english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಶರಣಾಗತಿಯ ಸ್ಥಳ
ಅನುದಿನದ ಮನ್ನಾ

ಶರಣಾಗತಿಯ ಸ್ಥಳ

Sunday, 22nd of June 2025
2 0 111
Categories : ಶರಣಾಗತಿ (Surrender)
"ಯಾಕೋಬನು - ನಾನು ದೇವರನ್ನೇ ಪ್ರತ್ಯಕ್ಷವಾಗಿ ನೋಡಿದ್ದೇನಲ್ಲಾ; ಆದರೂ ನನ್ನ ಪ್ರಾಣ ಉಳಿದದೆ ಅಂದುಕೊಂಡು ಆ ಸ್ಥಳಕ್ಕೆ ಪೆನೀಯೇಲ್ ಎಂದು ಹೆಸರಿಟ್ಟನು" (ಆದಿಕಾಂಡ 32:30) 

ಯಾಕೋಬನು ತನ್ನ ಸಹೋದರ ಏಸಾವನಿಗೆ ಸಿಗಬೇಕಾದ ತನ್ನ ತಂದೆಯ ಆಶೀರ್ವಾದವನ್ನು ಅವನಿಂದ ದೂರಮಾಡಿದ್ದನು. ಈ ವರ್ಷಗಳಲ್ಲಿ ದೇವರು  ಸ್ವಬುದ್ದಿ ಮತ್ತು ಸ್ವಂತಶಕ್ತಿ ಮೇಲೆ ಆಧಾರಿಯಾಗಿದ್ದ ಯಾಕೋಬನನ್ನು ದೇವರ ಮೇಲೆ ಆತುಕೊಳ್ಳುವ ಮನುಷ್ಯನನ್ನಾಗಿ ಬದಲಾಯಿಸುತ್ತಿದ್ದನು. ಯಾಕೋಬನು ಈಗ ಏಸಾವನನ್ನು ಭೇಟಿಯಾಗಲು ಸಿದ್ಧನಾಗಿದ್ದನು. ಆದಾಗ್ಯೂ, ಏಸಾವನು ತಾನು ಮಾಡಿದ ಹಿಂದಿನ ಪಾಪಕ್ಕಾಗಿ ತನ್ನ ಮೇಲೂ ಮತ್ತು ತನ್ನ ಕುಟುಂಬದ ಮೇಲೆಯೂ ಸೇಡು ತೀರಿಸಿಕೊಳ್ಳಬಹುದೆಂದು ಅವನು ಭಯಪಟ್ಟನು, ಆದ್ದರಿಂದ ಅವನು ಹಿಂದೆ ಸರಿದು ದೇವರಿಂದ ಕರುಣೆಯನ್ನು ಕೋರುತ್ತಾ ಉಡುಗೊರೆಗಳನ್ನು ಮುಂದಕ್ಕೆ ಕಳುಹಿಸಿದನು. ಆಗ ಯಾಕೋಬನಿಗೆ ಒಬ್ಬ ದೇವದೂತನು ಕಾಣಿಸಿಕೊಂಡನು. 

ಈಗ, ದೇವರು ಅವನನ್ನು ಆಶೀರ್ವದಿಸಿದರೆ ಮಾತ್ರ ಅವನು ಈ ಅಗ್ನಿಪರೀಕ್ಷೆಯಿಂದ ಬದುಕುಳಿಯುತ್ತಾನೆ. ಹಿಂದೆ, ಯಾಕೋಬನು ತನ್ನ ಸಮಸ್ಯೆಯನ್ನು ತನ್ನದೇ ಆದ ರೀತಿಯಲ್ಲಿ ಪರಿಹರಿಸಲು ಪ್ರಯತ್ನಿಸುತ್ತಿದ್ದನು. ಈಗ, ಅವನು ದೇವರ ಮಾರ್ಗದ ಮೇಲೆ ಮಾತ್ರ ಅವಲಂಬಿತನಾಗ ಬಯಸಿದನು. ಅವನು ದೇವರನ್ನು ತುಂಬಾ ತೀವ್ರವಾಗಿ ಬಯಸಿ ಅದಕ್ಕಾಗಿ ಆ ದೇವದೂತನನ್ನು ಹೋಗಲು ಬಿಡಲಿಲ್ಲ. ಯಾಕೋಬನು ತನ್ನ ಜೀವನದಲ್ಲಿ ದೇವರ ಎಲ್ಲಾ ಆಶೀರ್ವಾದಗಳನ್ನು ಹೊಂದಲು ಶ್ರಮಿಸುತ್ತಿದ್ದನು.

ಅವನು ತನ್ನಪೂರ್ಣಶಕ್ತಿಯಿಂದ ದೇವರನ್ನು ಹುಡುಕುತ್ತಿದ್ದನು.
 "ಆ ಪುರುಷನು ತಾನು ಗೆಲ್ಲದೆ ಇರುವದನ್ನು ಕಂಡು ಯಾಕೋಬನ ತೊಡೆಯ ಕೀಲನ್ನು ಮುಟ್ಟಿದ್ದರಿಂದ ಯಾಕೋಬನು ಅವನ ಸಂಗಡ ಹೋರಾಡುತ್ತಿರುವಾಗಲೇ ಅವನ ತೊಡೆಯ ಕೀಲು ತಪ್ಪಿತು.(ಆದಿಕಾಂಡ 32:25). 

ಈ ಮನುಷ್ಯನ ಬಲವಾದ ಇಚ್ಛೆಯನ್ನು ಜಯಿಸಲು ಒಂದೇ ಮಾರ್ಗವೆಂದರೆ ಅವನನ್ನು ದೈಹಿಕವಾಗಿ ನಿಶ್ಚಲಗೊಳಿಸುವುದು. ಅದು ನೋವಿನಿಂದ ಕೂಡಿತ್ತು, ಅದರಿಂದ ಅವನು ಮುರಿಯಲ್ಪಟ್ಟನು. ಇದು ಯಾಕೋಬನ ಸ್ವಂತ ಶಕ್ತಿಯಿಂದ ನಡೆಯುವ ಹಳೆಯ ಸ್ವಭಾವವನ್ನು ತೆಗೆದುಹಾಕುವ ಅಂತಿಮ ಹಂತವಾಗಿತ್ತು. ಇದು ಯಾಕೋಬನ ಜೀವನದಲ್ಲಿ ದೇವರಿಂದ ಬಂದ ಅಂತಿಮ ಕ್ರಿಯೆಯಾಗಿದ್ದು, ಅದನ್ನು 'ಇಸ್ರೇಲ್' ಎಂಬ ಹೊಸ ಹೆಸರನ್ನು ಕೊಡುವುದರೊಂದಿಗೆ ಆಚರಿಸಲಾಯಿತು. ಈ ಪ್ರಕ್ರಿಯೆಯು ಈಗ ಪೂರ್ಣಗೊಂಡಿತು. 

ದೇವರು ಈಗ ಈ ಮನುಷ್ಯನನ್ನು ಹೇರಳವಾಗಿ ಆಶೀರ್ವದಿಸಬಹುದು. ಆತನು ಏಸಾವನೊಂದಿಗೆ ಯಾಕೋಬನಿಗೆ ಸಮಾಧಾನದ ಅನುಗ್ರಹವನ್ನು ನೀಡಿ ಈ ಮುರಿದ ಸಂಬಂಧವನ್ನು ಪುನಃಸ್ಥಾಪಿಸಿದನು. ನಮ್ಮ ಶಕ್ತಿಯಿಂದ ಪರಿಸ್ಥಿತಿ ಗಳನ್ನು ನಮ್ಮ ಕುಶಲ ಸ್ವಭಾವದ ಮೂಲಕ ನಿಯಂತ್ರಿಸುತ್ತಿರುವಂತ ನಮ್ಮ ಸ್ವಭಾವವನ್ನು ತೆಗೆದುಹಾಕಲು ದೇವರು ನಮ್ಮ ಜೀವನದಲ್ಲಿ ಈಗ ಏನು ಮಾಡಬೇಕಾಗಿದೆ?

Bible Reading: Job 34-38
ಅರಿಕೆಗಳು
ತಂದೆಯೇ, ಎಲ್ಲವನ್ನೂ  ನಿನಗೇ ಬಿಟ್ಟುಕೊಡುವುದನ್ನು ನನಗೆ ಕಲಿಸು. ನೀ ನನಗಾಗಿ ಇಟ್ಟಿರುವ ನನ್ನ ಬಾಧ್ಯತೆಯನ್ನು ಹೊಂದಿಕೊಳ್ಳಲು ನನ್ನ ಸ್ವಬುದ್ದಿ ಸ್ವಂತ ಶಕ್ತಿಯ ಮೇಲೆ ಭರವಸೆಯಿಡದೆ ನಿನ್ನ ಮೇಲೆಯೇ ಸಂಪೂರ್ಣವಾಗಿ ಅವಲಂಬನೆಯಾಗಲು ಯೇಸುನಾಮದಲ್ಲಿ ನನಗೆ ಸಹಾಯ ಮಾಡಿ.


Join our WhatsApp Channel


Most Read
● ದೇವರ ಎಚ್ಚರಿಕೆಗಳನ್ನು ಕಡೆಗಣಿಸಬೇಡಿರಿ
● ಹಣವು ಚಾರಿತ್ರ್ಯವನ್ನು ವಿವರಿಸುತ್ತದೆ
● ದಿನ 11:40 ದಿನಗಳ ಉಪವಾಸ ಪ್ರಾರ್ಥನೆ.
● ಚಾಣಾಕ್ಷತೆಯಿಂದ ಕೆಲಸ ಮಾಡಿ
● ಆತನ ಪರಿಪೂರ್ಣ ಪ್ರೀತಿಯಲ್ಲಿರುವ ಬಿಡುಗಡೆಯನ್ನು ಕಂಡುಕೊಳ್ಳುವುದು
● AI ಎಂಬುದು ಕ್ರಿಸ್ತವಿರೋಧಿಯ ಆತ್ಮವೇ?
● ದೇವರು ಹೇಗೆ ಒದಗಿಸುತ್ತಾನೆ #4
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್