english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಪಂಚಶತ್ತಾಮ ದಿನದ ಉದ್ದೇಶ
ಅನುದಿನದ ಮನ್ನಾ

ಪಂಚಶತ್ತಾಮ ದಿನದ ಉದ್ದೇಶ

Sunday, 8th of June 2025
1 0 5
Categories : ಪಂಚಾಶತ್ತಮ (Pentecost)
ಪಂಚಶತ್ತಾಮ ದಿನ  ಎಂದರೆ "ಐವತ್ತನೇ ದಿನ". ಇದು ಪಸ್ಕಹಬ್ಬವಾದ  ಐವತ್ತು ದಿನಗಳಾದ ಮೇಲೆ  ಸಂಭವಿಸುತ್ತದೆ. ಬೈಬಲ್‌ನ ಕಾಲದಲ್ಲಿ, ಈ ದಿನದಲ್ಲಿಯೇ ಪ್ರತಿ ವರ್ಷ ಜನರು ಎಲ್ಲೆಡೆಯಿಂದ ಯೆರುಸಲೆಮ್‌ಗೆ ಬಂದು ತಮ್ಮ ಗೋಧಿ ಸುಗ್ಗಿಯ ಮೊದಲ ಫಲಗಳನ್ನು ದೇವಾಲಯದಲ್ಲಿ ದೇವರಿಗೆ ಕಾಣಿಕೆಯಾಗಿ ಅರ್ಪಿಸುತ್ತಿದ್ದರು. 

ಪಂಚಶತ್ತಾಮ ದಿನವನ್ನು ಸೀನಾಯಿ ಪರ್ವತದ ಮೇಲೆ ಮೋಶೆಯು ಧರ್ಮಶಾಸ್ತ್ರದ ಹಲಿಗೆಗಳನ್ನು ಸ್ವೀಕರಿಸಿದ ಕಾಲ ಎಂದು ಗುರುತಿಸಲಾಗಿದ್ದು ಮತ್ತು  ಈ ದಿನವೇ  ಇಸ್ರೇಲ್ ಜನಾಂಗವು  ದೇವರೊಂದಿಗೆ ವಿವಾಹವಾಯಿತು. (ವಿಮೋಚನಕಾಂಡ 24:12-18)ಮೊದಲ ಪಂಚಶತ್ತಾಮ ದಿನದಲ್ಲಿ ಪವಿತ್ರಾತ್ಮನು ಇಳಿದು ಬಂದು  ಕರ್ತನಾದ ಯೇಸು ಕ್ರಿಸ್ತನ ಸಭೆಯು ಜೆರುಸಲೆಮ್‌ನಲ್ಲಿ ಜನಿಸಿದ್ದು  ಪಂಚಶತ್ತಾಮ ಹಬ್ಬದಾಚಾರಣೆಯು  ಭವಿಷ್ಯದ ಸಭೆಸ್ಥಾಪನೆಯನ್ನು  ಪ್ರತಿಬಿಂಬಿಸುತ್ತದೆ. ಪಂಚಾಶತ್ತಾಮ ದಿನವು "ಸಭೆಯ  ಜನ್ಮದಿನ"ದ ಆಚರಿಸುವ ದಿನವಾಗಿದೆ. 

ದೇವರ ಆರ್ಥಿಕ ಯೋಜನೆಯಲ್ಲಿ, ಪ್ರತಿಯೊಂದಕ್ಕೂ ಒಂದೊಂದು  ಉದ್ದೇಶವಿದೆ. ಹಾಗೇ ಪಂಚಶತ್ತಾಮ ದಿನಕ್ಕೂ ಸಹ ಒಂದು ಉದ್ದೇಶವಿದೆ. ಯೇಸು ತನ್ನ ಶಿಷ್ಯರನ್ನು ತನ್ನ ಆರೋಹಣಕ್ಕೆ ಮೊದಲು ಒಟ್ಟುಗೂಡಿಸಿದಾಗ, ಆತನು ಅವರಿಗೆ, "ಆದರೆ ಪವಿತ್ರಾತ್ಮವು ನಿಮ್ಮ ಮೇಲೆ ಬಂದಾಗ ನೀವು ಬಲವನ್ನು ಹೊಂದುತ್ತೀರಿ ..." (ಅ. ಕೃ  1:8)ಎಂದು ಹೇಳಿದನು.

ಆದರೆ ಶಿಷ್ಯರು ಆ ಬಲವನ್ನು ಹೊಂದಿಕೊಂಡವರಾದ ಮೇಲೆ ಏನು ಆಗಬಹುದು ಎಂಬುದರ ಕುರಿತು ತಮ್ಮದೇ ಆದ ವ್ಯಾಖ್ಯಾನವನ್ನು ಹೊಂದಿದ್ದರು. ಯೇಸು ಆಗಿನ ರೋಮನ್ ಪ್ರಭುತ್ವವನ್ನು ಉರುಳಿಸಿ ತನ್ನ ಐಹಿಕ ರಾಜ್ಯವನ್ನು ಅಲ್ಲಿ  ಸ್ಥಾಪಿಸಿಕೊಡುತ್ತಾನೋ ಏನೋ ಎಂದು ತಿಳಿದುಕೊಳ್ಳಲು ಅವರು ತುಂಬಾ ಉತ್ಸುಕರಾಗಿದ್ದರು . ಆದರೆ ನಮಗೆ ತಿಳಿದಿರುವಂತೆ, ಯೇಸು ಪೊಂತ್ಯ ಪಿಲಾತನಿಗೆ  ಹೇಳುವಾಗ "ತನ್ನ ರಾಜ್ಯವು ಈ ಲೋಕದ್ದಲ್ಲ" ಎಂದು ಸ್ಪಷ್ಟವಾಗಿ ವಿವರಿಸಿದ್ದನು. (ಯೋಹಾನ 18:36)

ಪಂಚಾಶತ್ತಾಮ  ಹಬ್ಬದ ಉದ್ದೇಶವು "ನಾವು ಯೆರೂಸಲೇಮಿನಲ್ಲಿಯೂ, ಯೂದಾಯದಲ್ಲಿಯೂ , ಸಮಾರ್ಯದಲ್ಲಿಯೂ  ಮತ್ತು ಭೂಮಿಯ ಕಟ್ಟಕಡೆಯವರೆಗೂ ಆತನ ಸಾಕ್ಷಿಗಳಾಗಬೇಕೆಂಬುದೇ ಆಗಿದೆ" ಎಂದು ಕರ್ತನಾದ ಯೇಸು ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ. (ಅ. ಕೃ 1:8)

ಸಾಕ್ಷಿಯಾಗಿರುವುದು ಎಂದರೇನು? 
ಸಾಕ್ಷಿಯಾಗಿರುವುದು ಎಂದರೆ, ಒಬ್ಬರು ನೋಡಿದ, ಕೇಳಿದ ಮತ್ತು ಅನುಭವಿಸಿದ ಸತ್ಯವನ್ನು ಹೇಳುವುದು. ಯೇಸುವಿಗೆ ಸಾಕ್ಷಿಯಾಗಿರುವುದು ಎಂದರೆ ಆತನು ಯಾರಾಗಿದ್ದಾನೆ ಮತ್ತು ಆತನು ನಮ್ಮ ರಕ್ಷಕನಾಗಿ ಏನು ಮಾಡಿದ್ದಾರೆ ಎಂಬುದರ ಕುರಿತು ಶುಭ ಸುದ್ದಿಯನ್ನು ಹಂಚಿಕೊಳ್ಳುವುದಾಗಿದೆ. ಈ ಕಳೆದುಹೋದ ಮತ್ತು ನಶಿಸುತ್ತಿರುವ ಲೋಕಕ್ಕೆ ದೇವರ ಪ್ರೀತಿಯನ್ನು ಆತನ  ಒಳ್ಳೆಯತನವನ್ನು ಘೋಷಿಸಲು ಪವಿತ್ರಾತ್ಮನು  ನಮ್ಮನ್ನು ಬಳಸಿಕೊಳ್ಳಲು ಹಂಬಲಿಸುತ್ತಾನೆ.

ನನ್ನ ಜೀವನದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುವ  ಅಂಚಿನಲ್ಲಿದ್ದ ಒಂದು ಸಮಯವಿತ್ತು. ಆಗ ಬೀದಿಯಲ್ಲಿ ಯಾರೋ ನನ್ನೊಂದಿಗೆ ಕೃಪೆಯ ಸುವಾರ್ತೆಯನ್ನು ಹಂಚಿಕೊಂಡರು. ಆಗ ನಾನು ಒಂದು ಸೇವೆಗೆ ಆಹ್ವಾನಿಸಲ್ಪಟ್ಟು  ನನ್ನ ಜೀವನವು ಸಂಪೂರ್ಣವಾಗಿ ಮಾರ್ಪಟ್ಟಿತು. ಆ ವ್ಯಕ್ತಿಯು ನನಗೆ ಕರ್ತನ ಕುರಿತು ಸಾಕ್ಷಿ ನೀಡದಿದ್ದರೆ ಏನಾಗುತ್ತಿತ್ತು? ಅದರ ಬಗ್ಗೆ ಯೋಚಿಸಲು ಸಹ ನನಗೆ ನಡುಕ ಬರುತ್ತದೆ. ಇದುವೇ  ಪಂಚಾಶತ್ತಾಮ ಹಬ್ಬದ ನಿಜವಾದ ಉದ್ದೇಶ. 

Bible Reading: Nehemiah 1-3
ಪ್ರಾರ್ಥನೆಗಳು
ತಂದೆಯೇ, ಇಗೋ ನಾನು ಇಲ್ಲಿದ್ದೇನೆ,ಯೇಸುನಾಮದಲ್ಲಿ ನಿನ್ನ ಆತ್ಮ ಮತ್ತು ಬಲದಿಂದ ನನಗೆ ಅಧಿಕಾರ ಅನುಗ್ರಹಿಸು. ಆಗ ನಾನು ನಿನ್ನ ಮಗನಾದ ಯೇಸುವಿನ ಕುರಿತು ಜನರೊಂದಿಗೆ ಮಾತನಾಡುತ್ತೇನೆ. ಆಮೆನ್.


Join our WhatsApp Channel


Most Read
● ಅಲೌಖಿಕತೆಯನ್ನು ಬೆಳೆಸಿಕೊಳ್ಳುವುದು
● ಆಳವಾದ ನೀರಿನೊಳಗೆ
● ಆ ವಾಕ್ಯವನ್ನು ಹೊಂದಿಕೊಳ್ಳಿರಿ
● ಕೃಪೆಯಿಂದಲೇ ರಕ್ಷಣೆ
● ತಡೆಗಳನ್ನೊಡ್ಡುವ ಗೋಡೆ
● ದೇವರವಾಕ್ಯವನ್ನು ಮಾರ್ಪಡಿಸಬೇಡಿರಿ
● ದಿನ 11:40 ದಿನಗಳ ಉಪವಾಸ ಪ್ರಾರ್ಥನೆ.
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್