತ್ಮನಿಗಿರುವ ಹೆಸರುಗಳು ಮತ್ತು ಬಿರುದುಗಳು
● ದುಷ್ಟ ಮಾದರಿಗಳಿಂದ ಹೊರಬರುವುದು.
● ನಾವು ಸಭೆಯಾಗಿ ನೇರವಾಗಿ ಕೂಡಿಕೊಳ್ಳದೆ ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿ ಸಭೆಯ ಆರಾಧನೆಯಲ್ಲಿ ಭಾಗವಹಿಸಬಹುದೇ?
● ಹೆಚ್ಚು ಹೆಚ್ಚಾಗಿ ಬೆಳೆಯುವ ನಂಬಿಕೆ
● ಆತನಿಗೆ ಯಾವುದೇ ಮಿತಿಯಿಲ್ಲ.
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್