english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ದೇವರ ಎಚ್ಚರಿಕೆಗಳನ್ನು ಕಡೆಗಣಿಸಬೇಡಿರಿ
ಅನುದಿನದ ಮನ್ನಾ

ದೇವರ ಎಚ್ಚರಿಕೆಗಳನ್ನು ಕಡೆಗಣಿಸಬೇಡಿರಿ

Monday, 15th of July 2024
3 2 494
Categories : ವಿಧೇಯತೆ (Obedience)
ಸರಳ ಎಚ್ಚರಿಕೆಗಳನ್ನು ಗಮನಿಸಲು ಮನುಷ್ಯ ಸ್ವಭಾವಕ್ಕೆ ಯಾಕೆ ಇಷ್ಟು ಸಮಸ್ಯೆ? ಒಂದು ನಿದರ್ಶನ: ನೀವೊಂದು ಸಣ್ಣ ಮಗುವಿಗೆ "ಆ ಐರನ್ ಬಾಕ್ಸನ್ನು ಮುಟ್ಟಬೇಡ ಅದು ತುಂಬಾ ಬಿಸಿ" ಎಂದು ಹೇಳಿ ನೋಡಿ. ನೀವು ಆ ಮಗುವನ್ನು ಗಮನಿಸದೇ ಇರುವಾಗ ನೀವು ಯಾವ ಐರನ್ ಬಾಕ್ಸನ್ನು ಮುಟ್ಟಬೇಡ ಎಂದು ಹೇಳಿದಿರೋ ಆ ಬಾಕ್ಸನ್ನು ಮುಟ್ಟೇ ಮುಟ್ಟುತ್ತದೆ. ಈ ರೀತಿ ಎಚ್ಚರಿಕೆಗಳನ್ನು ಅಲಕ್ಷಿಸುವ ಸಮಸ್ಯೆ ಕೇವಲ ಬಾಲ್ಯಕ್ಕಷ್ಟೇ ಸೀಮಿತವಾಗಿರದೇ ಅದಕ್ಕಿಂತ ಮೀರಿ ಮುಂದಕ್ಕೆ ಪಯಣಿಸುತ್ತದೆ.

ನೀವು " ಈ ಬಣ್ಣಗಳನ್ನು ಮುಟ್ಟಬೇಡಿರಿ ಇನ್ನೂ ಹಸಿ ಇದೆ " ಎನ್ನುವ ಪೋಸ್ಟರ್ ಬರೆದಿರುವ ಕಡೆ ಗಮನಿಸಿ. ಅದನ್ನು ನೋಡುತ್ತಿರುವ ಜನರಲ್ಲಿ ಅನೇಕರು ಅದಿನ್ನೂ ಹಸಿಯಾಗಿದೆಯೇ ಇಲ್ಲವೇ ಎಂದು ಮುಟ್ಟಿ ನೋಡಿಯೇ ನೋಡುತ್ತಾರೆ. ನಾನು ಹೇಳಲು ಹೊರಟಿರುವ ವಿಷಯವೇನೆಂದರೆ: ಕೊಟ್ಟ ಎಚ್ಚರಿಕೆಗಳ ಕಡೆಗೆ ಗಮನಕೊಡದೆ ಹೋಗುವಂಥದ್ದು ನಿಮ್ಮ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತದೆ. ನಾವು ಎಚ್ಚರಿಕೆಗಳನ್ನು ಅಲಕ್ಷಿಸುವ ಮತ್ತು ಆ ಎಚ್ಚರಿಕೆಗಳನ್ನು ಬಹು ಲಘುವಾಗಿ ಎಣಿಸುವ ಸ್ವಭಾವದವರಾಗಿದ್ದೇವೆ.

"ಅವನು ಕುದುರೆಯ ದಂಡನ್ನು ಕೂಡಿಸಿಕೊಳ್ಳಬಾರದು. ಕುದುರೆಗಳನ್ನು ಸಂಪಾದಿಸಿಕೊಳ್ಳುವದಕ್ಕಾಗಿ ತನ್ನ ಪ್ರಜೆಗಳನ್ನು ಐಗುಪ್ತದೇಶಕ್ಕೆ ಹೋಗಗೊಡಿಸಬಾರದು. ನೀವು ಇನ್ನು ಆ ದೇಶಕ್ಕೆ ಹೋಗಲೇಕೂಡದೆಂದು ಯೆಹೋವನು ಆಜ್ಞಾಪಿಸಿದ್ದಾನಲ್ಲಾ. ಅವನು ಅನೇಕ ಸ್ತ್ರೀಯರನ್ನು ಮದುವೆಮಾಡಿಕೊಳ್ಳಬಾರದು; ಮಾಡಿಕೊಂಡರೆ ಅವನ ಮನಸ್ಸು ಯೆಹೋವನ ಕಡೆಯಿಂದ ತಿರುಗುವದಕ್ಕೆ ಅವಕಾಶವಾಗುವದು... "(ಧರ್ಮೋಪದೇಶಕಾಂಡ 17:16-17)

ದೇವರು ತನ್ನ ಜನರನ್ನಾಳುವ ಅರಸರಿಗೆ ನಿರ್ದಿಷ್ಟವಾಗಿ ಈ ಎಚ್ಚರಿಕೆಯನ್ನು ಕೊಟ್ಟಿದ್ದನು. ಸೋಲೊಮನನ್ನು ದೇವರ ಈ ಎಚ್ಚರಿಕೆಯನ್ನು ಅಲಕ್ಷಿಸಿ, "ಅನೇಕ ಅನ್ಯ ಸ್ತ್ರೀಯರ ಮೇಲೆ ವ್ಯಾಮೋಹಕಗೊಂಡನು." ದೇವರ ಆಜ್ಞೆಗೆ ತದ್ವಿರುದ್ಧ ವಾಗಿ ಅವರ ಸೌಂದರ್ಯಕ್ಕೂ ವೈಯ್ಯಾರಕ್ಕೂ ಮರಳುಗೊಂಡನು. ಆ ಸ್ತ್ರೀಯರು ಅದಕ್ಕೆ ತಕ್ಕನಾಗಿ ಸೋಲೋಮನನನ್ನು ಅವರ ದೇವತೆಗಳಿಗಾಗಿ ಆಲಯ ಕಟ್ಟುವಂತೆಯೂ ಉನ್ನತ ಸ್ಥಳಗಳನ್ನು ಕಟ್ಟುವಂತೆಯೂ ಪ್ರಭಾವ ಬೀರಿದರು. ಸೋಲೋಮನನ "ಈ ಪತ್ನಿಯರು ಅವರ ದೇವತೆಗಳಿಗೆ ಧೂಪವನ್ನು ಅರ್ಪಿಸಿ ಯಜ್ಞ ಮಾಡುವವರಾದರು." (1ಅರಸು 11:1-8)

ದೇವರು ಇಸ್ರಾಯೆಲ್ಯರ ಅರಸರಿಗೆ ನೀವು ಕುದುರೆಗಳನ್ನು ಹೆಚ್ಚಿಸಿಕೊಳ್ಳಬಾರದೆಂದು ಸಹ ಎಚ್ಚರಿಸಿದ್ದನು. ಆದರೂ ಸೋಲೋಮನನು 40,000 ಕುದುರೆಗಳನ್ನು ತನ್ನ ರಥಕ್ಕಾಗಿಯೂ, 12,000 ಕುದುರೆ ಸಮಾರರನ್ನು ಕೂಡಿಸಿಕೊಂಡನು ಮತ್ತು ದೇವರ ಎಚ್ಚರಿಕೆಯನ್ನು ಉಲ್ಲಂಘಿಸಿ ಸೋಲೋಮನನು ಐಗುಪ್ತದಿಂದ ಅನೇಕ ಕುದುರೆಗಳನ್ನು (ರಥಗಳನ್ನು) ಆಮದು ಮಾಡಿಕೊಂಡನು. (1ಅರಸು 4:26-29)

ಅಕಸ್ಮಾತ್ ಸೋಲೊಮನನು ದೇವರ ಎಚ್ಚರಿಕೆಗಳನ್ನು ಪಾಲಿಸಿದ್ದರೆ ಚರಿತ್ರೆಯು ವಿಭಿನ್ನವಾಗಿ ರಚಿಸಲ್ಪಡುತ್ತಿತ್ತು ಎಂದು ನನಗೆ ಭರವಸೆ ಇದೆ. ದೇವರಿಂದ ಬರುವ ಎಚ್ಚರಿಕೆಗಳು ಅವು ಕೇವಲ ಸಲಹೆ ಅಷ್ಟೇ ಅಲ್ಲ, ಅದು ಪಾಲಿಸಲೇಬೇಕಾದ ಆಜ್ಞೆಗಳಾಗಿದ್ದು ಅವುಗಳನ್ನು ಪಾಲಿಸುವ ಮೂಲಕ ನಮ್ಮ ಜೀವನದಲ್ಲಿ ಉಂಟಾಗಲಿರುವ ಅನೇಕ ಸಮಸ್ಯೆಗಳನ್ನು ತಡೆಯಬಹುದು.
ಪ್ರಾರ್ಥನೆಗಳು
ತಂದೆಯೇ, ನಿನ್ನ ವಾಕ್ಯವನ್ನು ನನ್ನ ಜೀವನದ ಅಸ್ತಿವಾರವನ್ನಾಗಿ ಮಾಡಿಕೊಳ್ಳುವಂತೆಯೂ, ನಿನ್ನ ವಾಕ್ಯದ ವಿಚಾರದಲ್ಲಿ ನಾನು ಸೂಕ್ಷ್ಮತೆಯಿಂದ ವರ್ತಿಸುವಂತೆಯೂ ಯೇಸು ನಾಮದಲ್ಲಿ ನನಗೆ ಸಹಾಯ ಮಾಡು


Join our WhatsApp Channel


Most Read
● ಕೃಪೆಯ ಮೇಲೆ ಕೃಪೆ
● ಅನ್ಯಭಾಷೆಯನ್ನಾಡುವುದು ಪ್ರಗತಿಯನ್ನು ತರುತ್ತದೆ.
● ಕರ್ತನ ಬಳಿಗೆ ಹಿಂತಿರುಗಿ ಬನ್ನಿ
● AI ಎಂಬುದು ಕ್ರಿಸ್ತವಿರೋಧಿಯ ಆತ್ಮವೇ?
● ಕ್ರಿಸ್ತನಂತೆ ಆಗುವುದು
● ಮೂರು ನಿರ್ಣಾಯಕ ಪರೀಕ್ಷೆಗಳು
● ಭೂಮಿಗೆ ಉಪ್ಪೋ ಅಥವಾ ಉಪ್ಪಿನ ಸ್ತಂಭವೋ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್