english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಕಳೆದು ಹೋದ ರಹಸ್ಯ
ಅನುದಿನದ ಮನ್ನಾ

ಕಳೆದು ಹೋದ ರಹಸ್ಯ

Monday, 30th of September 2024
2 0 458
Categories : ಶಿಷ್ಯತ್ವ (Discipleship) ಸ್ವಯಂ ಪರಿಶೀಲನೆ (Self Examination)
"ಪ್ರತಿಮನುಷ್ಯನು ತನ್ನನ್ನು ಪರೀಕ್ಷಿಸಿಕೊಂಡವನಾಗಿ ಆ ರೊಟ್ಟಿಯಲ್ಲಿ ತಕ್ಕೊಂಡು ತಿನ್ನಲಿ, ಆ ಪಾತ್ರೆಯಲ್ಲಿ ಕುಡಿಯಲಿ."(1 ಕೊರಿಂಥದವರಿಗೆ 11:28)

ನಾನು ನನ್ನ ಕರ್ತನ ಜೊತೆಗೆ ನಡೆಯುವಾಗ ಒಂದು ದಿನ ಪವಿತ್ರಾತ್ಮನನ್ನು " ನಾನು ಮುಂದಿನ ಹಂತಕ್ಕೆ ಹೇಗೆ ಹೋಗಬಹುದು" ಎಂದು ಕೇಳಿದೆನು. ಅದಕ್ಕಾತನು "ವ್ಯಕ್ತಿಗತವಾಗಿ ನಿನ್ನನ್ನು ನೀನು ಪರಿಶೋಧಿಸಿಕೊಳ್ಳುವಂತಹ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು" ಅಂದನು. ನಾನು ಇದನ್ನು ನನ್ನ ಆತ್ಮದಲ್ಲಿ ಕೇಳಿಸಿಕೊಂಡಾಗ ಇದನ್ನು ಇನ್ನು ಹೆಚ್ಚು ಹೆಚ್ಚಾಗಿ ದೇವರ ವಾಕ್ಯದಲ್ಲಿ ಕಾಣಲಾರಂಬಿಸಿದನು.

"ಕ್ರಿಸ್ತನಂಬಿಕೆಯಲ್ಲಿ ಇದ್ದೀರೋ ಇಲ್ಲವೋ ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ, ನಿಮ್ಮನ್ನು ಪರಿಶೋಧಿಸಿಕೊಳ್ಳಿರಿ. ಏನು, ಯೇಸು ಕ್ರಿಸ್ತನು ನಿಮ್ಮಲ್ಲಿದ್ದಾನೆಂಬದು ನಿಮ್ಮನ್ನು ಕುರಿತು ನಿಮಗೆ ಚೆನ್ನಾಗಿ ತಿಳಿಯುವದಿಲ್ಲವೋ? ಆತನು ನಿಮ್ಮಲ್ಲಿಲ್ಲದಿದ್ದರೆ ನೀವು ಅಯೋಗ್ಯರೇ."(2 ಕೊರಿಂಥದವರಿಗೆ 13:5)

"ಪ್ರತಿಯೊಬ್ಬನು ತಾನು ಮಾಡಿದ ಕೆಲಸವನ್ನು ಪರಿಶೋಧಿಸಲಿ; ಆಗ ಅವನು ತನ್ನ ನಿವಿುತ್ತದಿಂದ ಹೆಚ್ಚಳಪಡುವದಕ್ಕೆ ಆಸ್ಪದವಾಗುವದೇ ಹೊರತು ಮತ್ತೊಬ್ಬರ ನಿವಿುತ್ತದಿಂದಾಗುವದಿಲ್ಲ. "(ಗಲಾತ್ಯದವರಿಗೆ 6:4 )

ಮತ್ತಾಯ 7:1-5ರಲ್ಲಿ ಕರ್ತನಾದ ಯೇಸು ಕ್ರಿಸ್ತನು ಬಹಳ ಸುಂದರವಾಗಿ ಆತ್ಮ ಪರಿಶೋಧನೆಯ ಸತ್ಯವನ್ನು ವಿವರಿಸಿದ್ದಾನೆ.

ನಾವು ಯಾವಾಗಲೂ ನಮ್ಮ ಸುತ್ತಮುತ್ತಲಿನ ಜನರ ಕಣ್ಣಿನಲ್ಲಿ ಬಿದ್ದಿರುವ ಧೂಳನ್ನು ನೋಡುತ್ತಿರುತ್ತೇವೆ ಹೊರತು ನಮ್ಮ ಕಣ್ಣುಗಳಲ್ಲಿ ಮೊದಲು ಏನು ಬಿದ್ದಿದೆ ಎಂದು ಪರೀಕ್ಷಿಸಿಕೊಳ್ಳೋದಿಲ್ಲ. ನಾನು ನಮ್ಮನ್ನು ನೋಡಿಕೊಂಡರೆ ಮಾತ್ರವೇ ನಮ್ಮಲ್ಲೇ  ಇರುವ ದೊಡ್ಡ ಸಮಸ್ಯೆಗಳನ್ನು ನಾವು ಗುರುತಿಸಿಕೊಳ್ಳಬಹುದು. ನಾವು ಈ ರೀತಿ ನಮ್ಮ ಸಮಸ್ಯೆಗಳೊಂದಿಗೆ ವ್ಯವಹರಿಸುವಾಗ ನಮ್ಮ ಸುತ್ತಮುತ್ತಲಿನವರಿಗೆ ಸಹಾಯ ಮಾಡುವ  ಸ್ಥಾನಕ್ಕೆ ತಲುಪತ್ತೇವೆ.

ನಾನು ಮತ್ತಾಯ 7:1-5 ರ ವಾಕ್ಯವನ್ನು ನೀವು ಅರ್ಥ ಮಾಡಿಕೊಳ್ಳುವ ಹಾಗೆ ವಾಕ್ಯವೃಂದವಾಗಿ ಈ ರೀತಿ ವಿಂಗಡಿಸಿದ್ದೇನೆ. 

 * ನೀವು ಏನನ್ನು ಮಾಡುತ್ತಿದ್ದೀರಿ?

 * ನಿಮ್ಮ ಸಮಯವನ್ನು ದಿನದಲ್ಲಿ ಹೇಗೆ ಕಳುಹಿಸುತ್ತಿದ್ದೀರಿ?

 * ನೀವು ಏನನ್ನು ಆಲೋಚಿಸುತ್ತಿದ್ದೀರಿ?

ಎನ್ನುವ ವಿಚಾರಗಳ ಮೇಲೆ ಬೆಳಕು ಚೆಲ್ಲುವ ಮೂಲಕ
ನಿಮಗೆ ನೀವೇ ಬಂದು ಅಳತೆಯನ್ನು ಏರ್ಪಡಿಸಿಕೊಂಡು ನೀವು ದಿನೇ ದಿನೇ ಎಷ್ಟು ಉತ್ತಮಗೊಳ್ಳುತ್ತಿದ್ದೀರಿ ಎಂದು ಅಳೆಯಿರಿ. ನಾಳಿನ ದಿನಗಳನ್ನು ಉತ್ತಮಗೊಳಿಸಿಕೊಳ್ಳಲು ಇರುವ ಒಂದೇ ಮಾರ್ಗವೆಂದರೆ ಇಂದು ನೀವು ಮಾಡಿರುವ ತಪ್ಪುಗಳನ್ನು ತಿಳಿದುಕೊಳ್ಳುವುದಾಗಿದೆ.

ಕಡೆಯದಾಗಿ ಈ ಒಂದು ಆತ್ಮ ಪರಿಶೋಧನೆಯ ಪ್ರಕ್ರಿಯೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಮತ್ತೆ ಆ ತಪ್ಪುಗಳು ಪುನರಾವರ್ತಿತವಾಗದಿರುವಂತೆ ಒಂದು ಸ್ಪಷ್ಟವಾದ ಯೋಜನೆಯನ್ನು ರೂಪಿಸಿಕೊಳ್ಳಬೇಕು.
ಪ್ರಾರ್ಥನೆಗಳು
"ದೇವಾ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ; ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ಗೊತ್ತುಮಾಡು. ನಾನು ಕೇಡಿನ ಮಾರ್ಗದಲ್ಲಿರುತ್ತೇನೋ ಏನೋ ನೋಡಿ ಸನಾತನಮಾರ್ಗದಲ್ಲಿ ನನ್ನನ್ನು ನಡಿಸು."(ಕೀರ್ತನೆಗಳು 139:23-24)


Join our WhatsApp Channel


Most Read
● ಉಪವಾಸದಲ್ಲಿರುವ ಜೀವನವನ್ನು ಬದಲಾಯಿಸುವ ಪ್ರಯೋಜನಗಳು
● ದೇವರು ಹೇಗೆ ಒದಗಿಸುತ್ತಾನೆ #3
● ಅದ್ಭುತಗಳಲ್ಲಿ ಕಾರ್ಯ ಮಾಡುವುದು - ಕೀಲಿಕೈ #2
● ಬೀಜದಲ್ಲಿರುವ ಶಕ್ತಿ -3
● ಆಟ ಬದಲಿಸುವವ
● ಕರ್ತನೇ ನನ್ನ ದೀಪವನ್ನು ಬೆಳಗಿಸು.
● ಅತ್ಯಂತ ಸಾಮಾನ್ಯ ಭಯಗಳು
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್