english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ನಿಮ್ಮ ವಿಮೋಚನೆ ಮತ್ತು ಗುಣಪಡಿಸುವಿಕೆಯ ಉದ್ದೇಶ
ಅನುದಿನದ ಮನ್ನಾ

ನಿಮ್ಮ ವಿಮೋಚನೆ ಮತ್ತು ಗುಣಪಡಿಸುವಿಕೆಯ ಉದ್ದೇಶ

Sunday, 3rd of August 2025
1 0 64
Categories : ಬಿಡುಗಡೆ (Deliverance)
" ಆಕಾಶಮಂಡಲವನ್ನು ಸೃಷ್ಟಿಸಿದ ಯೆಹೋವನ ಮಾತನ್ನು ಕೇಳಿರಿ; ಆತನೇ ದೇವರು, ಭೂಲೋಕವನ್ನು ನಿರ್ಮಿಸಿ ರೂಪಿಸಿ ಸ್ಥಾಪಿಸಿದನು; ಅದನ್ನು ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು. ಈತನು ಹೀಗನ್ನುತ್ತಾನೆ - ನಾನೇ ಯೆಹೋವನು, ಇನ್ನು ಯಾವನೂ ಅಲ್ಲ."(ಯೆಶಾಯ 45:18)

ದೇವರು ಭೂಮಿಯನ್ನು ವ್ಯರ್ಥವಾಗಿ ಸೃಷ್ಟಿಸಲಿಲ್ಲ. ನಮ್ಮ ದೇವರು ಉದ್ದೇಶಗಳ ದೇವರು. ಆತನು ಏನೇ ಮಾಡಿದರೂ, ಆತನು ಅದನ್ನು ಒಂದು ಉದ್ದೇಶಕ್ಕಾಗಿ ಮಾಡುತ್ತಾನೆ. ಆತನು ಉದ್ದೇಶವಿಲ್ಲದೆ ಏನನ್ನೂ ಮಾಡುವುದಿಲ್ಲ. ನೀವು ಇದನ್ನು ಓದುತ್ತಿರುವುದು ನೀವು ನಿಮಗಾಗಿ ಅಥವಾ ನಿಮ್ಮ ಪ್ರೀತಿಪಾತ್ರರಿಗೆ ವಿಮೋಚನೆಯನ್ನು ಬಯಸುತ್ತಿರುವುದರಿಂದಾಗಿರಬಹುದು. 

ಬಹುಶಃ ನಿಮ್ಮಲ್ಲಿ ಕೆಲವರು ದೈಹಿಕ ಅಥವಾ ಭಾವನಾತ್ಮಕವಾದ ಸ್ವಸ್ಥತೆಯನ್ನು ಬಯಸುತ್ತಿರಬಹುದು. ಆದರೆ, ನಾನು ನಿಮಗೆ ಹೇಳುತ್ತೇನೆ, ಸ್ವಸ್ಥತೆ ಮತ್ತು ವಿಮೋಚನೆಗೂ ಸಹ ಒಂದು ಉದ್ದೇಶವಿದೆ. ದೈವಿಕ ಸ್ವಸ್ಥತೆ ಮತ್ತು ವಿಮೋಚನೆಯ ಉದ್ದೇಶವನ್ನು ನೀವು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. 

ದೇವರು ಏಕೆ ಗುಣಪಡಿಸುತ್ತಾನೆ ಮತ್ತು  ಏಕೆ ಬಿಡುಗಡೆ ಮಾಡುತ್ತಾನೆ ಎಂಬ ಉದ್ದೇಶವನ್ನು ನೀವು ಅರ್ಥಮಾಡಿಕೊಂಡಾಗ, ನೀವು ಅದನ್ನು ಮೌಲ್ಯೀಕರಿಸುವುದನ್ನು ಕಲಿಯುವಿರಿ ಮತ್ತು ಅದನ್ನು ನಿರ್ವಹಿಸಲು ಕಲಿಯುವಿರಿ. ದೇವರು ನಮ್ಮನ್ನು ಯಾವುದನ್ನಾದರೂ ಬಿಡುಗಡೆ ಮಾಡುವ ಉದ್ದೇಶವೆಂದರೆ ಆದರಿಂದ ನಾವು ಯಾವುದನ್ನಾದರೂ ಪ್ರವೇಶಿಸಲು ಸಾಧ್ಯವಾಗಬೇಕು.

ದೈವಿಕ ವಿಮೋಚನೆ ಎಂದರೆ ನೀವು ಈಗ ಇರುವ ಸ್ಥಳದಿಂದ ಹೊರಗೆ ಬರಮಾಡುವುದು ಅಷ್ಟೇ ಅಲ್ಲ, ಬದಲಾಗಿ ಯಾವುದಕ್ಕೋ ನಿಮ್ಮನ್ನು ಪ್ರವೇಶಿಸುವಂತೆ ಮಾಡುವುದೂ ಆಗಿರುತ್ತದೆ. ದುರದೃಷ್ಟವಶಾತ್, ಅನೇಕ ಜನರು ಯಾವುದರಿಂದಲೋ ಹೊರಬರುತ್ತಾರೆ,ಅವರು ಇರುವ ಸ್ಥಳದಲ್ಲಿಯೇ ಇದ್ದು ಬಿಡುತ್ತಾರೆಯೇ; ಹೊರತು ಅವರು ಯಾವುದಕ್ಕೂ ಪ್ರವೇಶಿಸದೇ  ತಮ್ಮ ವಿಮೋಚನೆಯನ್ನು ಕಳೆದುಕೊಳ್ಳುತ್ತಾರೆ.

ಇಸ್ರೇಲ್ 430 ವರ್ಷಗಳ ಕಾಲ ಈಜಿಪ್ಟಿನ ಗುಲಾಮಗಿರಿಯಲ್ಲಿತ್ತು. (ವಿಮೋಚನಕಾಂಡ 12:40, ಗಲಾತ್ಯ 3:15) ದೇವರು ಅವರನ್ನು ಒಂದೇ ರಾತ್ರಿಯಲ್ಲಿ ಹೊರಗೆ ತಂದನು. ಆತನು ಅವರನ್ನು ಹೊರಗೆ ತಂದಿದ್ದಲ್ಲದೆ, ವಾಗ್ದತ್ತ ದೇಶಕ್ಕೂ ಕರೆತಂದನು. ಅವರು ಮತ್ತೊಂದರ ಒಳಗೆ ಹೋಗಲು ಸಾಧ್ಯವಾಗುವಂತೆ ಒಂದರಿಂದ ಹೊರಗೆ ಬಂದರು. 

ಒಬ್ಬ ವ್ಯಕ್ತಿ ಒಂದು ದಿನ ನನ್ನ ಬಳಿಗೆ ಬಂದು, “ಪಾಸ್ಟರ್, “ನನಗೆ ಮದ್ಯಪಾನದಿಂದ ಬಿಡುಗಡೆಯಾಗಿದೆ” ಎಂದು ಹೇಳಿದನು. “ಅದು ತುಂಬಾ ಒಳ್ಳೆಯದು” ನಾನು ಉತ್ತರಿಸಿದೆ. ಅವನು ಮುಂದುವರಿಸಿ, “ಈಗ ನಾನು ಆಮದು ಮಾಡಿದ ಸುವಾಸನೆಯ ತಂಬಾಕನ್ನು ಮಾತ್ರ ಜಗಿಯುತ್ತೇನೆ” ಎಂದನು.

ಕೆಲವು ಜನರು ಒಂದು ಚಟದಿಂದ ಹೊರಬಂದು ಇನ್ನೊಂದು ಚಟಕ್ಕೆ ಸಿಲುಕುತ್ತಾರೆ. ನಾನು ಇಲ್ಲಿ ಮಾತನಾಡುತ್ತಿರುವುದು ಅದನ್ನಲ್ಲ. 

[ತಂದೆ] ನಮ್ಮನ್ನು ಅಂಧಕಾರದ ಅಧಿಕಾರದಿಂದ ಮತ್ತು ಪ್ರಭುತ್ವದಿಂದ ಬಿಡುಗಡೆ ಮಾಡಿ ತನ್ನ ಬಳಿಗೆ ಸೆಳೆದುಕೊಂಡು  ತನ್ನ ಪ್ರೀತಿಯ ಮಗನ ರಾಜ್ಯಕ್ಕೆ ನಮ್ಮನ್ನು ಸೇರಿಸಿದ್ದಾನೆ.. (ಕೊಲೊಸ್ಸಿಯನ್ಸ್ 1:13 ವರ್ಧಿತ)

ದೇವರು ನಮ್ಮನ್ನು ಅಂಧಕಾರದ ರಾಜ್ಯದಿಂದ ಬಿಡುಗಡೆ ಮಾಡಿ ತನ್ನ ಮಗನಾದ ಕರ್ತನಾದ ಯೇಸು ಕ್ರಿಸ್ತನ ರಾಜ್ಯಕ್ಕೆ ನಮ್ಮನ್ನು ಕರೆತಂದಿದ್ದಾನೆ ಎಂದು ದೇವರವಾಕ್ಯವು ಸ್ಪಷ್ಟವಾಗಿ ಹೇಳುತ್ತದೆ. 

ನಿಮ್ಮ ವಿಮೋಚನೆ ಮತ್ತು ಸ್ವಸ್ಥತೆಯ ಪ್ರಾಥಮಿಕ ಉದ್ದೇಶವೆಂದರೆ ನೀವು ನಿಮ್ಮ ದೇವರು ಕೊಟ್ಟ ನಿಯೋಜನೆಗೆ ಪ್ರವೇಶಿಸುವುದಾಗಿದೆ. 

Bible Reading: Isaiah 38-41
ಅರಿಕೆಗಳು
1. ನಾನು ಕ್ರಿಸ್ತ ಯೇಸುವಿನಲ್ಲಿ ನೂತನ ಸೃಷ್ಟಿಯಾಗಿದ್ದೇನೆ. (2 ಕೊರಿಂಥ 5:17). 

2. ಯೇಸುನಾಮದಲ್ಲಿ ನಾನು ಅಂಧಕಾರದ ದೊರೆತನದಿಂದ ಬಿಡುಗಡೆ ಹೊಂದಿ ನಾನು ಆತನ ದೈವಿಕ ಸ್ವಭಾವದ ಪಾಲುದಾರನು/ಳು ಆಗಿದ್ದೇನೆ. (2 ಪೇತ್ರ 1:4)(ಕೊಲೊಸ್ಸೆ 1:13) 

(ದಿನವಿಡೀ ಮೇಲಿನ ಅರಿಕೆಗಳನ್ನು ಹೇಳುತ್ತಲೇ ಇರಿ)

Join our WhatsApp Channel


Most Read
● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.
● ನಿಮ್ಮ ಭೂಮಿಯನ್ನು ಉತ್ತು ಹದಮಾಡಿರಿ
● ನಿಮ್ಮ ಗತಿಯನ್ನು ಬದಲಾಯಿಸಿ
● ದುಷ್ಟ ಮಾದರಿಗಳಿಂದ ಹೊರಬರುವುದು.
● ದೇವರು ಹೇಗೆ ಒದಗಿಸುತ್ತಾನೆ #2
● ಹೊಟ್ಟೆಕಿಚ್ಚು ಎಂಬ ಪೀಡೆ.
● ದೇವರು ಹೇಗೆ ಒದಗಿಸುತ್ತಾನೆ #1
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್